ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯ ರೇಪ್ & ಮರ್ಡರ್ ಕೇಸ್
ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ ಬಳಿಕ ಮನೆಗೆ ಹೋದ ಪಾಪಿ
ಆಕೆಯ ಕೈ ಕಾಲು, ಬಾಯಿ ಮತ್ತು ಕಣ್ಣುಗಳಿಂದ ತೀವ್ರ ರಕ್ತಸ್ರಾವ
ಕೋಲ್ಕತ್ತಾದ ಆರ್.ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದಿರುವ ರೇಪ್ & ಮರ್ಡರ್ ಪ್ರಕರಣ ಬೆಚ್ಚಿ ಬೀಳಿಸಿದೆ. ನೀಚ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ದೇಶಾದ್ಯಂತ ಇಂದು ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪರಮ ಪಾಪಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಲಾಗುತ್ತಿದೆ.
ದೇಶಾದ್ಯಂತ ಆಕ್ರೋಶ, ವೈದ್ಯರ ಪ್ರತಿಭಟನೆಯ ಮಧ್ಯೆ ಕೋಲ್ಕತ್ತಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಲ್ಲಿ ವೈದ್ಯೆಯ ಅತ್ಯಾಚಾರ ಮಾಡಿದ ಕಿರಾತಕ ಮಾಡಿದ್ದೇನು ಅನ್ನೋ ಸತ್ಯ ಬಯಲಾಗಿದೆ.
ಕೋಲ್ಕತ್ತಾದ ಆರ್.ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯ ರೇಪ್ ಮಾಡಿದ ಆರೋಪಿಗೆ ಯಾವುದೇ ಪಶ್ಚಾತ್ತಾಪವೇ ಇಲ್ಲ. ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ ಬಳಿಕ ಮನೆಗೆ ಹೋಗಿ ಚೆನ್ನಾಗಿ ನಿದ್ದೆ ಮಾಡಿದ್ದಾನೆ. ಇದಾದ ಮೇಲೆ ಮರ್ಡರ್ ಮಾಡುವಾಗ ಧರಿಸಿದ್ದ ಬಟ್ಟೆಯನ್ನು ತೊಳೆದಿದ್ದಾನೆ. ಕೊಲೆಗೆ ಸಂಬಂಧಪಟ್ಟ ಎಲ್ಲಾ ಸಾಕ್ಷಿಗಳನ್ನು ನಾಶಪಡಿಸಲು ಯತ್ನಿಸಿದ್ದಾನೆ ಅನ್ನೋ ಸ್ಫೋಟಕ ಮಾಹಿತಿ ಇದೀಗ ಬಯಲಾಗಿದೆ.
ಇದನ್ನೂ ಓದಿ: ವೈದ್ಯೆ ರೇಪ್ & ಮರ್ಡರ್ ಕೇಸ್ಗೆ ಹೊಸ ಟ್ವಿಸ್ಟ್.. ಹಂತಕನ ಹಿಡಿದುಕೊಟ್ಟಿದ್ದೇ ಆ ವಸ್ತು! ಕೊಲೆ ರಹಸ್ಯ ಬಯಲು
ಸುಳಿವು ಕೊಟ್ಟಿದ್ದು ಬ್ಲ್ಯೂಟೂಥ್!
ಅತ್ಯಾಚಾರ ಮತ್ತು ಕೊಲೆ ನಡೆದ ಜಾಗದಲ್ಲಿ ಯುವತಿಯ ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಕಂಡು ಬಂದಿತ್ತು. ಆಕೆಯ ಒಳ ಉಡುಪು ಹಾಗೂ ಜೀನ್ಸ್ ಪ್ಯಾಂಟ್ ಕೂಡ ಅವಳ ದೇಹದ ಪಕ್ಕದಲ್ಲಿ ಬಿದ್ದಿದ್ದವು. ಇವುಗಳ ಸ್ವಲ್ಪ ದೂರದಲ್ಲಿಯೇ ಬಿದ್ದಿತ್ತು ಒಂದು ಬ್ಲ್ಯೂಟೂಥ್. ಅದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಮತ್ತೊಂದು ಪ್ರಮುಖ ಸಾಕ್ಷಿಯಾಗಿ ಸಿಕ್ಕಿದ್ದು ಸಿಸಿಟಿವಿ ಫೂಟೇಜ್, ಕೊಲೆ ನಡೆದ ಹಾಗೂ ಅದಕ್ಕೂ ಮೊದಲು ಸಂಜಯ್ ರಾಯ್ ಓಡಾಡಿದ್ದ ದೃಶ್ಯಗಳನ್ನು ನೋಡಿದ ಪೊಲೀಸರು ಹಂತಕನ ಹೆಡೆಮುರಿ ಕಟ್ಟಲು ಸಜ್ಜಾಗಿದ್ದರು. ಈ ಎರಡು ಪ್ರಮುಖ ಸಾಕ್ಷಿಗಳಿಂದಲೇ ಸಂಜಯ್ ರಾಯ್ನನ್ನು ಬಲೆಗೆ ಕೆಡುವಿದ್ದಾರೆ.
ತ್ವರಿತಗತಿಯ ನ್ಯಾಯಕ್ಕೆ ಒತ್ತಾಯ!
ವೈದ್ಯೆಯ ರೇಪ್ ಮತ್ತು ಮರ್ಡರ್ ಪ್ರಕರಣದಲ್ಲಿ ಸಂಜಯ್ ರಾಯ್ ಒಬ್ಬ ಸ್ವಯಂಸೇವಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ಹೇಳಲಾಗಿದೆ. ದೇಶಾದ್ಯಂತ ಆರೋಪಿ ವಿರುದ್ಧ 24 ಗಂಟೆಯಲ್ಲಿ ಕ್ರಮ ಕೈಗೊಳ್ಳುವಂತೆ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಫೋಡಾ) ಪ್ರತಿಭಟನೆಗೆ ಕರೆ ನೀಡಿದೆ. ಆರೋಪಿ ಸರ್ಕಾರಿ ಉದ್ಯೋಗಿಯಾಗಿರೋ ಹಿನ್ನೆಲೆ ಅವನನ್ನು ರಕ್ಷಿಸೋ ಕಾರ್ಯ ನಡೆಯುತ್ತಿದೆ ಎಂದು ಅನುಮಾನವಿದ್ದು. ಅವನಿಗೆ ರಕ್ಷಣೆ ನೀಡಬಾರದು. ಅವನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಬಾಯಿ, ಕಣ್ಣು, ಖಾಸಗಿ ಭಾಗದಲ್ಲಿ ರಕ್ತಸ್ರಾವ.. ಅರೆನಗ್ನ ಸ್ಥಿತಿಯಲ್ಲಿ ಶವ; ವೈದ್ಯೆ ರೇಪ್ & ಮರ್ಡರ್ ಘನಘೋರ!
ಸಿಬಿಐ ತನಿಖೆೆಗೆ ನೀಡಲು ಚಿಂತನೆ!
ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಕೈ ಕಾಲು, ಬಾಯಿ ಮತ್ತು ಕಣ್ಣುಗಳಿಂದ ರಕ್ತಸ್ರಾವವಾಗಿರೋದು ದೃಢವಾಗಿದೆ. ಜೊತೆಗೆ ದೇಹದ ಹಲವು ಭಾಗಗಳಲ್ಲಿ ಗಾಯವಾಗಿರೋ ಬಗ್ಗೆಯೂ ವರದಿಯಾಗಿದೆ. ಈ ಬಗ್ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಇದೇ ಭಾನುವಾರದ ಹೊತ್ತಿಗೆ ಪ್ರಕರಣ ಬೇಧಿಸದಿದ್ದರೆ ಪ್ರಕರಣವನ್ನು ಸಿಬಿಐಗೆ ನೀಡಲಾಗುವುದು. ತ್ವರಿತ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಆದ್ಯತೆ ನೀಡಲಾಗುತ್ತದೆ ಎನ್ನುವ ಭರವಸೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯ ರೇಪ್ & ಮರ್ಡರ್ ಕೇಸ್
ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ ಬಳಿಕ ಮನೆಗೆ ಹೋದ ಪಾಪಿ
ಆಕೆಯ ಕೈ ಕಾಲು, ಬಾಯಿ ಮತ್ತು ಕಣ್ಣುಗಳಿಂದ ತೀವ್ರ ರಕ್ತಸ್ರಾವ
ಕೋಲ್ಕತ್ತಾದ ಆರ್.ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದಿರುವ ರೇಪ್ & ಮರ್ಡರ್ ಪ್ರಕರಣ ಬೆಚ್ಚಿ ಬೀಳಿಸಿದೆ. ನೀಚ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ದೇಶಾದ್ಯಂತ ಇಂದು ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪರಮ ಪಾಪಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಲಾಗುತ್ತಿದೆ.
ದೇಶಾದ್ಯಂತ ಆಕ್ರೋಶ, ವೈದ್ಯರ ಪ್ರತಿಭಟನೆಯ ಮಧ್ಯೆ ಕೋಲ್ಕತ್ತಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಲ್ಲಿ ವೈದ್ಯೆಯ ಅತ್ಯಾಚಾರ ಮಾಡಿದ ಕಿರಾತಕ ಮಾಡಿದ್ದೇನು ಅನ್ನೋ ಸತ್ಯ ಬಯಲಾಗಿದೆ.
ಕೋಲ್ಕತ್ತಾದ ಆರ್.ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯ ರೇಪ್ ಮಾಡಿದ ಆರೋಪಿಗೆ ಯಾವುದೇ ಪಶ್ಚಾತ್ತಾಪವೇ ಇಲ್ಲ. ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ ಬಳಿಕ ಮನೆಗೆ ಹೋಗಿ ಚೆನ್ನಾಗಿ ನಿದ್ದೆ ಮಾಡಿದ್ದಾನೆ. ಇದಾದ ಮೇಲೆ ಮರ್ಡರ್ ಮಾಡುವಾಗ ಧರಿಸಿದ್ದ ಬಟ್ಟೆಯನ್ನು ತೊಳೆದಿದ್ದಾನೆ. ಕೊಲೆಗೆ ಸಂಬಂಧಪಟ್ಟ ಎಲ್ಲಾ ಸಾಕ್ಷಿಗಳನ್ನು ನಾಶಪಡಿಸಲು ಯತ್ನಿಸಿದ್ದಾನೆ ಅನ್ನೋ ಸ್ಫೋಟಕ ಮಾಹಿತಿ ಇದೀಗ ಬಯಲಾಗಿದೆ.
ಇದನ್ನೂ ಓದಿ: ವೈದ್ಯೆ ರೇಪ್ & ಮರ್ಡರ್ ಕೇಸ್ಗೆ ಹೊಸ ಟ್ವಿಸ್ಟ್.. ಹಂತಕನ ಹಿಡಿದುಕೊಟ್ಟಿದ್ದೇ ಆ ವಸ್ತು! ಕೊಲೆ ರಹಸ್ಯ ಬಯಲು
ಸುಳಿವು ಕೊಟ್ಟಿದ್ದು ಬ್ಲ್ಯೂಟೂಥ್!
ಅತ್ಯಾಚಾರ ಮತ್ತು ಕೊಲೆ ನಡೆದ ಜಾಗದಲ್ಲಿ ಯುವತಿಯ ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಕಂಡು ಬಂದಿತ್ತು. ಆಕೆಯ ಒಳ ಉಡುಪು ಹಾಗೂ ಜೀನ್ಸ್ ಪ್ಯಾಂಟ್ ಕೂಡ ಅವಳ ದೇಹದ ಪಕ್ಕದಲ್ಲಿ ಬಿದ್ದಿದ್ದವು. ಇವುಗಳ ಸ್ವಲ್ಪ ದೂರದಲ್ಲಿಯೇ ಬಿದ್ದಿತ್ತು ಒಂದು ಬ್ಲ್ಯೂಟೂಥ್. ಅದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಮತ್ತೊಂದು ಪ್ರಮುಖ ಸಾಕ್ಷಿಯಾಗಿ ಸಿಕ್ಕಿದ್ದು ಸಿಸಿಟಿವಿ ಫೂಟೇಜ್, ಕೊಲೆ ನಡೆದ ಹಾಗೂ ಅದಕ್ಕೂ ಮೊದಲು ಸಂಜಯ್ ರಾಯ್ ಓಡಾಡಿದ್ದ ದೃಶ್ಯಗಳನ್ನು ನೋಡಿದ ಪೊಲೀಸರು ಹಂತಕನ ಹೆಡೆಮುರಿ ಕಟ್ಟಲು ಸಜ್ಜಾಗಿದ್ದರು. ಈ ಎರಡು ಪ್ರಮುಖ ಸಾಕ್ಷಿಗಳಿಂದಲೇ ಸಂಜಯ್ ರಾಯ್ನನ್ನು ಬಲೆಗೆ ಕೆಡುವಿದ್ದಾರೆ.
ತ್ವರಿತಗತಿಯ ನ್ಯಾಯಕ್ಕೆ ಒತ್ತಾಯ!
ವೈದ್ಯೆಯ ರೇಪ್ ಮತ್ತು ಮರ್ಡರ್ ಪ್ರಕರಣದಲ್ಲಿ ಸಂಜಯ್ ರಾಯ್ ಒಬ್ಬ ಸ್ವಯಂಸೇವಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ಹೇಳಲಾಗಿದೆ. ದೇಶಾದ್ಯಂತ ಆರೋಪಿ ವಿರುದ್ಧ 24 ಗಂಟೆಯಲ್ಲಿ ಕ್ರಮ ಕೈಗೊಳ್ಳುವಂತೆ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಫೋಡಾ) ಪ್ರತಿಭಟನೆಗೆ ಕರೆ ನೀಡಿದೆ. ಆರೋಪಿ ಸರ್ಕಾರಿ ಉದ್ಯೋಗಿಯಾಗಿರೋ ಹಿನ್ನೆಲೆ ಅವನನ್ನು ರಕ್ಷಿಸೋ ಕಾರ್ಯ ನಡೆಯುತ್ತಿದೆ ಎಂದು ಅನುಮಾನವಿದ್ದು. ಅವನಿಗೆ ರಕ್ಷಣೆ ನೀಡಬಾರದು. ಅವನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಬಾಯಿ, ಕಣ್ಣು, ಖಾಸಗಿ ಭಾಗದಲ್ಲಿ ರಕ್ತಸ್ರಾವ.. ಅರೆನಗ್ನ ಸ್ಥಿತಿಯಲ್ಲಿ ಶವ; ವೈದ್ಯೆ ರೇಪ್ & ಮರ್ಡರ್ ಘನಘೋರ!
ಸಿಬಿಐ ತನಿಖೆೆಗೆ ನೀಡಲು ಚಿಂತನೆ!
ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಕೈ ಕಾಲು, ಬಾಯಿ ಮತ್ತು ಕಣ್ಣುಗಳಿಂದ ರಕ್ತಸ್ರಾವವಾಗಿರೋದು ದೃಢವಾಗಿದೆ. ಜೊತೆಗೆ ದೇಹದ ಹಲವು ಭಾಗಗಳಲ್ಲಿ ಗಾಯವಾಗಿರೋ ಬಗ್ಗೆಯೂ ವರದಿಯಾಗಿದೆ. ಈ ಬಗ್ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಇದೇ ಭಾನುವಾರದ ಹೊತ್ತಿಗೆ ಪ್ರಕರಣ ಬೇಧಿಸದಿದ್ದರೆ ಪ್ರಕರಣವನ್ನು ಸಿಬಿಐಗೆ ನೀಡಲಾಗುವುದು. ತ್ವರಿತ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಆದ್ಯತೆ ನೀಡಲಾಗುತ್ತದೆ ಎನ್ನುವ ಭರವಸೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ