ಗಾಜಿಯಾಬಾದ್ನಲ್ಲಿ ಪತಿಯಿಂದ ಪತ್ನಿಯ ಬರ್ಬರ ಹತ್ಯೆ
ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ಆಘಾತಕಾರಿ ಕೇಸ್
ಹೆಂಡಿಯನ್ನು ಕೊಂದು ಮನೆಯಲ್ಲೇ ಮೃತದೇಹ ಇಟ್ಟಿದ್ದ ಪತಿ
ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೋಪದಲ್ಲಿ ಪತ್ನಿಯನ್ನು ಕೊಂದು 3 ದಿನಗಳ ಕಾಲ ಶವದ ಜತೆಯೆಲ್ಲೇ ಇದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವನೇ ನೋಡಿ ಆ ಪಾಪಿ ಪತಿ ಹೆಸರು. ಭರತ್ ವಯಸ್ಸು 55 ವರ್ಷ. ಕೌಟುಂಬಿಕ ಕಹಲಕ್ಕೆ ಪತ್ನಿಯ ಉಸಿರನ್ನೇ ನಿಲ್ಲಿಸಿ ಇದೀಗ ಪೊಲೀಸರ ಅಥಿತಿಯಾಗಿದ್ದಾನೆ. ಉತ್ತರ ಪ್ರದೇಶದ ಗಾಜಿಯಾಬಾದ್ನ ಅಂಬೇಡ್ಕರ್ ಕಾಲೋನಿಯ ನಿವಾಸಿ ಆಗಿರುವ ಭರತ್, ಸೇಲ್ಸ್ಮನ್ ಆಗಿ ಕೆಲಸ ಮಾಡ್ತಿದೆ. ಫೆಬ್ರವರಿ 27ರ ರಾತ್ರಿ ಈತ ತನ್ನ ಪತ್ನಿ ಸುನಿತಾಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲ, ಮೂರು ದಿನ ಆಕೆಯ ಶವವನ್ನೇ ಮನೆಯಲ್ಲೇ ಇಟ್ಟುಕೊಂಡಿದ್ದಾನೆ.
ಆರೋಪಿ ಭರತ್ಗೆ ಕೊಲೆಯಾದ ಸುನೀತ 2ನೇ ಪತ್ನಿ. ಇಬ್ಬರು 14 ವರ್ಷದಿಂದ ಲಿವ್ ಇನ್ ಸಂಬಂಧದಲ್ಲಿದ್ದರು. ಎರಡೂವರೆ ವರ್ಷಗಳ ಹಿಂದೆ ಕೋರ್ಟ್ನಲ್ಲಿ ವಿವಾಹವಾಗಿದ್ದರು. ಭರತ್ 2ನೇ ಮದುವೆಯಾದ್ರೂ ಮೊದಲ ಪತ್ನಿಗೆ ಹಣಕಾಸಿನ ನೆರವು ಮಾಡ್ತಿದ್ದ. ಇದೇ ವಿಚಾರವಾಗಿ ಸುನಿತಾ ಮತ್ತು ಭರತ್ ನಡುವೆ ಗಲಾಟೆ ನಡೀತಿತ್ತು. ಕಳೆದ ಫೆಬ್ರವರಿ 27ರ ರಾತ್ರಿಯೂ ಇಬ್ಬರ ಮಧ್ಯೆ ಹಣಕಾಸಿನ ವಿಚಾರಕ್ಕೆ ವಾಗ್ವಾದ ನಡೆದಿದೆ. ಬಳಿಕ ಇದು ವಿಕೋಪಕ್ಕೆ ತಿರುಗಿ ಸುನಿತಾಳ ಕುತ್ತನ್ನು ಹಿಸುಕಿ ಭರತ್ ಕೊಲೆ ಮಾಡಿದ್ದಾನೆ.
3 ದಿನಗಳ ಕಾಲ ಶವದ ಜತೆಯಲ್ಲೇ ಇದ್ದ ಪತಿ
ಕೋಪದಲ್ಲಿ ಪತ್ನಿಯನ್ನು ಕೊಂದು 3 ದಿನಗಳ ಕಾಲ ಶವದ ಜತೆಯೆಲ್ಲೇ ಇದ್ದ ಅನ್ನೋ ವಿಷಯವು ಬೆಳಕಿಗೆ ಬಂದಿದೆ. ಫೆಬ್ರವರಿ 27ರಂದು ನಡೆದ ಹತ್ಯೆ ಮಾರ್ಚ್ 1ರಂದು ಬೆಳಕಿಗೆ ಬಂದಿದೆ. ಭರತ್ ಮೂರು ದಿನಗಳ ಕಾಲ ಶವದೊಂದಿಗೆ ಮನೆಯಲ್ಲಿ ಇದ್ದ. ಶುಕ್ರವಾರ ಪತ್ನಿಯ ದೇಹವನ್ನು ಹಾಸಿಗೆಯ ಮೇಲೆ ಮಲಗಿಸಿ ಕೆಲಸಕ್ಕೆ ಹೋಗಿದ್ದ. ಶನಿವಾರ ಅಕ್ಕಪಕ್ಕದ ಮನೆಯವರಿಗೆ ಭರತ್ ಮನೆಯಿಂದ ಕೊಳತೆ ವಾಸನೆ ಬಂದಿದೆ. ಇದರಿಂದ ಅನುಮಾನಗೊಂಡ ಅಕ್ಕ ಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳೀಯರು ಹೇಳುವ ಪ್ರಕಾರ ಈತ ಕುಡಿದ ಮತ್ತಿನಲ್ಲಿ ಮನೆಯ ಬಾಗಿಲ ಬಳಿ ಕುಳಿತು ತನ್ನ ಪತ್ನಿಯನ್ನು ಕೊಲೆ ಮಾಡಿದ್ದೇನೆ ನನ್ನನ್ನು ಬಂಧಿಸಿ ಎಂದು ದಾರಿಹೋಕರಿಗೆ ಹೇಳುತ್ತಿದ್ದನಂತೆ. ಪೊಲೀಸರು ಮನೆಗೆ ಬಂದು ವಿಚಾರಣೆ ನಡೆಸಿದಾಗ ಕೋಣೆಯಲ್ಲಿ ಶವ ಪತ್ತೆಯಾಗಿತ್ತು. ಕೂಡಲೇ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳಿಸಿ ಆರೋಪಿ ಭರತ್ನನ್ನು ಅರೆಸ್ಟ್ ಮಾಡಿದ್ದಾರೆ. ಒಟ್ಟಾರೆ. ಕೋಪದ ಕೈಗೆ ಬುದ್ಧಿಕೊಟ್ಟ ಪತಿ ಜೈಲು ಸೇರಿದ್ರೆ, ಪತ್ನಿ ಯಮಲೋಕ ಸೇರಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಗಾಜಿಯಾಬಾದ್ನಲ್ಲಿ ಪತಿಯಿಂದ ಪತ್ನಿಯ ಬರ್ಬರ ಹತ್ಯೆ
ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ಆಘಾತಕಾರಿ ಕೇಸ್
ಹೆಂಡಿಯನ್ನು ಕೊಂದು ಮನೆಯಲ್ಲೇ ಮೃತದೇಹ ಇಟ್ಟಿದ್ದ ಪತಿ
ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೋಪದಲ್ಲಿ ಪತ್ನಿಯನ್ನು ಕೊಂದು 3 ದಿನಗಳ ಕಾಲ ಶವದ ಜತೆಯೆಲ್ಲೇ ಇದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವನೇ ನೋಡಿ ಆ ಪಾಪಿ ಪತಿ ಹೆಸರು. ಭರತ್ ವಯಸ್ಸು 55 ವರ್ಷ. ಕೌಟುಂಬಿಕ ಕಹಲಕ್ಕೆ ಪತ್ನಿಯ ಉಸಿರನ್ನೇ ನಿಲ್ಲಿಸಿ ಇದೀಗ ಪೊಲೀಸರ ಅಥಿತಿಯಾಗಿದ್ದಾನೆ. ಉತ್ತರ ಪ್ರದೇಶದ ಗಾಜಿಯಾಬಾದ್ನ ಅಂಬೇಡ್ಕರ್ ಕಾಲೋನಿಯ ನಿವಾಸಿ ಆಗಿರುವ ಭರತ್, ಸೇಲ್ಸ್ಮನ್ ಆಗಿ ಕೆಲಸ ಮಾಡ್ತಿದೆ. ಫೆಬ್ರವರಿ 27ರ ರಾತ್ರಿ ಈತ ತನ್ನ ಪತ್ನಿ ಸುನಿತಾಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲ, ಮೂರು ದಿನ ಆಕೆಯ ಶವವನ್ನೇ ಮನೆಯಲ್ಲೇ ಇಟ್ಟುಕೊಂಡಿದ್ದಾನೆ.
ಆರೋಪಿ ಭರತ್ಗೆ ಕೊಲೆಯಾದ ಸುನೀತ 2ನೇ ಪತ್ನಿ. ಇಬ್ಬರು 14 ವರ್ಷದಿಂದ ಲಿವ್ ಇನ್ ಸಂಬಂಧದಲ್ಲಿದ್ದರು. ಎರಡೂವರೆ ವರ್ಷಗಳ ಹಿಂದೆ ಕೋರ್ಟ್ನಲ್ಲಿ ವಿವಾಹವಾಗಿದ್ದರು. ಭರತ್ 2ನೇ ಮದುವೆಯಾದ್ರೂ ಮೊದಲ ಪತ್ನಿಗೆ ಹಣಕಾಸಿನ ನೆರವು ಮಾಡ್ತಿದ್ದ. ಇದೇ ವಿಚಾರವಾಗಿ ಸುನಿತಾ ಮತ್ತು ಭರತ್ ನಡುವೆ ಗಲಾಟೆ ನಡೀತಿತ್ತು. ಕಳೆದ ಫೆಬ್ರವರಿ 27ರ ರಾತ್ರಿಯೂ ಇಬ್ಬರ ಮಧ್ಯೆ ಹಣಕಾಸಿನ ವಿಚಾರಕ್ಕೆ ವಾಗ್ವಾದ ನಡೆದಿದೆ. ಬಳಿಕ ಇದು ವಿಕೋಪಕ್ಕೆ ತಿರುಗಿ ಸುನಿತಾಳ ಕುತ್ತನ್ನು ಹಿಸುಕಿ ಭರತ್ ಕೊಲೆ ಮಾಡಿದ್ದಾನೆ.
3 ದಿನಗಳ ಕಾಲ ಶವದ ಜತೆಯಲ್ಲೇ ಇದ್ದ ಪತಿ
ಕೋಪದಲ್ಲಿ ಪತ್ನಿಯನ್ನು ಕೊಂದು 3 ದಿನಗಳ ಕಾಲ ಶವದ ಜತೆಯೆಲ್ಲೇ ಇದ್ದ ಅನ್ನೋ ವಿಷಯವು ಬೆಳಕಿಗೆ ಬಂದಿದೆ. ಫೆಬ್ರವರಿ 27ರಂದು ನಡೆದ ಹತ್ಯೆ ಮಾರ್ಚ್ 1ರಂದು ಬೆಳಕಿಗೆ ಬಂದಿದೆ. ಭರತ್ ಮೂರು ದಿನಗಳ ಕಾಲ ಶವದೊಂದಿಗೆ ಮನೆಯಲ್ಲಿ ಇದ್ದ. ಶುಕ್ರವಾರ ಪತ್ನಿಯ ದೇಹವನ್ನು ಹಾಸಿಗೆಯ ಮೇಲೆ ಮಲಗಿಸಿ ಕೆಲಸಕ್ಕೆ ಹೋಗಿದ್ದ. ಶನಿವಾರ ಅಕ್ಕಪಕ್ಕದ ಮನೆಯವರಿಗೆ ಭರತ್ ಮನೆಯಿಂದ ಕೊಳತೆ ವಾಸನೆ ಬಂದಿದೆ. ಇದರಿಂದ ಅನುಮಾನಗೊಂಡ ಅಕ್ಕ ಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳೀಯರು ಹೇಳುವ ಪ್ರಕಾರ ಈತ ಕುಡಿದ ಮತ್ತಿನಲ್ಲಿ ಮನೆಯ ಬಾಗಿಲ ಬಳಿ ಕುಳಿತು ತನ್ನ ಪತ್ನಿಯನ್ನು ಕೊಲೆ ಮಾಡಿದ್ದೇನೆ ನನ್ನನ್ನು ಬಂಧಿಸಿ ಎಂದು ದಾರಿಹೋಕರಿಗೆ ಹೇಳುತ್ತಿದ್ದನಂತೆ. ಪೊಲೀಸರು ಮನೆಗೆ ಬಂದು ವಿಚಾರಣೆ ನಡೆಸಿದಾಗ ಕೋಣೆಯಲ್ಲಿ ಶವ ಪತ್ತೆಯಾಗಿತ್ತು. ಕೂಡಲೇ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳಿಸಿ ಆರೋಪಿ ಭರತ್ನನ್ನು ಅರೆಸ್ಟ್ ಮಾಡಿದ್ದಾರೆ. ಒಟ್ಟಾರೆ. ಕೋಪದ ಕೈಗೆ ಬುದ್ಧಿಕೊಟ್ಟ ಪತಿ ಜೈಲು ಸೇರಿದ್ರೆ, ಪತ್ನಿ ಯಮಲೋಕ ಸೇರಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ