newsfirstkannada.com

ಹೆಂಡ್ತಿಗೆ ರೀಲ್ಸ್ ಗೀಳು.. ಗಂಡನಿಗೆ ಕಾಮೆಂಟ್ಸ್​​ಗಳದ್ದೇ ಗೋಳು; ಚಿಟ್ಟೆ ಟ್ಯಾಟೂ ಚೆಲುವೆ ದುರಂತ ಅಂತ್ಯ!

Share :

Published August 14, 2024 at 8:04pm

    ಚೆನ್ನಾಗಿದ್ದ ಸಂಸಾರದಲ್ಲಿ ಹುಳಿ ಹಿಂಡಿತು ಹೆಂಡತಿಯ ರೀಲ್ಸ್‌ ಗೀಳು..

    ಕೆಟ್ಟ ಕೆಟ್ಟ ಕಮೆಂಟ್‌ಗೆ ಕೊತ, ಕೊತ ಕುದಿಯುತ್ತಿದ್ದ ಗಂಡ ಮಾಡಿದ್ದೇನು?

    ಚೆಲುವೆಗೆ ಫೇಮಸ್ ಹುಚ್ಚು.. ಕಟ್ಟಿಕೊಂಡ ಗಂಡನಿಗೆ ಕಾಮೆಂಟ್ಸ್ ಕಿಚ್ಚು

ರಾಮನಗರ:  ಪ್ರೀತಿಯಲ್ಲಿದ್ದಾಗ ಎಂತೆಂಥಾ ಕನಸು ಕಂಡಿರ್ತಾರೆ ಜೋಡಿಗಳು. ಅಬ್ಬಾ! ಆ ಕನಸುಗಳು ನನಸು ಮಾಡಲು ಆ ಹಂತದಲ್ಲಿ ನಿಜಕ್ಕೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿರ್ತಾರೆ. ಮದ್ವೆಯಾಗಲು ಒಂದು ದೊಡ್ಡ ಪ್ರೇಮಯುದ್ಧವನ್ನೇ ಮಾಡಿಬಿಟ್ಟಿರ್ತಾರೆ. ಆದ್ರೆ, ಮೂರು ಗಂಟು ಬಿದ್ದ ನಂತರ ಏನಾಗುತ್ತೋ ಏನೋ. ಕೆಲವು ಬಂಧಗಳು ಮುರಿದು ಬೀಳುತ್ತೆ. ಇದು ಅಂತದ್ದೇ ಕಥೆ. ಸಿಂಪಲ್ ಅಲ್ಲ ಅಂತೂ ಅಲ್ಲ. ಪತ್ನಿಯ ಭಯಾನಕ ಮರ್ಡರ್‌ ಸ್ಟೋರಿ.

ರೀಲ್ಸ್ ದುನಿಯಾಗೆ ಬೇಕಾಗಿರೋದು ಅಂದ ಚೆಂದ ಬಳುಕು ಮೈಮಾಟ, ವೈಯ್ಯಾರ, ಇಷ್ಟಿದ್ದು ಚಿಟಿಕೆಯಷ್ಟು ಪ್ರತಿಭೆ ಇದ್ರೂ ಸಾಕು . ರೀಲ್ಸ್ ದುನಿಯಾದಲ್ಲಿ ಅವರು ಮಹಾರಾಣಿಯರೇ. ಈ ಎಲ್ಲಾ ವೈಯ್ಯಾರಗಳಿದ್ದು ರೀಲ್ಸ್​ನಲ್ಲಿ ಮಿಂಚ್ದಿದ್ದ ಚೆಲುವೆ ದಿವ್ಯಾ ಅನ್ನೋಳು ಈಗ ಹೆಣವಾಗಿ ಹೋಗಿದ್ದಾಳೆ. ಆಕೆಯನ್ನು ಮುಗಿಸಿದವನು ಪ್ರೀತಿಸಿ ಮದುವೆಯಾದ ಗಂಡನೇ ಹೆಸರು ಉಮೇಶ್​.

ಇದನ್ನೂ ಓದಿ: ವಿಧಾನಸೌಧದ ಮುಂದೆ ಬೈಕ್‌ಗೆ ಬೆಂಕಿ ಹಚ್ಚಿದ ಯುವಕನ ಕೋಪತಾಪ; ಕಾರಣವೇನು?

ಆಶ್ಚರ್ಯಕರ ಸಂಗತಿ ಏನಂದ್ರೆ, ಉಮೇಶ್‌ ಮಾಗಡಿ ಮೂಲದವರಾದ್ರೆ, ದಿವ್ಯಾ ಬಿಸಿನನಗರಿ ರಾಯಚೂರಿನ ರಾಣಿ.ತುಮಕೂರಿನಲ್ಲಿ ಆರೇಳು ವರ್ಷಗಳ ಹಿಂದೆ ಉಮೇಶ್ ಮತ್ತು ದಿವ್ಯಾ ಒಂದೇ ಕಂಪನಿಯಲ್ಲಿ ಕೆಲ್ಸ ಮಾಡ್ತಿರ್ತಾರೆ. ಇವರಿಬ್ಬರಿಗೂ ಪರಿಚಯವಾಗಿ ನಂತರ ಸ್ನೇಹಿತರಾದ ಇವರು ನಾವ್ಯಾಕೆ ಪ್ರೇಮಿಗಳಾಬಾರ್ದು ಅಂತಾ ಯೋಚಿಸಿ ಕಮಿಟ್ ಆಗ್ತಾರೆ.

ಪ್ರೀತಿಸಿ ಮದುವೆಯಾದವರ ಬದುಕಲ್ಲಿ ರೀಲ್ಸ್ ಬಿರುಗಾಳಿ
ಪ್ರೀತಿಸಿದ್ದು ಆಯ್ತು, ಮದುವೆಯೂ ಆಯ್ತು, ಆ ನಂತರ ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಒಂದು ಮಗುವೂ ಆಯ್ತು, ಆದ್ರೆ ಸೋಷಿಯಲ್ ಮಿಡಿಯಾ ಎಂಬ ರೀಲ್ಸ್​ ಅಡ್ಡಾ ಇವರ ದಾಂಪತ್ಯಕ್ಕೆ ಕೊಳ್ಳಿಯನ್ನೂ ಇಟ್ತು. ಈ ಸೋಷಿಯಲ್ ಮೀಡಿಯಾ ಅಂದ್ರೆನೇ ಹಾಗೇ, ಮನೆಯಲ್ಲಿರೋರು ಲೈಕ್ ಇಟ್ ಅಂದ್ರೆ ಅವ್ರಿಗೆ ಏನೂ ಅನಿಸೋಲ್ಲ. ಚೆನ್ನಾಗಿ ಅಡುಗೆ ಮಾಡಿದ್ಯಾ ಅಂದ್ರೂನೂ ಏನೂ ಅನಿಸೋಲ್ಲ. ಆದ್ರೆ, ಅದೇ ಸೋಷಿಯಲ್ ಮೀಡಿಯಾದಲ್ಲಿ ಯಾರಾದ್ರೂ ಕಮೆಂಟ್ ಹಾಕ್ಬಿಟ್ರೇ, ಸಾವಿರಾರು ಲೈಕ್ಸ್ ಬಂದು ಬಿಟ್ರೆ, ನೆಲದ ಮೇಲಿದ್ದ ಕಾಲು ಆಕಾಶಕ್ಕೆ ಹೋಗಿಬಿಡುತ್ತೆ.

ಬೆಡಗಿಗೆ ಫೇಮಸ್ ಆಗುವ ಹುಚ್ಚು.. ಹುಡುಗನಿಗೆ ಕಮೆಂಟ್ಸ್​ಗಳ ಕಿಚ್ಚು
ನೋಡೋಕೆ ಚೆಂದವಾಗಿದ್ದ ದಿವ್ಯಾ ಕೂಡ ಸೋಷಿಯಲ್ ಮೀಡಿಯಾ ಅಟ್ರಾಕ್ಷನ್‌ಗೆ ಒಳಗಾಗಿದ್ದಳು. ತನ್ನ ಚೆಲುವಿನ ಬಗ್ಗೆ ವಿಪರೀತ ಹೆಮ್ಮೆಯಿದ್ದ ದಿವ್ಯಾ ನಾನ್ಯಾಕೆ ರೀಲ್ಸ್ ಮಾಡಬಾರ್ದು ಅಂತಾ ಯೋಚನೆಗೆ ಬೀಳ್ತಾಳೆ, ಕೊನೆಗೂ ರೀಲ್ಸ್‌ ಅನ್ನೋ ಚಕ್ರವ್ಯೂಹವನ್ನು ಹೊಕ್ಕು ಬಿಡುತ್ತಾಳೆ. ಬಿಡುಗಡೆಯ ದಾರಿಯೇ ಗೊತ್ತಿಲ್ದೆ.

ಪತಿ ಉಮೇಶನಿಗೆ ಆಕೆಯ ಪತ್ನಿ ರೀಲ್ಸ್ ಮಾಡುವ ವಿಚಾರದಲ್ಲಿ ಯಾವುದೇ ತೊಂದರೆ ಇರಲಿಲ್ಲ. ಆದ್ರೆ ಯಾವಾಗ ಪತ್ನಿಯ ರೀಲ್ಸ್​ಗೆ ಅಶ್ಲೀಲ ಕಮೆಂಟ್​ಗಳು ಬರಲು ಶುರುವಾದ್ವೋ, ಪರಿಚಯಸ್ತರೇ ನಿನ್ನ ಹೆಂಡ್ತಿ ಸಖತ್ ಹಾಟ್ ಇದ್ದಾಳೋ ಉಮೇಶ ಅನ್ನೋ ಮಾತುಗಳು ಕೇಳಿ ಬಂದ್ವೋ ಆವಾಗ ಪತ್ನಿಯ ರೀಲ್ಸ್​ಗೆ ಆತ ಆಕ್ಷೇಪ ಮಾಡಲು ಶುರು ಮಾಡುತ್ತಾನೆ. ಅಲ್ಲಿಂದಲೇ ಸುಂದರ ಸಂಸಾರದಲ್ಲೊಂದು ಸುಂಟರಗಾಳಿ ಬೀಸಲು ಆರಂಭವಾಗುತ್ತದೆ.

ಇದನ್ನೂ ಓದಿ: ಬೆಟ್ಟದ ಮೇಲೆ ಹೆಂಡತಿಯ ಬರ್ಬರ ಹತ್ಯೆ.. ಡ್ರಾಮಾ ಮಾಡಿ ಕೊಲೆ ಮಾಡಿದ ಗಂಡ ಎಸ್ಕೇಪ್‌; ಕಾರಣವೇನು?

ರೀಲ್ಸ್ ಕಾರಣಕ್ಕೆ ಒಂದು ಕುಟುಂಬದಲ್ಲಿ ಬಿಕ್ಕಟ್ಟು ಉದ್ಬವಿಸಿದೇ ಅಂದ್ರೆ, ನಿಜಕ್ಕೂ ಇದು ದುರಂತವೇ. ಆದ್ರೆ, ಇಷ್ಟಕ್ಕೆ ಈ ಕೇಸ್‌ ಮುಗಿಯೋದಿಲ್ಲ. ಯಾವಾಗ ಗಂಡನಿಂದ ಪತ್ನಿ ದಿವ್ಯಾ ದೂರವಾದಳೋ, ಆ ನಂತರ ಪರಪುರಷನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಅನ್ನೋ ಆರೋಪ ಕೂಡ ಕೇಳಿಬರುತ್ತೆ. ಇದು ಉಮೇಶ್‌ನ ತಲೆ ಕೆಡಿಸಿಬಿಡುತ್ತೆ. ಆ ಸಮಯದಲ್ಲೂ ಇವರಿಬ್ಬರ ನಡುವೆ ಜಗಳವಾಯ್ತು ಅಂತಾ ಹೇಳಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರು: ನೌಕರನ ಮೇಲೆ ಮನಬಂದಂತೆ ಹಲ್ಲೆ, ನಗ್ನಗೊಳಿಸಿ ವಿಡಿಯೋ ಮಾಡಿದ ಮಾಲೀಕ 

ಆ ಮೇಲೆ ಅದೇನಾಯ್ತೋ ಏನೋ. ದಿವ್ಯಾ ಆತನ ಜೊತೆಯೂ ದೂರವಾಗಿ ಒಂಟಿಯಾಗಿ ಜೀವನ ನಡೆಸೋಕೆ ಶುರು ಮಾಡಿದಳು. ಮಾದನಾಯಕನಹಳ್ಳಿಯಲ್ಲಿ ಬ್ಯೂಟಿಪಾರ್ಲರ್ ಓಪನ್ ಮಾಡಿ ಲೈಫ್ ಮುಂದುವರೆಸಿದಳು. ಈ ನಡುವೆ ತನ್ನ ಮನಸ್ಸಿನ ವೇದನೆಯನ್ನೆಲ್ಲಾ ರೀಲ್ಸ್ ಮಾಡೋ ಮೂಲಕ ಹೊರ ಹಾಕುತ್ತಿದ್ದಳು.

ಈ ನಡುವೆ, ಉಮೇಶ್‌ ಮತ್ತು ದಿವ್ಯಾ ಕಾನೂನಾತ್ಮಕವಾಗಿ ಡಿವೋರ್ಸ್ ಪಡೆಯೋಣ ಅಂತ ನಿರ್ಧರಿಸುತ್ತಾರೆ. ಛೇ, ಆ ಡಿಸಿಷನ್‌ ಈಕೆಯ ಪ್ರಾಣವನ್ನೇ ಬಲಿ ಪಡೆದು ಬಿಡುತ್ತೆ. ರೀಲ್ಸ್‌ನಿಂದ ಶುರುವಾದ ಕಿರಿಕ್‌ ಮೂರ್ನಾಲ್ಕು ವರ್ಷಗಳ ನಂತರ ಕೊಲೆಯಲ್ಲಿ ಅಂತ್ಯವಾಗಿ ಬಿಡುತ್ತೆ. ಅಷ್ಟಕ್ಕೂ ದಿವ್ಯಾಳನ್ನ ಕೊಲೆ ಮಾಡಿದವನು ಬೇಱರು ಅಲ್ಲ, ಆಕೆಯ ಪತಿ ಉಮೇಶ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಂಡ್ತಿಗೆ ರೀಲ್ಸ್ ಗೀಳು.. ಗಂಡನಿಗೆ ಕಾಮೆಂಟ್ಸ್​​ಗಳದ್ದೇ ಗೋಳು; ಚಿಟ್ಟೆ ಟ್ಯಾಟೂ ಚೆಲುವೆ ದುರಂತ ಅಂತ್ಯ!

https://newsfirstlive.com/wp-content/uploads/2024/08/MAGADI-MURDER-5.jpg

    ಚೆನ್ನಾಗಿದ್ದ ಸಂಸಾರದಲ್ಲಿ ಹುಳಿ ಹಿಂಡಿತು ಹೆಂಡತಿಯ ರೀಲ್ಸ್‌ ಗೀಳು..

    ಕೆಟ್ಟ ಕೆಟ್ಟ ಕಮೆಂಟ್‌ಗೆ ಕೊತ, ಕೊತ ಕುದಿಯುತ್ತಿದ್ದ ಗಂಡ ಮಾಡಿದ್ದೇನು?

    ಚೆಲುವೆಗೆ ಫೇಮಸ್ ಹುಚ್ಚು.. ಕಟ್ಟಿಕೊಂಡ ಗಂಡನಿಗೆ ಕಾಮೆಂಟ್ಸ್ ಕಿಚ್ಚು

ರಾಮನಗರ:  ಪ್ರೀತಿಯಲ್ಲಿದ್ದಾಗ ಎಂತೆಂಥಾ ಕನಸು ಕಂಡಿರ್ತಾರೆ ಜೋಡಿಗಳು. ಅಬ್ಬಾ! ಆ ಕನಸುಗಳು ನನಸು ಮಾಡಲು ಆ ಹಂತದಲ್ಲಿ ನಿಜಕ್ಕೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿರ್ತಾರೆ. ಮದ್ವೆಯಾಗಲು ಒಂದು ದೊಡ್ಡ ಪ್ರೇಮಯುದ್ಧವನ್ನೇ ಮಾಡಿಬಿಟ್ಟಿರ್ತಾರೆ. ಆದ್ರೆ, ಮೂರು ಗಂಟು ಬಿದ್ದ ನಂತರ ಏನಾಗುತ್ತೋ ಏನೋ. ಕೆಲವು ಬಂಧಗಳು ಮುರಿದು ಬೀಳುತ್ತೆ. ಇದು ಅಂತದ್ದೇ ಕಥೆ. ಸಿಂಪಲ್ ಅಲ್ಲ ಅಂತೂ ಅಲ್ಲ. ಪತ್ನಿಯ ಭಯಾನಕ ಮರ್ಡರ್‌ ಸ್ಟೋರಿ.

ರೀಲ್ಸ್ ದುನಿಯಾಗೆ ಬೇಕಾಗಿರೋದು ಅಂದ ಚೆಂದ ಬಳುಕು ಮೈಮಾಟ, ವೈಯ್ಯಾರ, ಇಷ್ಟಿದ್ದು ಚಿಟಿಕೆಯಷ್ಟು ಪ್ರತಿಭೆ ಇದ್ರೂ ಸಾಕು . ರೀಲ್ಸ್ ದುನಿಯಾದಲ್ಲಿ ಅವರು ಮಹಾರಾಣಿಯರೇ. ಈ ಎಲ್ಲಾ ವೈಯ್ಯಾರಗಳಿದ್ದು ರೀಲ್ಸ್​ನಲ್ಲಿ ಮಿಂಚ್ದಿದ್ದ ಚೆಲುವೆ ದಿವ್ಯಾ ಅನ್ನೋಳು ಈಗ ಹೆಣವಾಗಿ ಹೋಗಿದ್ದಾಳೆ. ಆಕೆಯನ್ನು ಮುಗಿಸಿದವನು ಪ್ರೀತಿಸಿ ಮದುವೆಯಾದ ಗಂಡನೇ ಹೆಸರು ಉಮೇಶ್​.

ಇದನ್ನೂ ಓದಿ: ವಿಧಾನಸೌಧದ ಮುಂದೆ ಬೈಕ್‌ಗೆ ಬೆಂಕಿ ಹಚ್ಚಿದ ಯುವಕನ ಕೋಪತಾಪ; ಕಾರಣವೇನು?

ಆಶ್ಚರ್ಯಕರ ಸಂಗತಿ ಏನಂದ್ರೆ, ಉಮೇಶ್‌ ಮಾಗಡಿ ಮೂಲದವರಾದ್ರೆ, ದಿವ್ಯಾ ಬಿಸಿನನಗರಿ ರಾಯಚೂರಿನ ರಾಣಿ.ತುಮಕೂರಿನಲ್ಲಿ ಆರೇಳು ವರ್ಷಗಳ ಹಿಂದೆ ಉಮೇಶ್ ಮತ್ತು ದಿವ್ಯಾ ಒಂದೇ ಕಂಪನಿಯಲ್ಲಿ ಕೆಲ್ಸ ಮಾಡ್ತಿರ್ತಾರೆ. ಇವರಿಬ್ಬರಿಗೂ ಪರಿಚಯವಾಗಿ ನಂತರ ಸ್ನೇಹಿತರಾದ ಇವರು ನಾವ್ಯಾಕೆ ಪ್ರೇಮಿಗಳಾಬಾರ್ದು ಅಂತಾ ಯೋಚಿಸಿ ಕಮಿಟ್ ಆಗ್ತಾರೆ.

ಪ್ರೀತಿಸಿ ಮದುವೆಯಾದವರ ಬದುಕಲ್ಲಿ ರೀಲ್ಸ್ ಬಿರುಗಾಳಿ
ಪ್ರೀತಿಸಿದ್ದು ಆಯ್ತು, ಮದುವೆಯೂ ಆಯ್ತು, ಆ ನಂತರ ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಒಂದು ಮಗುವೂ ಆಯ್ತು, ಆದ್ರೆ ಸೋಷಿಯಲ್ ಮಿಡಿಯಾ ಎಂಬ ರೀಲ್ಸ್​ ಅಡ್ಡಾ ಇವರ ದಾಂಪತ್ಯಕ್ಕೆ ಕೊಳ್ಳಿಯನ್ನೂ ಇಟ್ತು. ಈ ಸೋಷಿಯಲ್ ಮೀಡಿಯಾ ಅಂದ್ರೆನೇ ಹಾಗೇ, ಮನೆಯಲ್ಲಿರೋರು ಲೈಕ್ ಇಟ್ ಅಂದ್ರೆ ಅವ್ರಿಗೆ ಏನೂ ಅನಿಸೋಲ್ಲ. ಚೆನ್ನಾಗಿ ಅಡುಗೆ ಮಾಡಿದ್ಯಾ ಅಂದ್ರೂನೂ ಏನೂ ಅನಿಸೋಲ್ಲ. ಆದ್ರೆ, ಅದೇ ಸೋಷಿಯಲ್ ಮೀಡಿಯಾದಲ್ಲಿ ಯಾರಾದ್ರೂ ಕಮೆಂಟ್ ಹಾಕ್ಬಿಟ್ರೇ, ಸಾವಿರಾರು ಲೈಕ್ಸ್ ಬಂದು ಬಿಟ್ರೆ, ನೆಲದ ಮೇಲಿದ್ದ ಕಾಲು ಆಕಾಶಕ್ಕೆ ಹೋಗಿಬಿಡುತ್ತೆ.

ಬೆಡಗಿಗೆ ಫೇಮಸ್ ಆಗುವ ಹುಚ್ಚು.. ಹುಡುಗನಿಗೆ ಕಮೆಂಟ್ಸ್​ಗಳ ಕಿಚ್ಚು
ನೋಡೋಕೆ ಚೆಂದವಾಗಿದ್ದ ದಿವ್ಯಾ ಕೂಡ ಸೋಷಿಯಲ್ ಮೀಡಿಯಾ ಅಟ್ರಾಕ್ಷನ್‌ಗೆ ಒಳಗಾಗಿದ್ದಳು. ತನ್ನ ಚೆಲುವಿನ ಬಗ್ಗೆ ವಿಪರೀತ ಹೆಮ್ಮೆಯಿದ್ದ ದಿವ್ಯಾ ನಾನ್ಯಾಕೆ ರೀಲ್ಸ್ ಮಾಡಬಾರ್ದು ಅಂತಾ ಯೋಚನೆಗೆ ಬೀಳ್ತಾಳೆ, ಕೊನೆಗೂ ರೀಲ್ಸ್‌ ಅನ್ನೋ ಚಕ್ರವ್ಯೂಹವನ್ನು ಹೊಕ್ಕು ಬಿಡುತ್ತಾಳೆ. ಬಿಡುಗಡೆಯ ದಾರಿಯೇ ಗೊತ್ತಿಲ್ದೆ.

ಪತಿ ಉಮೇಶನಿಗೆ ಆಕೆಯ ಪತ್ನಿ ರೀಲ್ಸ್ ಮಾಡುವ ವಿಚಾರದಲ್ಲಿ ಯಾವುದೇ ತೊಂದರೆ ಇರಲಿಲ್ಲ. ಆದ್ರೆ ಯಾವಾಗ ಪತ್ನಿಯ ರೀಲ್ಸ್​ಗೆ ಅಶ್ಲೀಲ ಕಮೆಂಟ್​ಗಳು ಬರಲು ಶುರುವಾದ್ವೋ, ಪರಿಚಯಸ್ತರೇ ನಿನ್ನ ಹೆಂಡ್ತಿ ಸಖತ್ ಹಾಟ್ ಇದ್ದಾಳೋ ಉಮೇಶ ಅನ್ನೋ ಮಾತುಗಳು ಕೇಳಿ ಬಂದ್ವೋ ಆವಾಗ ಪತ್ನಿಯ ರೀಲ್ಸ್​ಗೆ ಆತ ಆಕ್ಷೇಪ ಮಾಡಲು ಶುರು ಮಾಡುತ್ತಾನೆ. ಅಲ್ಲಿಂದಲೇ ಸುಂದರ ಸಂಸಾರದಲ್ಲೊಂದು ಸುಂಟರಗಾಳಿ ಬೀಸಲು ಆರಂಭವಾಗುತ್ತದೆ.

ಇದನ್ನೂ ಓದಿ: ಬೆಟ್ಟದ ಮೇಲೆ ಹೆಂಡತಿಯ ಬರ್ಬರ ಹತ್ಯೆ.. ಡ್ರಾಮಾ ಮಾಡಿ ಕೊಲೆ ಮಾಡಿದ ಗಂಡ ಎಸ್ಕೇಪ್‌; ಕಾರಣವೇನು?

ರೀಲ್ಸ್ ಕಾರಣಕ್ಕೆ ಒಂದು ಕುಟುಂಬದಲ್ಲಿ ಬಿಕ್ಕಟ್ಟು ಉದ್ಬವಿಸಿದೇ ಅಂದ್ರೆ, ನಿಜಕ್ಕೂ ಇದು ದುರಂತವೇ. ಆದ್ರೆ, ಇಷ್ಟಕ್ಕೆ ಈ ಕೇಸ್‌ ಮುಗಿಯೋದಿಲ್ಲ. ಯಾವಾಗ ಗಂಡನಿಂದ ಪತ್ನಿ ದಿವ್ಯಾ ದೂರವಾದಳೋ, ಆ ನಂತರ ಪರಪುರಷನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಅನ್ನೋ ಆರೋಪ ಕೂಡ ಕೇಳಿಬರುತ್ತೆ. ಇದು ಉಮೇಶ್‌ನ ತಲೆ ಕೆಡಿಸಿಬಿಡುತ್ತೆ. ಆ ಸಮಯದಲ್ಲೂ ಇವರಿಬ್ಬರ ನಡುವೆ ಜಗಳವಾಯ್ತು ಅಂತಾ ಹೇಳಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರು: ನೌಕರನ ಮೇಲೆ ಮನಬಂದಂತೆ ಹಲ್ಲೆ, ನಗ್ನಗೊಳಿಸಿ ವಿಡಿಯೋ ಮಾಡಿದ ಮಾಲೀಕ 

ಆ ಮೇಲೆ ಅದೇನಾಯ್ತೋ ಏನೋ. ದಿವ್ಯಾ ಆತನ ಜೊತೆಯೂ ದೂರವಾಗಿ ಒಂಟಿಯಾಗಿ ಜೀವನ ನಡೆಸೋಕೆ ಶುರು ಮಾಡಿದಳು. ಮಾದನಾಯಕನಹಳ್ಳಿಯಲ್ಲಿ ಬ್ಯೂಟಿಪಾರ್ಲರ್ ಓಪನ್ ಮಾಡಿ ಲೈಫ್ ಮುಂದುವರೆಸಿದಳು. ಈ ನಡುವೆ ತನ್ನ ಮನಸ್ಸಿನ ವೇದನೆಯನ್ನೆಲ್ಲಾ ರೀಲ್ಸ್ ಮಾಡೋ ಮೂಲಕ ಹೊರ ಹಾಕುತ್ತಿದ್ದಳು.

ಈ ನಡುವೆ, ಉಮೇಶ್‌ ಮತ್ತು ದಿವ್ಯಾ ಕಾನೂನಾತ್ಮಕವಾಗಿ ಡಿವೋರ್ಸ್ ಪಡೆಯೋಣ ಅಂತ ನಿರ್ಧರಿಸುತ್ತಾರೆ. ಛೇ, ಆ ಡಿಸಿಷನ್‌ ಈಕೆಯ ಪ್ರಾಣವನ್ನೇ ಬಲಿ ಪಡೆದು ಬಿಡುತ್ತೆ. ರೀಲ್ಸ್‌ನಿಂದ ಶುರುವಾದ ಕಿರಿಕ್‌ ಮೂರ್ನಾಲ್ಕು ವರ್ಷಗಳ ನಂತರ ಕೊಲೆಯಲ್ಲಿ ಅಂತ್ಯವಾಗಿ ಬಿಡುತ್ತೆ. ಅಷ್ಟಕ್ಕೂ ದಿವ್ಯಾಳನ್ನ ಕೊಲೆ ಮಾಡಿದವನು ಬೇಱರು ಅಲ್ಲ, ಆಕೆಯ ಪತಿ ಉಮೇಶ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More