newsfirstkannada.com

ವಿಡಿಯೋ- ಬೀದಿಯಲ್ಲೇ ಹೆಂಡತಿಗೆ 19 ಬಾರಿ ಕತ್ತರಿಯಿಂದ ಇರಿದ ಕಿರಾತಕ ಗಂಡ.. ಇಲ್ಲಿ ನಿಜಕ್ಕೂ ನಡೆದಿರುವುದು ಏನು?

Share :

Published January 14, 2024 at 9:23am

    ಬೀದಿಯಲ್ಲಿ ತರಕಾರಿ ಖರೀದಿಗೆ ಬಂದಿದ್ದ ಪತ್ನಿ ಮೇಲೆ ಹಲ್ಲೆ

    ತಾಯಿ ಮೇಲೆ ಹಲ್ಲೆ ಮಾಡಿದ್ದಕ್ಕೆ ಮಗ ಮಾಡಿರುವುದು ಏನು.?

    ಗಂಭೀರವಾಗಿ ಗಾಯಗೊಂಡಿರುವ ಮಹಿಳೆ ಆಸ್ಪತ್ರೆಗೆ ದಾಖಲು

ಲಕ್ನೋ: ಗಂಡನು ತನ್ನ ಪತ್ನಿಯ ಶೀಲ ಶಂಕಿಸಿ 19 ಬಾರಿ ಭಯಾನಕವಾಗಿ ಕತ್ತರಿಯಿಂದ ಇರಿದಿರುವ ಘಟನೆ ಉತ್ತರ ಪ್ರದೇಶದ ಕುತುಬ್‌ಪುರ ಪ್ರದೇಶದ ಲಂಬೇಕೇಶ್ವರ ಪಾರ್ಕ್ ಬಳಿ ನಡೆದಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಆರೋಪಿ ಬ್ರಿಜ್​​ಮೋಹನ್ ನಿಶಾದ್ ತನ್ನ ಹೆಂಡತಿ ಸುಮಾನಾಳ ಮೇಲೆ ಅನುಮಾನ ವ್ಯಕ್ತಪಡಿಸಿ ಹಲ್ಲೆ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು ಗಾಯಗೊಂಡ ಪತ್ನಿಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಮಹಿಳೆಯ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಹೇಳಿದ್ದಾರೆ.

ಲಂಬೇಕೇಶ್ವರ ಪಾರ್ಕ್ ಬಳಿಯ ಬೀದಿ ಬದಿ ತರಕಾರಿ ಖರೀದಿಗೆಂದು ಮಹಿಳೆ ಬಂದಿರುತ್ತಾರೆ. ಈ ವೇಳೆ ಅಲ್ಲಿಗೆ ಬಂದ ಆಕೆಯ ಪತಿ ಏಕಾಏಕಿ ಕತ್ತರಿಯಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಒಟ್ಟು 19 ಬಾರಿ ಕತ್ತರಿಯಿಂದ ಇರಿದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ತನ್ನ ಪತ್ನಿಯ ನಡತೆ ಮೇಲೆ ಗಂಡನಿಗೆ ಮೊದಲಿನಿಂದಲೂ ಅನುಮಾನವಿತ್ತು. ಹೀಗಾಗಿ ಮಕ್ಕಳಾದ್ರೂ ಮನೆಯಲ್ಲಿ ಆಗಾಗ ಈ ಬಗ್ಗೆ ಜಗಳವಾಡುತ್ತಿದ್ದರು. ಈ ಹಿಂದೆ ಕೆಲವು ಬಾರಿ ಪತ್ನಿ ಮೇಲೆ ಹಲ್ಲೆ ಮಾಡಿದ್ದನು. ಈ ಸಂಬಂಧ ಕೇಸ್​ ಕೂಡ ದಾಖಲು ಮಾಡಲಾಗಿತ್ತು. ಇಷ್ಟಾದ್ರೂ ಮತ್ತೆ ಕತ್ತರಿಯಿಂದ ಇರಿದು ಪತ್ನಿಯನ್ನ ಗಾಯಗೊಳಿಸಿದ್ದಾನೆ. ಈ ಸಂಬಂಧ ಮಗ ರಾಹುಲ್, ತಂದೆ ವಿರುದ್ಧವೇ ಪ್ರಕರಣ ದಾಖಲು ಮಾಡಿದ್ದಾರೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಡಿಯೋ- ಬೀದಿಯಲ್ಲೇ ಹೆಂಡತಿಗೆ 19 ಬಾರಿ ಕತ್ತರಿಯಿಂದ ಇರಿದ ಕಿರಾತಕ ಗಂಡ.. ಇಲ್ಲಿ ನಿಜಕ್ಕೂ ನಡೆದಿರುವುದು ಏನು?

https://newsfirstlive.com/wp-content/uploads/2024/01/UP_USBAND_WIFE.jpg

    ಬೀದಿಯಲ್ಲಿ ತರಕಾರಿ ಖರೀದಿಗೆ ಬಂದಿದ್ದ ಪತ್ನಿ ಮೇಲೆ ಹಲ್ಲೆ

    ತಾಯಿ ಮೇಲೆ ಹಲ್ಲೆ ಮಾಡಿದ್ದಕ್ಕೆ ಮಗ ಮಾಡಿರುವುದು ಏನು.?

    ಗಂಭೀರವಾಗಿ ಗಾಯಗೊಂಡಿರುವ ಮಹಿಳೆ ಆಸ್ಪತ್ರೆಗೆ ದಾಖಲು

ಲಕ್ನೋ: ಗಂಡನು ತನ್ನ ಪತ್ನಿಯ ಶೀಲ ಶಂಕಿಸಿ 19 ಬಾರಿ ಭಯಾನಕವಾಗಿ ಕತ್ತರಿಯಿಂದ ಇರಿದಿರುವ ಘಟನೆ ಉತ್ತರ ಪ್ರದೇಶದ ಕುತುಬ್‌ಪುರ ಪ್ರದೇಶದ ಲಂಬೇಕೇಶ್ವರ ಪಾರ್ಕ್ ಬಳಿ ನಡೆದಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಆರೋಪಿ ಬ್ರಿಜ್​​ಮೋಹನ್ ನಿಶಾದ್ ತನ್ನ ಹೆಂಡತಿ ಸುಮಾನಾಳ ಮೇಲೆ ಅನುಮಾನ ವ್ಯಕ್ತಪಡಿಸಿ ಹಲ್ಲೆ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು ಗಾಯಗೊಂಡ ಪತ್ನಿಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಮಹಿಳೆಯ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಹೇಳಿದ್ದಾರೆ.

ಲಂಬೇಕೇಶ್ವರ ಪಾರ್ಕ್ ಬಳಿಯ ಬೀದಿ ಬದಿ ತರಕಾರಿ ಖರೀದಿಗೆಂದು ಮಹಿಳೆ ಬಂದಿರುತ್ತಾರೆ. ಈ ವೇಳೆ ಅಲ್ಲಿಗೆ ಬಂದ ಆಕೆಯ ಪತಿ ಏಕಾಏಕಿ ಕತ್ತರಿಯಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಒಟ್ಟು 19 ಬಾರಿ ಕತ್ತರಿಯಿಂದ ಇರಿದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ತನ್ನ ಪತ್ನಿಯ ನಡತೆ ಮೇಲೆ ಗಂಡನಿಗೆ ಮೊದಲಿನಿಂದಲೂ ಅನುಮಾನವಿತ್ತು. ಹೀಗಾಗಿ ಮಕ್ಕಳಾದ್ರೂ ಮನೆಯಲ್ಲಿ ಆಗಾಗ ಈ ಬಗ್ಗೆ ಜಗಳವಾಡುತ್ತಿದ್ದರು. ಈ ಹಿಂದೆ ಕೆಲವು ಬಾರಿ ಪತ್ನಿ ಮೇಲೆ ಹಲ್ಲೆ ಮಾಡಿದ್ದನು. ಈ ಸಂಬಂಧ ಕೇಸ್​ ಕೂಡ ದಾಖಲು ಮಾಡಲಾಗಿತ್ತು. ಇಷ್ಟಾದ್ರೂ ಮತ್ತೆ ಕತ್ತರಿಯಿಂದ ಇರಿದು ಪತ್ನಿಯನ್ನ ಗಾಯಗೊಳಿಸಿದ್ದಾನೆ. ಈ ಸಂಬಂಧ ಮಗ ರಾಹುಲ್, ತಂದೆ ವಿರುದ್ಧವೇ ಪ್ರಕರಣ ದಾಖಲು ಮಾಡಿದ್ದಾರೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More