newsfirstkannada.com

34 ಗಾಯ, 5 ಗಂಟೆ ಡಿ ಗ್ಯಾಂಗ್‌ ಟಾರ್ಚರ್‌.. ಪಟ್ಟಣಗೆರೆ ಶೆಡ್‌ ನರಕದ 10 ಭಯಾನಕ ಸತ್ಯಗಳು ಬಹಿರಂಗ

Share :

Published July 20, 2024 at 11:27pm

    ಬೆಚ್ಚಿ ಬೀಳಿಸಿದ ರೇಣುಕಾಸ್ವಾಮಿ ಪೋಸ್ಟ್​ ಮಾರ್ಟಮ್​ ರಿಪೋರ್ಟ್

    ಕಾಮಾಕ್ಷಿಪಾಳ್ಯ ಪೊಲೀಸರಿಗೂ ವರದಿಯ ಅಂಶಗಳ ಕಂಡು ಶಾಕ್​

    ಮರಣೋತ್ತರ ಪರೀಕ್ಷೆಯ 10 ಭೀಕರ ಸಂಗತಿ ಹೇಳ್ತಿರೋದೇನು?

ರೇಣುಕಾಸ್ವಾಮಿಯನ್ನು ಕೊಂದಿರೋ ಆರೋಪ ಹೊತ್ತಿರೋ ಡಿ ಗ್ಯಾಂಗ್​ ಆತನಿಗೆ ಆವತ್ತು ರೌರವ ನರಕವನ್ನೇ ತೋರಿಸಿಬಿಟ್ಟಿದ್ದಾರಂತೆ. ರೇಣುಕಾಸ್ವಾಮಿ ಉಸಿರು ನಿಲ್ಲುವ ತನಕ ನೋವುಣ್ಣುತ್ತಲೇ ನರಳಿ ನರಳಿ ಸತ್ತಿದ್ದಾನಂತೆ. ಪಟ್ಟಣಗೆರೆಯ ಶೆಡ್​​ ರೇಣುಕಾಸ್ವಾಮಿ ಪಾಲಿಗೆ ಅಕ್ಷರಶಃ ನರಕವೇ ಆಗಿತ್ತಂತೆ. ಸದ್ಯ, ಪೊಲೀಸರ ಕೈ ಸೇರಿರೋ ಮರಣೋತ್ತರ ಪರೀಕ್ಷೆಯ ವರದಿ ಬೆಚ್ಚಿಬೀಳಿಸುತ್ತಿವೆ. ರೇಣುಕಾಸ್ವಾಮಿಯ ಇಡೀ ದೇಹವನ್ನು ಅಣುವಣುವಾಗಿ ಡಿ ಗ್ಯಾಂಗ್​ ಇಂಚಿಂಚು ಹಿಂಸಿಸಿದ್ದಕ್ಕೆ ಸಾಕ್ಷಿ ನುಡಿಯುತ್ತಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್‌.. ಶೆಡ್‌ನಲ್ಲಿ ಆರೋಪಿಗಳು ಶವ ಎಳೆದೊಯ್ಯೋ ದೃಶ್ಯ ಸೆರೆ!

ಬೆಚ್ಚಿ ಬೀಳಿಸಿದ ರೇಣುಕಾಸ್ವಾಮಿ ಪೋಸ್ಟ್​ ಮಾರ್ಟಮ್​ ರಿಪೋರ್ಟ್!​
ಕಾಮಾಕ್ಷಿಪಾಳ್ಯ ಪೊಲೀಸರಿಗೂ ವರದಿಯ ಅಂಶಗಳ ಕಂಡು ಶಾಕ್​!
ನನ್ ಸರ್ವೀಸ್​ನಲ್ಲಿ ಇಂಥಾ ಎಷ್ಟ್​ ಕೇಸ್​ ನೋಡಿಲ್ಲ.. ಹೀಗಂತ ನಾರ್ಮಲಿ ಪೊಲೀಸರು ಒಂದು ಡೈಲಾಗ್​ ಹೊಡೀತಾನೇ ಇರ್ತಾರೆ. ಆದರೆ, ರೇಣುಕಾಸ್ವಾಮಿಯ ಪೋಸ್ಟ್​ ಮಾರ್ಟಮ್​ ರಿಪೋರ್ಟ್​, ಕಾಮಾಕ್ಷಿಪಾಳ್ಯ ಪೊಲೀಸರನ್ನೂ ಬೆಚ್ಚಿ ಬೀಳಿಸಿದೆ ಅಂದ್ರೆ ನಂಬಲೇಬೇಕು. ಮೊನ್ನೆ ಮೊನ್ನೆಯಷ್ಟೇ ರೇಣುಕಾಸ್ವಾಮಿಯ ಮರಣೋತ್ತರ ಪರೀಕ್ಷೆಯ ವರದಿ ಹಿಂದೆ ಸಾಕಷ್ಟು ಅನುಮಾನಗಳು ಮೂಡಿದ್ದವು. ಯಾಕಂದ್ರೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದ್ದ ಪರೀಕ್ಷೆಯನ್ನ ಪವಿತ್ರಾ ಗೌಡಳ ಸ್ನೇಹಿತೆಯ ಪತಿ ಮಾಡಿದ್ದಾರೆ ಅನ್ನೋ ಸಂಗತಿ ಕೇಳಿ ಬಂದಿತ್ತು. ಇದೀಗ ಬೆಳಕಿಗೆ ಬಂದಿರೋ ಮತ್ತೊಂದು ವಿಷ್ಯ ಅಂದ್ರೆ ಪೋಸ್ಟ್​ ಮಾರ್ಟ್ಂ ನಡೆದ ದಿನ ಪವಿತ್ರಾ ಗೌಡ ಸ್ನೇಹಿತೆಯ ಪತಿ ರಜೆಯಲ್ಲಿದ್ರಂತೆ. ಅವರು ಪರೀಕ್ಷೆ ನಡೆಸಿಲ್ಲ. ಆದರೆ, ಡಿ ಗ್ಯಾಂಗ್​ ಜೂನ್ 8ರ ರಾತ್ರಿ ಪಟ್ಟಣಗೆರೆ ಶೆಡ್​​ನಲ್ಲಿ ನಡೆಸಿದ್ದು ಮಾತ್ರ. ಘೋರ.. ರಣಭೀಕರ.. ಪೈಶಾಚಿಕ.. ವಿಕೃತ.. ಕುಕೃತ್ಯ ಅನ್ನೋದಕ್ಕೆ ಪೊಲೀಸರ ಬಳಿ ಸಾಕ್ಷಿಗಳಿವೆ..ಜೊತೆಗೆ ಈಗ ಪೋಸ್ಟ್​ ಮಾರ್ಟಮ್​ ವರದಿ ಕೈ ಸೇರಿದೆ.

ರೇಣುಕಾಸ್ವಾಮಿ ಚೀರುತ್ತಲೇ 300 ನಿಮಿಷ ನರಳಿ ನರಕ ಕಂಡ್ರಾ?
ಮರಣೋತ್ತರ ಪರೀಕ್ಷೆಯ 10 ಭೀಕರ ಸಂಗತಿ ಹೇಳ್ತಿರೋದೇನು?
ಡಿ ಗ್ಯಾಂಗ್​ನಿಂದ 5 ಗಂಟೆಗಳ ಟಾರ್ಚರ್​.. 3 ಸೆಕೆಂಡ್​ ವಿಡಿಯೋ..!
ಕೇಳೋ ಕಿವಿಗಳೂ ಇದನ್ನ ಸಹಿಸೋಕಾಗಲ್ಲ. ಇನ್ನು, ನೋಡೋ ಕಣ್ಣುಗಳ ವಿಚಾರಕ್ಕೆ ಬರೋದೇ ಬೇಡ.. ಯಾಕಂದ್ರೆ, ಪಟ್ಟಣಗೆರೆ ಶೆಡ್​​ನಲ್ಲಿ ಡಿ ಗ್ಯಾಂಗ್​ ರೇಣುಕಾಸ್ವಾಮಿಗೆ ಎಂಥಾ ನರಕ ತೋರಿಸಿದೆ ಅಂದ್ರೆ ಮರಣೋತ್ತರ ಪರೀಕ್ಷೆಯಲ್ಲಿ ರಿವೀಲ್ ಆಗ್ತಿರೋ ಒಂದೊಂದೇ ಸಂಗತಿಯನ್ನು ಹೇಳೋದಕ್ಕೂ ಹಿಂಸೆಯಾಗುತ್ತದೆ. ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ದರ್ಶನ್​ ಬಳಿ ಕೆಲಸಕ್ಕಿದ್ದ ಐವರು ಕೊಲೆ ಪ್ರಕರಣದಲ್ಲಿ ಬಹುಮುಖ್ಯ ಸಾಕ್ಷಿ ನುಡಿದಿದ್ದಾರೆ. ನಂತರ ಇವರೆಲ್ಲಾ ಉಲ್ಟಾ ಹೊಡೀಬಾರದು ಅನ್ನೋ ಕಾರಣಕ್ಕೆ ಪೊಲೀಸರು ಐದೂ ಜನರಿಂದ ಸಿಆರ್​ಪಿಸಿ 164ರ ಅಡಿಯಲ್ಲಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಇದಕ್ಕಿಂತ್ಲೂ ಇಂಪಾರ್ಟೆಂಟ್​ ಅನಿಸೋ ಸಾಕ್ಷಿಯ ಜಾಡು ಹಿಡಿದು ಹೊರಟ್ಟಿದ್ದಾರೆ ಪೊಲೀಸರು. ಅದುವೇ 3 ಸೆಕೆಂಡ್​ ವಿಡಿಯೋ. ಅದೇ ವಿಡಿಯೋದಲ್ಲೇ ದರ್ಶನ್​​​ ಕ್ರೌರ್ಯ ಕೂಡ ದಾಖಲಾಗಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಆ 3 ಸೆಕೆಂಡ್​ ವಿಡಿಯೋ ಮರ್ಮ ಏನು ಗೊತ್ತಾ?

ಮರಣೋತ್ತರ ಪರೀಕ್ಷೆಯ ಸತ್ಯ 1
ಸತತ 5 ಗಂಟೆಗಳ ಕಾಲ ಚಿತ್ರಹಿಂಸೆ!
ಸರಿ ಸುಮಾರು 5 ಗಂಟೆ ಕಾಲ.. ಅಂದ್ರೆ 300 ನಿಮಿಷಗಳ ಕಾಲ ರೇಣುಕಾಸ್ವಾಮಿ ಚೀರುತ್ತಾ, ಒದ್ದಾಡುತ್ತಾ, ಏದುಸಿರು ಬಿಡುತ್ತಾ.. ಉಸಿರಾಡೋದಕ್ಕೂ ಪರದಾಡುತ್ತಾ.. ಎದ್ದು ನಿಲ್ಲೋದಕ್ಕೂ ಆಗದಷ್ಟು ಚಿತ್ರಹಿಂಸೆಯ ಮಧ್ಯೆ ಅಕ್ಷರಶಃ ನರಕವನ್ನೇ ಕಂಡಿದ್ದಾನೆ. ಹೀಗಂತ ಹೇಳಿರೋ ಪೋಸ್ಟ್​ ಮಾರ್ಟಮ್​ ರಿಪೋರ್ಟ್​ ರೇಣುಕಾಸ್ವಾಮಿಗೆ ಅಣು ಅಣುವಾಗಿ ಹಿಂಸೆ ಮಾಡಿ ಕೊಂದಿರೋದನ್ನ ದೃಢಪಡಿಸಿದೆ. ಇದಕ್ಕೆ ಪೂರಕ ಎನ್ನುವಂತೆ ರೇಣುಕಾಸ್ವಾಮಿ ಮೃತ ದೇಹದ ಮೇಲೂ ಕ್ರೌರ್ಯದ ಶಾಸನಗಳಿವೆ. ಸುಮನಹಳ್ಳಿಯ ಬ್ರಿಡ್ಜ್​ ಬಳಿ ಸಿಕ್ಕಾಗಿನ ರೇಣುಕಾಸ್ವಾಮಿಯ ಮೃತ ದೇಹವನ್ನ ಯಾರೇ ನೋಡಿದ್ರೂ, ಇದೊಂದು ಮೃಗೀಯ ಕ್ರೌರ್ಯ ಅಂತಲೇ ಹೇಳುತ್ತಿದ್ದರು.

ಇದನ್ನೂ ಓದಿ: 40 ದಿನಕ್ಕೆ 31 ಹತ್ಯೆ, 300 ಜನರ ಮೇಲೆ ಹಲ್ಲೆ.. ಆಂಧ್ರದಲ್ಲಿ ಮತ್ತೆ ರಕ್ತ ರಾಜಕೀಯ? ಸ್ಫೋಟಕ ಮಾಹಿತಿ ಇಲ್ಲಿದೆ

ಮರಣೋತ್ತರ ಪರೀಕ್ಷೆಯ ಸತ್ಯ 2
ದೇಹದ 34 ಕಡೆ ಭೀಕರ ಗಾಯಗಳು!
ರೇಣುಕಾಸ್ವಾಮಿ ಅದೆಷ್ಟರ ಮಟ್ಟಿಗೆ ಗೋಳಾಡಿದ್ದಾನೋ? ಗೋಗರೆದಿದ್ದಾನೋ? ಬೇಡಿಕೊಂಡಿದ್ದಾನೋ? ರಕ್ತ ಕಣ್ಣೀರು ಸುರಿಸಿದ್ದಾನೋ? ಇಷ್ಟೆಲ್ಲಾ ಪ್ರಶ್ನೆಗಳು ಉದ್ಭವಿಸೋದಕ್ಕೆ ಕಾರಣವಾಗಿರೋದು ಮರಣೋತ್ತರ ಪರೀಕ್ಷೆಯಲ್ಲಿರೋ 2ನೇ ಭೀಕರ ಸತ್ಯ.. ಆತನ ಮೃತ ದೇಹದ ಮೇಲಿದ್ದ 34 ಭೀಕರ ಗಾಯದ ಗುರುತುಗಳು ಬೆಚ್ಚಿಬೀಳಿಸೋ ಸತ್ಯವನ್ನೇ ಹೇಳುತ್ತಿವೆಯಂತೆ. ಇದಕ್ಕಿಂತಲೂ ಅಮಾನವೀಯ ಸಂಗತಿ ಅಂದ್ರೆ, ರೇಣುಕಾಸ್ವಾಮಿ ದೇಹದ ಮೇಲೆ ಕೆಲವು ಸಿಗರೇಟಿನಿಂದ ಸುಟ್ಟ ಗುರುತುಗಳೂ ಸಹ ಇವೆ ಎನ್ನಲಾಗುತ್ತಿದೆ.. ಬೆಲ್ಟ್​.. ಮರದ ತುಂಡು.. ಕಬ್ಬಿಣದ ಆಯುಧಗಳನ್ನೂ ಬಳಸಿ ಆತನ ಮೇಲೆ ದಾಳಿ ಮಾಡಿದ್ರು ಅನ್ನೋದು ಬಯಲಾಗಿದೆ. ರೇಣುಕಾಸ್ವಾಮಿ ಡಿ ಗ್ಯಾಂಗ್​ ಕೈಗೆ ಸಿಕ್ಕಿ ಸತತ 5 ಗಂಟೆ ಕಾಲ ನರಕ ಕಂಡಿದ್ದ ಅನ್ನೋದು ಎಷ್ಟು ಮುಖ್ಯವೋ? ಮೃತ ದೇಹದ ಮೇಲಿದ್ದ 34 ಗಾಯಗಳೂ ಸಹ ಜೀವ ಇದ್ದಾಗಲೇ ಮಾಡಿದ ಹಲ್ಲೆಗಳಾಗಿದ್ದವು. ಅಂದರೆ, ಡಿ ಗ್ಯಾಂಗ್​ ಕೀಚಕ ಕ್ರೌರ್ಯ ರೇಣುಕಾಸ್ವಾಮಿಯ ಕೊನೆಯ ಉಸಿರು ಇರೋ ತನಕವೂ ಸಾಂಗವಾಗಿ ನಡೆದಿತ್ತು. ಯಾವಾಗ ರೇಣುಕಾಸ್ವಾಮಿ ಸತ್ತಿದ್ದಾನೆ ಅನ್ನೋದು ಗೊತ್ತಾಯ್ತೋ? ಆ ಕ್ಷಣವೇ ಹೊಡೆಯೋದನ್ನೂ ನಿಲ್ಲಿಸಿರಬೇಕು.

ಮರಣೋತ್ತರ ಪರೀಕ್ಷೆಯ ಸತ್ಯ 3
ಶ್ವಾಸಕೋಶಕ್ಕೆ ಚುಚ್ಚಿಕೊಂಡಿದೆ ಮುರಿದ ಪಕ್ಕೆಲುಬು 
ಐದು ಗಂಟೆಗಳ ಕಾಲ ರೇಣುಕಾಸ್ವಾಮಿ ಮೇಲೆ ನಡೆಸಿದ ದಾಳಿ ಇದೆಯಲ್ಲ.. ಅದು ಇನ್ಯಾವ ಶತ್ರುಗೂ ಬೇಡ.. ಯಾಕಂದ್ರೆ, ಮರಣೋತ್ತರ ಪರೀಕ್ಷೆಯಲ್ಲಿ ರಿವೀಲ್ ಆಗ್ತಿರೋ ಸಂಗತಿಗಳೇ ಕಾಡು ಮೃಗಗಳನ್ನೂ ಮೀರಿಸೋ ಕ್ರೌರ್ಯವೆಂದೇ ಹೇಳುತ್ತಿವೆ.. ಪಟ್ಟಣಗೆರೆ ಶೆಡ್​​ನಲ್ಲಿ ಅವತ್ತು ಸೇರಿದ್ದ 13ಕ್ಕೂ ಅಧಿಕ ರಕ್ಕಸರು ರೇಣುಕಾಸ್ವಾಮಿ ಎದೆ ಹಾಗೂ ಬೆನ್ನಿಗೆ ವಿಕೃತವಾಗಿ ಹೊಡೆದಿದ್ದಾರೆ.. ಮನಬಂದಂತೆ ಥಳಿಸಿದ್ದಾರೆ.. ಕಾಲಲ್ಲಿ ಒದ್ದಿದ್ದಾರೆ.. ಡಿ ಗ್ಯಾಂಗ್​ ರಣ ರಕ್ಕಸ ಕ್ರೌರ್ಯದ ಕೇಕೆಯ ಎದುರು ಮುದುಡಿಕೊಂಡಿದ್ದ ಪರಿವಾಳದಂಥಾ ಸಣಕಲು ದೇಹದ ರೇಣುಕಾಸ್ವಾಮಿ ಅಕ್ಷರಶಃ ತರಗೆಲೆಯಂತೆ ಥರಗುಟ್ಟಿದೆ.. ಡಿ ಗ್ಯಾಂಗ್​ ಕೊಟ್ಟ ಹೊಡೆತಕ್ಕೆ ರೇಣುಕಾ ಸ್ವಾಮಿಯ ಎದೆಗೆ ಜೋರಾಗಿ ಪೆಟ್ಟು ಬಿದ್ದಿದೆ..ಬೆನ್ನಿನ ಮೇಲಂತೂ ಬಾಸುಂಡೆಗಳ ಸಾಕ್ಷಿಗಳೇ ಎದ್ದು ಕಾಣುತ್ತಿವೆ.. ಇನ್ನು ಈ ರಕ್ಕಸರು ಒದ್ದ ಒದೆತಕ್ಕೆ ಪಕ್ಕೆಲುಬಿನ ಮೂಳೆ ಮುರಿದು ಅದು ಶ್ವಾಸಕೋಶಕ್ಕೆ ಚುಚ್ಚಿಕೊಂಡಿದೆ ಅಂತಾ ಮರಣೋತ್ತರ ವರದಿಯಿಂದ ತಿಳಿದು ಬಂದಿದೆ.

ಮರಣೋತ್ತರ ಪರೀಕ್ಷೆಯ ಸತ್ಯ 4
ಮರ್ಮಾಂಗಕ್ಕೆ ಒದೆತ, ಎಲೆಕ್ಟ್ರಿಕ್ ಶಾಕ್ ನರಳಾಟ
ರೇಣುಕಾಸ್ವಾಮಿ ಬದುಕಿದ್ದಾಗ ಯಮನೂ ಕೊಡದಷ್ಟು ಶಿಕ್ಷೆಯನ್ನು ಡಿ ಗ್ಯಾಂಗ್ ನೀಡಿದ್ಯಾ? ಇಂಥದ್ದೊಂದು ಪ್ರಶ್ನೆಗೆ ಮರಣೋತ್ತರ ಪರೀಕ್ಷೆ ಸ್ಫೋಟಕ ಸಂಗತಿಯನ್ನು ಸಾರಿ ಸಾರಿ ಹೇಳುತ್ತಿದೆ.. ಡಿ ಗ್ಯಾಂಗ್​ ಅಟ್ಟಹಾಸ ಹೇಗಿತ್ತು ಅಂದ್ರೆ, ಪವಿತ್ರಾ ಗೌಡಗೆ ಕಳುಹಿಸಿದ್ದ ಮೆಸೇಜ್​ಗಳನ್ನ ಓದುತ್ತಾ.. ಫೋಟೋಗಳನ್ನ ತೋರಿಸುತ್ತಾ.. ಅದೇ ಅಂಗಗಳ ಮೇಲೆ ಭೀಕರವಾಗಿ ದೌರ್ಜನ್ಯ ಎಸಗಿದೆ ಎನ್ನಲಾಗುತ್ತಿದೆ. ಬಹುಮುಖ್ಯವಾಗಿ ರೇಣುಕಾಸ್ವಾಮಿಯ ಮರ್ಮಾಂಗಕ್ಕೂ ಬಲವಾಗಿ ಒದೆಯಲಾಗಿದೆಯಂತೆ. ಇದು ಸಾಲದು ಅಂತ ರೇಣುಕಾ ಸ್ವಾಮಿಯ ಮರ್ಮಾಂಗಕ್ಕೆ ಎಲೆಕ್ಟ್ರಿಕ್ ಶಾಕ್ ಕೊಡಲಾಗಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಇದೇ ಕಾರಣಕ್ಕೋ ಏನೋ? ಮರ್ಮಾಂಗ ಭಾಗದಲ್ಲಿ ರಕ್ತ ಹೆಪ್ಪು ಗಟ್ಟಿತ್ತು ಎಂಬುದನ್ನ ಮರಣೋತ್ತರ ಪರೀಕ್ಷೆಯ ವರದಿಯಲ್ಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಪತ್ನಿ ಸಹಾಯಕ್ಕೆ ನಿಲ್ತಾರಾ ದರ್ಶನ್.. ಜೈಲಿಂದ ಹೊರ ಬಂದ ಬಳಿಕ ಮಾಡೋದೇನು? 

ಮರಣೋತ್ತರ ಪರೀಕ್ಷೆಯ ಸತ್ಯ 5
ತಲೆಗೆ ಬಲವಾದ ಪೆಟ್ಟು, ತಲೆ ಚಿಪ್ಪಿಗೂ ತೀವ್ರ ಗಾಯ
ರೇಣುಕಾಸ್ವಾಮಿ ಮೃತ ದೇಹವನ್ನ ಸೂಕ್ಷ್ಮವಾಗಿ ನೋಡಿದ್ರೇನೆ ಗೊತ್ತಾಗುತ್ತೆ. ಆಳವಾದ ಗಾಯವೊಂದು ತಲೆಯಲ್ಲಿತ್ತು. ಬಹುದೊಡ್ಡ ಆಯುಧ ಬಳಸಿ ತಲೆ ಮೇಲೂ ಡಿ ಗ್ಯಾಂಗ್​ ಭೀಕರ ದಾಳಿ ನಡೆಸಿರಬಹುದು ಅನ್ನೋ ಅನುಮಾನವಿತ್ತು. ಆದ್ರೀಗ, ಮರಣೋತ್ತರ ಪರೀಕ್ಷೆಯ ವರದಿ ತಲೆಗೂ ಬಲವಾಗಿ ಪೆಟ್ಟು ಬಿದ್ದಿದೆ. ತಲೆಬುರುಡೆಯ ಚಿಪ್ಪಿಗೂ ತೀವ್ರವಾಗಿ ಗಾಯವಾಗಿದೆಯಂತೆ.. ಪದೇ ಪದೇ ಮರದ ರಿಪೀಸ್​ಗಳಿಂದ ಹೊಡೆದ ಕಾರಣಕ್ಕೂ ಇಂಥದ್ದೊಂದು ಗಾಯ ತಲೆಯಲ್ಲಿ ಆಗಿರಬಹುದು ಎಂಬ ಬಗ್ಗೆಯೂ ಚರ್ಚೆ ನಡೀತಿದೆ.. ಅಲ್ಲದೇ ಬದುಕಿದ್ದಾಗಲೇ.. ನರಳುತ್ತಿದ್ದಾಗಲೇ ರೇಣುಕಾಸ್ವಾಮಿಯ ಇಡೀ ದೇಹವನ್ನೇ ಅನಾಮತ್ತಾಗಿ ಎತ್ತಿಕೊಂಡು ಗೋಡೆಗೆ ಎಸೆದ ಕಾರಣಕ್ಕೂ ಇಂಥಾ ತೀವ್ರ ಪೆಟ್ಟು ಆಗಿರಬಹುದು

ಮರಣೋತ್ತರ ಪರೀಕ್ಷೆಯ ಸತ್ಯ 6
ಆ ಚರ್ಮ ಸುಲಿದಿದ್ದರಾ? 
ಇದೊಂದು ಸಂಗತಿಯನ್ನು ಕೇಳೋಕೂ ಕಷ್ಟವಾಗುವಂಥದ್ದು. ರೇಣುಕಾಸ್ವಾಮಿ ಮೃತ ದೇಹ ಸಿಕ್ಕಾಗಲೇ ಪೊಲೀಸರಿಗೆ ಇಂಥದ್ದೊಂದು ಅನುಮಾನ ಎದ್ದಿತ್ತು. ಕಾರಣ, ಸುಮನಹಳ್ಳಿಯ ಮೋರಿಯ ಸನಿಹ ಸಿಕ್ಕ ಮೃತ ದೇಹ ಹಲವು ಕ್ರೌರ್ಯ ಸಾಕ್ಷಿ ನುಡಿಯುತ್ತಿತ್ತು. ಸದ್ಯ, ವೃಷಣಕ್ಕೇ ಬಲವಾಗಿ ಒದ್ದ ಕಾರಣ, ಪದೇ ಪದೇ ಶಾಕ್​ ಕೊಟ್ಟ ಕಾರಣ. ಅವರೆಡೂ ಛಿದ್ರವಾಗಿವೆ ಎನ್ನುತ್ತಿದೆಯಂತೆ. ವೃಷಣದಲ್ಲಿನ ರಕ್ತವೂ ಹೆಪ್ಪುಗಟ್ಟಿದೆ ಅನ್ನೋದು ಇದಕ್ಕೆ ಪೂರಕ ಸಂಗತಿಯಾಗಿದೆ.. ಇದೆಲ್ಲಾ ನೀಚ ಕ್ರೌರ್ಯಗಳ ಜೊತೆ ಜೊತೆಯಲ್ಲೇ ಡಿ ಗ್ಯಾಂಗ್​ನ ಅದೊಂದು ವಿಡಿಯೋ ಸಾಕ್ಷಿ ಸದ್ದು ಮಾಡುತ್ತಿದೆ.. ಬಹುಮುಖ್ಯವಾಗಿ ದರ್ಶನ್​ ಕ್ರೌರ್ಯ ಎಂಥದ್ದು ಅನ್ನೋದನ್ನ 3 ಸೆಕೆಂಡ್​ ವಿಡಿಯೋ ಹೇಳುತ್ತಿದೆಯಂತೆ. ಅದೇ ವಿಡಿಯೋ ಬಗ್ಗೆ ಇದೀಗ ಪೊಲೀಸರು ಹೊಸ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

3 ಸೆಕೆಂಡ್​ ವಿಡಿಯೋದಲ್ಲಿ ದರ್ಶನ್ ಕ್ರೌರ್ಯದ ಸಾಕ್ಷಿ ಇದೆಯೇ?
ರೇಣುಕಾಸ್ವಾಮಿಯನ್ನು ಹೊಡೆಯೋ ದೃಶ್ಯ ಮೊಬೈಲ್​ನಲ್ಲಿ ರೆಕಾರ್ಡ್​ ಆಗಿತ್ತು ಅನ್ನೋದು ಇವತ್ತಿಗೂ ಬಲವಾಗಿರೋ ವಾದ. ಖುದ್ದು ದರ್ಶನ್​ ರೇಣುಕಾಸ್ವಾಮಿಯನ್ನು ಥಳಿಸಿರೋ ದೃಶ್ಯದ ಬಗ್ಗೆಯೇ ಪೊಲೀಸರು ಇದೀಗ ತಲೆ ಕಡೆಸಿಕೊಂಡಿದ್ದಾರೆ.. 3 ಸೆಕೆಂಡ್​ನ ಆ ವಿಡಿಯೋ ಐಫೋನ್​ನಲ್ಲಿ ಡಿಲೀಟ್​ ಆಗಿದೆಯಂತೆ.. ಹಾಗಾಗಿಯೇ ಆ ವಿಡಿಯೋ ರಿಟ್ರೀವ್​ಗೆ ಪೊಲೀಸರು ಹರಸಾಹಸ ಪಡ್ತಿದ್ದಾರೆ.. ಅದೊಂದು ವಿಡಿಯೋ ಪೊಲೀಸರಿಗೆ ಸಿಕ್ಕಿಬಿಟ್ರೆ ದರ್ಶನ್​ ಲಾಕ್​ ಆಗೋದು ಪಕ್ಕಾ ಎನ್ನಲಾಗ್ತಿದೆ. ಇದೊಂದೇ ಒಂದು ಸ್ಫೋಟಕ ಸಾಕ್ಷಿ ಸಿಕ್ಕಿಬಿಟ್ರೆ ದರ್ಶನ್​ ಪರಪ್ಪನ ಅಗ್ರಹಾರದಿಂದ ಆಚೆ ಬರೋದು ಡೌಟ್​.

ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದ ವಿಡಿಯೋವನ್ನ ದರ್ಶನ್ ಶಿಷ್ಯರು ರೆಕಾರ್ಡ್ ಮಾಡಿದ್ದಾರಂತೆ. ಅದ್ರಲ್ಲೂ ರೇಣುಕಾಸ್ವಾಮಿಯನ್ನು ಖುದ್ದು ದರ್ಶನ್​ ಹೊಡೆಯುತ್ತಿರುವ ದೃಶ್ಯವನ್ನ ಪ್ರದೂಷ್ ರೆಕಾರ್ಡ್ ಮಾಡಿದ್ದನಂತೆ.. ಆ 3 ಸೆಕೆಂಡ್ ವಿಡಿಯೋದಲ್ಲಿ ದರ್ಶನ್ ಕರಾಳತೆ ಇದೆ ಎನ್ನಲಾಗುತ್ತಿದೆ.. ಹಲ್ಲೆ ನಡೆಸೋದನ್ನ ವಿಡಿಯೋ ಮಾಡಿಕೋ ಅಂತ ಖುದ್ದು ದರ್ಶನ್ ಹೇಳಿದ್ದರಂತೆ.. ಅದರಂತೆ ಪ್ರದೂಷ್ ತನ್ನ ಐಫೋನ್ ತೆಗೆದು ರೆಕಾರ್ಡ್ ಮಾಡಿದ್ದಾನೆ. ಮೂರ್ನಾಲ್ಕು ಸೆಕೆಂಡ್ ಆಗುತ್ತಿದ್ದಂತೆ ಸ್ಟಾಪ್ ಮಾಡಿ, ಬಳಿಕ ವಿಡಿಯೋ ಡಿಲೀಟ್ ಮಾಡಿದ್ದಾನೆ ಎನ್ನಲಾಗುತ್ತಿದೆ.. ಹಾಗಾಗಿಯೇ ಕಾಮಾಕ್ಷಿಪಾಳ್ಯ ಪೊಲೀಸರು ಸಿಐಡಿ ಟೆಕ್ನಿಕಲ್ ಸೆಲ್‌ಗೆ ಐಫೋನ್ ರವಾನಿಸಿದ್ದಾರೆ. ಐಫೋನ್‌ನಿಂದ ವಿಡಿಯೋ ರಿಟ್ರೀವ್ ಮಾಡೋದು ಅಷ್ಟು ಸುಲಭವಲ್ಲ. ಹಾಗಾಗಿ ಹೊಸ ಟೆಕ್ನಾಲಜಿ ಬಳಸಿ ವಿಡಿಯೋ ರಿಟ್ರೀವ್‌ಗೆ ಸಿಐಡಿ ಮುಂದಾಗಿದೆ. ಒಂದು ವೇಳೆ ವಿಡಿಯೋ ರಿಟ್ರೀವ್ ಆದರೆ ಅದು ಕೇಸ್‌ಗೆ ಮಹತ್ತರ ಸಾಕ್ಷಿಯಾಗೋದು ಪಕ್ಕಾ.. ಇದು ಮೂರು ಸೆಕೆಂಡ್​ ವಿಡಿಯೋದ ಸ್ಫೋಟಕ ಸತ್ಯ.. ಆದ್ರೆ, ಇದಕ್ಕಿಂತಲೂ ಬೆಚ್ಚಿಬೀಳಿಸುತ್ತಿರೋ ಸಂಗತಿಗಳು ಅಂದ್ರೆ, ಅದು ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯ ವರದಿಯ ಭಯಾನಕ ಸಂಗತಿಗಳು.

ಮರಣೋತ್ತರ ಪರೀಕ್ಷೆಯ ಸತ್ಯ 7
ಕಿವಿಯೊಂದನ್ನು ಕೊಯ್ದಿದ್ದರಾ? 
ಮರಣೋತ್ತರ ಪರೀಕ್ಷೆಯ ವರದಿ ಮತ್ತೊಂದು ಇಂಥಾ ಶಾಕಿಂಗ್​ ಸಂಗತಿಯನ್ನ ನೀಡುತ್ತಿದೆ.. ರೇಣುಕಾಸ್ವಾಮಿಯ ಒಂದು ಕಿವಿ ಕಟ್ ಆಗಿದೆ.. ಆ ಕಿವಿ ನಾಯಿಗಳಿಗೆ ಆಹಾರವಾಗಿರೋ ಸಾಧ್ಯತೆ ಇದೆ.. ಆದರೇ, ಕಿವಿ ರೇಣುಕಾಸ್ವಾಮಿ ಜೀವಂತವಾಗಿ ಇದ್ದಾಗಲೇ ಕಟ್ ಆಗಿದ್ದೋ? ಸತ್ತ ಮೇಲೆ ಕಟ್ ಆಗಿದ್ದೋ? ಅನ್ನೋ ಅನುಮಾನ ಎದ್ದಿದೆ.. ರೇಣುಕಾಸ್ವಾಮಿಯ ಮೃತ ದೇಹ ಸಿಕ್ಕ ಸ್ಥಳದಲ್ಲಿ ಎಲ್ಲೂ ತುಂಡಾದ ಕಿವಿಯ ಅವಶೇಷ ಸಿಕ್ಕಿಲ್ಲ.. ಆದರೇ, ಕಿವಿ ತುಂಡಾಯ್ತೋ? ತುಂಡು ಮಾಡಿದ್ರೋ? ಅನ್ನೋದೇ ಡಿ ಗ್ಯಾಂಗ್​ ಕ್ರೌರ್ಯದ ಮೇಲೆ ಬರೋ ಮತ್ತೊಂದು ಘೋರ ಅಪವಾದ.

ಮರಣೋತ್ತರ ಪರೀಕ್ಷೆಯ ಸತ್ಯ 8
ಮೃತ ದೇಹದ ಬಹುಪಾಲು ಮೂಳೆಗಳು ಮುರಿದಿವೆ 
ರೇಣುಕಾಸ್ವಾಮಿ ಸಾಯೋಕೂ ಮುಂಚೆ ನರಕ ಕಂಡಿದ್ದಾನೆ.. ಮರಣೋತ್ತರ ಪರೀಕ್ಷೆಯ ವರದಿಯಲ್ಲಿರೋ ಇದೊಂದು ಸಂಗತಿ ಆತ ಅದೆಷ್ಟು ನರಳಿ ನರಳಿ ಸತ್ತಿದ್ದಾನೆ ಅನ್ನೋದಕ್ಕೆ ಸಾಕ್ಷಿಯಾಗಿದೆ.. ಯಾಕಂದ್ರೆ, ಸ್ವಾಮಿಯ ದೇಹದ ಬಹುಪಾಲು ಮೂಳೆಗಳು ಛಿದ್ರಛಿದ್ರವಾಗಿವೆಯಂತೆ.. ಬಟ್ಟೆ ಒಗೆದಂತೆ ಗೋಡೆಗೆ ಪದೇ ಪದೇ ಎಸೆಯಲಾಗಿತ್ತು ಅನ್ನೋ ಆರೋಪದ ಮಾತುಗಳಿಗೆ ಪೂರಕವಾಗಿದೆ ಈ ಸಂಗತಿ.. ರೇಣುಕಾಸ್ವಾಮಿಯನ್ನು ಡಿ ಗ್ಯಾಂಗ್​ ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ. ಆತನನ್ನು ಹಿಡಿದು ಅಲ್ಲೇ ನಿಂತಿದ್ದ ಲಾರಿಗೆ ಗುದ್ದಿಸಿದ್ದಾರೆ. ಆಗ ತಲೆಗೆ ಗಂಭೀರ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿ ಆತ ಪ್ರಜ್ಞೆ ತಪ್ಪಿ, ರಕ್ತ ಸೋರಿ ಮೃತಪಟ್ಟಿದ್ದಾರೆ ಅನ್ನೋ ಆರೋಪವೂ ಇತ್ತು..

ಮರಣೋತ್ತರ ಪರೀಕ್ಷೆಯ ಸತ್ಯ 9
ಕೈಲಿ ಕುಯ್ದ ಗುರುತು, ಬೆನ್ನಿನ ಮೇಲೆ ಬಾಸುಂಡೆ ಬರೆಗಳು 
ರೇಣುಕಾಸ್ವಾಮಿ ಮೃತ ದೇಹದ ಮೇಲೆ ಕಂಡ ಎಲ್ಲಾ ಗಾಯದ ಗುರುತುಗಳಿಗಿಂತ್ಲೂ ಈ ಗುರುತುಗಳು ಬೇರೆಯದ್ದೇ ಕಥೆಯನ್ನು ಹೇಳಿದ್ದವು.. ಕೈಯಲ್ಲಿ ಕಾಣಿಸಿದ್ದ ಕುಯ್ದ ಗುರುತು.. ಬೆನ್ನಿನ ಮೇಲೆ ಎದ್ದಿದ್ದ ಬಾಸುಂಡೆ ಬರೆಗಳು.. ಈ ಎರಡೂ ಗಾಯದ ಗುರುತು ಎಲೆಕ್ಟ್ರಿಕ್ ಶಾಕ್​ನಿಂದಾಗಿನೋ.. ಮರದ ರಿಪೀಸ್​ನಿಂದಾಗೋ.. ಬೆಲ್ಟ್​ನಿಂದಾಗಿನೋ.. ಪದೇ ಪದೇ ಹೊಡೆದ ಕಾರಣ ಬಾಸುಂಡೆ ಎದ್ದಿವೆ. ಗಾಯಗಳಾಗಿವೆ ಎಂಬುದು ಮರಣೋತ್ತರ ವರದಿಯಲ್ಲಿ ದಾಖಲಾಗಿದೆ ಎಂದು ಹೇಳಲಾಗುತ್ತಿದೆ.

ಮರಣೋತ್ತರ ಪರೀಕ್ಷೆಯ ಸತ್ಯ 10
ಮೃತ ದೇಹದ ಬಹುಭಾಗ ಕಪ್ಪು ಬಣ್ಣಕ್ಕೆ ತಿರುಗಿದೆ 
ರೇಣುಕಾಸ್ವಾಮಿ ದೇಹದ ಬಹುಭಾಗ ಕಪ್ಪು ಬಣ್ಣದ ಗುರುತುಗಳಿಂದ ವಿಚಿತ್ರವಾಗಿ ಕಾಣುತ್ತಿತ್ತು.. ಮೇಲ್ನೋಟಕ್ಕೆ ಅದು ಸುಟ್ಟ ಗಾಯಗಳು ಅಂತ ಗುರ್ತಿಸಲಾಗಿತ್ತು.. ದೇಹದ ಬಹುಭಾಗ ಕಪ್ಪು ಬಣ್ಣಕ್ಕೆ ತಿರುಗೋದಕ್ಕೆ ಕಾರಣ ಎಲೆಕ್ಟ್ರಿಕ್ ಶಾಕ್ ನೀಡಿ ಚಿತ್ರಹಿಂಸೆ ಕೊಟ್ಟಿರಬಹುದು ಎನ್ನಲಾಗುತ್ತಿದೆ.. ಇನ್ನು, ಕೈ ಮೇಲಿನ ಹಚ್ಚೆಯನ್ನೂ ಕಟುಕರು ಚರ್ಮ ಸುಲಿದು ಕಿತ್ತೆಸೆದರಾ? ಸಿಗರೇಟ್​​ನಿಂದ ಸುಟ್ಟಿದ್ದಾರಾ? ಶಾಕ್​ ಕೊಟ್ಟು ಚಿತ್ರಹಿಂಸೆ ನೀಡಿದ್ರಾ? ಇಷ್ಟೆಲ್ಲಾ ಅನುಮಾನಕ್ಕೂ ಕಾರಣವಾಗಿರೋದು ರೇಣುಕಾಸ್ವಾಮಿ ದೇಹದ ಮೇಲಿನ ಕಪ್ಪು ಬಣ್ಣದ ಕಲೆಗಳು. ಮರಣೋತ್ತರ ಪರೀಕ್ಷೆಯ ವರದಿ ಸಹ ಇದು ಸುಟ್ಟ, ಎಲೆಕ್ಟ್ರಿಕ್​​ ಶಾಕ್​ನ ಗುರುತುಗಳು ಎನ್ನುತ್ತಿದೆ. ಸತತ ಐದು ಗಂಟೆ ಕಾಲ ದರ್ಶನ್​​ ಅಂಡ್​ ಗ್ಯಾಂಗ್​ ರೇಣುಕಾಸ್ವಾಮಿಗೆ ಪಟ್ಟಣಗೆರೆಯಲ್ಲೇ ಯಮಪುರಿಯ ದರ್ಶನ ಮಾಡಿಸಿದೆ ಅನ್ನೋದಕ್ಕೆ ಈ ಮರಣೋತ್ತರ ಪರೀಕ್ಷೆಯ ವರದಿಗಳೇ ಸಾಕ್ಷಿಯಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

34 ಗಾಯ, 5 ಗಂಟೆ ಡಿ ಗ್ಯಾಂಗ್‌ ಟಾರ್ಚರ್‌.. ಪಟ್ಟಣಗೆರೆ ಶೆಡ್‌ ನರಕದ 10 ಭಯಾನಕ ಸತ್ಯಗಳು ಬಹಿರಂಗ

https://newsfirstlive.com/wp-content/uploads/2024/06/darshan11.jpg

    ಬೆಚ್ಚಿ ಬೀಳಿಸಿದ ರೇಣುಕಾಸ್ವಾಮಿ ಪೋಸ್ಟ್​ ಮಾರ್ಟಮ್​ ರಿಪೋರ್ಟ್

    ಕಾಮಾಕ್ಷಿಪಾಳ್ಯ ಪೊಲೀಸರಿಗೂ ವರದಿಯ ಅಂಶಗಳ ಕಂಡು ಶಾಕ್​

    ಮರಣೋತ್ತರ ಪರೀಕ್ಷೆಯ 10 ಭೀಕರ ಸಂಗತಿ ಹೇಳ್ತಿರೋದೇನು?

ರೇಣುಕಾಸ್ವಾಮಿಯನ್ನು ಕೊಂದಿರೋ ಆರೋಪ ಹೊತ್ತಿರೋ ಡಿ ಗ್ಯಾಂಗ್​ ಆತನಿಗೆ ಆವತ್ತು ರೌರವ ನರಕವನ್ನೇ ತೋರಿಸಿಬಿಟ್ಟಿದ್ದಾರಂತೆ. ರೇಣುಕಾಸ್ವಾಮಿ ಉಸಿರು ನಿಲ್ಲುವ ತನಕ ನೋವುಣ್ಣುತ್ತಲೇ ನರಳಿ ನರಳಿ ಸತ್ತಿದ್ದಾನಂತೆ. ಪಟ್ಟಣಗೆರೆಯ ಶೆಡ್​​ ರೇಣುಕಾಸ್ವಾಮಿ ಪಾಲಿಗೆ ಅಕ್ಷರಶಃ ನರಕವೇ ಆಗಿತ್ತಂತೆ. ಸದ್ಯ, ಪೊಲೀಸರ ಕೈ ಸೇರಿರೋ ಮರಣೋತ್ತರ ಪರೀಕ್ಷೆಯ ವರದಿ ಬೆಚ್ಚಿಬೀಳಿಸುತ್ತಿವೆ. ರೇಣುಕಾಸ್ವಾಮಿಯ ಇಡೀ ದೇಹವನ್ನು ಅಣುವಣುವಾಗಿ ಡಿ ಗ್ಯಾಂಗ್​ ಇಂಚಿಂಚು ಹಿಂಸಿಸಿದ್ದಕ್ಕೆ ಸಾಕ್ಷಿ ನುಡಿಯುತ್ತಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್‌.. ಶೆಡ್‌ನಲ್ಲಿ ಆರೋಪಿಗಳು ಶವ ಎಳೆದೊಯ್ಯೋ ದೃಶ್ಯ ಸೆರೆ!

ಬೆಚ್ಚಿ ಬೀಳಿಸಿದ ರೇಣುಕಾಸ್ವಾಮಿ ಪೋಸ್ಟ್​ ಮಾರ್ಟಮ್​ ರಿಪೋರ್ಟ್!​
ಕಾಮಾಕ್ಷಿಪಾಳ್ಯ ಪೊಲೀಸರಿಗೂ ವರದಿಯ ಅಂಶಗಳ ಕಂಡು ಶಾಕ್​!
ನನ್ ಸರ್ವೀಸ್​ನಲ್ಲಿ ಇಂಥಾ ಎಷ್ಟ್​ ಕೇಸ್​ ನೋಡಿಲ್ಲ.. ಹೀಗಂತ ನಾರ್ಮಲಿ ಪೊಲೀಸರು ಒಂದು ಡೈಲಾಗ್​ ಹೊಡೀತಾನೇ ಇರ್ತಾರೆ. ಆದರೆ, ರೇಣುಕಾಸ್ವಾಮಿಯ ಪೋಸ್ಟ್​ ಮಾರ್ಟಮ್​ ರಿಪೋರ್ಟ್​, ಕಾಮಾಕ್ಷಿಪಾಳ್ಯ ಪೊಲೀಸರನ್ನೂ ಬೆಚ್ಚಿ ಬೀಳಿಸಿದೆ ಅಂದ್ರೆ ನಂಬಲೇಬೇಕು. ಮೊನ್ನೆ ಮೊನ್ನೆಯಷ್ಟೇ ರೇಣುಕಾಸ್ವಾಮಿಯ ಮರಣೋತ್ತರ ಪರೀಕ್ಷೆಯ ವರದಿ ಹಿಂದೆ ಸಾಕಷ್ಟು ಅನುಮಾನಗಳು ಮೂಡಿದ್ದವು. ಯಾಕಂದ್ರೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದ್ದ ಪರೀಕ್ಷೆಯನ್ನ ಪವಿತ್ರಾ ಗೌಡಳ ಸ್ನೇಹಿತೆಯ ಪತಿ ಮಾಡಿದ್ದಾರೆ ಅನ್ನೋ ಸಂಗತಿ ಕೇಳಿ ಬಂದಿತ್ತು. ಇದೀಗ ಬೆಳಕಿಗೆ ಬಂದಿರೋ ಮತ್ತೊಂದು ವಿಷ್ಯ ಅಂದ್ರೆ ಪೋಸ್ಟ್​ ಮಾರ್ಟ್ಂ ನಡೆದ ದಿನ ಪವಿತ್ರಾ ಗೌಡ ಸ್ನೇಹಿತೆಯ ಪತಿ ರಜೆಯಲ್ಲಿದ್ರಂತೆ. ಅವರು ಪರೀಕ್ಷೆ ನಡೆಸಿಲ್ಲ. ಆದರೆ, ಡಿ ಗ್ಯಾಂಗ್​ ಜೂನ್ 8ರ ರಾತ್ರಿ ಪಟ್ಟಣಗೆರೆ ಶೆಡ್​​ನಲ್ಲಿ ನಡೆಸಿದ್ದು ಮಾತ್ರ. ಘೋರ.. ರಣಭೀಕರ.. ಪೈಶಾಚಿಕ.. ವಿಕೃತ.. ಕುಕೃತ್ಯ ಅನ್ನೋದಕ್ಕೆ ಪೊಲೀಸರ ಬಳಿ ಸಾಕ್ಷಿಗಳಿವೆ..ಜೊತೆಗೆ ಈಗ ಪೋಸ್ಟ್​ ಮಾರ್ಟಮ್​ ವರದಿ ಕೈ ಸೇರಿದೆ.

ರೇಣುಕಾಸ್ವಾಮಿ ಚೀರುತ್ತಲೇ 300 ನಿಮಿಷ ನರಳಿ ನರಕ ಕಂಡ್ರಾ?
ಮರಣೋತ್ತರ ಪರೀಕ್ಷೆಯ 10 ಭೀಕರ ಸಂಗತಿ ಹೇಳ್ತಿರೋದೇನು?
ಡಿ ಗ್ಯಾಂಗ್​ನಿಂದ 5 ಗಂಟೆಗಳ ಟಾರ್ಚರ್​.. 3 ಸೆಕೆಂಡ್​ ವಿಡಿಯೋ..!
ಕೇಳೋ ಕಿವಿಗಳೂ ಇದನ್ನ ಸಹಿಸೋಕಾಗಲ್ಲ. ಇನ್ನು, ನೋಡೋ ಕಣ್ಣುಗಳ ವಿಚಾರಕ್ಕೆ ಬರೋದೇ ಬೇಡ.. ಯಾಕಂದ್ರೆ, ಪಟ್ಟಣಗೆರೆ ಶೆಡ್​​ನಲ್ಲಿ ಡಿ ಗ್ಯಾಂಗ್​ ರೇಣುಕಾಸ್ವಾಮಿಗೆ ಎಂಥಾ ನರಕ ತೋರಿಸಿದೆ ಅಂದ್ರೆ ಮರಣೋತ್ತರ ಪರೀಕ್ಷೆಯಲ್ಲಿ ರಿವೀಲ್ ಆಗ್ತಿರೋ ಒಂದೊಂದೇ ಸಂಗತಿಯನ್ನು ಹೇಳೋದಕ್ಕೂ ಹಿಂಸೆಯಾಗುತ್ತದೆ. ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ದರ್ಶನ್​ ಬಳಿ ಕೆಲಸಕ್ಕಿದ್ದ ಐವರು ಕೊಲೆ ಪ್ರಕರಣದಲ್ಲಿ ಬಹುಮುಖ್ಯ ಸಾಕ್ಷಿ ನುಡಿದಿದ್ದಾರೆ. ನಂತರ ಇವರೆಲ್ಲಾ ಉಲ್ಟಾ ಹೊಡೀಬಾರದು ಅನ್ನೋ ಕಾರಣಕ್ಕೆ ಪೊಲೀಸರು ಐದೂ ಜನರಿಂದ ಸಿಆರ್​ಪಿಸಿ 164ರ ಅಡಿಯಲ್ಲಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಇದಕ್ಕಿಂತ್ಲೂ ಇಂಪಾರ್ಟೆಂಟ್​ ಅನಿಸೋ ಸಾಕ್ಷಿಯ ಜಾಡು ಹಿಡಿದು ಹೊರಟ್ಟಿದ್ದಾರೆ ಪೊಲೀಸರು. ಅದುವೇ 3 ಸೆಕೆಂಡ್​ ವಿಡಿಯೋ. ಅದೇ ವಿಡಿಯೋದಲ್ಲೇ ದರ್ಶನ್​​​ ಕ್ರೌರ್ಯ ಕೂಡ ದಾಖಲಾಗಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಆ 3 ಸೆಕೆಂಡ್​ ವಿಡಿಯೋ ಮರ್ಮ ಏನು ಗೊತ್ತಾ?

ಮರಣೋತ್ತರ ಪರೀಕ್ಷೆಯ ಸತ್ಯ 1
ಸತತ 5 ಗಂಟೆಗಳ ಕಾಲ ಚಿತ್ರಹಿಂಸೆ!
ಸರಿ ಸುಮಾರು 5 ಗಂಟೆ ಕಾಲ.. ಅಂದ್ರೆ 300 ನಿಮಿಷಗಳ ಕಾಲ ರೇಣುಕಾಸ್ವಾಮಿ ಚೀರುತ್ತಾ, ಒದ್ದಾಡುತ್ತಾ, ಏದುಸಿರು ಬಿಡುತ್ತಾ.. ಉಸಿರಾಡೋದಕ್ಕೂ ಪರದಾಡುತ್ತಾ.. ಎದ್ದು ನಿಲ್ಲೋದಕ್ಕೂ ಆಗದಷ್ಟು ಚಿತ್ರಹಿಂಸೆಯ ಮಧ್ಯೆ ಅಕ್ಷರಶಃ ನರಕವನ್ನೇ ಕಂಡಿದ್ದಾನೆ. ಹೀಗಂತ ಹೇಳಿರೋ ಪೋಸ್ಟ್​ ಮಾರ್ಟಮ್​ ರಿಪೋರ್ಟ್​ ರೇಣುಕಾಸ್ವಾಮಿಗೆ ಅಣು ಅಣುವಾಗಿ ಹಿಂಸೆ ಮಾಡಿ ಕೊಂದಿರೋದನ್ನ ದೃಢಪಡಿಸಿದೆ. ಇದಕ್ಕೆ ಪೂರಕ ಎನ್ನುವಂತೆ ರೇಣುಕಾಸ್ವಾಮಿ ಮೃತ ದೇಹದ ಮೇಲೂ ಕ್ರೌರ್ಯದ ಶಾಸನಗಳಿವೆ. ಸುಮನಹಳ್ಳಿಯ ಬ್ರಿಡ್ಜ್​ ಬಳಿ ಸಿಕ್ಕಾಗಿನ ರೇಣುಕಾಸ್ವಾಮಿಯ ಮೃತ ದೇಹವನ್ನ ಯಾರೇ ನೋಡಿದ್ರೂ, ಇದೊಂದು ಮೃಗೀಯ ಕ್ರೌರ್ಯ ಅಂತಲೇ ಹೇಳುತ್ತಿದ್ದರು.

ಇದನ್ನೂ ಓದಿ: 40 ದಿನಕ್ಕೆ 31 ಹತ್ಯೆ, 300 ಜನರ ಮೇಲೆ ಹಲ್ಲೆ.. ಆಂಧ್ರದಲ್ಲಿ ಮತ್ತೆ ರಕ್ತ ರಾಜಕೀಯ? ಸ್ಫೋಟಕ ಮಾಹಿತಿ ಇಲ್ಲಿದೆ

ಮರಣೋತ್ತರ ಪರೀಕ್ಷೆಯ ಸತ್ಯ 2
ದೇಹದ 34 ಕಡೆ ಭೀಕರ ಗಾಯಗಳು!
ರೇಣುಕಾಸ್ವಾಮಿ ಅದೆಷ್ಟರ ಮಟ್ಟಿಗೆ ಗೋಳಾಡಿದ್ದಾನೋ? ಗೋಗರೆದಿದ್ದಾನೋ? ಬೇಡಿಕೊಂಡಿದ್ದಾನೋ? ರಕ್ತ ಕಣ್ಣೀರು ಸುರಿಸಿದ್ದಾನೋ? ಇಷ್ಟೆಲ್ಲಾ ಪ್ರಶ್ನೆಗಳು ಉದ್ಭವಿಸೋದಕ್ಕೆ ಕಾರಣವಾಗಿರೋದು ಮರಣೋತ್ತರ ಪರೀಕ್ಷೆಯಲ್ಲಿರೋ 2ನೇ ಭೀಕರ ಸತ್ಯ.. ಆತನ ಮೃತ ದೇಹದ ಮೇಲಿದ್ದ 34 ಭೀಕರ ಗಾಯದ ಗುರುತುಗಳು ಬೆಚ್ಚಿಬೀಳಿಸೋ ಸತ್ಯವನ್ನೇ ಹೇಳುತ್ತಿವೆಯಂತೆ. ಇದಕ್ಕಿಂತಲೂ ಅಮಾನವೀಯ ಸಂಗತಿ ಅಂದ್ರೆ, ರೇಣುಕಾಸ್ವಾಮಿ ದೇಹದ ಮೇಲೆ ಕೆಲವು ಸಿಗರೇಟಿನಿಂದ ಸುಟ್ಟ ಗುರುತುಗಳೂ ಸಹ ಇವೆ ಎನ್ನಲಾಗುತ್ತಿದೆ.. ಬೆಲ್ಟ್​.. ಮರದ ತುಂಡು.. ಕಬ್ಬಿಣದ ಆಯುಧಗಳನ್ನೂ ಬಳಸಿ ಆತನ ಮೇಲೆ ದಾಳಿ ಮಾಡಿದ್ರು ಅನ್ನೋದು ಬಯಲಾಗಿದೆ. ರೇಣುಕಾಸ್ವಾಮಿ ಡಿ ಗ್ಯಾಂಗ್​ ಕೈಗೆ ಸಿಕ್ಕಿ ಸತತ 5 ಗಂಟೆ ಕಾಲ ನರಕ ಕಂಡಿದ್ದ ಅನ್ನೋದು ಎಷ್ಟು ಮುಖ್ಯವೋ? ಮೃತ ದೇಹದ ಮೇಲಿದ್ದ 34 ಗಾಯಗಳೂ ಸಹ ಜೀವ ಇದ್ದಾಗಲೇ ಮಾಡಿದ ಹಲ್ಲೆಗಳಾಗಿದ್ದವು. ಅಂದರೆ, ಡಿ ಗ್ಯಾಂಗ್​ ಕೀಚಕ ಕ್ರೌರ್ಯ ರೇಣುಕಾಸ್ವಾಮಿಯ ಕೊನೆಯ ಉಸಿರು ಇರೋ ತನಕವೂ ಸಾಂಗವಾಗಿ ನಡೆದಿತ್ತು. ಯಾವಾಗ ರೇಣುಕಾಸ್ವಾಮಿ ಸತ್ತಿದ್ದಾನೆ ಅನ್ನೋದು ಗೊತ್ತಾಯ್ತೋ? ಆ ಕ್ಷಣವೇ ಹೊಡೆಯೋದನ್ನೂ ನಿಲ್ಲಿಸಿರಬೇಕು.

ಮರಣೋತ್ತರ ಪರೀಕ್ಷೆಯ ಸತ್ಯ 3
ಶ್ವಾಸಕೋಶಕ್ಕೆ ಚುಚ್ಚಿಕೊಂಡಿದೆ ಮುರಿದ ಪಕ್ಕೆಲುಬು 
ಐದು ಗಂಟೆಗಳ ಕಾಲ ರೇಣುಕಾಸ್ವಾಮಿ ಮೇಲೆ ನಡೆಸಿದ ದಾಳಿ ಇದೆಯಲ್ಲ.. ಅದು ಇನ್ಯಾವ ಶತ್ರುಗೂ ಬೇಡ.. ಯಾಕಂದ್ರೆ, ಮರಣೋತ್ತರ ಪರೀಕ್ಷೆಯಲ್ಲಿ ರಿವೀಲ್ ಆಗ್ತಿರೋ ಸಂಗತಿಗಳೇ ಕಾಡು ಮೃಗಗಳನ್ನೂ ಮೀರಿಸೋ ಕ್ರೌರ್ಯವೆಂದೇ ಹೇಳುತ್ತಿವೆ.. ಪಟ್ಟಣಗೆರೆ ಶೆಡ್​​ನಲ್ಲಿ ಅವತ್ತು ಸೇರಿದ್ದ 13ಕ್ಕೂ ಅಧಿಕ ರಕ್ಕಸರು ರೇಣುಕಾಸ್ವಾಮಿ ಎದೆ ಹಾಗೂ ಬೆನ್ನಿಗೆ ವಿಕೃತವಾಗಿ ಹೊಡೆದಿದ್ದಾರೆ.. ಮನಬಂದಂತೆ ಥಳಿಸಿದ್ದಾರೆ.. ಕಾಲಲ್ಲಿ ಒದ್ದಿದ್ದಾರೆ.. ಡಿ ಗ್ಯಾಂಗ್​ ರಣ ರಕ್ಕಸ ಕ್ರೌರ್ಯದ ಕೇಕೆಯ ಎದುರು ಮುದುಡಿಕೊಂಡಿದ್ದ ಪರಿವಾಳದಂಥಾ ಸಣಕಲು ದೇಹದ ರೇಣುಕಾಸ್ವಾಮಿ ಅಕ್ಷರಶಃ ತರಗೆಲೆಯಂತೆ ಥರಗುಟ್ಟಿದೆ.. ಡಿ ಗ್ಯಾಂಗ್​ ಕೊಟ್ಟ ಹೊಡೆತಕ್ಕೆ ರೇಣುಕಾ ಸ್ವಾಮಿಯ ಎದೆಗೆ ಜೋರಾಗಿ ಪೆಟ್ಟು ಬಿದ್ದಿದೆ..ಬೆನ್ನಿನ ಮೇಲಂತೂ ಬಾಸುಂಡೆಗಳ ಸಾಕ್ಷಿಗಳೇ ಎದ್ದು ಕಾಣುತ್ತಿವೆ.. ಇನ್ನು ಈ ರಕ್ಕಸರು ಒದ್ದ ಒದೆತಕ್ಕೆ ಪಕ್ಕೆಲುಬಿನ ಮೂಳೆ ಮುರಿದು ಅದು ಶ್ವಾಸಕೋಶಕ್ಕೆ ಚುಚ್ಚಿಕೊಂಡಿದೆ ಅಂತಾ ಮರಣೋತ್ತರ ವರದಿಯಿಂದ ತಿಳಿದು ಬಂದಿದೆ.

ಮರಣೋತ್ತರ ಪರೀಕ್ಷೆಯ ಸತ್ಯ 4
ಮರ್ಮಾಂಗಕ್ಕೆ ಒದೆತ, ಎಲೆಕ್ಟ್ರಿಕ್ ಶಾಕ್ ನರಳಾಟ
ರೇಣುಕಾಸ್ವಾಮಿ ಬದುಕಿದ್ದಾಗ ಯಮನೂ ಕೊಡದಷ್ಟು ಶಿಕ್ಷೆಯನ್ನು ಡಿ ಗ್ಯಾಂಗ್ ನೀಡಿದ್ಯಾ? ಇಂಥದ್ದೊಂದು ಪ್ರಶ್ನೆಗೆ ಮರಣೋತ್ತರ ಪರೀಕ್ಷೆ ಸ್ಫೋಟಕ ಸಂಗತಿಯನ್ನು ಸಾರಿ ಸಾರಿ ಹೇಳುತ್ತಿದೆ.. ಡಿ ಗ್ಯಾಂಗ್​ ಅಟ್ಟಹಾಸ ಹೇಗಿತ್ತು ಅಂದ್ರೆ, ಪವಿತ್ರಾ ಗೌಡಗೆ ಕಳುಹಿಸಿದ್ದ ಮೆಸೇಜ್​ಗಳನ್ನ ಓದುತ್ತಾ.. ಫೋಟೋಗಳನ್ನ ತೋರಿಸುತ್ತಾ.. ಅದೇ ಅಂಗಗಳ ಮೇಲೆ ಭೀಕರವಾಗಿ ದೌರ್ಜನ್ಯ ಎಸಗಿದೆ ಎನ್ನಲಾಗುತ್ತಿದೆ. ಬಹುಮುಖ್ಯವಾಗಿ ರೇಣುಕಾಸ್ವಾಮಿಯ ಮರ್ಮಾಂಗಕ್ಕೂ ಬಲವಾಗಿ ಒದೆಯಲಾಗಿದೆಯಂತೆ. ಇದು ಸಾಲದು ಅಂತ ರೇಣುಕಾ ಸ್ವಾಮಿಯ ಮರ್ಮಾಂಗಕ್ಕೆ ಎಲೆಕ್ಟ್ರಿಕ್ ಶಾಕ್ ಕೊಡಲಾಗಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಇದೇ ಕಾರಣಕ್ಕೋ ಏನೋ? ಮರ್ಮಾಂಗ ಭಾಗದಲ್ಲಿ ರಕ್ತ ಹೆಪ್ಪು ಗಟ್ಟಿತ್ತು ಎಂಬುದನ್ನ ಮರಣೋತ್ತರ ಪರೀಕ್ಷೆಯ ವರದಿಯಲ್ಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಪತ್ನಿ ಸಹಾಯಕ್ಕೆ ನಿಲ್ತಾರಾ ದರ್ಶನ್.. ಜೈಲಿಂದ ಹೊರ ಬಂದ ಬಳಿಕ ಮಾಡೋದೇನು? 

ಮರಣೋತ್ತರ ಪರೀಕ್ಷೆಯ ಸತ್ಯ 5
ತಲೆಗೆ ಬಲವಾದ ಪೆಟ್ಟು, ತಲೆ ಚಿಪ್ಪಿಗೂ ತೀವ್ರ ಗಾಯ
ರೇಣುಕಾಸ್ವಾಮಿ ಮೃತ ದೇಹವನ್ನ ಸೂಕ್ಷ್ಮವಾಗಿ ನೋಡಿದ್ರೇನೆ ಗೊತ್ತಾಗುತ್ತೆ. ಆಳವಾದ ಗಾಯವೊಂದು ತಲೆಯಲ್ಲಿತ್ತು. ಬಹುದೊಡ್ಡ ಆಯುಧ ಬಳಸಿ ತಲೆ ಮೇಲೂ ಡಿ ಗ್ಯಾಂಗ್​ ಭೀಕರ ದಾಳಿ ನಡೆಸಿರಬಹುದು ಅನ್ನೋ ಅನುಮಾನವಿತ್ತು. ಆದ್ರೀಗ, ಮರಣೋತ್ತರ ಪರೀಕ್ಷೆಯ ವರದಿ ತಲೆಗೂ ಬಲವಾಗಿ ಪೆಟ್ಟು ಬಿದ್ದಿದೆ. ತಲೆಬುರುಡೆಯ ಚಿಪ್ಪಿಗೂ ತೀವ್ರವಾಗಿ ಗಾಯವಾಗಿದೆಯಂತೆ.. ಪದೇ ಪದೇ ಮರದ ರಿಪೀಸ್​ಗಳಿಂದ ಹೊಡೆದ ಕಾರಣಕ್ಕೂ ಇಂಥದ್ದೊಂದು ಗಾಯ ತಲೆಯಲ್ಲಿ ಆಗಿರಬಹುದು ಎಂಬ ಬಗ್ಗೆಯೂ ಚರ್ಚೆ ನಡೀತಿದೆ.. ಅಲ್ಲದೇ ಬದುಕಿದ್ದಾಗಲೇ.. ನರಳುತ್ತಿದ್ದಾಗಲೇ ರೇಣುಕಾಸ್ವಾಮಿಯ ಇಡೀ ದೇಹವನ್ನೇ ಅನಾಮತ್ತಾಗಿ ಎತ್ತಿಕೊಂಡು ಗೋಡೆಗೆ ಎಸೆದ ಕಾರಣಕ್ಕೂ ಇಂಥಾ ತೀವ್ರ ಪೆಟ್ಟು ಆಗಿರಬಹುದು

ಮರಣೋತ್ತರ ಪರೀಕ್ಷೆಯ ಸತ್ಯ 6
ಆ ಚರ್ಮ ಸುಲಿದಿದ್ದರಾ? 
ಇದೊಂದು ಸಂಗತಿಯನ್ನು ಕೇಳೋಕೂ ಕಷ್ಟವಾಗುವಂಥದ್ದು. ರೇಣುಕಾಸ್ವಾಮಿ ಮೃತ ದೇಹ ಸಿಕ್ಕಾಗಲೇ ಪೊಲೀಸರಿಗೆ ಇಂಥದ್ದೊಂದು ಅನುಮಾನ ಎದ್ದಿತ್ತು. ಕಾರಣ, ಸುಮನಹಳ್ಳಿಯ ಮೋರಿಯ ಸನಿಹ ಸಿಕ್ಕ ಮೃತ ದೇಹ ಹಲವು ಕ್ರೌರ್ಯ ಸಾಕ್ಷಿ ನುಡಿಯುತ್ತಿತ್ತು. ಸದ್ಯ, ವೃಷಣಕ್ಕೇ ಬಲವಾಗಿ ಒದ್ದ ಕಾರಣ, ಪದೇ ಪದೇ ಶಾಕ್​ ಕೊಟ್ಟ ಕಾರಣ. ಅವರೆಡೂ ಛಿದ್ರವಾಗಿವೆ ಎನ್ನುತ್ತಿದೆಯಂತೆ. ವೃಷಣದಲ್ಲಿನ ರಕ್ತವೂ ಹೆಪ್ಪುಗಟ್ಟಿದೆ ಅನ್ನೋದು ಇದಕ್ಕೆ ಪೂರಕ ಸಂಗತಿಯಾಗಿದೆ.. ಇದೆಲ್ಲಾ ನೀಚ ಕ್ರೌರ್ಯಗಳ ಜೊತೆ ಜೊತೆಯಲ್ಲೇ ಡಿ ಗ್ಯಾಂಗ್​ನ ಅದೊಂದು ವಿಡಿಯೋ ಸಾಕ್ಷಿ ಸದ್ದು ಮಾಡುತ್ತಿದೆ.. ಬಹುಮುಖ್ಯವಾಗಿ ದರ್ಶನ್​ ಕ್ರೌರ್ಯ ಎಂಥದ್ದು ಅನ್ನೋದನ್ನ 3 ಸೆಕೆಂಡ್​ ವಿಡಿಯೋ ಹೇಳುತ್ತಿದೆಯಂತೆ. ಅದೇ ವಿಡಿಯೋ ಬಗ್ಗೆ ಇದೀಗ ಪೊಲೀಸರು ಹೊಸ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

3 ಸೆಕೆಂಡ್​ ವಿಡಿಯೋದಲ್ಲಿ ದರ್ಶನ್ ಕ್ರೌರ್ಯದ ಸಾಕ್ಷಿ ಇದೆಯೇ?
ರೇಣುಕಾಸ್ವಾಮಿಯನ್ನು ಹೊಡೆಯೋ ದೃಶ್ಯ ಮೊಬೈಲ್​ನಲ್ಲಿ ರೆಕಾರ್ಡ್​ ಆಗಿತ್ತು ಅನ್ನೋದು ಇವತ್ತಿಗೂ ಬಲವಾಗಿರೋ ವಾದ. ಖುದ್ದು ದರ್ಶನ್​ ರೇಣುಕಾಸ್ವಾಮಿಯನ್ನು ಥಳಿಸಿರೋ ದೃಶ್ಯದ ಬಗ್ಗೆಯೇ ಪೊಲೀಸರು ಇದೀಗ ತಲೆ ಕಡೆಸಿಕೊಂಡಿದ್ದಾರೆ.. 3 ಸೆಕೆಂಡ್​ನ ಆ ವಿಡಿಯೋ ಐಫೋನ್​ನಲ್ಲಿ ಡಿಲೀಟ್​ ಆಗಿದೆಯಂತೆ.. ಹಾಗಾಗಿಯೇ ಆ ವಿಡಿಯೋ ರಿಟ್ರೀವ್​ಗೆ ಪೊಲೀಸರು ಹರಸಾಹಸ ಪಡ್ತಿದ್ದಾರೆ.. ಅದೊಂದು ವಿಡಿಯೋ ಪೊಲೀಸರಿಗೆ ಸಿಕ್ಕಿಬಿಟ್ರೆ ದರ್ಶನ್​ ಲಾಕ್​ ಆಗೋದು ಪಕ್ಕಾ ಎನ್ನಲಾಗ್ತಿದೆ. ಇದೊಂದೇ ಒಂದು ಸ್ಫೋಟಕ ಸಾಕ್ಷಿ ಸಿಕ್ಕಿಬಿಟ್ರೆ ದರ್ಶನ್​ ಪರಪ್ಪನ ಅಗ್ರಹಾರದಿಂದ ಆಚೆ ಬರೋದು ಡೌಟ್​.

ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದ ವಿಡಿಯೋವನ್ನ ದರ್ಶನ್ ಶಿಷ್ಯರು ರೆಕಾರ್ಡ್ ಮಾಡಿದ್ದಾರಂತೆ. ಅದ್ರಲ್ಲೂ ರೇಣುಕಾಸ್ವಾಮಿಯನ್ನು ಖುದ್ದು ದರ್ಶನ್​ ಹೊಡೆಯುತ್ತಿರುವ ದೃಶ್ಯವನ್ನ ಪ್ರದೂಷ್ ರೆಕಾರ್ಡ್ ಮಾಡಿದ್ದನಂತೆ.. ಆ 3 ಸೆಕೆಂಡ್ ವಿಡಿಯೋದಲ್ಲಿ ದರ್ಶನ್ ಕರಾಳತೆ ಇದೆ ಎನ್ನಲಾಗುತ್ತಿದೆ.. ಹಲ್ಲೆ ನಡೆಸೋದನ್ನ ವಿಡಿಯೋ ಮಾಡಿಕೋ ಅಂತ ಖುದ್ದು ದರ್ಶನ್ ಹೇಳಿದ್ದರಂತೆ.. ಅದರಂತೆ ಪ್ರದೂಷ್ ತನ್ನ ಐಫೋನ್ ತೆಗೆದು ರೆಕಾರ್ಡ್ ಮಾಡಿದ್ದಾನೆ. ಮೂರ್ನಾಲ್ಕು ಸೆಕೆಂಡ್ ಆಗುತ್ತಿದ್ದಂತೆ ಸ್ಟಾಪ್ ಮಾಡಿ, ಬಳಿಕ ವಿಡಿಯೋ ಡಿಲೀಟ್ ಮಾಡಿದ್ದಾನೆ ಎನ್ನಲಾಗುತ್ತಿದೆ.. ಹಾಗಾಗಿಯೇ ಕಾಮಾಕ್ಷಿಪಾಳ್ಯ ಪೊಲೀಸರು ಸಿಐಡಿ ಟೆಕ್ನಿಕಲ್ ಸೆಲ್‌ಗೆ ಐಫೋನ್ ರವಾನಿಸಿದ್ದಾರೆ. ಐಫೋನ್‌ನಿಂದ ವಿಡಿಯೋ ರಿಟ್ರೀವ್ ಮಾಡೋದು ಅಷ್ಟು ಸುಲಭವಲ್ಲ. ಹಾಗಾಗಿ ಹೊಸ ಟೆಕ್ನಾಲಜಿ ಬಳಸಿ ವಿಡಿಯೋ ರಿಟ್ರೀವ್‌ಗೆ ಸಿಐಡಿ ಮುಂದಾಗಿದೆ. ಒಂದು ವೇಳೆ ವಿಡಿಯೋ ರಿಟ್ರೀವ್ ಆದರೆ ಅದು ಕೇಸ್‌ಗೆ ಮಹತ್ತರ ಸಾಕ್ಷಿಯಾಗೋದು ಪಕ್ಕಾ.. ಇದು ಮೂರು ಸೆಕೆಂಡ್​ ವಿಡಿಯೋದ ಸ್ಫೋಟಕ ಸತ್ಯ.. ಆದ್ರೆ, ಇದಕ್ಕಿಂತಲೂ ಬೆಚ್ಚಿಬೀಳಿಸುತ್ತಿರೋ ಸಂಗತಿಗಳು ಅಂದ್ರೆ, ಅದು ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯ ವರದಿಯ ಭಯಾನಕ ಸಂಗತಿಗಳು.

ಮರಣೋತ್ತರ ಪರೀಕ್ಷೆಯ ಸತ್ಯ 7
ಕಿವಿಯೊಂದನ್ನು ಕೊಯ್ದಿದ್ದರಾ? 
ಮರಣೋತ್ತರ ಪರೀಕ್ಷೆಯ ವರದಿ ಮತ್ತೊಂದು ಇಂಥಾ ಶಾಕಿಂಗ್​ ಸಂಗತಿಯನ್ನ ನೀಡುತ್ತಿದೆ.. ರೇಣುಕಾಸ್ವಾಮಿಯ ಒಂದು ಕಿವಿ ಕಟ್ ಆಗಿದೆ.. ಆ ಕಿವಿ ನಾಯಿಗಳಿಗೆ ಆಹಾರವಾಗಿರೋ ಸಾಧ್ಯತೆ ಇದೆ.. ಆದರೇ, ಕಿವಿ ರೇಣುಕಾಸ್ವಾಮಿ ಜೀವಂತವಾಗಿ ಇದ್ದಾಗಲೇ ಕಟ್ ಆಗಿದ್ದೋ? ಸತ್ತ ಮೇಲೆ ಕಟ್ ಆಗಿದ್ದೋ? ಅನ್ನೋ ಅನುಮಾನ ಎದ್ದಿದೆ.. ರೇಣುಕಾಸ್ವಾಮಿಯ ಮೃತ ದೇಹ ಸಿಕ್ಕ ಸ್ಥಳದಲ್ಲಿ ಎಲ್ಲೂ ತುಂಡಾದ ಕಿವಿಯ ಅವಶೇಷ ಸಿಕ್ಕಿಲ್ಲ.. ಆದರೇ, ಕಿವಿ ತುಂಡಾಯ್ತೋ? ತುಂಡು ಮಾಡಿದ್ರೋ? ಅನ್ನೋದೇ ಡಿ ಗ್ಯಾಂಗ್​ ಕ್ರೌರ್ಯದ ಮೇಲೆ ಬರೋ ಮತ್ತೊಂದು ಘೋರ ಅಪವಾದ.

ಮರಣೋತ್ತರ ಪರೀಕ್ಷೆಯ ಸತ್ಯ 8
ಮೃತ ದೇಹದ ಬಹುಪಾಲು ಮೂಳೆಗಳು ಮುರಿದಿವೆ 
ರೇಣುಕಾಸ್ವಾಮಿ ಸಾಯೋಕೂ ಮುಂಚೆ ನರಕ ಕಂಡಿದ್ದಾನೆ.. ಮರಣೋತ್ತರ ಪರೀಕ್ಷೆಯ ವರದಿಯಲ್ಲಿರೋ ಇದೊಂದು ಸಂಗತಿ ಆತ ಅದೆಷ್ಟು ನರಳಿ ನರಳಿ ಸತ್ತಿದ್ದಾನೆ ಅನ್ನೋದಕ್ಕೆ ಸಾಕ್ಷಿಯಾಗಿದೆ.. ಯಾಕಂದ್ರೆ, ಸ್ವಾಮಿಯ ದೇಹದ ಬಹುಪಾಲು ಮೂಳೆಗಳು ಛಿದ್ರಛಿದ್ರವಾಗಿವೆಯಂತೆ.. ಬಟ್ಟೆ ಒಗೆದಂತೆ ಗೋಡೆಗೆ ಪದೇ ಪದೇ ಎಸೆಯಲಾಗಿತ್ತು ಅನ್ನೋ ಆರೋಪದ ಮಾತುಗಳಿಗೆ ಪೂರಕವಾಗಿದೆ ಈ ಸಂಗತಿ.. ರೇಣುಕಾಸ್ವಾಮಿಯನ್ನು ಡಿ ಗ್ಯಾಂಗ್​ ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ. ಆತನನ್ನು ಹಿಡಿದು ಅಲ್ಲೇ ನಿಂತಿದ್ದ ಲಾರಿಗೆ ಗುದ್ದಿಸಿದ್ದಾರೆ. ಆಗ ತಲೆಗೆ ಗಂಭೀರ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿ ಆತ ಪ್ರಜ್ಞೆ ತಪ್ಪಿ, ರಕ್ತ ಸೋರಿ ಮೃತಪಟ್ಟಿದ್ದಾರೆ ಅನ್ನೋ ಆರೋಪವೂ ಇತ್ತು..

ಮರಣೋತ್ತರ ಪರೀಕ್ಷೆಯ ಸತ್ಯ 9
ಕೈಲಿ ಕುಯ್ದ ಗುರುತು, ಬೆನ್ನಿನ ಮೇಲೆ ಬಾಸುಂಡೆ ಬರೆಗಳು 
ರೇಣುಕಾಸ್ವಾಮಿ ಮೃತ ದೇಹದ ಮೇಲೆ ಕಂಡ ಎಲ್ಲಾ ಗಾಯದ ಗುರುತುಗಳಿಗಿಂತ್ಲೂ ಈ ಗುರುತುಗಳು ಬೇರೆಯದ್ದೇ ಕಥೆಯನ್ನು ಹೇಳಿದ್ದವು.. ಕೈಯಲ್ಲಿ ಕಾಣಿಸಿದ್ದ ಕುಯ್ದ ಗುರುತು.. ಬೆನ್ನಿನ ಮೇಲೆ ಎದ್ದಿದ್ದ ಬಾಸುಂಡೆ ಬರೆಗಳು.. ಈ ಎರಡೂ ಗಾಯದ ಗುರುತು ಎಲೆಕ್ಟ್ರಿಕ್ ಶಾಕ್​ನಿಂದಾಗಿನೋ.. ಮರದ ರಿಪೀಸ್​ನಿಂದಾಗೋ.. ಬೆಲ್ಟ್​ನಿಂದಾಗಿನೋ.. ಪದೇ ಪದೇ ಹೊಡೆದ ಕಾರಣ ಬಾಸುಂಡೆ ಎದ್ದಿವೆ. ಗಾಯಗಳಾಗಿವೆ ಎಂಬುದು ಮರಣೋತ್ತರ ವರದಿಯಲ್ಲಿ ದಾಖಲಾಗಿದೆ ಎಂದು ಹೇಳಲಾಗುತ್ತಿದೆ.

ಮರಣೋತ್ತರ ಪರೀಕ್ಷೆಯ ಸತ್ಯ 10
ಮೃತ ದೇಹದ ಬಹುಭಾಗ ಕಪ್ಪು ಬಣ್ಣಕ್ಕೆ ತಿರುಗಿದೆ 
ರೇಣುಕಾಸ್ವಾಮಿ ದೇಹದ ಬಹುಭಾಗ ಕಪ್ಪು ಬಣ್ಣದ ಗುರುತುಗಳಿಂದ ವಿಚಿತ್ರವಾಗಿ ಕಾಣುತ್ತಿತ್ತು.. ಮೇಲ್ನೋಟಕ್ಕೆ ಅದು ಸುಟ್ಟ ಗಾಯಗಳು ಅಂತ ಗುರ್ತಿಸಲಾಗಿತ್ತು.. ದೇಹದ ಬಹುಭಾಗ ಕಪ್ಪು ಬಣ್ಣಕ್ಕೆ ತಿರುಗೋದಕ್ಕೆ ಕಾರಣ ಎಲೆಕ್ಟ್ರಿಕ್ ಶಾಕ್ ನೀಡಿ ಚಿತ್ರಹಿಂಸೆ ಕೊಟ್ಟಿರಬಹುದು ಎನ್ನಲಾಗುತ್ತಿದೆ.. ಇನ್ನು, ಕೈ ಮೇಲಿನ ಹಚ್ಚೆಯನ್ನೂ ಕಟುಕರು ಚರ್ಮ ಸುಲಿದು ಕಿತ್ತೆಸೆದರಾ? ಸಿಗರೇಟ್​​ನಿಂದ ಸುಟ್ಟಿದ್ದಾರಾ? ಶಾಕ್​ ಕೊಟ್ಟು ಚಿತ್ರಹಿಂಸೆ ನೀಡಿದ್ರಾ? ಇಷ್ಟೆಲ್ಲಾ ಅನುಮಾನಕ್ಕೂ ಕಾರಣವಾಗಿರೋದು ರೇಣುಕಾಸ್ವಾಮಿ ದೇಹದ ಮೇಲಿನ ಕಪ್ಪು ಬಣ್ಣದ ಕಲೆಗಳು. ಮರಣೋತ್ತರ ಪರೀಕ್ಷೆಯ ವರದಿ ಸಹ ಇದು ಸುಟ್ಟ, ಎಲೆಕ್ಟ್ರಿಕ್​​ ಶಾಕ್​ನ ಗುರುತುಗಳು ಎನ್ನುತ್ತಿದೆ. ಸತತ ಐದು ಗಂಟೆ ಕಾಲ ದರ್ಶನ್​​ ಅಂಡ್​ ಗ್ಯಾಂಗ್​ ರೇಣುಕಾಸ್ವಾಮಿಗೆ ಪಟ್ಟಣಗೆರೆಯಲ್ಲೇ ಯಮಪುರಿಯ ದರ್ಶನ ಮಾಡಿಸಿದೆ ಅನ್ನೋದಕ್ಕೆ ಈ ಮರಣೋತ್ತರ ಪರೀಕ್ಷೆಯ ವರದಿಗಳೇ ಸಾಕ್ಷಿಯಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More