newsfirstkannada.com

ಬೆಂಗಳೂರಲ್ಲಿ ಹನಿಟ್ರ್ಯಾಪ್​ ಗ್ಯಾಂಗ್​ನ ಕಿಂಗ್​​ಪಿನ್ ಆರತಿ‌ ದಯಾಳ್ ಅರೆಸ್ಟ್..!

Share :

Published September 13, 2023 at 11:19am

    ಕಳ್ಳತನ ಕೇಸ್​ನಲ್ಲಿ ಲಾಕ್ ಆಗಿರುವ ಆರತಿ‌ ದಯಾಳ್

    ಮಹದೇವಪುರ ಠಾಣೆ ಪೊಲೀಸರಿಂದ ಬಂಧನ

    2020ರಲ್ಲಿ ಭಾರೀ ಸದ್ದು ಮಾಡಿದ್ದ ಹನಿಟ್ರ್ಯಾಪ್ ಕೇಸ್

ಬೆಂಗಳೂರು: ಮಧ್ಯಪ್ರದೇಶ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಹನಿಟ್ರ್ಯಾಪ್​ ಗ್ಯಾಂಗ್ ಒಂದರ ಕಿಂಗ್ ಪಿನ್ ಬೆಂಗಳೂರಲ್ಲಿ ಬಂಧನವಾಗಿದೆ. ಆರತಿ‌ ದಯಾಳ್ ಬಂಧಿತ ಆರೋಪಿ.

ಆರತಿ ದಯಾಳ್​ನನ್ನು ಕಳ್ಳತನ ಪ್ರಕರಣದಲ್ಲಿ ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. 2020 ರಲ್ಲಿ ಮಧ್ಯಪ್ರದೇಶದಲ್ಲಿ ಹನಿಟ್ರಾಪ್ ಕೇಸ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಹಲವು ಸರ್ಕಾರಿ ಅಧಿಕಾರಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳು ಈ ಪ್ರಕರಣದ ಸಂತ್ರಸ್ತರಾಗಿದ್ದರು.

ಈ ಕೇಸ್​ನ ಪ್ರಮುಖ ಆರೋಪಿಯಾಗಿದ್ದ ಆರತಿ‌ ದಯಾಳ್​​ ಬೆಂಗಳೂರಲ್ಲಿ ಅರೆಸ್ಟ್ ಆಗಿದ್ದಾಳೆ. ಗೆಳತಿಯರ ಹಣ ಕದ್ದ ಆರೋಪದಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 2020ರಲ್ಲಿ ಪೊಲೀಸರು ಈಕೆಯನ್ನು ಬಂಧಿಸಿದ್ದರು. ಜಾಮೀನು ‌ಪಡೆದ ನಂತರ ನಾಪತ್ತೆಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಹನಿಟ್ರ್ಯಾಪ್​ ಗ್ಯಾಂಗ್​ನ ಕಿಂಗ್​​ಪಿನ್ ಆರತಿ‌ ದಯಾಳ್ ಅರೆಸ್ಟ್..!

https://newsfirstlive.com/wp-content/uploads/2023/09/Arati-dayal.jpg

    ಕಳ್ಳತನ ಕೇಸ್​ನಲ್ಲಿ ಲಾಕ್ ಆಗಿರುವ ಆರತಿ‌ ದಯಾಳ್

    ಮಹದೇವಪುರ ಠಾಣೆ ಪೊಲೀಸರಿಂದ ಬಂಧನ

    2020ರಲ್ಲಿ ಭಾರೀ ಸದ್ದು ಮಾಡಿದ್ದ ಹನಿಟ್ರ್ಯಾಪ್ ಕೇಸ್

ಬೆಂಗಳೂರು: ಮಧ್ಯಪ್ರದೇಶ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಹನಿಟ್ರ್ಯಾಪ್​ ಗ್ಯಾಂಗ್ ಒಂದರ ಕಿಂಗ್ ಪಿನ್ ಬೆಂಗಳೂರಲ್ಲಿ ಬಂಧನವಾಗಿದೆ. ಆರತಿ‌ ದಯಾಳ್ ಬಂಧಿತ ಆರೋಪಿ.

ಆರತಿ ದಯಾಳ್​ನನ್ನು ಕಳ್ಳತನ ಪ್ರಕರಣದಲ್ಲಿ ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. 2020 ರಲ್ಲಿ ಮಧ್ಯಪ್ರದೇಶದಲ್ಲಿ ಹನಿಟ್ರಾಪ್ ಕೇಸ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಹಲವು ಸರ್ಕಾರಿ ಅಧಿಕಾರಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳು ಈ ಪ್ರಕರಣದ ಸಂತ್ರಸ್ತರಾಗಿದ್ದರು.

ಈ ಕೇಸ್​ನ ಪ್ರಮುಖ ಆರೋಪಿಯಾಗಿದ್ದ ಆರತಿ‌ ದಯಾಳ್​​ ಬೆಂಗಳೂರಲ್ಲಿ ಅರೆಸ್ಟ್ ಆಗಿದ್ದಾಳೆ. ಗೆಳತಿಯರ ಹಣ ಕದ್ದ ಆರೋಪದಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 2020ರಲ್ಲಿ ಪೊಲೀಸರು ಈಕೆಯನ್ನು ಬಂಧಿಸಿದ್ದರು. ಜಾಮೀನು ‌ಪಡೆದ ನಂತರ ನಾಪತ್ತೆಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More