ಪತ್ನಿ ಮನೆ ಖಾಲಿ ಮಾಡಿದ್ದೇ ಕೊಲೆಗೆ ಕಾರಣವಾಗಿ ಬಿಡ್ತಾ!
ಒಂದಲ್ಲ ಎರಡಲ್ಲ ಒಟ್ಟು ನಾಲ್ಕು ಬಾರಿ ಪತ್ನಿ ಕತ್ತಿಗೆ ಚುಚ್ಚಿ ಕೊಲೆ
ಕೊರಳೊಡ್ಡಿದವಳನ್ನೇ ಬರ್ಬರವಾಗಿ ಕೊಲೆ ಮಾಡಲು ಕಾರಣವೇನು?
ಬೆಂಗಳೂರು: ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯ ಆಗಿರತ್ತೆ ಅಂತಾರೆ. ಗಂಡ ಆದವನು ಹೆಂಡತಿಯ ಏಳು ಬೀಳುಗಳಲ್ಲಿ, ನೋವು ನಲಿವುಗಳಲ್ಲಿ ಸಮ ಪಾಲು ಹೊತ್ತು ಕಾಯುವವನು ಅಂತಾರೆ. ಆದ್ರೆ, ಇಲ್ಲಿ ಮೂರು ಗಂಟಿನಲ್ಲಿ ನಂಟು ಬೆಸೆದ ಪತ್ನಿಯನ್ನೇ ಪಾಪಿ ಪತಿ ಇನ್ನಿಲ್ಲದಂತೆ ಮಾಡಿದ್ದಾನೆ.
ಇದನ್ನೂ ಓದಿ: 6 ವರ್ಷದ ಬಾಲಕಿ ಮೇಲೆ ನಾಯಿ ಡೆಡ್ಲಿ ಅಟ್ಯಾಕ್; ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆ
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಅದು ನನಗೆ ಕೋಟಿ ರೂಪಾಯಿ ಅನ್ನೋ ಹಾಡು ಎಷ್ಟು ಚೆಂದ ಅಲ್ವಾ? ಈ ಹಾಡಿಗೆ ತಕ್ಕಂತೆ ಬದುಕೊರು ನಮ್ಮ ನಡುವೆ ಬಹಳಷ್ಟು ಮಂದಿ ಇದ್ದಾರೆ. ನೋವು ನಲಿವಿನಲ್ಲಿ ಸತಿ ಪತಿ ಒಂದಾಗಿ ಸಾಗಿ ಜೀವನದ ನೌಕೆ ಸಾಗಿಸ್ತಾರೆ. ಆದ್ರೆ ಇಲ್ಲೊಬ್ಬ ಪಾಪಿ ಪತಿ ಹೆಂಡತಿಯನ್ನ ಮನೆಯಿಂದ ಅಲ್ಲ ಶಾಶ್ವತವಾಗಿ ಭೂಲೋಕದಿಂದಲೇ ಕಳಿಸಿಬಿಟ್ಟಿದ್ದಾನೆ. ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಾರೆ. ಆದ್ರೆ, ಇಲ್ಲಿ ಈ ಜೊಡಿಯ ಗಲಾಟೆ ವಿಚ್ಚೇದನದವರೆಗೂ ಹೋಗಿದೆ. ಇಷ್ಟಾಗಿದ್ರೆ ಸುಮ್ಮನಾಗಬಹುದಿತ್ತು. ಪತಿ ಮಹಾಶಯ ಜಗಳದ ಮಧ್ಯೆಯೇ ಹೆಂಡತಿಗೆ ಚಾಕು ಇರಿದಿದ್ದಾನೆ.
ಕಳೆದ ಐದು ದಿನಗಳ ಹಿಂದೆ ಹೆಂಡತಿಯಿಂದ ನೂರುಲ್ಲಾ ದೂರವಿದ್ದ. ಹೀಗಾಗಿ, ಇವತ್ತು ಪತ್ನಿ, ಶಿಯಾಪತ್ ಉನ್ನಿಸ ತನ್ನ ಗಂಡನ ಮನೆಯಿಂದ ಹೊರಡಲು ಸಿದ್ಧಳಾಗಿದ್ದಳು, ಮನೆ ಖಾಲಿ ಮಾಡುವ ವೇಳೆ ಎಂಟ್ರಿ ಕೊಟ್ಟ ಪತಿ ಮತ್ತೆ ಖ್ಯಾತೆ ತೆಗೆದಿದ್ದಾನೆ. ಅಷ್ಟೇ ಅಲ್ಲ, ಈ ವೇಳೆ ಏಕಾಏಕಿ ನಾಲ್ಕೈದು ಬಾರಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ದೂರ ಆಗೋ ವಿಚಾರಕ್ಕೆ ಈ ಗಂಡ ಹೆಂಡತಿ ಮಧ್ಯೆ ಜಗಳ ಆಗ್ತಿತ್ತು ಅನ್ನೋದು ಇವರಿಬ್ಬರನ್ನು ಹತ್ತಿರದಿಂದ ನೋಡಿದವರ ಮಾತು. ಆದ್ರೆ, ಈಗ ಗಂಡ ಅಂತ ಎನಿಸಿಕೊಂಡವನು ಪತ್ನಿಯನ್ನ ಶಾಶ್ವತವಾಗಿ ಇನ್ನಿಲ್ಲದಂತೆ ಮಾಡಿದ್ದು ನಿಜಕ್ಕೂ ಖಂಡನೀಯ. ಸದ್ಯ ಕೊಲೆ ಮಾಡಿ ಠಾಣೆಗೆ ಹೋಗಿ ಆರೋಪಿ ಶರಣಾಗಿದ್ದಾನೆ. ಈ ಸಂಬಂಧ ಕೇಸ್ ದಾಖಲಿಸಿಕೊಂಡ ಕೆಎಸ್ ಲೇಔಟ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ವಿಚಾರಣೆ ಮುಂದುವರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪತ್ನಿ ಮನೆ ಖಾಲಿ ಮಾಡಿದ್ದೇ ಕೊಲೆಗೆ ಕಾರಣವಾಗಿ ಬಿಡ್ತಾ!
ಒಂದಲ್ಲ ಎರಡಲ್ಲ ಒಟ್ಟು ನಾಲ್ಕು ಬಾರಿ ಪತ್ನಿ ಕತ್ತಿಗೆ ಚುಚ್ಚಿ ಕೊಲೆ
ಕೊರಳೊಡ್ಡಿದವಳನ್ನೇ ಬರ್ಬರವಾಗಿ ಕೊಲೆ ಮಾಡಲು ಕಾರಣವೇನು?
ಬೆಂಗಳೂರು: ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯ ಆಗಿರತ್ತೆ ಅಂತಾರೆ. ಗಂಡ ಆದವನು ಹೆಂಡತಿಯ ಏಳು ಬೀಳುಗಳಲ್ಲಿ, ನೋವು ನಲಿವುಗಳಲ್ಲಿ ಸಮ ಪಾಲು ಹೊತ್ತು ಕಾಯುವವನು ಅಂತಾರೆ. ಆದ್ರೆ, ಇಲ್ಲಿ ಮೂರು ಗಂಟಿನಲ್ಲಿ ನಂಟು ಬೆಸೆದ ಪತ್ನಿಯನ್ನೇ ಪಾಪಿ ಪತಿ ಇನ್ನಿಲ್ಲದಂತೆ ಮಾಡಿದ್ದಾನೆ.
ಇದನ್ನೂ ಓದಿ: 6 ವರ್ಷದ ಬಾಲಕಿ ಮೇಲೆ ನಾಯಿ ಡೆಡ್ಲಿ ಅಟ್ಯಾಕ್; ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆ
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಅದು ನನಗೆ ಕೋಟಿ ರೂಪಾಯಿ ಅನ್ನೋ ಹಾಡು ಎಷ್ಟು ಚೆಂದ ಅಲ್ವಾ? ಈ ಹಾಡಿಗೆ ತಕ್ಕಂತೆ ಬದುಕೊರು ನಮ್ಮ ನಡುವೆ ಬಹಳಷ್ಟು ಮಂದಿ ಇದ್ದಾರೆ. ನೋವು ನಲಿವಿನಲ್ಲಿ ಸತಿ ಪತಿ ಒಂದಾಗಿ ಸಾಗಿ ಜೀವನದ ನೌಕೆ ಸಾಗಿಸ್ತಾರೆ. ಆದ್ರೆ ಇಲ್ಲೊಬ್ಬ ಪಾಪಿ ಪತಿ ಹೆಂಡತಿಯನ್ನ ಮನೆಯಿಂದ ಅಲ್ಲ ಶಾಶ್ವತವಾಗಿ ಭೂಲೋಕದಿಂದಲೇ ಕಳಿಸಿಬಿಟ್ಟಿದ್ದಾನೆ. ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಾರೆ. ಆದ್ರೆ, ಇಲ್ಲಿ ಈ ಜೊಡಿಯ ಗಲಾಟೆ ವಿಚ್ಚೇದನದವರೆಗೂ ಹೋಗಿದೆ. ಇಷ್ಟಾಗಿದ್ರೆ ಸುಮ್ಮನಾಗಬಹುದಿತ್ತು. ಪತಿ ಮಹಾಶಯ ಜಗಳದ ಮಧ್ಯೆಯೇ ಹೆಂಡತಿಗೆ ಚಾಕು ಇರಿದಿದ್ದಾನೆ.
ಕಳೆದ ಐದು ದಿನಗಳ ಹಿಂದೆ ಹೆಂಡತಿಯಿಂದ ನೂರುಲ್ಲಾ ದೂರವಿದ್ದ. ಹೀಗಾಗಿ, ಇವತ್ತು ಪತ್ನಿ, ಶಿಯಾಪತ್ ಉನ್ನಿಸ ತನ್ನ ಗಂಡನ ಮನೆಯಿಂದ ಹೊರಡಲು ಸಿದ್ಧಳಾಗಿದ್ದಳು, ಮನೆ ಖಾಲಿ ಮಾಡುವ ವೇಳೆ ಎಂಟ್ರಿ ಕೊಟ್ಟ ಪತಿ ಮತ್ತೆ ಖ್ಯಾತೆ ತೆಗೆದಿದ್ದಾನೆ. ಅಷ್ಟೇ ಅಲ್ಲ, ಈ ವೇಳೆ ಏಕಾಏಕಿ ನಾಲ್ಕೈದು ಬಾರಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ದೂರ ಆಗೋ ವಿಚಾರಕ್ಕೆ ಈ ಗಂಡ ಹೆಂಡತಿ ಮಧ್ಯೆ ಜಗಳ ಆಗ್ತಿತ್ತು ಅನ್ನೋದು ಇವರಿಬ್ಬರನ್ನು ಹತ್ತಿರದಿಂದ ನೋಡಿದವರ ಮಾತು. ಆದ್ರೆ, ಈಗ ಗಂಡ ಅಂತ ಎನಿಸಿಕೊಂಡವನು ಪತ್ನಿಯನ್ನ ಶಾಶ್ವತವಾಗಿ ಇನ್ನಿಲ್ಲದಂತೆ ಮಾಡಿದ್ದು ನಿಜಕ್ಕೂ ಖಂಡನೀಯ. ಸದ್ಯ ಕೊಲೆ ಮಾಡಿ ಠಾಣೆಗೆ ಹೋಗಿ ಆರೋಪಿ ಶರಣಾಗಿದ್ದಾನೆ. ಈ ಸಂಬಂಧ ಕೇಸ್ ದಾಖಲಿಸಿಕೊಂಡ ಕೆಎಸ್ ಲೇಔಟ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ವಿಚಾರಣೆ ಮುಂದುವರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ