/newsfirstlive-kannada/media/post_attachments/wp-content/uploads/2025/03/Karnataka-session-Cm-Siddaramaiah.jpg)
ಜನಸಾಮಾನ್ಯರಿಗೆ ಮೆಟ್ರೋ, ಬಸ್ ಟಿಕೆಟ್ ದರ ಏರಿಕೆಯ ಬರೆ. ದಿನೇ ದಿನೇ ಬೆಲೆ ಹೆಚ್ಚಿಸುವ ಮಧ್ಯೆ ಕರೆಂಟ್ ಬಿಲ್, ನೀರಿನ ಬಿಲ್ ಏರಿಕೆಯ ಶಾಕ್. ಆದರೆ ಜನಪ್ರತಿನಿಧಿಗಳಿಗೆ ಸಂಬಳ ಏರಿಕೆಯ ಭರ್ಜರಿ ಗಿಫ್ಟ್ ಸಿಕ್ಕಿದೆ.
ಸಿಎಂ ಸಿದ್ದರಾಮಯ್ಯ ಯುಗಾದಿ ಹಬ್ಬಕ್ಕೂ ಮುನ್ನ ತಮ್ಮ ಸಹೋದ್ಯೋಗಿಗಳು, ಶಾಸಕರು, ಸಭಾಪತಿ, ಸಭಾಧ್ಯಕ್ಷರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ನಾಳೆ ವಿಧಾನಸಭಾ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಇಂದೇ ವೇತನ ಹೆಚ್ಚಿಸುವ ಆದೇಶಕ್ಕೆ ಅನುಮೋದನೆ ನೀಡಲಾಗಿದೆ.
ಯಾರಿಗೆ ಎಷ್ಟು ಸಂಬಳ ಹೆಚ್ಚಳ?
ಸಿಎಂ ವೇತನ ₹75,000 ಸಾವಿರದಿಂದ ₹1 ಲಕ್ಷದ 50,000
ಸಚಿವರ ವೇತನ - 60,000 ದಿಂದ 1.25ಲಕ್ಷ
ಶಾಸಕರ ವೇತನ - 40,000 ರಿಂದ 80,000
ಶಾಸಕರ ಪಿಂಚಣಿ - 50,000 ದಿಂದ 75,000
ಹೆಚ್ಚುವರಿ ಪಿಂಚಣಿ - 5,000 ರಿಂದ 20, 000
ಮಾಜಿ ಶಾಸಕರ ವೈದ್ಯಕೀಯ ಭತ್ಯೆ - 5,000 ರಿಂದ 20,000
ಕ್ಷೇತ್ರ ಪ್ರವಾಸ ಭತ್ಯೆ - 60,000 ರಿಂದ 80,000
ರೈಲು, ವಿಮಾನ ಟಿಕೆಟ್ ( ವಾರ್ಷಿಕ) - 2.50 ಲಕ್ಷದಿಂದ 3.50ಲಕ್ಷ
ಸಿಎಂ. ಸಚಿವರ ಅತಿಥಿ ಭತ್ಯೆ - 4.50 ಲಕ್ಷದಿಂದ 5 ಲಕ್ಷ
ಸಚಿವರ ಮನೆ ಬಾಡಿಗೆ ಭತ್ಯೆ - 1.20 ಲಕ್ಷದಿಂದ 2.50 ಲಕ್ಷ
ರಾಜ್ಯ ಸಚಿವರ ವೇತನ - 50,000 ದಿಂದ 70 ಸಾವಿರ
ರಾಜ್ಯ ಸಚಿವರ ಮನೆ ಬಾಡಿಗೆ ಭತ್ಯೆ - 1.20 ಲಕ್ಷ 2 ಲಕ್ಷ
ಇದನ್ನೂ ಓದಿ: ಒತ್ತುವರಿ ಆರೋಪ.. ಮಾರ್ಕಿಂಗ್ ಮಾಡಿ ಹೆಚ್ಡಿಕೆಗೆ 7 ದಿನಗಳ ಡೆಡ್ಲೈನ್ ಕೊಟ್ಟ ಅಧಿಕಾರಿಗಳು..!
ಸಭಾಪತಿ, ಸಭಾಧ್ಯಕ್ಷರ ವೇತನ - 75 ಸಾವಿರದಿಂದ 1 ಲಕ್ಷದ 25 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಅತಿಥಿ ಭತ್ಯೆ 4 ರಿಂದ 5 ಲಕ್ಷ ರೂಪಾಯಿ ಏರಿಕೆ ಮಾಡಲಾಗಿದೆ.
ಉಪ ಸಭಾಪತಿ ವೇತನ - 60 ರಿಂದ 80 ಸಾವಿರ. ಅತಿಥಿ ಭತ್ಯೆಯು 2.50 ರಿಂದ 3 ಲಕ್ಷ ರೂಪಾಯಿ.
ವಿರೋಧ ಪಕ್ಷ ನಾಯಕರ ವೇತನ - 60 ಸಾವಿರದಿಂದ 80 ಸಾವಿರ
ವಿರೋಧ ಪಕ್ಷ ನಾಯಕರ ಅತಿಥಿ ಭತ್ಯೆ - 2.50 ಲಕ್ಷದಿಂದ 3 ಲಕ್ಷ
ವಿಪಕ್ಷ ಮುಖ್ಯ ಸಚೇತಕರ ಅತಿಥಿ ಭತ್ಯ - 2.50 ಲಕ್ಷದಿಂದ 3 ಲಕ್ಷ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ