newsfirstkannada.com

ಇಬ್ರು ಕಾಲೇಜಲ್ಲಿ ಭೇಟಿ ಮಾಡ್ತಾ ಇದ್ರು, ಇವ್ನು ರೂಂ ಮಾಡಿ ಇದ್ದ.. ಆರೋಪಿ ಫಯಾಜ್​ ತಾಯಿ ನೇಹಾ ಬಗ್ಗೆ ಏನಂದ್ರು?

Share :

Published April 20, 2024 at 11:10am

    ನೋಡ್ರಪ್ಪಾ ಫ್ರೆಂಡ್ಲಿಯಾಗಿ ಇರಿ.. ಫ್ರೆಂಡ್​ಶಿಪ್​ ಇಟ್ಕೊಳ್ಳಿ

    ಅವಳು ಜಾಣೆ ಇದ್ದಾಳೆ, ನೀನು ಜಾಣೆ ಇದ್ದೀಯಾ.. ಇಬ್ರೂ ಐಎಎಸ್​​ ಮಾಡಿ

    ಸಾಕಷ್ಟು ಕ್ರೂರವಾಗಿ ನೇಹಾಳನ್ನು ಕೊಂದಿದ್ದಾನೆ.. ಇಂಥಾ ಅನ್ಯಾಯ ಆಗಬಾರದಿತ್ತು

ಹುಬ್ಬಳ್ಳಿಯ ನೇಹಾ ಹಿರೇಮಠ್​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಕೊಲೆಗಾರ ಫಯಾಜ್​ ಕೈಯಾರೆ ನೇಹಾ ಸಾವನ್ನಪ್ಪಿದ್ದಾಳೆ. ಇದೀಗ ಫಯಾಜ್ ತಾಯಿ  ಘಟನೆಯಿಂದ ನೊಂದಿದ್ದು, ನ್ಯೂಸ್​​ ಫಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ಮಗನಿಗೂ ಮತ್ತು ನೇಹಾಳಿಗೆ ಇದ್ದ ಸಂಬಂಧ, ಇಬ್ಬರ ಒಡನಾಟದ ಬಗ್ಗೆ ಹೇಳಿಕೊಂಡಿದ್ದಾರೆ.

ಫಯಾಜ್​ ತಾಯಿ ಮಮ್ತಾಜ್​, ​‘ಸಾಕಷ್ಟು ಕ್ರೂರವಾಗಿ ನೇಹಾಳನ್ನು ಕೊಂದಿದ್ದಾನೆ. ಆ ಮಗುಗೆ ಪಾಪ ಇಂಥ ಅನ್ಯಾಯ ಆಗಬಾರದಿತ್ತು. ಆಗಿದೆ. ಕೆಟ್ಟ ಘಳಿಗೆ ಆ ಮಗು ಎಷ್ಟೊಂದು ವಿಲವಿಲವಾಗಿ ಒದ್ದಾಡಿತೊ.. ಆ ಮಗು ಪ್ರಾಣ ಬಿಡುವಾಗ ಎಷ್ಟು ಕಷ್ಟ ಆಗಿರುತ್ತೋ.. ನನಗೆ ಅದನ್ನು ಟಿವಿಯಲ್ಲಿ ನೋಡಿ ಅಲ್ಲೇ ಕುಸಿದು ಬಿದ್ದೆ. ಪಕ್ಕದ ಮನೆಯವರು ನನಗೆ ನೀರು ಕೊಟ್ಟು ಎಬ್ಬಿಸಿದರು. ಅವನು ಮಾಡೊರೋದು ತಪ್ಪು’ ಎಂದು ಹೇಳಿದ್ದಾರೆ.

ಬಳಿಕ ಮಾತು ಮುಂದುವರೆಸಿದ ಅವರು, ‘ಮನೆಯಿಂದ ಹೋಗಿ 5 ದಿನ ಆಗಿತ್ತು. 13ನೇ ತಾರೀಖಿಗೆ ಹೋಗಿದ್ದಾನೆ. ಏನಾದ್ರು ಕೆಲಸ ಹುಡುಕಿಕೊಂಡು ಹೋಗುತ್ತೇನೆ. ಮನೆಯಲ್ಲಿ ಕುಳಿತು ಬೇಜಾರಾಗಿದ್ದೇನೆ ಎಂದು ಹೋದವನನ್ನು ಟಿವಿಯಲ್ಲಿ ನೋಡಿ ಗಾಬರಿಯಾಗಿಬಿಟ್ಟಿದ್ದೇನೆ. ನನ್ನ ಮಗ ಇಂತಹ ಕೃತ್ಯವೆಸಗಿದನಾ ನಾವು ಬೇರೆಯವರ ಮಕ್ಕಳನ್ನು ಟಿವಿಯಲ್ಲಿ ನೋಡುತ್ತೇವೆ. ನನ್ನ ಮಗ ಟಿವಿಯಲ್ಲಿ ಬರೋವಂತೆ ತಲೆ ತಗ್ಗಿಸೋ ಕೆಲಸ ಮಾಡಿಬಿಟ್ಟನಲ್ಲ ನನ್ನ ಮಗ ಎಂದು ನನಗೆ ತುಂಬಾ ನೋವಾಯ್ತು’ ಎಂದು ಹೇಳಿದ್ದಾರೆ

 

ಫಯಾಜ್​ ಮತ್ತ ನೇಹಾ ನಡುವಿನ ಸಂಬಂಧ ಹೇಗಿತ್ತು?

ಅವರು ಒಳ್ಳೆಯ ಫ್ರೆಂಡ್ಸ್​ ಆಗಿದ್ದರು. ನೇಹಾ ಕೂಡ ಅಷ್ಟೇ ಒಳ್ಳೆಯ ಹುಡುಗಿ. ಒಳ್ಳೆಯ ಫ್ರೆಂಡ್​​ಶಿಪ್​ ಇತ್ತು. ನಾನು ಹೇಳಿದೆ. ನೋಡ್ರಪ್ಪಾ ಫ್ರೆಂಡ್ಲಿಯಾಗಿ ಇರಿ. ಫ್ರೆಂಡ್​ಶಿಪ್​ ಇಟ್ಕೊಳ್ಳಿ. ಯಾವುದಕ್ಕೂ ದುಡುಕೋಕೆ ಹೋಗಬೇಡ. ಅವಳು ಜಾಣೆ ಇದ್ದಾಳೆ, ನೀನು ಜಾಣೆ ಇದ್ದೀಯಾ. ಇಬ್ರೂ ಐಎಎಸ್​​ ಮಾಡಿ ಎಂದು ಹೇಳಿದ್ದೆ.

ಅವರಿಬ್ಬರ ಭೇಟಿ ಎಲ್ಲಾಯ್ತು?

ಅವರು ಕಾಲೇಜಿನಲ್ಲಿ ಭೇಟಿಯಾಗ್ತಾ ಇದ್ರು. ಆದರೆ ಈತ ರೂಂ ಮಾಡಿ ಕೂಡ ಇದ್ದ. ಅಲ್ಲಿ ಹೋಗ್ತಾ ಇದ್ರಾ ಗೊತ್ತಿಲ್ಲ. ಒಂದೇ ಕ್ಯಾಂಪಸ್​ ಅವ್ರು. ಭೇಟಿ ಮಾಡ್ತಾ ಇದ್ರು, ಮಾತಾಡ್ತಾ ಇದ್ರು. ಮದುವೆ ಆಗೋಕು ರೆಡಿ ಇದ್ರು ಎಂದಿದ್ದಾರೆ.

ಇದನ್ನೂ ಓದಿ: ನೇಹಾ ಹಿರೇಮಠ್ ಕೊಲೆ ಕೇಸ್; ರಾಜ್ಯದ ಕ್ಷಮೆ ಕೇಳಿ ಗಳಗಳನೇ ಕಣ್ಣೀರಿಟ್ಟ ಆರೋಪಿ ಫಯಾಜ್ ತಾಯಿ

ಉಪ್ಪು ತಿಂದವನು ನೀರು ಕುಡಿಯಲೇ ಬೇಕು

ಕರ್ನಾಟಕ ಈ ಘಟನೆಯನ್ನ ಖಂಡಿಸ್ತಾ ಇದೆ. ನನ್ನ ಮಗ ಮಾಡಿರೋದು ಬಹಳ ದೊಡ್ಡ ಅಪರಾಧ. ಉಪ್ಪು ತಿಂದವ್ನು ನೀರು ಕುಡಿಯಲೇ ಬೇಕು. ಅವನು ತಪ್ಪು ಮಾಡಿದ್ದಾನೆ. ಈ ನೆಲ ಕಾನೂನು ಏನು ಕ್ರಮ ಕೊಡುತ್ತೋ ಆ ಶಿಕ್ಷೆ ಕೊಡಲಿ. ಆ ಶಿಕ್ಷೆಯನ್ನ ಅವನು ಅನುಭವಿಸಲಿ ಎಂದು ಫಯಾಜ್​ ತಾಯಿ ಮಮ್ತಾಜ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಬ್ರು ಕಾಲೇಜಲ್ಲಿ ಭೇಟಿ ಮಾಡ್ತಾ ಇದ್ರು, ಇವ್ನು ರೂಂ ಮಾಡಿ ಇದ್ದ.. ಆರೋಪಿ ಫಯಾಜ್​ ತಾಯಿ ನೇಹಾ ಬಗ್ಗೆ ಏನಂದ್ರು?

https://newsfirstlive.com/wp-content/uploads/2024/04/Neha-murder-1.jpg

    ನೋಡ್ರಪ್ಪಾ ಫ್ರೆಂಡ್ಲಿಯಾಗಿ ಇರಿ.. ಫ್ರೆಂಡ್​ಶಿಪ್​ ಇಟ್ಕೊಳ್ಳಿ

    ಅವಳು ಜಾಣೆ ಇದ್ದಾಳೆ, ನೀನು ಜಾಣೆ ಇದ್ದೀಯಾ.. ಇಬ್ರೂ ಐಎಎಸ್​​ ಮಾಡಿ

    ಸಾಕಷ್ಟು ಕ್ರೂರವಾಗಿ ನೇಹಾಳನ್ನು ಕೊಂದಿದ್ದಾನೆ.. ಇಂಥಾ ಅನ್ಯಾಯ ಆಗಬಾರದಿತ್ತು

ಹುಬ್ಬಳ್ಳಿಯ ನೇಹಾ ಹಿರೇಮಠ್​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಕೊಲೆಗಾರ ಫಯಾಜ್​ ಕೈಯಾರೆ ನೇಹಾ ಸಾವನ್ನಪ್ಪಿದ್ದಾಳೆ. ಇದೀಗ ಫಯಾಜ್ ತಾಯಿ  ಘಟನೆಯಿಂದ ನೊಂದಿದ್ದು, ನ್ಯೂಸ್​​ ಫಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ಮಗನಿಗೂ ಮತ್ತು ನೇಹಾಳಿಗೆ ಇದ್ದ ಸಂಬಂಧ, ಇಬ್ಬರ ಒಡನಾಟದ ಬಗ್ಗೆ ಹೇಳಿಕೊಂಡಿದ್ದಾರೆ.

ಫಯಾಜ್​ ತಾಯಿ ಮಮ್ತಾಜ್​, ​‘ಸಾಕಷ್ಟು ಕ್ರೂರವಾಗಿ ನೇಹಾಳನ್ನು ಕೊಂದಿದ್ದಾನೆ. ಆ ಮಗುಗೆ ಪಾಪ ಇಂಥ ಅನ್ಯಾಯ ಆಗಬಾರದಿತ್ತು. ಆಗಿದೆ. ಕೆಟ್ಟ ಘಳಿಗೆ ಆ ಮಗು ಎಷ್ಟೊಂದು ವಿಲವಿಲವಾಗಿ ಒದ್ದಾಡಿತೊ.. ಆ ಮಗು ಪ್ರಾಣ ಬಿಡುವಾಗ ಎಷ್ಟು ಕಷ್ಟ ಆಗಿರುತ್ತೋ.. ನನಗೆ ಅದನ್ನು ಟಿವಿಯಲ್ಲಿ ನೋಡಿ ಅಲ್ಲೇ ಕುಸಿದು ಬಿದ್ದೆ. ಪಕ್ಕದ ಮನೆಯವರು ನನಗೆ ನೀರು ಕೊಟ್ಟು ಎಬ್ಬಿಸಿದರು. ಅವನು ಮಾಡೊರೋದು ತಪ್ಪು’ ಎಂದು ಹೇಳಿದ್ದಾರೆ.

ಬಳಿಕ ಮಾತು ಮುಂದುವರೆಸಿದ ಅವರು, ‘ಮನೆಯಿಂದ ಹೋಗಿ 5 ದಿನ ಆಗಿತ್ತು. 13ನೇ ತಾರೀಖಿಗೆ ಹೋಗಿದ್ದಾನೆ. ಏನಾದ್ರು ಕೆಲಸ ಹುಡುಕಿಕೊಂಡು ಹೋಗುತ್ತೇನೆ. ಮನೆಯಲ್ಲಿ ಕುಳಿತು ಬೇಜಾರಾಗಿದ್ದೇನೆ ಎಂದು ಹೋದವನನ್ನು ಟಿವಿಯಲ್ಲಿ ನೋಡಿ ಗಾಬರಿಯಾಗಿಬಿಟ್ಟಿದ್ದೇನೆ. ನನ್ನ ಮಗ ಇಂತಹ ಕೃತ್ಯವೆಸಗಿದನಾ ನಾವು ಬೇರೆಯವರ ಮಕ್ಕಳನ್ನು ಟಿವಿಯಲ್ಲಿ ನೋಡುತ್ತೇವೆ. ನನ್ನ ಮಗ ಟಿವಿಯಲ್ಲಿ ಬರೋವಂತೆ ತಲೆ ತಗ್ಗಿಸೋ ಕೆಲಸ ಮಾಡಿಬಿಟ್ಟನಲ್ಲ ನನ್ನ ಮಗ ಎಂದು ನನಗೆ ತುಂಬಾ ನೋವಾಯ್ತು’ ಎಂದು ಹೇಳಿದ್ದಾರೆ

 

ಫಯಾಜ್​ ಮತ್ತ ನೇಹಾ ನಡುವಿನ ಸಂಬಂಧ ಹೇಗಿತ್ತು?

ಅವರು ಒಳ್ಳೆಯ ಫ್ರೆಂಡ್ಸ್​ ಆಗಿದ್ದರು. ನೇಹಾ ಕೂಡ ಅಷ್ಟೇ ಒಳ್ಳೆಯ ಹುಡುಗಿ. ಒಳ್ಳೆಯ ಫ್ರೆಂಡ್​​ಶಿಪ್​ ಇತ್ತು. ನಾನು ಹೇಳಿದೆ. ನೋಡ್ರಪ್ಪಾ ಫ್ರೆಂಡ್ಲಿಯಾಗಿ ಇರಿ. ಫ್ರೆಂಡ್​ಶಿಪ್​ ಇಟ್ಕೊಳ್ಳಿ. ಯಾವುದಕ್ಕೂ ದುಡುಕೋಕೆ ಹೋಗಬೇಡ. ಅವಳು ಜಾಣೆ ಇದ್ದಾಳೆ, ನೀನು ಜಾಣೆ ಇದ್ದೀಯಾ. ಇಬ್ರೂ ಐಎಎಸ್​​ ಮಾಡಿ ಎಂದು ಹೇಳಿದ್ದೆ.

ಅವರಿಬ್ಬರ ಭೇಟಿ ಎಲ್ಲಾಯ್ತು?

ಅವರು ಕಾಲೇಜಿನಲ್ಲಿ ಭೇಟಿಯಾಗ್ತಾ ಇದ್ರು. ಆದರೆ ಈತ ರೂಂ ಮಾಡಿ ಕೂಡ ಇದ್ದ. ಅಲ್ಲಿ ಹೋಗ್ತಾ ಇದ್ರಾ ಗೊತ್ತಿಲ್ಲ. ಒಂದೇ ಕ್ಯಾಂಪಸ್​ ಅವ್ರು. ಭೇಟಿ ಮಾಡ್ತಾ ಇದ್ರು, ಮಾತಾಡ್ತಾ ಇದ್ರು. ಮದುವೆ ಆಗೋಕು ರೆಡಿ ಇದ್ರು ಎಂದಿದ್ದಾರೆ.

ಇದನ್ನೂ ಓದಿ: ನೇಹಾ ಹಿರೇಮಠ್ ಕೊಲೆ ಕೇಸ್; ರಾಜ್ಯದ ಕ್ಷಮೆ ಕೇಳಿ ಗಳಗಳನೇ ಕಣ್ಣೀರಿಟ್ಟ ಆರೋಪಿ ಫಯಾಜ್ ತಾಯಿ

ಉಪ್ಪು ತಿಂದವನು ನೀರು ಕುಡಿಯಲೇ ಬೇಕು

ಕರ್ನಾಟಕ ಈ ಘಟನೆಯನ್ನ ಖಂಡಿಸ್ತಾ ಇದೆ. ನನ್ನ ಮಗ ಮಾಡಿರೋದು ಬಹಳ ದೊಡ್ಡ ಅಪರಾಧ. ಉಪ್ಪು ತಿಂದವ್ನು ನೀರು ಕುಡಿಯಲೇ ಬೇಕು. ಅವನು ತಪ್ಪು ಮಾಡಿದ್ದಾನೆ. ಈ ನೆಲ ಕಾನೂನು ಏನು ಕ್ರಮ ಕೊಡುತ್ತೋ ಆ ಶಿಕ್ಷೆ ಕೊಡಲಿ. ಆ ಶಿಕ್ಷೆಯನ್ನ ಅವನು ಅನುಭವಿಸಲಿ ಎಂದು ಫಯಾಜ್​ ತಾಯಿ ಮಮ್ತಾಜ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More