ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ‘ರೋ-ರೂ’ ಪ್ರಕರಣ ಇದು
ಕರ್ನಾಟಕದ ಡಬಲ್ ಆರ್ ಲೇಡಿ ವಾರ್ ಮತ್ತೆ ಸದ್ದು ಮಾಡಿದೆ
ಫೆ.16ರ ಬಳಿಕ ಪ್ರಕರಣ ಯಾವ ರೀತಿ ತಿರುವು ಪಡೆದುಕೊಳ್ಳುತ್ತೆ?
ಕಳೆದ ವರ್ಷ ಸುದ್ದಿ ಮಾಡಿದ್ದ ಐಎಎಸ್-ಐಪಿಎಸ್ ಅಧಿಕಾರಿಗಳ ನಡುವಿನ ಪ್ರತಿಷ್ಠೆಯ ಜಟಾಪಟಿ ಸುಪ್ರೀಂ ಕೋರ್ಟ್ ಅಂಗಳದವರೆಗೂ ಹೋಗಿದೆ. ಸೋಶಿಯಲ್ ಮೀಡಿಯಾದಿಂದ ಶುರುವಾದ ರೋಹಿಣಿ-ರೂಪಾ ರಾದ್ಧಾಂತ ಸುಪ್ರೀಂ ಕಟೆಕಟೆಯಲ್ಲಿ ನಿಂತಿದೆ.
ಇಬ್ಬರು ಅಧಿಕಾರಿಗಳ ನಡುವಿನ ಕಲಹದ ವಾದ-ಪ್ರತಿವಾದ ನಡೆದಿದೆ. ಇಬ್ಬರೂ ಅಧಿಕಾರಿಗಳು ಪಟ್ಟು ಸಡಿಲಿಸದೇ ವಾದ ಮಂಡಿಸಿದ್ದಾರೆ. ಕರ್ನಾಟಕದ ಡಬಲ್ ಆರ್ ಲೇಡಿ ವಾರ್ ಮತ್ತೆ ಸದ್ದು ಮಾಡಿದೆ. ಇಬ್ಬರು ಮಹಿಳಾ ಅಧಿಕಾರಿಗಳ ಬಹಿರಂಗ ಕದನ ಸದ್ಯ ಸುಪ್ರೀಂ ಕೋರ್ಟ್ವರೆಗೂ ತಲುಪಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಮಾರ್ಧನಿಸಿದ್ದ ರೂಪಾ-ರೋಹಿಣಿ ಕಲಹ ಸುಪ್ರೀಂ ಕೋರ್ಟ್ ಬಾಗಿಲು ಬಡಿದಿದೆ.
ಐಎಎಸ್-ಐಪಿಎಸ್ ಅಧಿಕಾರಿಗಳ ಪ್ರತಿಷ್ಠೆಯ ಕದನ!
ಐಪಿಎಸ್ ಅಧಿಕಾರಿ ಡಿ. ರೂಪಾ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವೈಯಕ್ತಿಕ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರು. ತಮ್ಮ ಖಾಸಗಿ ಚಿತ್ರಗಳನ್ನ ಪೋಸ್ಟ್ ಮಾಡಿದ್ದಕ್ಕೆ ರೂಪಾ ವಿರುದ್ಧ ರೋಹಿಣಿ ರಾಂಗ್ ಆಗಿದ್ರು. ಇದಷ್ಟೇ ಅಲ್ಲ, ರೂಪಾ ವಿರುದ್ಧ ಸುಪ್ರೀಕೋರ್ಟ್ ಮೆಟ್ಟಿಲೇರಿದ್ರು. ಇವತ್ತು ನ್ಯಾಯಮೂರ್ತಿ ಎ.ಎಸ್ ಓಕಾ ರೋಹಿಣಿ ಸಲ್ಲಿಸಿದ್ಧ ಅರ್ಜಿ ವಿಚಾರಣೆ ನಡೆಸಿದ್ರು. ಈ ವೇಳೆ ಡಿ.ರೂಪಾ ಕ್ಷಮೆ ಕೋರುವಂತೆ ರೋಹಿಣಿ ಸಿಂಧೂರಿ ಪಟ್ಟು ಹಿಡಿದ ಪ್ರಸಂಗವೂ ನಡೀತು.
ಸುಪ್ರೀಂಕೋರ್ಟ್ನಲ್ಲಿ ರೋಹಿಣಿ ಸಿಂಧೂರಿ ವಾದಿಸಿದ್ದೇನು?
ರೋಹಿಣಿ ಸಿಂಧೂರಿ: ನನ್ನ ವಿರುದ್ಧ ಮಾಡಿರುವ ಅವಹೇಳನಕಾರಿ ಪೋಸ್ಟ್ಗಳನ್ನು ತೆಗೆದು ಹಾಕಬಹುದು. ಈ ಘಟನೆಯಿಂದ ನನ್ನ ಕುಟುಂಬಕ್ಕೆ ಘಾಸಿಯಾಗಿದೆ. ಹೀಗಾಗಿ ಡಿ.ರೂಪಾ ಬೇಷರತ್ ಕ್ಷಮೆಯಾಚಿಸಬೇಕು.
ಡಿ.ರೂಪಾ ಪರ ವಕೀಲ: ರೋಹಿಣಿ ಸಿಂಧೂರಿ ಕೂಡಾ ಅವಹೇಳನಕಾರಿ ಮಾತನಾಡಿದ್ದಾರೆ. ಬುದ್ಧಿ ಭ್ರಮಣೆಯಾಗಿದೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ.
ರೋಹಿಣಿ ಪರ ವಕೀಲ: ಹೌದು ಬುದ್ಧಿ ಭ್ರಮಣೆಯಾದವರು ಈ ರೀತಿ ಪೋಸ್ಟ್ ಮಾಡುತ್ತಾರೆ. ಅವರಿಗೆ ಬುದ್ದಿ ಭ್ರಮಣೆಯಾಗಿದೆ ಎಂದು ಹೇಳಿಲ್ಲ.
ನ್ಯಾ.ಎ.ಎಸ್ ಓಕಾ: ನೀವು ಒಂದು ನಿರ್ಧಾರಕ್ಕೆ ಬರಬೇಕು. ಇದಕ್ಕೆ ಒಂದು ತಿಂಗಳ ಸಮಾವಕಾಶ ನೀಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಿಂದ ಎಲ್ಲ ಪೋಸ್ಟ್ಗಳನ್ನ ಡಿಲೀಟ್ ಮಾಡಬೇಕು.
ರೋಹಿಣಿ ಸಿಂಧೂರಿ: ಈ ರೀತಿಯ ಮಾನಹಾನಿ ಮಾಡಿದರೆ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವುದು ಹೇಗೆ?
ನ್ಯಾ.ಎ.ಎಸ್. ಓಕಾ: ನಿಮಗೆ ಒಳ್ಳೆಯ ಭವಿಷ್ಯವಿದೆ. ಉಜ್ವಲ ಭವಿಷ್ಯದ ಕಾರಣದಿಂದ ಪ್ರಕರಣವನ್ನ ಇತ್ಯರ್ಥ ಮಾಡಲು ಯೋಚಿಸಿದ್ದೇವೆ. ಆದ್ರೆ, ಭಾವನೆಗಳು ಅಧಿಕವಾಗಿದ್ದರೆ ನಾವು ಒತ್ತಾಯಿಸಲು ಸಾಧ್ಯವಿಲ್ಲ.
ರೋಹಿಣಿ ಸಿಂಧೂರಿ: ನಮಗೆ ಉಜ್ವಲ ಭವಿಷ್ಯವಿರಬಹುದು. ಆದ್ರೆ ಈಗ ಜನರು ನನ್ನನ್ನು ಒಂದು ರೀತಿಯಲ್ಲಿ ನೋಡುತ್ತಿದ್ದಾರೆ. ನಾನು ಮೌನವಾಗಿರಲು ಸಾಧ್ಯವಿಲ್ಲ.
ನ್ಯಾ.ಎ.ಎಸ್ ಓಕಾ: ಮೌನವಾಗಿರಲು ಅಥವಾ ಹಿಂತೆಗೆದುಕೊಳ್ಳುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತಿಲ್ಲ. ಎಲ್ಲಾ ವಾದ ಪ್ರತಿವಾದವನ್ನ ಆಲಿಸಿದ ನ್ಯಾಯಮೂರ್ತಿ ಎ.ಎಸ್ ಓಕಾ ಈಗಾಗಲೇ ಆರ್-ಆರ್ ಪ್ರಕರಣದಲ್ಲಿ ನೀಡಲಾಗಿರುವ ಮಧ್ಯಂತರ ಆದೇಶ ಮುಂದುವರಿಸುವಂತೆ ಸೂಚಿಸಿದ್ರು. ಅಲ್ಲದೇ ಫೆಬ್ರವರಿ 16ರಂದು ವಿಚಾರಣೆಯನ್ನ ಮುಂದೂಡಿದ್ರು. ಒಟ್ಟಾರೆ, ಸ್ವಲ್ಪದಿನ ತಣ್ಣಗಾಗಿದ್ದ ರೋ-ರೂ ವಾರ್ ಮತ್ತೆ ಮಾರ್ಧನಿಸಿದೆ. ನ್ಯಾಯಮೂರ್ತಿಗಳು ಬುದ್ಧಿಮಾತು ಹೇಳಿದ್ರೂ ಇಬ್ಬರು ಅಧಿಕಾರಿಗಳ ಪ್ರತಿಷ್ಠೆ ಬಗ್ಗದಾಗಿದೆ. ಇದೀಗ ಫೆಬ್ರವರಿ 16ರ ಬಳಿಕ ಪ್ರಕರಣ ಯಾವ ತಿರುವನ್ನ ಪಡೆದುಕೊಳ್ಳುತ್ತೋ? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ‘ರೋ-ರೂ’ ಪ್ರಕರಣ ಇದು
ಕರ್ನಾಟಕದ ಡಬಲ್ ಆರ್ ಲೇಡಿ ವಾರ್ ಮತ್ತೆ ಸದ್ದು ಮಾಡಿದೆ
ಫೆ.16ರ ಬಳಿಕ ಪ್ರಕರಣ ಯಾವ ರೀತಿ ತಿರುವು ಪಡೆದುಕೊಳ್ಳುತ್ತೆ?
ಕಳೆದ ವರ್ಷ ಸುದ್ದಿ ಮಾಡಿದ್ದ ಐಎಎಸ್-ಐಪಿಎಸ್ ಅಧಿಕಾರಿಗಳ ನಡುವಿನ ಪ್ರತಿಷ್ಠೆಯ ಜಟಾಪಟಿ ಸುಪ್ರೀಂ ಕೋರ್ಟ್ ಅಂಗಳದವರೆಗೂ ಹೋಗಿದೆ. ಸೋಶಿಯಲ್ ಮೀಡಿಯಾದಿಂದ ಶುರುವಾದ ರೋಹಿಣಿ-ರೂಪಾ ರಾದ್ಧಾಂತ ಸುಪ್ರೀಂ ಕಟೆಕಟೆಯಲ್ಲಿ ನಿಂತಿದೆ.
ಇಬ್ಬರು ಅಧಿಕಾರಿಗಳ ನಡುವಿನ ಕಲಹದ ವಾದ-ಪ್ರತಿವಾದ ನಡೆದಿದೆ. ಇಬ್ಬರೂ ಅಧಿಕಾರಿಗಳು ಪಟ್ಟು ಸಡಿಲಿಸದೇ ವಾದ ಮಂಡಿಸಿದ್ದಾರೆ. ಕರ್ನಾಟಕದ ಡಬಲ್ ಆರ್ ಲೇಡಿ ವಾರ್ ಮತ್ತೆ ಸದ್ದು ಮಾಡಿದೆ. ಇಬ್ಬರು ಮಹಿಳಾ ಅಧಿಕಾರಿಗಳ ಬಹಿರಂಗ ಕದನ ಸದ್ಯ ಸುಪ್ರೀಂ ಕೋರ್ಟ್ವರೆಗೂ ತಲುಪಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಮಾರ್ಧನಿಸಿದ್ದ ರೂಪಾ-ರೋಹಿಣಿ ಕಲಹ ಸುಪ್ರೀಂ ಕೋರ್ಟ್ ಬಾಗಿಲು ಬಡಿದಿದೆ.
ಐಎಎಸ್-ಐಪಿಎಸ್ ಅಧಿಕಾರಿಗಳ ಪ್ರತಿಷ್ಠೆಯ ಕದನ!
ಐಪಿಎಸ್ ಅಧಿಕಾರಿ ಡಿ. ರೂಪಾ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವೈಯಕ್ತಿಕ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರು. ತಮ್ಮ ಖಾಸಗಿ ಚಿತ್ರಗಳನ್ನ ಪೋಸ್ಟ್ ಮಾಡಿದ್ದಕ್ಕೆ ರೂಪಾ ವಿರುದ್ಧ ರೋಹಿಣಿ ರಾಂಗ್ ಆಗಿದ್ರು. ಇದಷ್ಟೇ ಅಲ್ಲ, ರೂಪಾ ವಿರುದ್ಧ ಸುಪ್ರೀಕೋರ್ಟ್ ಮೆಟ್ಟಿಲೇರಿದ್ರು. ಇವತ್ತು ನ್ಯಾಯಮೂರ್ತಿ ಎ.ಎಸ್ ಓಕಾ ರೋಹಿಣಿ ಸಲ್ಲಿಸಿದ್ಧ ಅರ್ಜಿ ವಿಚಾರಣೆ ನಡೆಸಿದ್ರು. ಈ ವೇಳೆ ಡಿ.ರೂಪಾ ಕ್ಷಮೆ ಕೋರುವಂತೆ ರೋಹಿಣಿ ಸಿಂಧೂರಿ ಪಟ್ಟು ಹಿಡಿದ ಪ್ರಸಂಗವೂ ನಡೀತು.
ಸುಪ್ರೀಂಕೋರ್ಟ್ನಲ್ಲಿ ರೋಹಿಣಿ ಸಿಂಧೂರಿ ವಾದಿಸಿದ್ದೇನು?
ರೋಹಿಣಿ ಸಿಂಧೂರಿ: ನನ್ನ ವಿರುದ್ಧ ಮಾಡಿರುವ ಅವಹೇಳನಕಾರಿ ಪೋಸ್ಟ್ಗಳನ್ನು ತೆಗೆದು ಹಾಕಬಹುದು. ಈ ಘಟನೆಯಿಂದ ನನ್ನ ಕುಟುಂಬಕ್ಕೆ ಘಾಸಿಯಾಗಿದೆ. ಹೀಗಾಗಿ ಡಿ.ರೂಪಾ ಬೇಷರತ್ ಕ್ಷಮೆಯಾಚಿಸಬೇಕು.
ಡಿ.ರೂಪಾ ಪರ ವಕೀಲ: ರೋಹಿಣಿ ಸಿಂಧೂರಿ ಕೂಡಾ ಅವಹೇಳನಕಾರಿ ಮಾತನಾಡಿದ್ದಾರೆ. ಬುದ್ಧಿ ಭ್ರಮಣೆಯಾಗಿದೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ.
ರೋಹಿಣಿ ಪರ ವಕೀಲ: ಹೌದು ಬುದ್ಧಿ ಭ್ರಮಣೆಯಾದವರು ಈ ರೀತಿ ಪೋಸ್ಟ್ ಮಾಡುತ್ತಾರೆ. ಅವರಿಗೆ ಬುದ್ದಿ ಭ್ರಮಣೆಯಾಗಿದೆ ಎಂದು ಹೇಳಿಲ್ಲ.
ನ್ಯಾ.ಎ.ಎಸ್ ಓಕಾ: ನೀವು ಒಂದು ನಿರ್ಧಾರಕ್ಕೆ ಬರಬೇಕು. ಇದಕ್ಕೆ ಒಂದು ತಿಂಗಳ ಸಮಾವಕಾಶ ನೀಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಿಂದ ಎಲ್ಲ ಪೋಸ್ಟ್ಗಳನ್ನ ಡಿಲೀಟ್ ಮಾಡಬೇಕು.
ರೋಹಿಣಿ ಸಿಂಧೂರಿ: ಈ ರೀತಿಯ ಮಾನಹಾನಿ ಮಾಡಿದರೆ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವುದು ಹೇಗೆ?
ನ್ಯಾ.ಎ.ಎಸ್. ಓಕಾ: ನಿಮಗೆ ಒಳ್ಳೆಯ ಭವಿಷ್ಯವಿದೆ. ಉಜ್ವಲ ಭವಿಷ್ಯದ ಕಾರಣದಿಂದ ಪ್ರಕರಣವನ್ನ ಇತ್ಯರ್ಥ ಮಾಡಲು ಯೋಚಿಸಿದ್ದೇವೆ. ಆದ್ರೆ, ಭಾವನೆಗಳು ಅಧಿಕವಾಗಿದ್ದರೆ ನಾವು ಒತ್ತಾಯಿಸಲು ಸಾಧ್ಯವಿಲ್ಲ.
ರೋಹಿಣಿ ಸಿಂಧೂರಿ: ನಮಗೆ ಉಜ್ವಲ ಭವಿಷ್ಯವಿರಬಹುದು. ಆದ್ರೆ ಈಗ ಜನರು ನನ್ನನ್ನು ಒಂದು ರೀತಿಯಲ್ಲಿ ನೋಡುತ್ತಿದ್ದಾರೆ. ನಾನು ಮೌನವಾಗಿರಲು ಸಾಧ್ಯವಿಲ್ಲ.
ನ್ಯಾ.ಎ.ಎಸ್ ಓಕಾ: ಮೌನವಾಗಿರಲು ಅಥವಾ ಹಿಂತೆಗೆದುಕೊಳ್ಳುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತಿಲ್ಲ. ಎಲ್ಲಾ ವಾದ ಪ್ರತಿವಾದವನ್ನ ಆಲಿಸಿದ ನ್ಯಾಯಮೂರ್ತಿ ಎ.ಎಸ್ ಓಕಾ ಈಗಾಗಲೇ ಆರ್-ಆರ್ ಪ್ರಕರಣದಲ್ಲಿ ನೀಡಲಾಗಿರುವ ಮಧ್ಯಂತರ ಆದೇಶ ಮುಂದುವರಿಸುವಂತೆ ಸೂಚಿಸಿದ್ರು. ಅಲ್ಲದೇ ಫೆಬ್ರವರಿ 16ರಂದು ವಿಚಾರಣೆಯನ್ನ ಮುಂದೂಡಿದ್ರು. ಒಟ್ಟಾರೆ, ಸ್ವಲ್ಪದಿನ ತಣ್ಣಗಾಗಿದ್ದ ರೋ-ರೂ ವಾರ್ ಮತ್ತೆ ಮಾರ್ಧನಿಸಿದೆ. ನ್ಯಾಯಮೂರ್ತಿಗಳು ಬುದ್ಧಿಮಾತು ಹೇಳಿದ್ರೂ ಇಬ್ಬರು ಅಧಿಕಾರಿಗಳ ಪ್ರತಿಷ್ಠೆ ಬಗ್ಗದಾಗಿದೆ. ಇದೀಗ ಫೆಬ್ರವರಿ 16ರ ಬಳಿಕ ಪ್ರಕರಣ ಯಾವ ತಿರುವನ್ನ ಪಡೆದುಕೊಳ್ಳುತ್ತೋ? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ