ಈ ಆಟಗಾರರು ಇಲ್ಲದಿರುವುದೇ ಭಾರತಕ್ಕೆ ಬ್ಯಾಡ್ ನ್ಯೂಸ್
ಬಿಸಿಸಿಐ ಮೂಲಗಳಿಂದ ಮಾಹಿತಿ, ಫಿಟ್ ಆಗದ ಬ್ಯಾಟ್ಸ್ಮನ್ಸ್
ಮೆಗಾ ಟೂರ್ನಿಯ ಸಮರಕ್ಕಿಳಿಯೋ ಟೀಮ್ ಇಂಡಿಯಾ..!
ಅಬ್ಬಾ.. ಇನ್ನೇನು ಎಲ್ಲ ಸೆಟ್ ಆಯ್ತು ಎಂಬ ಸುದ್ದಿ ಟೀಮ್ ಇಂಡಿಯಾ ಕ್ಯಾಂಪ್ ಹಾಗೂ ಕ್ರಿಕೆಟ್ ಪ್ರೇಮಿಗಳ ಮುಖದಲ್ಲೂ ಮಂದಹಾಸ ಮೂಡಿಸಿತ್ತು. ಆದ್ರೆ ಸೀನ್ ಕಟ್ ಮಾಡಿದ್ರೆ, ಎಲ್ಲ ಟ್ವಿಸ್ಟ್ ಆಗಿದೆ.. ಟೀಮ್ ಇಂಡಿಯಾ ಲೆಕ್ಕಾಚಾರವೆಲ್ಲ ಉಲ್ಟಾ ಆಗಿದೆ. ಯಾಕಂದ್ರೆ, ಕಮ್ಬ್ಯಾಕ್ಗೆ ಸಜ್ಜಾಗಿದ್ದ ಕೆ.ಎಲ್.ರಾಹುಲ್ & ಶ್ರೇಯಸ್ ಅಯ್ಯರ್ ಮತ್ತೆ ಔಟ್ ಆಗಿದ್ದಾರೆ.
ಏಕದಿನ ವಿಶ್ವಕಪ್ಗೂ ಮುನ್ನ ಮತ್ತೆ ಟೀಮ್ ಇಂಡಿಯಾಗೆ ಟೆನ್ಶನ್ ಶುರುವಾಗಿದೆ. ಏಷ್ಯಾಕಪ್ ವೇಳೆಗೆ ಎಲ್ಲ ಅಡೆ-ತಡೆ ದಾಟಿ ಮೆಗಾ ಟೂರ್ನಿಯ ಸಮರಕ್ಕಿಳಿಯೋ ಲೆಕ್ಕಾಚಾರದಲ್ಲಿದ್ದ ಟೀಮ್ ಇಂಡಿಯಾದ ಕನಸೆಲ್ಲ ಚಿದ್ರಗೊಂಡಿದೆ.
ಏಷ್ಯಾಕಪ್ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಮುಂದಿನ ವಾರ ತಂಡವನ್ನ ಪ್ರಕಟಿಸಲಾಗುತ್ತೆ. ಅಕ್ಟೋಬರ್ನಿಂದ ಆರಂಭವಾಗೋ ವಿಶ್ವಕಪ್ ಅನ್ನೇ ದೃಷ್ಟಿಯಲ್ಲಿಟ್ಟುಕೊಂಡಿರೋ ಟೀಮ್ ಮ್ಯಾನೇಜ್ಮೆಂಟ್, ಸ್ಟ್ರಾಟರ್ಜಿ, ಗೇಮ್ ಪ್ಲಾನ್ ರೂಪಿಸ್ತಿದೆ. ಆದ್ರೆ, ಏಷ್ಯಾಕಪ್ಗೆ ತಂಡವನ್ನ ಪ್ರಕಟಿಸುವ ಹೊಸ್ತಿಲಿಲ್ಲೇ ಟೀಮ್ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದೆ.
ಏಷ್ಯಾಕಪ್ನಿಂದ ಶ್ರೇಯಸ್ & ರಾಹುಲ್ ಔಟ್.?
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಮುಗಿಸಿರುವ ಟೀಮ್ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದೆ. ಏಷ್ಯಾಕಪ್ ವೇಳೆಗೆ ಫಿಟ್ ಆಗ್ತಾರೆ ಎಂದು ನಿರೀಕ್ಷಿಸಲಾಗಿದ್ದ ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್ ಸಂಫೂರ್ಣ ಫಿಟ್ ಆಗಿಲ್ಲ. ಹೀಗಾಗಿ ಏಷ್ಯಾಕಪ್ನಿಂದ ಬಹುತೇಕ ಹೊರಬಿದ್ದಿದ್ದಾರೆ. ಈ ಸ್ಟಾರ್ ಆಟಗಾರರ ಅಲಭ್ಯತೆ ಟೀಮ್ ಇಂಡಿಯಾವನ್ನ ಚಿಂತೆಗೀಡು ಮಾಡಿದೆ.
ನಿರ್ದಿಷ್ಟ ಸಮಯಕ್ಕೆ ವಾಪಸ್ ಆಗೋದು ಡೌಟ್..!
ಕೆ.ಎಲ್.ರಾಹುಲ್ ಆ್ಯಂಡ್ ಶ್ರೇಯಸ್ ಅಯ್ಯರ್ ಏಕದಿನ ವಿಶ್ವಕಪ್ ಪ್ಲಾನ್ನಲ್ಲಿರುವ ಮೇನ್ ಪ್ಲೇಯರ್ಸ್.. ಹೀಗಾಗಿ ವಿಶ್ವಕಪ್ ವೇಳೆಗೆ ಸಂಪೂರ್ಣ ಫಿಟ್ ಆಗ್ತಾರೆ ಎಂದು ಟೀಮ್ ಮ್ಯಾನೇಜ್ಮೆಂಟ್ ನಿರೀಕ್ಷಿಸಿತ್ತು. ಈ ನಿಟ್ಟಿನಲ್ಲೇ ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್.ರಾಹುಲ್ ಭಾರೀ ಕಸರತ್ತನ್ನೇ ನಡೆಸಿದ್ರು. ಆದ್ರೀಗ ಸಂಫೂರ್ಣ ಫಿಟ್ನೆಸ್ ಸಾಧಿಸುವಲ್ಲಿ ವಿಫಲರಾಗಿರುವ ಇವರು, ಏಷ್ಯಾಕಪ್ನಿಂದ ಔಟ್ ಆಗಿದ್ದಾರೆ. ನಿರ್ದಿಷ್ಟ ಸಮಯಕ್ಕೆ ಟೀಮ್ ಇಂಡಿಯಾ ಸೇರೋದು ಅನುಮಾನವಾಗಿದ್ದು ಈ ಬಗ್ಗೆ ಬಿಸಿಸಿಐ ಮೂಲಗಳೆ ತಿಳಿಸಿವೆ.
ಆಸಿಸ್ ಸರಣಿಗೆ ರಾಹುಲ್ ಲಭ್ಯ!
ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಏಕದಿನ ಮಾದರಿಗೆ ಬೇಕಿರುವ ಫಿಟ್ನೆಸ್ ಸಾಧಿಸಿಲ್ಲ. ಶ್ರೀಲಂಕಾದಲ್ಲಿ ಬಿಸಿ ವಾತಾವರಣವಿರುವ ಕಾರಣ ಸಂಪೂರ್ಣ ಫಿಟ್ನೆಸ್ ಇಲ್ಲದೆ ಆಡೋದು ಕಷ್ಟ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಕೆ.ಎಲ್.ರಾಹುಲ್ ಲಭ್ಯರಾಗುತ್ತಾರೆ ಎಂದು ಬಿಸಿಸಿಐ ಮೆಡಿಕಲ್ ಟೀಮ್ ನಿರೀಕ್ಷಿಸುತ್ತಿದೆ.
– ಬಿಸಿಸಿಐ
ಪ್ರಿಪರೇಷನ್ ಇಲ್ದೇ ಏಕದಿನ ವಿಶ್ವಕಪ್ಗೆ ರಾಹುಲ್?
ಸದ್ಯ ಬಿಸಿಸಿಐ ಮೆಡಿಕಲ್ ಟೀಮ್ ಪ್ರಕಾರ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆಗೆ ರಾಹುಲ್ ಸಂಪೂರ್ಣ ಫಿಟ್ ಆಗ್ತಾರೆ. ಆದ್ರೆ, ವಿಶ್ವಕಪ್ ಆರಂಭಕ್ಕೂ ಮುನ್ನ ನಡೆಯೋ ಈ ಸರಣಿಯಲ್ಲಿ ಟೀಮ್ ಇಂಡಿಯಾ ಜಸ್ಟ್ ಮೂರೇ 3 ಏಕದಿನ ಪಂದ್ಯಗಳನ್ನಾಡಲಿದೆ. ಹೀಗಾಗಿ ಕೆ.ಎಲ್ ರಾಹುಲ್ ಪ್ರಿಪರೇಷನ್ ಇಲ್ದೇ ವಿಶ್ವಕಪ್ ಅಖಾಡಕ್ಕೆ ಇಳಿಯಬೇಕಾದ ಅನಿವಾರ್ಯತೆ ಎದುರಾಗಲಿದೆ.
ಏಕದಿನ ವಿಶ್ವಕಪ್ಗೂ ಶ್ರೇಯಸ್ ಡೌಟ್..?
ಒಂದೆಡೆ ಕೆ.ಎಲ್.ರಾಹುಲ್ ಏಕದಿನ ವಿಶ್ವಕಪ್ ವೇಳೆಗಾದ್ರೂ, ತಂಡಕ್ಕೆ ವಾಪಸ್ ಆಗುವ ನಿರೀಕ್ಷೆ ಇದೆ. ಇದು ಸಮಧಾನಕರ ಸಂಗತಿ ಎನಿಸಿದ್ರೂ, 4ನೇ ಕ್ರಮಾಂಕದ ಸ್ಟ್ರೆಂಥ್ ಆಗಿರೋ ಶ್ರೇಯಸ್ ಅಯ್ಯರ್, ಏಕದಿನ ವಿಶ್ವಕಪ್ಗೂ ಲಭ್ಯರಾಗೋದು ಅನುಮಾನವಾಗಿದೆ.
ಮ್ಯಾನೇಜ್ಮೆಂಟ್ ಕೈಯಲ್ಲಿ ಭವಿಷ್ಯ!
ಈಗಾಗಲೇ ಶ್ರೇಯಸ್ ಅಯ್ಯರ್ ಸ್ಕಿಲ್ ಪ್ರಾಕ್ಟಿಸ್ ಪ್ರಾರಂಭಿಸಿದ್ದಾರೆ. ಆದರೆ ಟೀಮ್ ಮ್ಯಾನೇಜ್ಮೆಂಟ್ 100% ಫಿಟ್ ಆಗಿರುವ ಅಯ್ಯರ್ರನ್ನ ಅಂಗಳಕ್ಕೆ ಇಳಿಸಲು ಬಯಸಿದರೆ, ವಿಶ್ವಕಪ್ ಟಿಕೆಟ್ ಕೈತಪ್ಪಲಿದೆ. ಕಮ್ಬ್ಯಾಕ್ಗೆ ಏಕದಿನ ಕ್ರಿಕೆಟ್ಗಿಂತ ಟಿ20 ಪಂದ್ಯ ಸುಲಭದ ವೇದಿಕೆಯಾಗಿದೆ.
ಬಿಸಿಸಿಐ
ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಇವರಿಬ್ಬರ ಫಿಟ್ನೆಸ್ ಟೀಮ್ ಇಂಡಿಯಾಗೆ ತಲೆನೋವಾಗಿ ಮಾರ್ಪಟ್ಟಿದೆ. ಟೀಮ್ ಇಂಡಿಯಾದ ವಿಶ್ವಕಪ್ ಸಿದ್ಧತೆಗೂ ಹೊಡೆತ ನೀಡ್ತಿದೆ. ಹೀಗಾಗಿಯೇ ಟೀಮ್ ಮ್ಯಾನೇಜ್ಮೆಂಟ್, ಸೂರ್ಯ ಕುಮಾರ್ ಹಾಗೂ ಸಂಜು ಸ್ಯಾಮ್ಸನ್ಗೆ ಬ್ಯಾಕ್ ಟು ಬ್ಯಾಕ್ ಚಾನ್ಸ್ ನೀಡ್ತಿದೆ. ಮೂಲಗಳ ಮಾಹಿತಿ ಪ್ರಕಾರ, ರಾಹುಲ್, ಶ್ರೇಯಸ್ ಹೊರ ಬಿದ್ರೆ ಸಂಜು, ಸೂರ್ಯ ರಿಪ್ಲೇಸ್ ಮಾಡೋದು ಕನ್ಫರ್ಮ್.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಈ ಆಟಗಾರರು ಇಲ್ಲದಿರುವುದೇ ಭಾರತಕ್ಕೆ ಬ್ಯಾಡ್ ನ್ಯೂಸ್
ಬಿಸಿಸಿಐ ಮೂಲಗಳಿಂದ ಮಾಹಿತಿ, ಫಿಟ್ ಆಗದ ಬ್ಯಾಟ್ಸ್ಮನ್ಸ್
ಮೆಗಾ ಟೂರ್ನಿಯ ಸಮರಕ್ಕಿಳಿಯೋ ಟೀಮ್ ಇಂಡಿಯಾ..!
ಅಬ್ಬಾ.. ಇನ್ನೇನು ಎಲ್ಲ ಸೆಟ್ ಆಯ್ತು ಎಂಬ ಸುದ್ದಿ ಟೀಮ್ ಇಂಡಿಯಾ ಕ್ಯಾಂಪ್ ಹಾಗೂ ಕ್ರಿಕೆಟ್ ಪ್ರೇಮಿಗಳ ಮುಖದಲ್ಲೂ ಮಂದಹಾಸ ಮೂಡಿಸಿತ್ತು. ಆದ್ರೆ ಸೀನ್ ಕಟ್ ಮಾಡಿದ್ರೆ, ಎಲ್ಲ ಟ್ವಿಸ್ಟ್ ಆಗಿದೆ.. ಟೀಮ್ ಇಂಡಿಯಾ ಲೆಕ್ಕಾಚಾರವೆಲ್ಲ ಉಲ್ಟಾ ಆಗಿದೆ. ಯಾಕಂದ್ರೆ, ಕಮ್ಬ್ಯಾಕ್ಗೆ ಸಜ್ಜಾಗಿದ್ದ ಕೆ.ಎಲ್.ರಾಹುಲ್ & ಶ್ರೇಯಸ್ ಅಯ್ಯರ್ ಮತ್ತೆ ಔಟ್ ಆಗಿದ್ದಾರೆ.
ಏಕದಿನ ವಿಶ್ವಕಪ್ಗೂ ಮುನ್ನ ಮತ್ತೆ ಟೀಮ್ ಇಂಡಿಯಾಗೆ ಟೆನ್ಶನ್ ಶುರುವಾಗಿದೆ. ಏಷ್ಯಾಕಪ್ ವೇಳೆಗೆ ಎಲ್ಲ ಅಡೆ-ತಡೆ ದಾಟಿ ಮೆಗಾ ಟೂರ್ನಿಯ ಸಮರಕ್ಕಿಳಿಯೋ ಲೆಕ್ಕಾಚಾರದಲ್ಲಿದ್ದ ಟೀಮ್ ಇಂಡಿಯಾದ ಕನಸೆಲ್ಲ ಚಿದ್ರಗೊಂಡಿದೆ.
ಏಷ್ಯಾಕಪ್ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಮುಂದಿನ ವಾರ ತಂಡವನ್ನ ಪ್ರಕಟಿಸಲಾಗುತ್ತೆ. ಅಕ್ಟೋಬರ್ನಿಂದ ಆರಂಭವಾಗೋ ವಿಶ್ವಕಪ್ ಅನ್ನೇ ದೃಷ್ಟಿಯಲ್ಲಿಟ್ಟುಕೊಂಡಿರೋ ಟೀಮ್ ಮ್ಯಾನೇಜ್ಮೆಂಟ್, ಸ್ಟ್ರಾಟರ್ಜಿ, ಗೇಮ್ ಪ್ಲಾನ್ ರೂಪಿಸ್ತಿದೆ. ಆದ್ರೆ, ಏಷ್ಯಾಕಪ್ಗೆ ತಂಡವನ್ನ ಪ್ರಕಟಿಸುವ ಹೊಸ್ತಿಲಿಲ್ಲೇ ಟೀಮ್ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದೆ.
ಏಷ್ಯಾಕಪ್ನಿಂದ ಶ್ರೇಯಸ್ & ರಾಹುಲ್ ಔಟ್.?
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಮುಗಿಸಿರುವ ಟೀಮ್ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದೆ. ಏಷ್ಯಾಕಪ್ ವೇಳೆಗೆ ಫಿಟ್ ಆಗ್ತಾರೆ ಎಂದು ನಿರೀಕ್ಷಿಸಲಾಗಿದ್ದ ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್ ಸಂಫೂರ್ಣ ಫಿಟ್ ಆಗಿಲ್ಲ. ಹೀಗಾಗಿ ಏಷ್ಯಾಕಪ್ನಿಂದ ಬಹುತೇಕ ಹೊರಬಿದ್ದಿದ್ದಾರೆ. ಈ ಸ್ಟಾರ್ ಆಟಗಾರರ ಅಲಭ್ಯತೆ ಟೀಮ್ ಇಂಡಿಯಾವನ್ನ ಚಿಂತೆಗೀಡು ಮಾಡಿದೆ.
ನಿರ್ದಿಷ್ಟ ಸಮಯಕ್ಕೆ ವಾಪಸ್ ಆಗೋದು ಡೌಟ್..!
ಕೆ.ಎಲ್.ರಾಹುಲ್ ಆ್ಯಂಡ್ ಶ್ರೇಯಸ್ ಅಯ್ಯರ್ ಏಕದಿನ ವಿಶ್ವಕಪ್ ಪ್ಲಾನ್ನಲ್ಲಿರುವ ಮೇನ್ ಪ್ಲೇಯರ್ಸ್.. ಹೀಗಾಗಿ ವಿಶ್ವಕಪ್ ವೇಳೆಗೆ ಸಂಪೂರ್ಣ ಫಿಟ್ ಆಗ್ತಾರೆ ಎಂದು ಟೀಮ್ ಮ್ಯಾನೇಜ್ಮೆಂಟ್ ನಿರೀಕ್ಷಿಸಿತ್ತು. ಈ ನಿಟ್ಟಿನಲ್ಲೇ ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್.ರಾಹುಲ್ ಭಾರೀ ಕಸರತ್ತನ್ನೇ ನಡೆಸಿದ್ರು. ಆದ್ರೀಗ ಸಂಫೂರ್ಣ ಫಿಟ್ನೆಸ್ ಸಾಧಿಸುವಲ್ಲಿ ವಿಫಲರಾಗಿರುವ ಇವರು, ಏಷ್ಯಾಕಪ್ನಿಂದ ಔಟ್ ಆಗಿದ್ದಾರೆ. ನಿರ್ದಿಷ್ಟ ಸಮಯಕ್ಕೆ ಟೀಮ್ ಇಂಡಿಯಾ ಸೇರೋದು ಅನುಮಾನವಾಗಿದ್ದು ಈ ಬಗ್ಗೆ ಬಿಸಿಸಿಐ ಮೂಲಗಳೆ ತಿಳಿಸಿವೆ.
ಆಸಿಸ್ ಸರಣಿಗೆ ರಾಹುಲ್ ಲಭ್ಯ!
ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಏಕದಿನ ಮಾದರಿಗೆ ಬೇಕಿರುವ ಫಿಟ್ನೆಸ್ ಸಾಧಿಸಿಲ್ಲ. ಶ್ರೀಲಂಕಾದಲ್ಲಿ ಬಿಸಿ ವಾತಾವರಣವಿರುವ ಕಾರಣ ಸಂಪೂರ್ಣ ಫಿಟ್ನೆಸ್ ಇಲ್ಲದೆ ಆಡೋದು ಕಷ್ಟ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಕೆ.ಎಲ್.ರಾಹುಲ್ ಲಭ್ಯರಾಗುತ್ತಾರೆ ಎಂದು ಬಿಸಿಸಿಐ ಮೆಡಿಕಲ್ ಟೀಮ್ ನಿರೀಕ್ಷಿಸುತ್ತಿದೆ.
– ಬಿಸಿಸಿಐ
ಪ್ರಿಪರೇಷನ್ ಇಲ್ದೇ ಏಕದಿನ ವಿಶ್ವಕಪ್ಗೆ ರಾಹುಲ್?
ಸದ್ಯ ಬಿಸಿಸಿಐ ಮೆಡಿಕಲ್ ಟೀಮ್ ಪ್ರಕಾರ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆಗೆ ರಾಹುಲ್ ಸಂಪೂರ್ಣ ಫಿಟ್ ಆಗ್ತಾರೆ. ಆದ್ರೆ, ವಿಶ್ವಕಪ್ ಆರಂಭಕ್ಕೂ ಮುನ್ನ ನಡೆಯೋ ಈ ಸರಣಿಯಲ್ಲಿ ಟೀಮ್ ಇಂಡಿಯಾ ಜಸ್ಟ್ ಮೂರೇ 3 ಏಕದಿನ ಪಂದ್ಯಗಳನ್ನಾಡಲಿದೆ. ಹೀಗಾಗಿ ಕೆ.ಎಲ್ ರಾಹುಲ್ ಪ್ರಿಪರೇಷನ್ ಇಲ್ದೇ ವಿಶ್ವಕಪ್ ಅಖಾಡಕ್ಕೆ ಇಳಿಯಬೇಕಾದ ಅನಿವಾರ್ಯತೆ ಎದುರಾಗಲಿದೆ.
ಏಕದಿನ ವಿಶ್ವಕಪ್ಗೂ ಶ್ರೇಯಸ್ ಡೌಟ್..?
ಒಂದೆಡೆ ಕೆ.ಎಲ್.ರಾಹುಲ್ ಏಕದಿನ ವಿಶ್ವಕಪ್ ವೇಳೆಗಾದ್ರೂ, ತಂಡಕ್ಕೆ ವಾಪಸ್ ಆಗುವ ನಿರೀಕ್ಷೆ ಇದೆ. ಇದು ಸಮಧಾನಕರ ಸಂಗತಿ ಎನಿಸಿದ್ರೂ, 4ನೇ ಕ್ರಮಾಂಕದ ಸ್ಟ್ರೆಂಥ್ ಆಗಿರೋ ಶ್ರೇಯಸ್ ಅಯ್ಯರ್, ಏಕದಿನ ವಿಶ್ವಕಪ್ಗೂ ಲಭ್ಯರಾಗೋದು ಅನುಮಾನವಾಗಿದೆ.
ಮ್ಯಾನೇಜ್ಮೆಂಟ್ ಕೈಯಲ್ಲಿ ಭವಿಷ್ಯ!
ಈಗಾಗಲೇ ಶ್ರೇಯಸ್ ಅಯ್ಯರ್ ಸ್ಕಿಲ್ ಪ್ರಾಕ್ಟಿಸ್ ಪ್ರಾರಂಭಿಸಿದ್ದಾರೆ. ಆದರೆ ಟೀಮ್ ಮ್ಯಾನೇಜ್ಮೆಂಟ್ 100% ಫಿಟ್ ಆಗಿರುವ ಅಯ್ಯರ್ರನ್ನ ಅಂಗಳಕ್ಕೆ ಇಳಿಸಲು ಬಯಸಿದರೆ, ವಿಶ್ವಕಪ್ ಟಿಕೆಟ್ ಕೈತಪ್ಪಲಿದೆ. ಕಮ್ಬ್ಯಾಕ್ಗೆ ಏಕದಿನ ಕ್ರಿಕೆಟ್ಗಿಂತ ಟಿ20 ಪಂದ್ಯ ಸುಲಭದ ವೇದಿಕೆಯಾಗಿದೆ.
ಬಿಸಿಸಿಐ
ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಇವರಿಬ್ಬರ ಫಿಟ್ನೆಸ್ ಟೀಮ್ ಇಂಡಿಯಾಗೆ ತಲೆನೋವಾಗಿ ಮಾರ್ಪಟ್ಟಿದೆ. ಟೀಮ್ ಇಂಡಿಯಾದ ವಿಶ್ವಕಪ್ ಸಿದ್ಧತೆಗೂ ಹೊಡೆತ ನೀಡ್ತಿದೆ. ಹೀಗಾಗಿಯೇ ಟೀಮ್ ಮ್ಯಾನೇಜ್ಮೆಂಟ್, ಸೂರ್ಯ ಕುಮಾರ್ ಹಾಗೂ ಸಂಜು ಸ್ಯಾಮ್ಸನ್ಗೆ ಬ್ಯಾಕ್ ಟು ಬ್ಯಾಕ್ ಚಾನ್ಸ್ ನೀಡ್ತಿದೆ. ಮೂಲಗಳ ಮಾಹಿತಿ ಪ್ರಕಾರ, ರಾಹುಲ್, ಶ್ರೇಯಸ್ ಹೊರ ಬಿದ್ರೆ ಸಂಜು, ಸೂರ್ಯ ರಿಪ್ಲೇಸ್ ಮಾಡೋದು ಕನ್ಫರ್ಮ್.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ