newsfirstkannada.com

ಅಯ್ಯೋ ತಗಡೇ.. ರಾಬರ್ಟ್​ಗೆ ಕಥೆ ಕೊಟ್ಟಿದ್ದೇ ನಾನು.. ವೇದಿಕೆ ಮೇಲೆ ಉಮಾಪತಿಗೆ ದರ್ಶನ್​​ ಟಾಂಗ್​

Share :

Published February 20, 2024 at 1:42pm

Update February 20, 2024 at 2:01pm

    50 ದಿನ ಪೂರೈಸಿದ ಸಂಭ್ರಮದಲ್ಲಿ ಕಾಟೇರ ಚಿತ್ರತಂಡ

    ಪ್ರಸನ್ನ ಥಿಯೇಟರ್​ನಲ್ಲಿ ಸಂಭ್ರಮಾಚರಿಸಿದ ದರ್ಶನ್​ ಆ್ಯಂಡ್​ ಟೀಂ

    ವೇದಿಕೆ ಮೇಲೆ ನಿಂತು ಉಮಾಪತಿಗೆ ತಗಡೇ ಎಂದ ನಟ ದರ್ಶನ್​

ಬೆಂಗಳೂರು: ಸ್ಯಾಂಡಲ್​ವುಡ್​ ನಟ ಡಿ ಬಾಸ್​ ದರ್ಶನ್​ ನಟನೆಯ ‘ಕಾಟೇರ’ ಸಿನಿಮಾ ಬಿಡುಗಡೆಗೊಂಡು 50 ದಿನ ಪೂರೈಸಿದೆ. ಹೀಗಾಗಿ ನಗರದ ಪ್ರಸನ್ನ ಥಿಯೇಟರ್​ನಲ್ಲಿ ಅಭಿಮಾನಿಗಳೊಂದಿಗೆ ಈ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಸಂಭ್ರಮದ ಜೊತೆಗೆ ವೇದಿಕೆ ಮೇಲೆ ದರ್ಶನ್​ ‘ಕಾಟೇರ’ ಸಿನಿಮಾಗೆ ಟೈಟಲ್ ಕೊಟ್ಟಿದ್ದು ನಾನೇ ಎಂದು ಖಡಕ್ ಆಗಿ ಸ್ಪಷ್ಟನೆ ಕೊಟ್ಟಿದ್ದಾರೆ.

ನಿರ್ದೇಶಕ ಉಮಾಪತಿಗೆ ನಟ ದರ್ಶನ್​ ನೇರವಾಗಿ ಉತ್ತರ ಕೊಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ವೇದಿಕೆ ಮೇಲೆ ನಿಂತು ದರ್ಶನ್​ ‘ಅಯ್ಯೋ ತಗಡೇ ಎಲ್ಲಾ ಆಧಾರ ಇಟ್ಕೊಂಡೇ ಹೇಳ್ತಿದ್ದೀನಿ. ಟೈಟಲ್​ ಕೊಟ್ಟಿದ್ದೇ ನಾನು. ಮತ್ತೆ ಯಾಕಪ್ಪ ಬಂದು ಬಂದು ಗುಮ್ಮಿಸ್ಕೋತಿಯಾ’ ಎಂದು ಹೇಳಿದ್ದಾರೆ.

ವೇದಿಕೆ ಮೇಲೆ ಕೋಪದಲ್ಲಿ ಆಕ್ರೋಶ ಹೊರಹಾಕಿದ ದರ್ಶನ್​ ‘ಕಥೆ ನಾನ್​ ಮಾಡಿಸ್ದೆ, ಟೈಟಲ್​ ನಾನ್​ ಕೊಟ್ಟೆ. ಅಯ್ಯೋ ತಗಡೇ ನಿನಗೆ ರಾಬರ್ಟ್​ ಕಥೆ ಕೊಟ್ಟಿದ್ದೇ ನಾವು. ಯಾಕಂದ್ರೆ ಕೊಟ್ಟಿದ್ದು ಮಾಡಿದ್ದು ಹೇಳಬಾರ್ದು. ಇದೇ ಸಾರಿ ಒಂದು ಸಲ ತಗಲಾಕಿಕೊಂಡು ಬಾಯಿಯಿಂದ ಹೇಳಿಸಿಕೊಂಡು ಬುದ್ಧಿ ಕಳ್ತಿಲ್ಲ ಅಂದ್ರೆ ನಾವ್​ ಏನು ಹೇಳೋಣ. ಇಂತಹ ಒಳ್ಳೆಯ ಕಥೆ ಯಾಕಪ್ಪಾ ಬಿಟ್ಟೆ ನೀನು. ನೀನು ಮಾಡಿಸ್ದೆ ತಾನೆ ಇಂತಹ ಕಥೆ ಯಾಕೆ ಬಿಟ್ಟೆ ನೀನು. ಟೈಟಲ್​ ಇಟ್ಟಿದ್ದೇ ನಾನು ಎಂದು ದರ್ಶನ್​ ಹೇಳಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದೆ ದರ್ಶನ್​ ಡೈರೆಕ್ಟರ್​ ಎಸ್​ ಮಹೇಶ್ ಕುಮಾರ್​​ ಅವರನ್ನು ಕರೆಸಿಕೊಂಡು ಟೈಟಲ್ ಕಥೆ ಸ್ವಲ್ಪ ನೀವು ಹೇಲಿ ಸ್ವಾಮಿ ಎಂದು ಹೇಳಿದ್ದಾರೆ. ಅದಕ್ಕೆ ಮಹೇಶ್​ ‘ಮದಗಜ ಟೈಟಲ್​ ರಾಮ್​ಮೂರ್ತಿ ಸರ್​ ಹತ್ರ ಇತ್ತು. ಅದನ್ನ ತೆಗೆದುಕೊಳ್ಳಬೇಕಾದ್ರೆ ಕಾಟೇರ ಟೈಟಲನ್ನ ಉಮಾಪತಿ ಸರ್​ ಕೊಟ್ರು. ಮದಗಜ ಟೈಟಲನ್ನ ಬಾಸ್​ ಹೇಳಿದ ತಕ್ಷಣ ನನಗೆ ರಾಮಮೂರ್ತಿ ಸರ್​ ಕೊಟ್ರು’ ಎಂದು ಹೇಳಿದ್ದಾರೆ.

ನಂತರ ತರುಣ್​ ಸುಧೀರ್​ ಅವರನ್ನು ದರ್ಶನ್​ ಕರೆಸಿಕೊಂಡು, ಆ ಟೈಟಲ್​ನ ಮೊದಲಿಗೆ ಎಲ್ಲಿ ರಿಜಿಸ್ಟರ್​ ಮಾಡಿಸಲು ಹೇಳಿದ್ದು ಚಿನ್ನ ಫಸ್ಟ್​? ಎಂದು ಕೇಳಿದ್ದಾರೆ. ಅದಕ್ಕೆ ತರುಣ್​ ನಮ್​ ಬ್ಯಾನರ್​ನಲ್ಲಿ ಮೊದಲಿಗೆ ಹೇಳಿದ್ದು. ಬಟ್​ ನನ್​ ಬ್ಯಾನರ್​ನಲ್ಲಿ ಜಾಗ ಇರ್ಲಿಲ್ಲ ಎಂದು ಹೇಳಿದಹಾಗೆಯೇ ಅಲ್ಲು ನಮ್​ ಬ್ಯಾನರ್​ ಇದ್ದ ಹಾಗೆಯೇ ಇದೆ ರಿಜಿಸ್ಟರ್ ಮಾಡಿಸು ಅಂತ ಹೇಳಿದ್ರಿ. ಟೈಟಲ್​ ಕೊಟ್ಟಿದ್ದೇ ನೀವು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯೋ ತಗಡೇ.. ರಾಬರ್ಟ್​ಗೆ ಕಥೆ ಕೊಟ್ಟಿದ್ದೇ ನಾನು.. ವೇದಿಕೆ ಮೇಲೆ ಉಮಾಪತಿಗೆ ದರ್ಶನ್​​ ಟಾಂಗ್​

https://newsfirstlive.com/wp-content/uploads/2024/02/darshan-5.jpg

    50 ದಿನ ಪೂರೈಸಿದ ಸಂಭ್ರಮದಲ್ಲಿ ಕಾಟೇರ ಚಿತ್ರತಂಡ

    ಪ್ರಸನ್ನ ಥಿಯೇಟರ್​ನಲ್ಲಿ ಸಂಭ್ರಮಾಚರಿಸಿದ ದರ್ಶನ್​ ಆ್ಯಂಡ್​ ಟೀಂ

    ವೇದಿಕೆ ಮೇಲೆ ನಿಂತು ಉಮಾಪತಿಗೆ ತಗಡೇ ಎಂದ ನಟ ದರ್ಶನ್​

ಬೆಂಗಳೂರು: ಸ್ಯಾಂಡಲ್​ವುಡ್​ ನಟ ಡಿ ಬಾಸ್​ ದರ್ಶನ್​ ನಟನೆಯ ‘ಕಾಟೇರ’ ಸಿನಿಮಾ ಬಿಡುಗಡೆಗೊಂಡು 50 ದಿನ ಪೂರೈಸಿದೆ. ಹೀಗಾಗಿ ನಗರದ ಪ್ರಸನ್ನ ಥಿಯೇಟರ್​ನಲ್ಲಿ ಅಭಿಮಾನಿಗಳೊಂದಿಗೆ ಈ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಸಂಭ್ರಮದ ಜೊತೆಗೆ ವೇದಿಕೆ ಮೇಲೆ ದರ್ಶನ್​ ‘ಕಾಟೇರ’ ಸಿನಿಮಾಗೆ ಟೈಟಲ್ ಕೊಟ್ಟಿದ್ದು ನಾನೇ ಎಂದು ಖಡಕ್ ಆಗಿ ಸ್ಪಷ್ಟನೆ ಕೊಟ್ಟಿದ್ದಾರೆ.

ನಿರ್ದೇಶಕ ಉಮಾಪತಿಗೆ ನಟ ದರ್ಶನ್​ ನೇರವಾಗಿ ಉತ್ತರ ಕೊಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ವೇದಿಕೆ ಮೇಲೆ ನಿಂತು ದರ್ಶನ್​ ‘ಅಯ್ಯೋ ತಗಡೇ ಎಲ್ಲಾ ಆಧಾರ ಇಟ್ಕೊಂಡೇ ಹೇಳ್ತಿದ್ದೀನಿ. ಟೈಟಲ್​ ಕೊಟ್ಟಿದ್ದೇ ನಾನು. ಮತ್ತೆ ಯಾಕಪ್ಪ ಬಂದು ಬಂದು ಗುಮ್ಮಿಸ್ಕೋತಿಯಾ’ ಎಂದು ಹೇಳಿದ್ದಾರೆ.

ವೇದಿಕೆ ಮೇಲೆ ಕೋಪದಲ್ಲಿ ಆಕ್ರೋಶ ಹೊರಹಾಕಿದ ದರ್ಶನ್​ ‘ಕಥೆ ನಾನ್​ ಮಾಡಿಸ್ದೆ, ಟೈಟಲ್​ ನಾನ್​ ಕೊಟ್ಟೆ. ಅಯ್ಯೋ ತಗಡೇ ನಿನಗೆ ರಾಬರ್ಟ್​ ಕಥೆ ಕೊಟ್ಟಿದ್ದೇ ನಾವು. ಯಾಕಂದ್ರೆ ಕೊಟ್ಟಿದ್ದು ಮಾಡಿದ್ದು ಹೇಳಬಾರ್ದು. ಇದೇ ಸಾರಿ ಒಂದು ಸಲ ತಗಲಾಕಿಕೊಂಡು ಬಾಯಿಯಿಂದ ಹೇಳಿಸಿಕೊಂಡು ಬುದ್ಧಿ ಕಳ್ತಿಲ್ಲ ಅಂದ್ರೆ ನಾವ್​ ಏನು ಹೇಳೋಣ. ಇಂತಹ ಒಳ್ಳೆಯ ಕಥೆ ಯಾಕಪ್ಪಾ ಬಿಟ್ಟೆ ನೀನು. ನೀನು ಮಾಡಿಸ್ದೆ ತಾನೆ ಇಂತಹ ಕಥೆ ಯಾಕೆ ಬಿಟ್ಟೆ ನೀನು. ಟೈಟಲ್​ ಇಟ್ಟಿದ್ದೇ ನಾನು ಎಂದು ದರ್ಶನ್​ ಹೇಳಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದೆ ದರ್ಶನ್​ ಡೈರೆಕ್ಟರ್​ ಎಸ್​ ಮಹೇಶ್ ಕುಮಾರ್​​ ಅವರನ್ನು ಕರೆಸಿಕೊಂಡು ಟೈಟಲ್ ಕಥೆ ಸ್ವಲ್ಪ ನೀವು ಹೇಲಿ ಸ್ವಾಮಿ ಎಂದು ಹೇಳಿದ್ದಾರೆ. ಅದಕ್ಕೆ ಮಹೇಶ್​ ‘ಮದಗಜ ಟೈಟಲ್​ ರಾಮ್​ಮೂರ್ತಿ ಸರ್​ ಹತ್ರ ಇತ್ತು. ಅದನ್ನ ತೆಗೆದುಕೊಳ್ಳಬೇಕಾದ್ರೆ ಕಾಟೇರ ಟೈಟಲನ್ನ ಉಮಾಪತಿ ಸರ್​ ಕೊಟ್ರು. ಮದಗಜ ಟೈಟಲನ್ನ ಬಾಸ್​ ಹೇಳಿದ ತಕ್ಷಣ ನನಗೆ ರಾಮಮೂರ್ತಿ ಸರ್​ ಕೊಟ್ರು’ ಎಂದು ಹೇಳಿದ್ದಾರೆ.

ನಂತರ ತರುಣ್​ ಸುಧೀರ್​ ಅವರನ್ನು ದರ್ಶನ್​ ಕರೆಸಿಕೊಂಡು, ಆ ಟೈಟಲ್​ನ ಮೊದಲಿಗೆ ಎಲ್ಲಿ ರಿಜಿಸ್ಟರ್​ ಮಾಡಿಸಲು ಹೇಳಿದ್ದು ಚಿನ್ನ ಫಸ್ಟ್​? ಎಂದು ಕೇಳಿದ್ದಾರೆ. ಅದಕ್ಕೆ ತರುಣ್​ ನಮ್​ ಬ್ಯಾನರ್​ನಲ್ಲಿ ಮೊದಲಿಗೆ ಹೇಳಿದ್ದು. ಬಟ್​ ನನ್​ ಬ್ಯಾನರ್​ನಲ್ಲಿ ಜಾಗ ಇರ್ಲಿಲ್ಲ ಎಂದು ಹೇಳಿದಹಾಗೆಯೇ ಅಲ್ಲು ನಮ್​ ಬ್ಯಾನರ್​ ಇದ್ದ ಹಾಗೆಯೇ ಇದೆ ರಿಜಿಸ್ಟರ್ ಮಾಡಿಸು ಅಂತ ಹೇಳಿದ್ರಿ. ಟೈಟಲ್​ ಕೊಟ್ಟಿದ್ದೇ ನೀವು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More