/newsfirstlive-kannada/media/post_attachments/wp-content/uploads/2025/04/ROHIT_SHARMA_MI.jpg)
2025ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಮುಖಭಂಗಕ್ಕೆ ಒಳಗಾಗುತ್ತಿದೆ. ಗೆಲ್ಲುವ ಪಂದ್ಯಗಳೆಲ್ಲಾ ಕೈ ಜಾರಿ ಹೋಗುತ್ತಿರುವುದು ಮುಜುಗರ ತಂದಿದೆ. ತಂಡದಲ್ಲಿ ಬ್ಯಾಟಿಂಗ್, ಬೌಲಿಂಗ್ ಎರಡು ಕೂಡ ದುರ್ಬಲವಾಗಿ ಕಾಣುತ್ತಿವೆ. ಇದರ ಜೊತೆ ಮುಂಬೈ ತಂಡದ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ವಿಫಲ ಬ್ಯಾಟಿಂಗ್ ಎಲ್ಲರಿಗೂ ಬೇಸರ ತರಿಸಿದೆ. ಜೊತೆಗೆ ಕಾಮೆಂಟರಿ ಮಾಡುವಾಗ ಇಯಾನ್ ಬಿಷಪ್ ಹಾಗೂ ರವಿಶಾಸ್ತ್ರಿ ಕೂಡ ತಾಳ್ಮೆ ಕಳೆದುಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ್ದ ರೋಹಿತ್ ಶರ್ಮಾ ಕೆಲವೇ ಕೆಲವು ರನ್ಗಳಿಗೆ ಔಟ್ ಆದರು. 17 ರನ್ಗಳಿಸಿ ಆಡುವಾಗ ಯಶ್ ದಯಾಳ್ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆದರು. ಈ ವೇಳೆ ಕಾಮೆಂಟರಿ ಮಾಡುತ್ತಿದ್ದ ಇಯಾನ್ ಬಿಷಪ್ ಇಷ್ಟು ರನ್ ಸಾಕಾಗಲ್ಲ ಎಂದು ಹೇಳಿದ್ದಾರೆ.
ಕಾಮೆಂಟರಿ ಮಾಡುವಾಗ ಪಂದ್ಯದಲ್ಲಿ ರೋಹಿತ್ ಬೋಲ್ಡ್ ಆಗುತ್ತಿದ್ದಂತೆ 12, 15 ರನ್ಗಳು, ಇಂತಹ ಸಣ್ಣ ಆರಂಭದ ಬ್ಯಾಟಿಂಗ್ ಬೇಕಾಗಿಲ್ಲ. ರೋಹಿತ್ ಅವರಿಂದ ಎಲ್ಲರೂ ದೊಡ್ಡ ಆರಂಭ ಬಯಸುತ್ತಿದ್ದಾರೆ. ಇದಕ್ಕೆ ಧ್ವನಿಗೂಡಿಸಿದ ರವಿಶಾಸ್ತ್ರಿ ತಂಡ ಸಂಕಷ್ಟಕ್ಕೆ ಒಳಗಾಗುತ್ತಿದೆ. ಇಂತಹ ಸಮಯದಲ್ಲಿ ರೋಹಿತ್ ಅವರಿಂದ ದೊಡ್ಡ ಇನ್ನಿಂಗ್ಸ್ ಬೇಕಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಮ್ಯಾಕ್ಸ್ವೆಲ್ಗೆ BCCI ಬಿಗ್ ಶಾಕ್.. ನಿಯಮ ತಪ್ಪಿದ ಆಲ್ರೌಂಡರ್ಗೆ ಶಿಕ್ಷೆ!
ಈ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅವರಿಂದ ಸುಮಾರು 400 ರನ್ಗಳನ್ನಾದರೂ ನಿರೀಕ್ಷೆ ಮಾಡಬೇಕಿದೆ. ಸದ್ಯ ಅವರ ಬ್ಯಾಟಿಂಗ್ನಿಂದ 15, 20 ರನ್ಗಳು ಬರುತ್ತಿರುವುದನ್ನು 40, 60 ರನ್ಗಳು ಆಗಿ ರೋಹಿತ್ ಬದಲಾವಣೆ ಮಾಡಿಕೊಳ್ಳಬೇಕು ಎಂದು ಕಾಮೆಂಟರಿ ಮಾಡುವಾಗ ಹೇಳಿದ್ದಾರೆ.
ಆರ್ಸಿಬಿ ಜೊತೆಗಿನ ಪಂದ್ಯ ಮುಗಿದ ಮೇಲೆ ಮಾತನಾಡಿದ ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಅವರಿಗೆ ಪ್ರಶ್ನೆ ಕೇಳಲಾಗಿತ್ತು. ಈ ಬಗ್ಗೆ ಉತ್ತರಿಸಿದ ಅವರು, ಪವರ್ ಪ್ಲೇನಲ್ಲಿ ನಾವು ನಿರೀಕ್ಷಿಸಿದಷ್ಟು ರನ್ಗಳು ಬರುತ್ತಿಲ್ಲ. ಇದರಿಂದ ತಂಡ ಸಮಸ್ಯೆಯಲ್ಲಿದೆ. ಅನುಭವಿ ಆಟಗಾರರ ಅವಶ್ಯಕತೆ ಇದೆ. ಹೀಗಾಗಿ ರೋಹಿತ್ ಶರ್ಮಾ ತಂಡದಲ್ಲಿದ್ದಾರೆ. ಆರಂಭದಲ್ಲಿ ಕನ್ಸಿಸ್ಟೆಂಟ್ ಆಗಿ ಬ್ಯಾಟ್ ಬೀಸಬೇಕಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ