50 ದಿನ ಪೂರೈಸಿದ ಸಂಭ್ರಮದಲ್ಲಿ ಕಾಟೇರ ಚಿತ್ರತಂಡ
ಪ್ರಸನ್ನ ಥಿಯೇಟರ್ನಲ್ಲಿ ಸಂಭ್ರಮಾಚರಿಸಿದ ದರ್ಶನ್ ಆ್ಯಂಡ್ ಟೀಂ
ವೇದಿಕೆ ಮೇಲೆ ನಿಂತು ಉಮಾಪತಿಗೆ ತಗಡೇ ಎಂದ ನಟ ದರ್ಶನ್
ಬೆಂಗಳೂರು: ಸ್ಯಾಂಡಲ್ವುಡ್ ನಟ ಡಿ ಬಾಸ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಬಿಡುಗಡೆಗೊಂಡು 50 ದಿನ ಪೂರೈಸಿದೆ. ಹೀಗಾಗಿ ನಗರದ ಪ್ರಸನ್ನ ಥಿಯೇಟರ್ನಲ್ಲಿ ಅಭಿಮಾನಿಗಳೊಂದಿಗೆ ಈ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಸಂಭ್ರಮದ ಜೊತೆಗೆ ವೇದಿಕೆ ಮೇಲೆ ದರ್ಶನ್ ‘ಕಾಟೇರ’ ಸಿನಿಮಾಗೆ ಟೈಟಲ್ ಕೊಟ್ಟಿದ್ದು ನಾನೇ ಎಂದು ಖಡಕ್ ಆಗಿ ಸ್ಪಷ್ಟನೆ ಕೊಟ್ಟಿದ್ದಾರೆ.
ನಿರ್ದೇಶಕ ಉಮಾಪತಿಗೆ ನಟ ದರ್ಶನ್ ನೇರವಾಗಿ ಉತ್ತರ ಕೊಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ವೇದಿಕೆ ಮೇಲೆ ನಿಂತು ದರ್ಶನ್ ‘ಅಯ್ಯೋ ತಗಡೇ ಎಲ್ಲಾ ಆಧಾರ ಇಟ್ಕೊಂಡೇ ಹೇಳ್ತಿದ್ದೀನಿ. ಟೈಟಲ್ ಕೊಟ್ಟಿದ್ದೇ ನಾನು. ಮತ್ತೆ ಯಾಕಪ್ಪ ಬಂದು ಬಂದು ಗುಮ್ಮಿಸ್ಕೋತಿಯಾ’ ಎಂದು ಹೇಳಿದ್ದಾರೆ.
ವೇದಿಕೆ ಮೇಲೆ ಕೋಪದಲ್ಲಿ ಆಕ್ರೋಶ ಹೊರಹಾಕಿದ ದರ್ಶನ್ ‘ಕಥೆ ನಾನ್ ಮಾಡಿಸ್ದೆ, ಟೈಟಲ್ ನಾನ್ ಕೊಟ್ಟೆ. ಅಯ್ಯೋ ತಗಡೇ ನಿನಗೆ ರಾಬರ್ಟ್ ಕಥೆ ಕೊಟ್ಟಿದ್ದೇ ನಾವು. ಯಾಕಂದ್ರೆ ಕೊಟ್ಟಿದ್ದು ಮಾಡಿದ್ದು ಹೇಳಬಾರ್ದು. ಇದೇ ಸಾರಿ ಒಂದು ಸಲ ತಗಲಾಕಿಕೊಂಡು ಬಾಯಿಯಿಂದ ಹೇಳಿಸಿಕೊಂಡು ಬುದ್ಧಿ ಕಳ್ತಿಲ್ಲ ಅಂದ್ರೆ ನಾವ್ ಏನು ಹೇಳೋಣ. ಇಂತಹ ಒಳ್ಳೆಯ ಕಥೆ ಯಾಕಪ್ಪಾ ಬಿಟ್ಟೆ ನೀನು. ನೀನು ಮಾಡಿಸ್ದೆ ತಾನೆ ಇಂತಹ ಕಥೆ ಯಾಕೆ ಬಿಟ್ಟೆ ನೀನು. ಟೈಟಲ್ ಇಟ್ಟಿದ್ದೇ ನಾನು ಎಂದು ದರ್ಶನ್ ಹೇಳಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದೆ ದರ್ಶನ್ ಡೈರೆಕ್ಟರ್ ಎಸ್ ಮಹೇಶ್ ಕುಮಾರ್ ಅವರನ್ನು ಕರೆಸಿಕೊಂಡು ಟೈಟಲ್ ಕಥೆ ಸ್ವಲ್ಪ ನೀವು ಹೇಲಿ ಸ್ವಾಮಿ ಎಂದು ಹೇಳಿದ್ದಾರೆ. ಅದಕ್ಕೆ ಮಹೇಶ್ ‘ಮದಗಜ ಟೈಟಲ್ ರಾಮ್ಮೂರ್ತಿ ಸರ್ ಹತ್ರ ಇತ್ತು. ಅದನ್ನ ತೆಗೆದುಕೊಳ್ಳಬೇಕಾದ್ರೆ ಕಾಟೇರ ಟೈಟಲನ್ನ ಉಮಾಪತಿ ಸರ್ ಕೊಟ್ರು. ಮದಗಜ ಟೈಟಲನ್ನ ಬಾಸ್ ಹೇಳಿದ ತಕ್ಷಣ ನನಗೆ ರಾಮಮೂರ್ತಿ ಸರ್ ಕೊಟ್ರು’ ಎಂದು ಹೇಳಿದ್ದಾರೆ.
ನಂತರ ತರುಣ್ ಸುಧೀರ್ ಅವರನ್ನು ದರ್ಶನ್ ಕರೆಸಿಕೊಂಡು, ಆ ಟೈಟಲ್ನ ಮೊದಲಿಗೆ ಎಲ್ಲಿ ರಿಜಿಸ್ಟರ್ ಮಾಡಿಸಲು ಹೇಳಿದ್ದು ಚಿನ್ನ ಫಸ್ಟ್? ಎಂದು ಕೇಳಿದ್ದಾರೆ. ಅದಕ್ಕೆ ತರುಣ್ ನಮ್ ಬ್ಯಾನರ್ನಲ್ಲಿ ಮೊದಲಿಗೆ ಹೇಳಿದ್ದು. ಬಟ್ ನನ್ ಬ್ಯಾನರ್ನಲ್ಲಿ ಜಾಗ ಇರ್ಲಿಲ್ಲ ಎಂದು ಹೇಳಿದಹಾಗೆಯೇ ಅಲ್ಲು ನಮ್ ಬ್ಯಾನರ್ ಇದ್ದ ಹಾಗೆಯೇ ಇದೆ ರಿಜಿಸ್ಟರ್ ಮಾಡಿಸು ಅಂತ ಹೇಳಿದ್ರಿ. ಟೈಟಲ್ ಕೊಟ್ಟಿದ್ದೇ ನೀವು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
50 ದಿನ ಪೂರೈಸಿದ ಸಂಭ್ರಮದಲ್ಲಿ ಕಾಟೇರ ಚಿತ್ರತಂಡ
ಪ್ರಸನ್ನ ಥಿಯೇಟರ್ನಲ್ಲಿ ಸಂಭ್ರಮಾಚರಿಸಿದ ದರ್ಶನ್ ಆ್ಯಂಡ್ ಟೀಂ
ವೇದಿಕೆ ಮೇಲೆ ನಿಂತು ಉಮಾಪತಿಗೆ ತಗಡೇ ಎಂದ ನಟ ದರ್ಶನ್
ಬೆಂಗಳೂರು: ಸ್ಯಾಂಡಲ್ವುಡ್ ನಟ ಡಿ ಬಾಸ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಬಿಡುಗಡೆಗೊಂಡು 50 ದಿನ ಪೂರೈಸಿದೆ. ಹೀಗಾಗಿ ನಗರದ ಪ್ರಸನ್ನ ಥಿಯೇಟರ್ನಲ್ಲಿ ಅಭಿಮಾನಿಗಳೊಂದಿಗೆ ಈ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಸಂಭ್ರಮದ ಜೊತೆಗೆ ವೇದಿಕೆ ಮೇಲೆ ದರ್ಶನ್ ‘ಕಾಟೇರ’ ಸಿನಿಮಾಗೆ ಟೈಟಲ್ ಕೊಟ್ಟಿದ್ದು ನಾನೇ ಎಂದು ಖಡಕ್ ಆಗಿ ಸ್ಪಷ್ಟನೆ ಕೊಟ್ಟಿದ್ದಾರೆ.
ನಿರ್ದೇಶಕ ಉಮಾಪತಿಗೆ ನಟ ದರ್ಶನ್ ನೇರವಾಗಿ ಉತ್ತರ ಕೊಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ವೇದಿಕೆ ಮೇಲೆ ನಿಂತು ದರ್ಶನ್ ‘ಅಯ್ಯೋ ತಗಡೇ ಎಲ್ಲಾ ಆಧಾರ ಇಟ್ಕೊಂಡೇ ಹೇಳ್ತಿದ್ದೀನಿ. ಟೈಟಲ್ ಕೊಟ್ಟಿದ್ದೇ ನಾನು. ಮತ್ತೆ ಯಾಕಪ್ಪ ಬಂದು ಬಂದು ಗುಮ್ಮಿಸ್ಕೋತಿಯಾ’ ಎಂದು ಹೇಳಿದ್ದಾರೆ.
ವೇದಿಕೆ ಮೇಲೆ ಕೋಪದಲ್ಲಿ ಆಕ್ರೋಶ ಹೊರಹಾಕಿದ ದರ್ಶನ್ ‘ಕಥೆ ನಾನ್ ಮಾಡಿಸ್ದೆ, ಟೈಟಲ್ ನಾನ್ ಕೊಟ್ಟೆ. ಅಯ್ಯೋ ತಗಡೇ ನಿನಗೆ ರಾಬರ್ಟ್ ಕಥೆ ಕೊಟ್ಟಿದ್ದೇ ನಾವು. ಯಾಕಂದ್ರೆ ಕೊಟ್ಟಿದ್ದು ಮಾಡಿದ್ದು ಹೇಳಬಾರ್ದು. ಇದೇ ಸಾರಿ ಒಂದು ಸಲ ತಗಲಾಕಿಕೊಂಡು ಬಾಯಿಯಿಂದ ಹೇಳಿಸಿಕೊಂಡು ಬುದ್ಧಿ ಕಳ್ತಿಲ್ಲ ಅಂದ್ರೆ ನಾವ್ ಏನು ಹೇಳೋಣ. ಇಂತಹ ಒಳ್ಳೆಯ ಕಥೆ ಯಾಕಪ್ಪಾ ಬಿಟ್ಟೆ ನೀನು. ನೀನು ಮಾಡಿಸ್ದೆ ತಾನೆ ಇಂತಹ ಕಥೆ ಯಾಕೆ ಬಿಟ್ಟೆ ನೀನು. ಟೈಟಲ್ ಇಟ್ಟಿದ್ದೇ ನಾನು ಎಂದು ದರ್ಶನ್ ಹೇಳಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದೆ ದರ್ಶನ್ ಡೈರೆಕ್ಟರ್ ಎಸ್ ಮಹೇಶ್ ಕುಮಾರ್ ಅವರನ್ನು ಕರೆಸಿಕೊಂಡು ಟೈಟಲ್ ಕಥೆ ಸ್ವಲ್ಪ ನೀವು ಹೇಲಿ ಸ್ವಾಮಿ ಎಂದು ಹೇಳಿದ್ದಾರೆ. ಅದಕ್ಕೆ ಮಹೇಶ್ ‘ಮದಗಜ ಟೈಟಲ್ ರಾಮ್ಮೂರ್ತಿ ಸರ್ ಹತ್ರ ಇತ್ತು. ಅದನ್ನ ತೆಗೆದುಕೊಳ್ಳಬೇಕಾದ್ರೆ ಕಾಟೇರ ಟೈಟಲನ್ನ ಉಮಾಪತಿ ಸರ್ ಕೊಟ್ರು. ಮದಗಜ ಟೈಟಲನ್ನ ಬಾಸ್ ಹೇಳಿದ ತಕ್ಷಣ ನನಗೆ ರಾಮಮೂರ್ತಿ ಸರ್ ಕೊಟ್ರು’ ಎಂದು ಹೇಳಿದ್ದಾರೆ.
ನಂತರ ತರುಣ್ ಸುಧೀರ್ ಅವರನ್ನು ದರ್ಶನ್ ಕರೆಸಿಕೊಂಡು, ಆ ಟೈಟಲ್ನ ಮೊದಲಿಗೆ ಎಲ್ಲಿ ರಿಜಿಸ್ಟರ್ ಮಾಡಿಸಲು ಹೇಳಿದ್ದು ಚಿನ್ನ ಫಸ್ಟ್? ಎಂದು ಕೇಳಿದ್ದಾರೆ. ಅದಕ್ಕೆ ತರುಣ್ ನಮ್ ಬ್ಯಾನರ್ನಲ್ಲಿ ಮೊದಲಿಗೆ ಹೇಳಿದ್ದು. ಬಟ್ ನನ್ ಬ್ಯಾನರ್ನಲ್ಲಿ ಜಾಗ ಇರ್ಲಿಲ್ಲ ಎಂದು ಹೇಳಿದಹಾಗೆಯೇ ಅಲ್ಲು ನಮ್ ಬ್ಯಾನರ್ ಇದ್ದ ಹಾಗೆಯೇ ಇದೆ ರಿಜಿಸ್ಟರ್ ಮಾಡಿಸು ಅಂತ ಹೇಳಿದ್ರಿ. ಟೈಟಲ್ ಕೊಟ್ಟಿದ್ದೇ ನೀವು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ