ಮಾನಸಿಕ ಕಿರಿಕಿರಿ ಮನಸ್ತಾಪ ಉಂಟಾಗಲಿದೆ
ಇಂದು ಕೆಲಸ ಕಾರ್ಯದಲ್ಲಿ ಹಿನ್ನಡೆ ಆಗಬಹುದು
ಬೇರೆಯವರಿಂದ ಹಣ ಸಿಗುವ ಸಾಧ್ಯತೆಯಿದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠಮಾಸ, ಕೃಷ್ಣಪಕ್ಷ, ಷಷ್ಠೀ ತಿಥಿ, ಧನಿಷ್ಠ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ

- ಮಾನಸಿಕ ಕಿರಿಕಿರಿ ಮನಸ್ತಾಪ ಉಂಟಾಗಲಿದೆ
- ಕೆಲಸ ಕಾರ್ಯದಲ್ಲಿ ಹಿನ್ನಡೆಯಾಗಬಹುದು
- ಆಸ್ತಿಯ ವಿಚಾರದಲ್ಲಿ ಆತಂಕ
- ನೀರು, ಬೆಂಕಿ ಅಥವಾ ವಾಹನಗಳಿಂದ ತೊಂದರೆ ಆಗಬಹುದು ಎಚ್ಚರಿಕೆವಹಿಸಿ
- ಹಿರಿಯರ ಬಗ್ಗೆ ಭಕ್ತಿ ಪ್ರದರ್ಶಿಸುತ್ತೀರಿ
- ಬೇರೆಯವರಿಂದ ಹಣ ಸಿಗುವ ಸಾಧ್ಯತೆಯಿದೆ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ

- ನೌಕರಿಯಲ್ಲಿ ವಾದ ಮಾಡುತ್ತೀರಿ ಬಡ್ತಿಗೆ ಅವಕಾಶ ಇರಲಿದೆ
- ಕೈ ಹಾಕಿದ ಕೆಲಸದಲ್ಲಿ ಜಯ ಸಿಗಲಿದೆ
- ಬಂಧುಗಳಲ್ಲಿ ಕಲಹದ ಸಾಧ್ಯತೆ ಇದೆ
- ಜನರು ನಿಮ್ಮನ್ನು ಹಿಂಬಾಲಿಸುತ್ತಾರೆ
- ಪೆಟ್ಟು ಮಾಡಿಕೊಳ್ಳುವ ಸಂಭವವಿದೆ ಎಚ್ಚರಿಕೆವಹಿಸಿ
- ತಂದೆಯವರ ಆರೋಗ್ಯದಲ್ಲಿ ವ್ಯತ್ಯಯ ಆಗಬಹುದು
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ಆರ್ಥಿಕ ಸಂಕಷ್ಟದಿಂದ ಪಾರಾಗುತ್ತೀರಿ
- ಮಾನಸಿಕ ನೋವು ಕುಟುಂಬ ಕಲಹ ಇರಲಿದೆ
- ಸ್ತ್ರೀಯರಿಂದ ಮನೆಯಲ್ಲಿ ಅನುಕೂಲವಿದೆ
- ಮೋಜು ಮಸ್ತಿಗಳಿಂದ ತೊಂದರೆಯಾಗಬಹುದು
- ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ
- ಚಂಚಲ ಮನಸ್ಸನ್ನು ನಿಯಂತ್ರಣ ಮಾಡಿ
- ಶಕ್ತಿದೇವತಾ ಆರಾಧನೆ ಮಾಡಿ
ಕಟಕ

- ಗುತ್ತಿಗೆ ಕೆಲಸಗಾರರಿಗೆ ಅನುಕೂಲವಿದೆ
- ಆರೋಗ್ಯದಲ್ಲಿ ಏರುಪೇರು ಅಗುವ ಸಾಧ್ಯತೆ ಇದೆ
- ಮನಸ್ಸಿಗೆ ಸದಾ ಕಾಲ ಸಂಕಷ್ಟದ ಅನುಭವ
- ವಿನಾಕಾರಣ ನಿಷ್ಠೂರಕ್ಕೆ ಅವಕಾಶವಿದೆ
- ಅವಕಾಶ ಕೈ ತಪ್ಪಿ ಹೋಗುವ ಸೂಚನೆ ಇದೆ
- ಇಂದು ನಿದ್ರಾಭಂಗ ಆಗಲಿದೆ
- ಬಂಧುಗಳಲ್ಲಿ ವಿರೋಧವಾದ ಮನಸ್ಥಿತಿ ಇರಲಿದೆ
- ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಸಿಂಹ

- ಕೈ ಹಾಕಿದ ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಬೇಕು
- ಇಂದು ಹೊಸಬರ ಪರಿಚಯ ಆಗಲಿದೆ
- ಕೆಲಸ ಅಥವಾ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತದೆ
- ಯಾರ ಜೊತೆಯಲ್ಲಿಯೂ ಕೂಡ ಶತ್ರುತ್ವ ಕಟ್ಟಿಕೊಳ್ಳಬೇಡಿ
- ಇಂದು ಆರ್ಥಿಕವಾಗಿ ಚೆನ್ನಾಗಿರುತ್ತದೆ
- ವಿಶೇಷ ಅಧ್ಯಯನ ಮತ್ತು ಅಧ್ಯಾಪನಕ್ಕೆ ಅವಕಾಶವಿದೆ
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಕನ್ಯಾ

- ಮಕ್ಕಳಿಂದ ಪ್ರೀತಿಯ ಉಡುಗೊರೆ ಸಿಗಲಿದೆ
- ಸ್ವಯಂಕೃತ ಅಪರಾಧದಿಂದ ತೊಂದರೆಯಾಗಬಹುದು
- ಮಿತ್ರರಿಂದ ಹಿನ್ನಡೆಯಾಗಬಹುದು
- ರಾಜಕಾರಣಿಗಳಿಂದ ತೊಂದರೆಯಾಗುವುದರಿಂದ ನಷ್ಟ ಆಗಲಿದೆ
- ಆಸ್ತಿ ವಿಚಾರದಲ್ಲಿ ಕಲಹ ಆಗಲಿದೆ ಬಗೆ ಹರಿಯುವುದಿಲ್ಲ
- ರಿಯಲ್ ಎಸ್ಟೇಟ್ ಏಜೆಂಟ್ ಗಳಿಗೆ ನಷ್ಟದ ಸಂಭವವಿದೆ
- ಶಿವಾರಾಧನೆ ಮಾಡಿ
ತುಲಾ

- ಆರ್ಥಿಕವಾಗಿ ಬೆಳೆಯಲು ಹಲವಾರು ಯೋಜನೆ ರೂಪಿಸಬಹುದು
- ಕಾಲಿಗೆ ಸಂಬಂಧಿಸಿದ ತೊಂದರೆ ಕಾಣಬಹುದು
- ಮನೆಯಲ್ಲಿ ಹೊಸ ವಸ್ತು ಖರೀದಿಯ ಬಗ್ಗೆ ಚರ್ಚೆ ಮಾಡಬಹುದು
- ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗಬಹುದು
- ಅಧಿಕಾರಿಗಳ ಸಲಹೆ ಮನಸ್ಸಿಗೆ ಒಪ್ಪುವುದಿಲ್ಲ
- ನಿಮ್ಮ ನಿರ್ಧಾರಕ್ಕೆ ಬದ್ಧರಾಗಿ ಕೆಲಸ ಮಾಡಿ
- ವಿಷ್ಣು ಸಹಸ್ರನಾಮ ಶ್ರವಣ ಮಾಡಿ
ವೃಶ್ಚಿಕ

- ತಂದೆಯವರ ಆರೋಗ್ಯದಲ್ಲಿ ವ್ಯತ್ಯಾಸದಿಂದ ಆತಂಕ ಕಾಡಬಹುದು
- ದೂರದ ಪ್ರಯಾಣ ಸಂಭವ ಅದರಿಂದ ಬೇಸರವಾಗಬಹುದು
- ಯಾವುದೇ ಅವಕಾಶ ಕೈ ತಪ್ಪದಂತೆ ನೋಡಿಕೊಳ್ಳಿ
- ಮಿತ್ರರಿಂದ ಸಹಾಯ ದೊರೆಯಬಹುದು
- ವಾಹನ ಆಪಘಾತ ಅಗುವ ಸಂಭವವಿದೆ ಎಚ್ಚರಿಕೆವಹಿಸಿ
- ಆಲಸ್ಯದ ಜೊತೆಗೆ ಮಾನಸಿಕ ಚಂಚಲತೆ ತೊಂದರೆ ಮಾಡಬಹುದು
- ಕುಲದೇವತಾರಾಧನೆ ಮಾಡಿ
ಧನುಸು

- ಅಕಾಲ ಭೋಜನದಿಂದ ಅನಾರೋಗ್ಯ ಸಾಧ್ಯತೆ
- ಮಾತಿನ ಮೇಲೆ ನಿಗಾ ಇರಲಿ ಅದರ ಬಗ್ಗೆ ಎಚ್ಚರಿಕೆವಹಿಸಿ
- ಸಾಲದ ವಿಚಾರ ಚರ್ಚೆಗೆ ಬರಬಹುದು
- ಉತ್ತಮ ಅವಕಾಶದ ಸೂಚನೆಯಿದೆ ಆದರೆ ಅದೃಷ್ಟವಿಲ್ಲ
- ಹಿಡಿತವಿಲ್ಲದ ಖರ್ಚು ತೊಂದರೆಗೆ ಅವಕಾಶ ಮಾಡಿಕೊಡಲಿದೆ
- ಬೇರೆಯವರು ನಿಮ್ಮನ್ನು ಸಾಕ್ಷಿ ಸಹಿತ ನಿಂದಿಸಬಹುದು
- ದುರ್ಗಾದೇವಿ ಆರಾಧನೆ ಮಾಡಿ
ಮಕರ

- ಸಾಂಸಾರಿಕವಾಗಿ ಸಮಸ್ಯೆಯಾಗಬಹುದು
- ಕರ್ತವ್ಯ ಲೋಪದಿಂದ ಅವಮಾನವಾಗಬಹುದು
- ವ್ಯವಹಾರದಲ್ಲಿ ಅನಾಸಕ್ತಿ ಅದರಿಂದ ನಷ್ಟ ಸಂಭವ
- ಆಪ್ತರಿಂದ ಸಹಾಯದ ಭರವಸೆ ಆದರೆ ನೆರವೇರುವುದಿಲ್ಲ
- ಇಂದು ಅತಿಯಾದ ಆಸೆ, ಮಿತಿ ಮೀರಿದ ಚಿಂತನೆ ಇರಲಿದೆ
- ಸಾಧಾರಣ ಫಲ ಎಂದು ಕಂಡರೂ ಕೂಡ ಪ್ರಯತ್ನ ತಪ್ಪುವುದಿಲ್ಲ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಕುಂಬ

- ಅನಗತ್ಯವಾದ ಖರ್ಚು, ಚರ್ಚೆ ಅದರಿಂದ ಮುಖಭಂಗವಾಗಬಹುದು
- ಇಂದು ವಿರೋಧಿಗಳ ದ್ವೇಷ, ಕಿರುಕುಳ ಅನುಭವಿಸಬೇಕಾಗಬಹುದು
- ನಿಮ್ಮ ಕೋಪದಿಂದ ಕೆಲಸಕ್ಕೆ ತೊಂದರೆ
- ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು ಎಚ್ಚರಿಕೆ
- ಅಪವಾದದ ಭೀತಿ ಹೆಚ್ಚಾಗಿ ಕಾಡಬಹುದು
- ಕಾನೂನಿನ ಕಟ್ಟಲೆಗೆ ಸಿಕ್ಕಿಕೊಳ್ಳುವ ಪರಿಸ್ಥಿತಿ ಉಂಟಾಗಬಹುದು
- ಸುಬ್ರಹ್ಮಣ್ಯನನ್ನು ಆರಾಧನೆ ಮಾಡಿ
ಮೀನ

- ಮಕ್ಕಳ ವಿಚಾರದಲ್ಲಿ ಗಂಭೀರ ಚಿಂತನೆ ಮಾಡಬಹುದು
- ದುಶ್ಚಟಗಳ ಸಹವಾಸವಿದ್ದರೆ ತೊಂದರೆ ಖಚಿತ
- ಪ್ರಯತ್ನ ಮಾಡಿದರೂ ಕೆಲ ಕೆಲಸಗಳು ವಿಫಲ ಆಗಲಿದೆ
- ನಂಬಿಕಸ್ಥರಿಂದ ಅಶಾಂತಿ ಮತ್ತು ಜಗಳ
- ಅನಾವಶ್ಯಕ ವಿಚಾರಗಳು ಮುನ್ನಲೆಗೆ ಬರಬಹುದು
- ಯಾವುದೇ ದೂರದ ಪ್ರಯಾಣ ಬೇಡ ತೊಂದರೆಯಿದೆ
- ವಿನಾಯಕನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ