/newsfirstlive-kannada/media/post_attachments/wp-content/uploads/2025/07/Yadu-Shreshtha.jpg)
ಮಿಥುನ ರಾಶಿ ಕಲರ್ಸ್ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ. ಹಲವು ಹೊಸ ಪ್ರತಿಭೆಗಳಿಗೆ ಲೈಫ್ ಕಟ್ಟಿಕೊಟ್ಟ ಸೀರಿಯಲ್ ಇದು. ಈ ಧಾರಾವಾಹಿಯಲ್ಲಿ ಅಭಿನಯಿಸಿದ ಕಲಾವಿದರು ಸದ್ಯ ಬೇರೆ ಭಾಷೆಗಳು ಸೇರಿದಂತೆ ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್.. ಇನ್ನೊಂದು ಹೆಜ್ಜೆ ಬಾಕಿ ಅಷ್ಟೇ!
ನಾಯಕ ಮಿಥುನ್ ಸಹೋದರ ಸಮರ್ಥ್ ಪಾತ್ರ ಮಾಡಿದ್ದ ನಟ ಯದುಶ್ರೇಷ್ಟ ವೈವಾಹಿಕ ಜೀವನಕ್ಕೆ ಕಾಲಿಟ್ಟದ್ದಾರೆ. ಇವರ ಮದುವೆಯಲ್ಲಿ ಮತ್ತೆ ಕಲಾವಿದರು ರಿಯೂನಿಯನ್ ಆಗಿದ್ದು, ಆ ಬಾಂಡಿಂಗ್ ಇವತ್ತಿಗೂ ಹಾಗೇ ಇದೆ.
ನಟ ಯದುಶ್ರೇಷ್ಟ ರಂಗಭೂಮಿ ಕಲಾವಿದ. ನಾಟಕದಲ್ಲಿ ಪರಿಚಯವಾದವ್ರು ವಿಶಾಖ ಹೇಮಂತ್. ಇಬ್ಬರೂ ಮೈಸೂರಿನವರೇ. ಮುಖ್ಯವಾಗಿ ಕಲಾವಿದರು. ವಿಶಾಖ ಭರತನಾಟ್ಯ ಕಲಾವಿದೆ. ಬರಹಗಾರ್ತಿ ಕೂಡ. ಇವ್ರ ಗೆಳತನ ದಾಂಪತ್ಯಕ್ಕೆ ಅಡಿಟ್ಟಿದೆ.
ಶುಭ ವಿವಾಹದಲ್ಲಿ ವೈಷ್ಣವಿ, ದೀಪಾ ಕಟ್ಟೆ, ರಾಘು ಸೇರಿದಂತೆ ಮಿಥುನ ರಾಶಿ ಕಲಾವಿದರು ಭಾಗಿಯಾಗಿ ಶುಭ ಕೋರಿದ್ದಾರೆ. ನಮ್ಮ ಕಡೆಯಿಂದಲೂ ಹ್ಯಾಪಿ ಮ್ಯಾರೀಡ್ ಲೈಫ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ