ಶಿಲ್ಪಿ ಅರುಣ್ ಯೋಗಿರಾಜ್ ಮೇಲಿದೆ ರಾಮಭಕ್ತರ ಕಣ್ಣು
ರಾಮಲಲ್ಲಾ ಮೂರ್ತಿ ಮೇಲೆ ಶಿಲ್ಪಿ ಅರುಣ್ ಯೋಗಿರಾಜ್ ಕಣ್ಣು
ಕೊಂಚ ಏರುಪೇರಾದರೂ ನಡೆಯುತ್ತಿದೆ ದೊಡ್ಡ ಅನಾಹುತ
ಮೈಸೂರು: ನಾಳೆ ರಾಮಲಲ್ಲಾನ ಪ್ರತಿಷ್ಠಾಪನೆ ನಡೆಯಲಿಕ್ಕಿದೆ. ಆದರೆ ಅದಕ್ಕೂ ಮುನ್ನ ರಾಮನ ಮೂರ್ತಿಯ ಕುರಿತಾಗಿ ಅಚ್ಚರಿಯ ಸಂಗತಿಯೊಂದು ಹೊರಬಿದ್ದಿದೆ. ಅದೇನು ಗೊತ್ತಾ?.
ಬಾಲರಾಮ ಮೂರ್ತಿಗೆ ನಾಳೆ ದೃಷ್ಟಿ ಕೊಡಲಿಕ್ಕಿದೆ. ಆದರೆ ಈ ದೃಷ್ಟಿ ಕೊಡುವಾಗ ತುಂಬಾ ಜಾಗರೂಕರಾಗಿ ಕೆಲಸ ಮಾಡಬೇಕು ಎಂಬ ನಂಬಿಕೆಯಿದೆ. ಒಂದು ವೇಳೆ ದೃಷ್ಟಿ ಕೆಳಕ್ಕೆ ಇಳಿದರೆ ಶಿಲ್ಪಿ ಹಾಗೂ ಅವರ ಕುಟುಂಬಕ್ಕೆ ಅಪಾಯವಿದೆ. ರಾಮಲಲ್ಲಾ ಮೂರ್ತಿಯ ಕಣ್ಣು ಮೇಲೆ ಹೋದರೆ ದೇಶಕ್ಕೆ ಕೆಡುಕಾಗಲಿದೆ ಎಂದು ಶಿಲ್ಪಿ ಅರುಣ್ ಯೋಗಿರಾಜ್ ಮಾವ ಪ್ರೊ.ಲಕ್ಷ್ಮಿ ನಾರಾಯಣ್ ಹೇಳಿದ್ದಾರೆ.
ಮೂರ್ತಿಯ ಕಣ್ಣು ನೇರವಾಗಿಯೇ ಇರಬೇಕು. ಇದಲ್ಲದೆ, ಬಾಲರಾಮನ ಫೋಟೋ ವೈರಲ್ ಆಗಿದ್ದು ಕುಟುಂಬದವರಿಗೆ ಆತಂಕವಿದೆ. ಫೋಟೋ ಬಿಡುಗಡೆ ಕುರಿತು ಆತಂಕ ಮಿಶ್ರಿತ ಭಯ ಇದೆ. ಆ ಫೋಟೋವನ್ನ ಪ್ರಧಾನಿ ಮೋದಿ ಅವರು ಬಿಡುಗಡೆ ಮಾಡಬೇಕಿತ್ತು. ಅದಕ್ಕೆ ಮೊದಲೇ ಬಿಡುಗಡೆ ಆಗಿದ್ದು ಬೇಸರ ಅಂತಿದ್ದಾರೆ.
ಇನ್ನು ಬಾಲರಾಮನ ಫೋಟೋ ಅದ್ಭುತವಾಗಿ ಮೂಡಿಬಂದಿದೆ. ಮೂರ್ತಿಯ ಕಣ್ಣು ಈವರೆಗೆ ತೆರೆದಿಲ್ಲ. ಇಡೀ ಜಗತ್ತು ಆ ಫೋಟೋ ಕಂಡು ಧನ್ಯರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಶಿಲ್ಪಿ ಅರುಣ್ ಯೋಗಿರಾಜ್ ಮೇಲಿದೆ ರಾಮಭಕ್ತರ ಕಣ್ಣು
ರಾಮಲಲ್ಲಾ ಮೂರ್ತಿ ಮೇಲೆ ಶಿಲ್ಪಿ ಅರುಣ್ ಯೋಗಿರಾಜ್ ಕಣ್ಣು
ಕೊಂಚ ಏರುಪೇರಾದರೂ ನಡೆಯುತ್ತಿದೆ ದೊಡ್ಡ ಅನಾಹುತ
ಮೈಸೂರು: ನಾಳೆ ರಾಮಲಲ್ಲಾನ ಪ್ರತಿಷ್ಠಾಪನೆ ನಡೆಯಲಿಕ್ಕಿದೆ. ಆದರೆ ಅದಕ್ಕೂ ಮುನ್ನ ರಾಮನ ಮೂರ್ತಿಯ ಕುರಿತಾಗಿ ಅಚ್ಚರಿಯ ಸಂಗತಿಯೊಂದು ಹೊರಬಿದ್ದಿದೆ. ಅದೇನು ಗೊತ್ತಾ?.
ಬಾಲರಾಮ ಮೂರ್ತಿಗೆ ನಾಳೆ ದೃಷ್ಟಿ ಕೊಡಲಿಕ್ಕಿದೆ. ಆದರೆ ಈ ದೃಷ್ಟಿ ಕೊಡುವಾಗ ತುಂಬಾ ಜಾಗರೂಕರಾಗಿ ಕೆಲಸ ಮಾಡಬೇಕು ಎಂಬ ನಂಬಿಕೆಯಿದೆ. ಒಂದು ವೇಳೆ ದೃಷ್ಟಿ ಕೆಳಕ್ಕೆ ಇಳಿದರೆ ಶಿಲ್ಪಿ ಹಾಗೂ ಅವರ ಕುಟುಂಬಕ್ಕೆ ಅಪಾಯವಿದೆ. ರಾಮಲಲ್ಲಾ ಮೂರ್ತಿಯ ಕಣ್ಣು ಮೇಲೆ ಹೋದರೆ ದೇಶಕ್ಕೆ ಕೆಡುಕಾಗಲಿದೆ ಎಂದು ಶಿಲ್ಪಿ ಅರುಣ್ ಯೋಗಿರಾಜ್ ಮಾವ ಪ್ರೊ.ಲಕ್ಷ್ಮಿ ನಾರಾಯಣ್ ಹೇಳಿದ್ದಾರೆ.
ಮೂರ್ತಿಯ ಕಣ್ಣು ನೇರವಾಗಿಯೇ ಇರಬೇಕು. ಇದಲ್ಲದೆ, ಬಾಲರಾಮನ ಫೋಟೋ ವೈರಲ್ ಆಗಿದ್ದು ಕುಟುಂಬದವರಿಗೆ ಆತಂಕವಿದೆ. ಫೋಟೋ ಬಿಡುಗಡೆ ಕುರಿತು ಆತಂಕ ಮಿಶ್ರಿತ ಭಯ ಇದೆ. ಆ ಫೋಟೋವನ್ನ ಪ್ರಧಾನಿ ಮೋದಿ ಅವರು ಬಿಡುಗಡೆ ಮಾಡಬೇಕಿತ್ತು. ಅದಕ್ಕೆ ಮೊದಲೇ ಬಿಡುಗಡೆ ಆಗಿದ್ದು ಬೇಸರ ಅಂತಿದ್ದಾರೆ.
ಇನ್ನು ಬಾಲರಾಮನ ಫೋಟೋ ಅದ್ಭುತವಾಗಿ ಮೂಡಿಬಂದಿದೆ. ಮೂರ್ತಿಯ ಕಣ್ಣು ಈವರೆಗೆ ತೆರೆದಿಲ್ಲ. ಇಡೀ ಜಗತ್ತು ಆ ಫೋಟೋ ಕಂಡು ಧನ್ಯರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ