ದೇವಸ್ಥಾನದ ಒಟ್ಟು ಆದಾಯದಿಂದ ಶೇ.10 ರಷ್ಟು ನಿಧಿ ಸಂಗ್ರಹ
ಪರಿಷತ್ನಲ್ಲಿ ವಿಧೇಯಕ ಮಂಡಿಸಿದ್ದ ಸಚಿವ ರಾಮಲಿಂಗಾ ರೆಡ್ಡಿ
ತನ್ನದೇ ಸದಸ್ಯರ ಹಾಜರಾತಿ ನಿರ್ಲಕ್ಷ್ಯದಿಂದ ವಿಧೇಯಕ ತಿರಸ್ಕೃತ
ಕಳೆದ 2 ದಿನಗಳಿಂದ ಭಾರೀ ಚರ್ಚೆಗೆ ಕಾರಣವಾಗಿದ್ದ ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ವಿಧೇಯಕ ಪರಿಷತ್ತಿನಲ್ಲಿ ತಿರಸ್ಕೃತಗೊಂಡಿದೆ. ಈ ಮೂಲಕ ಸರ್ಕಾರಕ್ಕೆ ಭಾರೀ ಮುಂಗಭಂಗವಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ತೀವ್ರ ಕುತೂಹಲ ಮೂಡಿಸಿದ್ದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ತಿದ್ದುಪಡಿ ಮಸೂದೆ ಬಿದ್ದೋಗಿದೆ. ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಹಿಂದೂ ಧಾರ್ಮಿಕ ವಿಧೇಯಕ, ಪರಿಷತ್ನಲ್ಲಿ ತಿರಸ್ಕೃತಗೊಂಡಿದೆ. ಹುಂಡಿ ಹಣಕ್ಕೆ ಸರ್ಕಾರ ಕೈ ಹಾಕಿದೆ ಎಂಬ ವಿವಾದಕ್ಕೆ ಕಾರಣವಾಗಿದ್ದ ಹಿಂದೂ ಧಾರ್ಮಿಕ ದೇವಸ್ಥಾನಗಳ ತಿದ್ದುಪಡಿ ಬಿಲ್ಗೆ ಭಾರಿ ಹಿನ್ನಡೆಯಾಗಿದೆ.
ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ತಿರಸ್ಕೃತ
ಹೌದು, ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ.. ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಮೊದಲು ಪರಿಷತ್ನಲ್ಲಿ ವಿಧೇಯಕ ಮಂಡಿಸಿದ್ರು..
ಪರಿಷತ್ನಲ್ಲಿ ಸರ್ಕಾರ ಪಲ್ಟಿ!
ಹೀಗೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ವಿಧೇಯಕ ತಿರಸ್ಕೃತ ಆಗುತ್ತಲೇ ಪರಿಷತ್ನಲ್ಲಿ ಘೋಷಣೆಗಳು ಮೊಳಗಿದ್ವು. ಬಿಜೆಪಿ ಸದಸ್ಯರು ಜೈ ಶ್ರೀರಾಂ ಘೋಷಣೆ ಕೂಗಿದ್ರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಜೈ ಭೀಮ್ ಅಂತ ಘೋಷಣೆ ಮೊಳಗಿಸಿದ್ರು.
ಆದ್ರೆ, ಸರ್ಕಾರದ ಈ ತಿದ್ದುಪಡಿಗೆ ನಾವು ಸ್ವಾಗತಿಸುತ್ತೇವೆ ಅಂತ ರಾಜ್ಯ ಅರ್ಚಕರ ಸಂಘದ ಅಧ್ಯಕ್ಷ ಶ್ರೀವತ್ಸ ಹೇಳಿದ್ದಾರೆ. ರಾಮಲಿಂಗಾ ರೆಡ್ಡಿ ಬಂದ ಮೇಲೆ ಸಿ- ವರ್ಗದ ದೇವಸ್ಥಾನದ ಅರ್ಚಕರಿಗೆ ಅನುಕೂಲ ಆಗಿದೆ. ಹುಂಡಿ ಹಣ ಚರ್ಚ್ ಮಸೀದಿಗೆ ಹೋಗ್ತಿಲ್ಲ ಅಂತ ತಿಳಿಸಿದ್ದಾರೆ.
ಕಾಂಗ್ರೆಸ್ನ ಆತುರ ಮತ್ತು ಸದಸ್ಯರ ನಿರ್ಲಕ್ಷ್ಯದಿಂದ ಸರ್ಕಾರಕ್ಕೆ ಮುಜುಗರವಾಗಿದೆ. ಈ ತಿದ್ದುಪಡಿ ಮಸೂದೆ ಮುಂದಿನ ಅಧಿವೇಶನದಲ್ಲೇ ಮತ್ತೆ ಮರು ಮಂಡನೆಗೆ ಚಿಂತನೆ ನಡೆಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದೇವಸ್ಥಾನದ ಒಟ್ಟು ಆದಾಯದಿಂದ ಶೇ.10 ರಷ್ಟು ನಿಧಿ ಸಂಗ್ರಹ
ಪರಿಷತ್ನಲ್ಲಿ ವಿಧೇಯಕ ಮಂಡಿಸಿದ್ದ ಸಚಿವ ರಾಮಲಿಂಗಾ ರೆಡ್ಡಿ
ತನ್ನದೇ ಸದಸ್ಯರ ಹಾಜರಾತಿ ನಿರ್ಲಕ್ಷ್ಯದಿಂದ ವಿಧೇಯಕ ತಿರಸ್ಕೃತ
ಕಳೆದ 2 ದಿನಗಳಿಂದ ಭಾರೀ ಚರ್ಚೆಗೆ ಕಾರಣವಾಗಿದ್ದ ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ವಿಧೇಯಕ ಪರಿಷತ್ತಿನಲ್ಲಿ ತಿರಸ್ಕೃತಗೊಂಡಿದೆ. ಈ ಮೂಲಕ ಸರ್ಕಾರಕ್ಕೆ ಭಾರೀ ಮುಂಗಭಂಗವಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ತೀವ್ರ ಕುತೂಹಲ ಮೂಡಿಸಿದ್ದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ತಿದ್ದುಪಡಿ ಮಸೂದೆ ಬಿದ್ದೋಗಿದೆ. ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಹಿಂದೂ ಧಾರ್ಮಿಕ ವಿಧೇಯಕ, ಪರಿಷತ್ನಲ್ಲಿ ತಿರಸ್ಕೃತಗೊಂಡಿದೆ. ಹುಂಡಿ ಹಣಕ್ಕೆ ಸರ್ಕಾರ ಕೈ ಹಾಕಿದೆ ಎಂಬ ವಿವಾದಕ್ಕೆ ಕಾರಣವಾಗಿದ್ದ ಹಿಂದೂ ಧಾರ್ಮಿಕ ದೇವಸ್ಥಾನಗಳ ತಿದ್ದುಪಡಿ ಬಿಲ್ಗೆ ಭಾರಿ ಹಿನ್ನಡೆಯಾಗಿದೆ.
ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ತಿರಸ್ಕೃತ
ಹೌದು, ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ.. ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಮೊದಲು ಪರಿಷತ್ನಲ್ಲಿ ವಿಧೇಯಕ ಮಂಡಿಸಿದ್ರು..
ಪರಿಷತ್ನಲ್ಲಿ ಸರ್ಕಾರ ಪಲ್ಟಿ!
ಹೀಗೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ವಿಧೇಯಕ ತಿರಸ್ಕೃತ ಆಗುತ್ತಲೇ ಪರಿಷತ್ನಲ್ಲಿ ಘೋಷಣೆಗಳು ಮೊಳಗಿದ್ವು. ಬಿಜೆಪಿ ಸದಸ್ಯರು ಜೈ ಶ್ರೀರಾಂ ಘೋಷಣೆ ಕೂಗಿದ್ರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಜೈ ಭೀಮ್ ಅಂತ ಘೋಷಣೆ ಮೊಳಗಿಸಿದ್ರು.
ಆದ್ರೆ, ಸರ್ಕಾರದ ಈ ತಿದ್ದುಪಡಿಗೆ ನಾವು ಸ್ವಾಗತಿಸುತ್ತೇವೆ ಅಂತ ರಾಜ್ಯ ಅರ್ಚಕರ ಸಂಘದ ಅಧ್ಯಕ್ಷ ಶ್ರೀವತ್ಸ ಹೇಳಿದ್ದಾರೆ. ರಾಮಲಿಂಗಾ ರೆಡ್ಡಿ ಬಂದ ಮೇಲೆ ಸಿ- ವರ್ಗದ ದೇವಸ್ಥಾನದ ಅರ್ಚಕರಿಗೆ ಅನುಕೂಲ ಆಗಿದೆ. ಹುಂಡಿ ಹಣ ಚರ್ಚ್ ಮಸೀದಿಗೆ ಹೋಗ್ತಿಲ್ಲ ಅಂತ ತಿಳಿಸಿದ್ದಾರೆ.
ಕಾಂಗ್ರೆಸ್ನ ಆತುರ ಮತ್ತು ಸದಸ್ಯರ ನಿರ್ಲಕ್ಷ್ಯದಿಂದ ಸರ್ಕಾರಕ್ಕೆ ಮುಜುಗರವಾಗಿದೆ. ಈ ತಿದ್ದುಪಡಿ ಮಸೂದೆ ಮುಂದಿನ ಅಧಿವೇಶನದಲ್ಲೇ ಮತ್ತೆ ಮರು ಮಂಡನೆಗೆ ಚಿಂತನೆ ನಡೆಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ