newsfirstkannada.com

ಅಯ್ಯೋ.. ನೋಡ ನೋಡುತ್ತಿದ್ದಂತೆ ಹೊಂಡಕ್ಕೆ ಬಿದ್ದ ಕಾರು; ಭೀಕರ ಅಪಘಾತದ ಬಳಿಕ ಆಗಿದ್ದೇ ಆಶ್ಚರ್ಯ!

Share :

Published October 21, 2023 at 3:38pm

    ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಹಾರಿ ಬಿದ್ದ ಭೀಕರ ಘಟನೆ

    ಅತೀ ವೇಗವಾಗಿ ಕಾರು ಚಲಾಯಿಸಿದ್ದಕ್ಕೆ ನಡೆದ ಅಪಘಾತ

    ಕಾರು ಚಾಲಕನಿಗೆ 3 ಸಾವಿರ ರೂ. ದಂಡ ವಿಧಿಸಿದ ಬಜ್ಪೆ ಪೊಲೀಸ್​

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೊಂಡಕ್ಕೆ ಹಾರಿ ಬಿದ್ದಿರೋ ಘಟನೆ ಮಂಗಳೂರು ನಗರ ಹೊರವಲಯದ ಗುರುಪುರ ಬಳಿ ನಡೆದಿದೆ. ಈ ಘಟನೆಯು ಅಕ್ಟೋಬರ್ 15ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಬಂಟ್ವಾಳದ ಕೈಕಂಬ ಜೋಡುಮಾರ್ಗ ನಿವಾಸಿಯಾಗಿದ್ದ ಚಾಲಕ ಮಹಮ್ಮದ್ ತನ್ನ ಕಾರನ್ನು ಅತೀ ವೇಗವಾಗಿ ಚಲಾಯಿಸಿದ್ದಕ್ಕೆ ಈ ದುರ್ಘಟನೆ ಸಂಭವಿಸಿದೆ. ಅಪಘಾತಕ್ಕಿಡಾಗಿದ್ದ ಕಾರು ಹೊಂಡಕ್ಕಿಳಿದರೂ ಚಾಲಕ ಹಾಗೂ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇನ್ನೂ, ಅತೀ ವೇಗವಾಗಿ ಕಾರನ್ನು ಚಾಲನೆ ಮಾಡಿದ ತಪ್ಪಿಗೆ ಮಹಮ್ಮದ್ ಮೇಲೆ ಬಜ್ಪೆ ಪೊಲೀಸರು ಕೇಸ್ ದಾಖಲಿಸಿಕೊಂಡು ಮೂರು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಅಯ್ಯೋ.. ನೋಡ ನೋಡುತ್ತಿದ್ದಂತೆ ಹೊಂಡಕ್ಕೆ ಬಿದ್ದ ಕಾರು; ಭೀಕರ ಅಪಘಾತದ ಬಳಿಕ ಆಗಿದ್ದೇ ಆಶ್ಚರ್ಯ!

https://newsfirstlive.com/wp-content/uploads/2023/10/accident-39.jpg

    ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಹಾರಿ ಬಿದ್ದ ಭೀಕರ ಘಟನೆ

    ಅತೀ ವೇಗವಾಗಿ ಕಾರು ಚಲಾಯಿಸಿದ್ದಕ್ಕೆ ನಡೆದ ಅಪಘಾತ

    ಕಾರು ಚಾಲಕನಿಗೆ 3 ಸಾವಿರ ರೂ. ದಂಡ ವಿಧಿಸಿದ ಬಜ್ಪೆ ಪೊಲೀಸ್​

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೊಂಡಕ್ಕೆ ಹಾರಿ ಬಿದ್ದಿರೋ ಘಟನೆ ಮಂಗಳೂರು ನಗರ ಹೊರವಲಯದ ಗುರುಪುರ ಬಳಿ ನಡೆದಿದೆ. ಈ ಘಟನೆಯು ಅಕ್ಟೋಬರ್ 15ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಬಂಟ್ವಾಳದ ಕೈಕಂಬ ಜೋಡುಮಾರ್ಗ ನಿವಾಸಿಯಾಗಿದ್ದ ಚಾಲಕ ಮಹಮ್ಮದ್ ತನ್ನ ಕಾರನ್ನು ಅತೀ ವೇಗವಾಗಿ ಚಲಾಯಿಸಿದ್ದಕ್ಕೆ ಈ ದುರ್ಘಟನೆ ಸಂಭವಿಸಿದೆ. ಅಪಘಾತಕ್ಕಿಡಾಗಿದ್ದ ಕಾರು ಹೊಂಡಕ್ಕಿಳಿದರೂ ಚಾಲಕ ಹಾಗೂ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇನ್ನೂ, ಅತೀ ವೇಗವಾಗಿ ಕಾರನ್ನು ಚಾಲನೆ ಮಾಡಿದ ತಪ್ಪಿಗೆ ಮಹಮ್ಮದ್ ಮೇಲೆ ಬಜ್ಪೆ ಪೊಲೀಸರು ಕೇಸ್ ದಾಖಲಿಸಿಕೊಂಡು ಮೂರು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Load More