ಪ್ರಖ್ಯಾತ ರಾಮೇಶ್ವರಂ ಕೆಫೆಯಲ್ಲಿ ಭಾರೀ ಪ್ರಮಾಣದ ನಿಗೂಢ ಸ್ಫೋಟ
ಮಧ್ಯಾಹ್ನ 1 ಗಂಟೆ ಸುಮಾರಿಗೆ ಭಾರೀ ಜನರಿದ್ದ ಸಂದರ್ಭದಲ್ಲೇ ಬ್ಲಾಸ್ಟ್!
ಬ್ಲಾಸ್ಟ್ಗೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಬೆಂಗಳೂರು, ಪೊಲೀಸರಿಂದ ತನಿಖೆ
ಬೆಂಗಳೂರು: ಸಿಲಿಕಾನ್ ಸಿಟಿ ಐಟಿಪಿಎಲ್ ಮುಖ್ಯ ರಸ್ತೆಯ ಕುಂದಲಹಳ್ಳಿಯಲ್ಲಿರೋ ಪ್ರಖ್ಯಾತ ರಾಮೇಶ್ವರಂ ಕೆಫೆಯಲ್ಲಿ ಭಾರೀ ಪ್ರಮಾಣದ ನಿಗೂಢ ಸ್ಫೋಟ ಸಂಭವಿಸಿದೆ. ವೈಟ್ ಫೀಲ್ಡ್ ಬಳಿ ಇರೋ ಈ ಹೋಟಲ್ನಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಭಾರೀ ಜನರಿದ್ದ ಸಂದರ್ಭದಲ್ಲೇ ಈ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ.
ಇನ್ನು, ಬ್ಲಾಸ್ಟ್ ಆದ ವಿಡಿಯೋ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ವಿಡಿಯೋ ನೋಡಿದ್ರೆ ಮೈ ಜುಮ್ ಎನ್ನಿಸುತ್ತದೆ. ಅಷ್ಟೇ ಅಲ್ಲ ಬ್ಲಾಸ್ಟ್ ಆದ ಕೂಡಲೇ ಪ್ರಾಣ ಉಳಿಸಿಕೊಳ್ಳಲು ಜನ ಓಡಿ ಹೋಗಿದ್ದಾರೆ. ಹೋಟೆಲ್ನಲ್ಲಿದ್ದ ಗ್ರಾಹಕರು, ಸಿಬ್ಬಂದಿ ಕೂಡ ಚೆಲ್ಲಾಪಿಲ್ಲಿಯಾಗಿದ್ದಾರೆ.
ಹೋಟೆಲ್ ಹೊರಗಡೆ ಬ್ಲಾಸ್ಟ್ ಆದ ಕಾರಣ ಸಣ್ಣಪುಟ್ಟ ಗಾಯಗಳಾಗಿವೆ. ಬ್ಲಾಸ್ಟ್ ಆಗಿದ್ದು ನೋಡಿ ಮಹಿಳೆ ಒಬ್ಬರು ಆಯತಪ್ಪಿ ಬಿದ್ದಿದ್ದಾರೆ. ಇನ್ನೂ ಹಲವರು ಓಡಿ ಹೋಗಿದ್ದಾರೆ. ಸದ್ಯ ಪೊಲೀಸ್ರು ತನಿಖೆ ಶುರು ಮಾಡಿದ್ದಾರೆ. ಸಂಜೆ 7.30ಕ್ಕೆ ರಾಜ್ಯ ಗೃಹ ಸಚಿವ ಡಾ.ಜಿ ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಯಾರೋ ಕಿಡಿಗೇಡಿ ಭಾರೀ ಪ್ರಮಾಣದ ಸ್ಫೋಟ ಇರೋ ಬ್ಯಾಗ್ ತಂದಿಟ್ಟು ಹೋಗಿದ್ದ ವಿಡಿಯೋ ಲಭ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ.. ಕೆಫೆ ಸ್ಫೋಟದ EXCLUSIVE ವಿಡಿಯೋ ನ್ಯೂಸ್ಫಸ್ಟ್ಗೆ ಲಭ್ಯವಾಗಿದೆ.@siddaramaiah @CMofKarnataka @narendramodi @BJP4Karnataka #RameswaramCafe #RameswaramCafeincident #Bengaluru #KannadaNews #NewsFirstLive #NewsFirstKannada pic.twitter.com/uuKjLXLqQu
— NewsFirst Kannada (@NewsFirstKan) March 1, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪ್ರಖ್ಯಾತ ರಾಮೇಶ್ವರಂ ಕೆಫೆಯಲ್ಲಿ ಭಾರೀ ಪ್ರಮಾಣದ ನಿಗೂಢ ಸ್ಫೋಟ
ಮಧ್ಯಾಹ್ನ 1 ಗಂಟೆ ಸುಮಾರಿಗೆ ಭಾರೀ ಜನರಿದ್ದ ಸಂದರ್ಭದಲ್ಲೇ ಬ್ಲಾಸ್ಟ್!
ಬ್ಲಾಸ್ಟ್ಗೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಬೆಂಗಳೂರು, ಪೊಲೀಸರಿಂದ ತನಿಖೆ
ಬೆಂಗಳೂರು: ಸಿಲಿಕಾನ್ ಸಿಟಿ ಐಟಿಪಿಎಲ್ ಮುಖ್ಯ ರಸ್ತೆಯ ಕುಂದಲಹಳ್ಳಿಯಲ್ಲಿರೋ ಪ್ರಖ್ಯಾತ ರಾಮೇಶ್ವರಂ ಕೆಫೆಯಲ್ಲಿ ಭಾರೀ ಪ್ರಮಾಣದ ನಿಗೂಢ ಸ್ಫೋಟ ಸಂಭವಿಸಿದೆ. ವೈಟ್ ಫೀಲ್ಡ್ ಬಳಿ ಇರೋ ಈ ಹೋಟಲ್ನಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಭಾರೀ ಜನರಿದ್ದ ಸಂದರ್ಭದಲ್ಲೇ ಈ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ.
ಇನ್ನು, ಬ್ಲಾಸ್ಟ್ ಆದ ವಿಡಿಯೋ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ವಿಡಿಯೋ ನೋಡಿದ್ರೆ ಮೈ ಜುಮ್ ಎನ್ನಿಸುತ್ತದೆ. ಅಷ್ಟೇ ಅಲ್ಲ ಬ್ಲಾಸ್ಟ್ ಆದ ಕೂಡಲೇ ಪ್ರಾಣ ಉಳಿಸಿಕೊಳ್ಳಲು ಜನ ಓಡಿ ಹೋಗಿದ್ದಾರೆ. ಹೋಟೆಲ್ನಲ್ಲಿದ್ದ ಗ್ರಾಹಕರು, ಸಿಬ್ಬಂದಿ ಕೂಡ ಚೆಲ್ಲಾಪಿಲ್ಲಿಯಾಗಿದ್ದಾರೆ.
ಹೋಟೆಲ್ ಹೊರಗಡೆ ಬ್ಲಾಸ್ಟ್ ಆದ ಕಾರಣ ಸಣ್ಣಪುಟ್ಟ ಗಾಯಗಳಾಗಿವೆ. ಬ್ಲಾಸ್ಟ್ ಆಗಿದ್ದು ನೋಡಿ ಮಹಿಳೆ ಒಬ್ಬರು ಆಯತಪ್ಪಿ ಬಿದ್ದಿದ್ದಾರೆ. ಇನ್ನೂ ಹಲವರು ಓಡಿ ಹೋಗಿದ್ದಾರೆ. ಸದ್ಯ ಪೊಲೀಸ್ರು ತನಿಖೆ ಶುರು ಮಾಡಿದ್ದಾರೆ. ಸಂಜೆ 7.30ಕ್ಕೆ ರಾಜ್ಯ ಗೃಹ ಸಚಿವ ಡಾ.ಜಿ ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಯಾರೋ ಕಿಡಿಗೇಡಿ ಭಾರೀ ಪ್ರಮಾಣದ ಸ್ಫೋಟ ಇರೋ ಬ್ಯಾಗ್ ತಂದಿಟ್ಟು ಹೋಗಿದ್ದ ವಿಡಿಯೋ ಲಭ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ.. ಕೆಫೆ ಸ್ಫೋಟದ EXCLUSIVE ವಿಡಿಯೋ ನ್ಯೂಸ್ಫಸ್ಟ್ಗೆ ಲಭ್ಯವಾಗಿದೆ.@siddaramaiah @CMofKarnataka @narendramodi @BJP4Karnataka #RameswaramCafe #RameswaramCafeincident #Bengaluru #KannadaNews #NewsFirstLive #NewsFirstKannada pic.twitter.com/uuKjLXLqQu
— NewsFirst Kannada (@NewsFirstKan) March 1, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ