/newsfirstlive-kannada/media/post_attachments/wp-content/uploads/2024/05/RCB_VIRAT_KARTHIK.jpg)
ಇತ್ತೀಚೆಗೆ ನಡೆದ ಬಹುನಿರೀಕ್ಷಿತ 2025ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಯಲ್ ಬಲಿಷ್ಠ ತಂಡವನ್ನು ಕಟ್ಟಿದೆ. ಮುಂದಿನ ಸೀಸನ್ಗೆ ಈಗಾಗಲೇ ತಯಾರಿ ಆರಂಭಿಸಿರುವ ಆರ್ಸಿಬಿ ಟೀಮ್ ಮುಂದಿನ ಕ್ಯಾಪ್ಟನ್? ಯಾರು ಅನ್ನೋ ಚರ್ಚೆ ಜೋರಾಗಿದೆ. ನಾಯಕತ್ವದ ಪಟ್ಟಕ್ಕೇರಲು ತಂಡದಲ್ಲಿ ಭಾರೀ ಪೈಪೋಟಿ ಇದೆ. ಕ್ಯಾಪ್ಟನ್ಸಿ ರೇಸ್ನಲ್ಲಿ ಯಾರಿದ್ದಾರೆ? ಅನ್ನೋ ಕುತೂಹಲ ಇದೆ.
ವಿರಾಟ್ ಕೊಹ್ಲಿ
ಆರ್ಸಿಬಿ ತಂಡದ ಮೊದಲ ಆಯ್ಕೆ ವಿರಾಟ್ ಕೊಹ್ಲಿ. ಇದಕ್ಕೆ ಕಾರಣ ಇವರು ಆರ್ಸಿಬಿಯ ಯಶಸ್ವಿ ನಾಯಕ. ಇಷ್ಟು ಮಾತ್ರವಲ್ಲ ಡೇರ್ ಡೆವಿಲ್ ಕ್ಯಾಪ್ಟನ್ಸಿ ಗುಣವೂ ಇವರಿಗಿದೆ. ಲೀಡರ್ಶಿಪ್ ಕ್ವಾಲಿಟಿ ಹೊಂದಿರೋ ಕೊಹ್ಲಿ ಎಲ್ಲರಿಗೂ ರೋಲ್ ಮಾಡೆಲ್. ಹೀಗಾಗಿ ಮತ್ತೆ ವಿರಾಟ್ ನಾಯಕತ್ವದ ಪಟ್ಟಕ್ಕೇರಿದ್ರೆ, ಪ್ರತಿ ಆಟಗಾರ ಕಪ್ ಗೆಲ್ಲಬೇಕೆಂಬ ಎಫರ್ಟ್ ಹಾಕೋದ್ರಲ್ಲಿ ಡೌಟೇ ಇಲ್ಲ.
ರಜತ್ ಪಾಟಿದಾರ್
ರಜತ್ ಪಾಟಿದಾರ್, ಆರ್ಸಿಬಿಯ ನ್ಯೂ ಲೀಡರ್ ಆಗೋ ಚಾನ್ಸ್ ದಟ್ಟವಾಗಿದೆ. ಆರ್ಸಿಬಿ ಪರ ಪ್ರಾಮೀಸಿಂಗ್ ಪರ್ಫಾಮೆನ್ಸ್ ನೀಡಿರುವ ರಜತ್, ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ನಾಯಕನಾಗಿ ಗಮನ ಸೆಳೆದಿದ್ದಾರೆ. ತಂಡವನ್ನು ಫೈನಲ್ಗೆ ಕೊಂಡೊಯ್ಯುದಿರುವ ಪಾಟಿದಾರ್, ಅದ್ಬುತ ನಾಯಕತ್ವದ ಗುಣಗಳನ್ನು ಹೊರಹಾಕಿದ್ದಾರೆ. ಲಾಂಗ್ ಟರ್ಮ್ ಲೀಡರ್ಶಿಪ್ಗಾಗಿ ರಜತ್ ಪಾಟಿದಾರ್ ಬೆಸ್ಟ್ ಚಾಯ್ಸ್ ಅನ್ನೋದ್ರಲ್ಲಿ ನೋ ಡೌಟ್.
ಭುವನೇಶ್ವರ್ ಕುಮಾರ್
ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್. ಇವರು ಕೂಲ್ ಆ್ಯಂಡ್ ಕಾಮ್ ಕ್ಯಾಪ್ಟನ್ ಆಗೋದ್ರಲ್ಲಿ ಡೌಟೇ ಇಲ್ಲ. ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಅನುಭವ ಹೊಂದಿರುವ ಈತ, ಟಿ20 ಫಾರ್ಮೆಟ್ಗೆ ಹೇಳಿ ಮಾಡಿಸಿರುವ ಬೌಲರ್. ಎದುರಾಳಿ ಬೌಟರ್ಗಳನ್ನು ಅದ್ಭುತವಾಗಿ ರೀಡ್ ಮಾಡಬಲ್ಲರು.
ಸದ್ಯ ಆರ್ಸಿಬಿ ಕ್ಯಾಪ್ಟನ್ಸಿ ರೇಸ್ನಲ್ಲಿ ಈ ಮೂವರ ಹೆಸರು ಕೇಳಿ ಬಂದಿದೆ. ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಮಾಡಲು ಹಿಂದೇಟು ಹಾಕಿದ್ರೆ ಮ್ಯಾನೇಜ್ಮೆಂಟ್ ಒಲವು ರಜತ್ ಪಾಟಿದಾರ್ ಮೇಲಿದೆ. ಹಾಗಾಗಿ ಮುಂದಿನ ಸೀಸನ್ಗೆ ಕ್ಯಾಪ್ಟನ್ ಯಾರು ಆಗಬಹುದು? ಅನ್ನೋ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಲೇ ಇದೆ.
ಇದನ್ನೂ ಓದಿ:ಟೀಮ್ ಇಂಡಿಯಾಗೆ ಬಿಗ್ ಶಾಕ್; R ಅಶ್ವಿನ್ ಬೆನ್ನಲ್ಲೇ ದಿಢೀರ್ ನಿವೃತ್ತಿ ಘೋಷಿಸಿದ ಸ್ಟಾರ್ ಕ್ರಿಕೆಟರ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್