ಪುಷ್ಪ 2 ಮಾದರಿಯಲ್ಲಿ ಮರಳು ದಂಧೆ.. ಸಿನಿಮೀಯ ರೀತಿಯಲ್ಲಿ ಪೊಲೀಸರು ರೇಡ್

author-image
Bheemappa
Updated On
ಪುಷ್ಪ 2 ಮಾದರಿಯಲ್ಲಿ ಮರಳು ದಂಧೆ.. ಸಿನಿಮೀಯ ರೀತಿಯಲ್ಲಿ ಪೊಲೀಸರು ರೇಡ್
Advertisment
  • ನದಿಯಲ್ಲಿ ಎಗ್ಗಿಲ್ಲದಂತೆ ನಡೆಯುತ್ತಿದ್ದ ಭಾರೀ ಮರಳು ದಂಧೆ
  • ಖಚಿತ ಮಾಹಿತಿಯಿಂದ ದಾಳಿ ಮಾಡಿದ CEN ಪೊಲೀಸರು
  • ಘಟನೆ ಹಿನ್ನೆಲೆ ಚಾಲಕ ಸೇರಿ ಇಬ್ಬರ ಮೇಲೆ ಕೇಸ್ ದಾಖಲು

ಚಿಕ್ಕಬಳ್ಳಾಪುರ: ಉತ್ತರ ಪಿನಾಕಿನಿ ನದಿಯಲ್ಲಿ ನಡೆಯುತ್ತಿದ್ದ ಮರಳು ಅಡ್ಡೆಯ ಮೇಲೆ ಸಿನಿಮೀಯ ರೀತಿಯಲ್ಲಿ ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ (ಸಿಇಎನ್) ಪೊಲೀಸರು ರೇಡ್ ಮಾಡಿದ್ದಾರೆ. ಮಂಚೇನಹಳ್ಳಿ ತಾಲೂಕಿನ ಬಿಸಲಹಳ್ಳಿ ಗ್ರಾಮದ ಬಳಿ ಈ ದಾಳಿಯನ್ನು ನಡೆಸಲಾಗಿದೆ.

ಸದ್ಯ ರಿಲೀಸ್ ಆಗಿರುವ ಪುಷ್ಪ 2 ಮಾದರಿಯಲ್ಲೇ ಉತ್ತರ ಪಿನಾಕಿನಿ ನದಿಯಲ್ಲಿ ಮರಳು ದಂಧೆಯನ್ನು ನಡೆಸುತ್ತಿದ್ದರು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿದ್ದ ಸಿಇಎನ್ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ 55 ಲಕ್ಷ ರೂಪಾಯಿಯ ಒಂದು ಟಿಪ್ಪರ್ ಲಾರಿ, ಜೆಸಿಬಿ ಹಾಗೂ ರಾಶಿ ರಾಶಿ ಮರಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಿಸಿದ KPSC.. ಈ 3 ಪರೀಕ್ಷೆ ಬರೆದಿದ್ರೆ ನಿಮ್ಮ ಹೆಸರು ಇದೆಯೇ ಅಂತ ಚೆಕ್ ಮಾಡಿ

publive-image

ಚನ್ನಬೈರನಹಳ್ಳಿ- ಅಲಕಾಪುರ ಮಾರ್ಗ ಮಧ್ಯೆ ನದಿ ಒಡಲಿನಲ್ಲಿ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿತ್ತು. ಇದರಲ್ಲಿ ಪ್ರಭಾವಿ ವ್ಯಕ್ತಿಗಳು ಹಾಗೂ ಪೊಲೀಸರು ಭಾಗಿ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಚಿಕ್ಕಬಳ್ಳಾಪುರದ ಸಿಇಎನ್ ಪೊಲೀಸ್ ಠಾಣೆಯ ಇನ್​​ಸ್ಪೆಕ್ಟರ್ ಶರತ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಮಂಚೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ತಿಮ್ಮಾರೆಡ್ಡಿ ಹಾಗೂ ಚಾಲಕ ರವಿ ಕುಮಾರ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment