ವ್ಯಕ್ತಿಯ ಆಧಾರ್ ಅಧಿಕೃತತೆ ಪರಿಶೀಲಿಸಬೇಕೆಂದು ಆದೇಶ
ವಂಚನೆ ಮಾಡಿದ್ದ ನಾಲ್ವರು ಪೊಲೀಸ್ ಅಧಿಕಾರಿಗಳ ವಶಕ್ಕೆ
ಆಸ್ತಿ ಮಾರಾಟ, ನೋಂದಣಿಗೆ ಆಧಾರ್ ಅಧಿಕೃತತೆ ಕಡ್ಡಾಯ
ಸರ್ಕಾರದ ವೆಬ್ಸೈಟ್ಗಳಿಗೆ ಲಗ್ಗೆ ಇಟ್ಟು ಸಾರ್ವಜನಿಕರ ಹಣವನ್ನ ಲೂಟಿ ಹೊಡೆಯುತ್ತಿದ್ದ ಆನ್ಲೈನ್ ಖದೀಮರಿಗೆ ಪಾಠ ಕಲಿಸಲು ಹೈಕೋರ್ಟ್ ಮುಂದಾಗಿದೆ. ನೋಂದಣಿ, ಮುದ್ರಾಂಕ ಇಲಾಖೆಯ ಆಯುಕ್ತರಿಗೆ ಖಡಕ್ ಆದೇಶ ಹೊರಡಿಸಿದೆ.
ಇದು ಸೋಶಿಯಲ್ ಮೀಡಿಯಾ ಜಮಾನ. ಕೂತಲ್ಲೇ ಬೆರಳಂಚಿಗೆ ಜಗತ್ತಿನ ಎಲ್ಲಾ ಸೇವೆಗಳು ಸಿಗುತ್ತೆ. ಮೊಬೈಲ್ ರಿಚಾರ್ಜ್ನಿಂದ ಹಿಡಿದು, ಸೈಟ್ ರಿಜಿಸ್ಟ್ರೇಷನ್ವರೆಗೂ ಎಲ್ಲವೂ ಆನ್ಲೈನ್ನಲ್ಲೇ ಸಿಗುತ್ತೆ. ಹಾಗಂತ ಆನ್ಲೈನ್ ಲೂಟಿಕೋರರ ಬಗ್ಗೆ ನಾವು ನೆಗ್ಲೆಕ್ಟ್ ಮಾಡೋ ಹಾಗಿಲ್ಲ. ನಾವು ಚಾಪೆ ಕೆಳಗೆ ನುಗ್ಗಿದರೆ ಸೈಬರ್ ಖದೀಮರು ರಂಗೋಲಿ ಕೆಳಗೆ ನುಸುಳಿ ಬಿಡ್ತಾರೆ.
ಸರ್ಕಾರದ ವೆಬ್ಸೈಟ್ ಅನ್ನೇ ದಾಳವನ್ನಾಗಿ ಮಾಡಿಕೊಂಡಿದ್ದ ಕೆಲ ವಂಚಕರು, ಆಸ್ತಿ ರಿಜಿಸ್ಟ್ರೇಶನ್ ವೆಬ್ಸೈಟ್ ಸೇವೆಯನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಆಧಾರ್ ಹಾಗೂ ಬಯೋಮೆಟ್ರಿಕ್ ಸೇವೆ ಮೂಲಕ ಹಣ ವರ್ಗಾವಣೆ ಮಾಡಿ, AePS ಮೂಲಕ ಸಾರ್ವಜನಿಕರ ಹಣವನ್ನ ಲೂಟಿ ಹೊಡೆದಿದ್ದರು. ಇದೀಗ ಕೊನೆಗೂ ಸೈಬರ್ ಖದೀಮರಿಗೆ ಕಡಿವಾಣ ಹಾಕಲು ಹೈಕೋರ್ಟ್ ಮಹತ್ವದ ತೀರ್ಪನ್ನ ಹೊರಡಿಸಿದೆ.
ಹೈಕೋರ್ಟ್ ತೀರ್ಪಿನಲ್ಲಿ ಏನಿದೆ?
ಇನ್ಮುಂದೆ ಆಸ್ತಿ ಮಾರಾಟ ಹಾಗೂ ನೋಂದಣಿಗೆ ಆಧಾರ್ ಅಧಿಕೃತತೆಯನ್ನ ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು. ಮಾರಾಟ ಮಾಡುವ ವ್ಯಕ್ತಿಯ ಆಧಾರ್ ಅಧಿಕೃತತೆಯನ್ನ ಪರಿಶೀಲಿಸಬೇಕೆಂದು ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಆಯುಕ್ತರಿಗೆ ಹೈಕೋರ್ಟ್ ಆದೇಶ ಹೊರಡಿಸಿದೆ. ಯಾವ ವ್ಯಕ್ತಿ ಆಸ್ತಿಯನ್ನ ಮಾರಾಟ ಮಾಡಲು ಮುಂದಾಗ್ತಾರೋ ಆ ವ್ಯಕ್ತಿಯ ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಆಧರಿಸಿ ಅಧಿಕೃತತೆ ಪರಿಶೀಲನೆ ಮಾಡಲಾಗುತ್ತೆ. ಪರಿಶೀಲನೆ ನಂತರವೇ ನೋಂದಣಿ ಮಾಡಿಕೊಳ್ಳಬೇಕು ಅಂತ ಕಡ್ಡಾಯ ಮಾಡಲಾಗಿದೆ.
ಇದೇ ರೀತಿ ವಂಚನೆ ಮಾಡಿದ್ದ ನಾಲ್ವರನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ಸೈಬರ್ ವಂಚಕರಿಂದ ಮೋಸ ಹೋಗುವುದನ್ನು ತಪ್ಪಿಸಲು ಜನರು ತಮ್ಮ ಆಧಾರ್-ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಯನ್ನು (ಎಇಪಿಎಸ್) ಬಳಸದೆ ನಿಷ್ಕ್ರಿಯಗೊಳಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಸರ್ಕಾರದ ಆನ್ಲೈನ್ ಸೇವೆಗಳನ್ನೇ ಖದೀಮರು ಟಾರ್ಗೆಟ್ ಮಾಡಿದ್ದು, ಇನ್ನಾದರೂ ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವ್ಯಕ್ತಿಯ ಆಧಾರ್ ಅಧಿಕೃತತೆ ಪರಿಶೀಲಿಸಬೇಕೆಂದು ಆದೇಶ
ವಂಚನೆ ಮಾಡಿದ್ದ ನಾಲ್ವರು ಪೊಲೀಸ್ ಅಧಿಕಾರಿಗಳ ವಶಕ್ಕೆ
ಆಸ್ತಿ ಮಾರಾಟ, ನೋಂದಣಿಗೆ ಆಧಾರ್ ಅಧಿಕೃತತೆ ಕಡ್ಡಾಯ
ಸರ್ಕಾರದ ವೆಬ್ಸೈಟ್ಗಳಿಗೆ ಲಗ್ಗೆ ಇಟ್ಟು ಸಾರ್ವಜನಿಕರ ಹಣವನ್ನ ಲೂಟಿ ಹೊಡೆಯುತ್ತಿದ್ದ ಆನ್ಲೈನ್ ಖದೀಮರಿಗೆ ಪಾಠ ಕಲಿಸಲು ಹೈಕೋರ್ಟ್ ಮುಂದಾಗಿದೆ. ನೋಂದಣಿ, ಮುದ್ರಾಂಕ ಇಲಾಖೆಯ ಆಯುಕ್ತರಿಗೆ ಖಡಕ್ ಆದೇಶ ಹೊರಡಿಸಿದೆ.
ಇದು ಸೋಶಿಯಲ್ ಮೀಡಿಯಾ ಜಮಾನ. ಕೂತಲ್ಲೇ ಬೆರಳಂಚಿಗೆ ಜಗತ್ತಿನ ಎಲ್ಲಾ ಸೇವೆಗಳು ಸಿಗುತ್ತೆ. ಮೊಬೈಲ್ ರಿಚಾರ್ಜ್ನಿಂದ ಹಿಡಿದು, ಸೈಟ್ ರಿಜಿಸ್ಟ್ರೇಷನ್ವರೆಗೂ ಎಲ್ಲವೂ ಆನ್ಲೈನ್ನಲ್ಲೇ ಸಿಗುತ್ತೆ. ಹಾಗಂತ ಆನ್ಲೈನ್ ಲೂಟಿಕೋರರ ಬಗ್ಗೆ ನಾವು ನೆಗ್ಲೆಕ್ಟ್ ಮಾಡೋ ಹಾಗಿಲ್ಲ. ನಾವು ಚಾಪೆ ಕೆಳಗೆ ನುಗ್ಗಿದರೆ ಸೈಬರ್ ಖದೀಮರು ರಂಗೋಲಿ ಕೆಳಗೆ ನುಸುಳಿ ಬಿಡ್ತಾರೆ.
ಸರ್ಕಾರದ ವೆಬ್ಸೈಟ್ ಅನ್ನೇ ದಾಳವನ್ನಾಗಿ ಮಾಡಿಕೊಂಡಿದ್ದ ಕೆಲ ವಂಚಕರು, ಆಸ್ತಿ ರಿಜಿಸ್ಟ್ರೇಶನ್ ವೆಬ್ಸೈಟ್ ಸೇವೆಯನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಆಧಾರ್ ಹಾಗೂ ಬಯೋಮೆಟ್ರಿಕ್ ಸೇವೆ ಮೂಲಕ ಹಣ ವರ್ಗಾವಣೆ ಮಾಡಿ, AePS ಮೂಲಕ ಸಾರ್ವಜನಿಕರ ಹಣವನ್ನ ಲೂಟಿ ಹೊಡೆದಿದ್ದರು. ಇದೀಗ ಕೊನೆಗೂ ಸೈಬರ್ ಖದೀಮರಿಗೆ ಕಡಿವಾಣ ಹಾಕಲು ಹೈಕೋರ್ಟ್ ಮಹತ್ವದ ತೀರ್ಪನ್ನ ಹೊರಡಿಸಿದೆ.
ಹೈಕೋರ್ಟ್ ತೀರ್ಪಿನಲ್ಲಿ ಏನಿದೆ?
ಇನ್ಮುಂದೆ ಆಸ್ತಿ ಮಾರಾಟ ಹಾಗೂ ನೋಂದಣಿಗೆ ಆಧಾರ್ ಅಧಿಕೃತತೆಯನ್ನ ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು. ಮಾರಾಟ ಮಾಡುವ ವ್ಯಕ್ತಿಯ ಆಧಾರ್ ಅಧಿಕೃತತೆಯನ್ನ ಪರಿಶೀಲಿಸಬೇಕೆಂದು ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಆಯುಕ್ತರಿಗೆ ಹೈಕೋರ್ಟ್ ಆದೇಶ ಹೊರಡಿಸಿದೆ. ಯಾವ ವ್ಯಕ್ತಿ ಆಸ್ತಿಯನ್ನ ಮಾರಾಟ ಮಾಡಲು ಮುಂದಾಗ್ತಾರೋ ಆ ವ್ಯಕ್ತಿಯ ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಆಧರಿಸಿ ಅಧಿಕೃತತೆ ಪರಿಶೀಲನೆ ಮಾಡಲಾಗುತ್ತೆ. ಪರಿಶೀಲನೆ ನಂತರವೇ ನೋಂದಣಿ ಮಾಡಿಕೊಳ್ಳಬೇಕು ಅಂತ ಕಡ್ಡಾಯ ಮಾಡಲಾಗಿದೆ.
ಇದೇ ರೀತಿ ವಂಚನೆ ಮಾಡಿದ್ದ ನಾಲ್ವರನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ಸೈಬರ್ ವಂಚಕರಿಂದ ಮೋಸ ಹೋಗುವುದನ್ನು ತಪ್ಪಿಸಲು ಜನರು ತಮ್ಮ ಆಧಾರ್-ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಯನ್ನು (ಎಇಪಿಎಸ್) ಬಳಸದೆ ನಿಷ್ಕ್ರಿಯಗೊಳಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಸರ್ಕಾರದ ಆನ್ಲೈನ್ ಸೇವೆಗಳನ್ನೇ ಖದೀಮರು ಟಾರ್ಗೆಟ್ ಮಾಡಿದ್ದು, ಇನ್ನಾದರೂ ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ