/newsfirstlive-kannada/media/post_attachments/wp-content/uploads/2024/12/IND-VS-AUS-8.jpg)
ಗಬ್ಬಾ ಟೆಸ್ಟ್ ಕೊನೇಯ ದಿನವಾದ ಇವತ್ತು ರೋಚಕ ಘಟ್ಟ ತಲುಪಿದೆ. ಇಂದು ಬೆಳಗ್ಗೆ ಮಳೆರಾಯ ಪಂದ್ಯ ಆರಂಭಕ್ಕೆ ಅಡ್ಡಿಪಡಿಸಿದ. ಮಳೆಯ ನಡುವೆಯೂ ಪಂದ್ಯ ಆರಂಭ ಆಗ್ತಿದ್ದಂತೆ, ಭಾರತ 260 ರನ್ಗೆ ಮೊದಲ ಇನ್ನಿಂಗ್ಸ್ ಮುಗಿಸಿತು.
ಎರಡನೇ ಇನ್ನಿಂಗ್ಸ್ಗೆ ಇಳಿದ ಆಸ್ಟ್ರೇಲಿಯಾ ಟೀಂ ಇಂಡಿಯಾ ಬೌಲರ್ಸ್ ಬಿಗ್ ಶಾಕ್ ನೀಡಿದರು. ಬೂಮ್ರಾ, ಸಿರಾಜ್ ಹಾಗೂ ಆಕಾಶ್ ದೀಪ್ ವಿಕೆಟ್ ಮೇಲೆ ವಿಕೆಟ್ ಕಿತ್ತರು. ಬೂಮ್ರಾ 3, ಸಿರಾಜ್ ಹಾಗೂ ಆಕಾಶ್ ದೀಪ್ ತಲಾ ಎರಡು ವಿಕೆಟ್ ಪಡೆದರು. ಪರಿಣಾಮ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡು ಕೇವಲ 89 ರನ್ಗಳಿಸಿತ್ತು. ನಂತರ ಆಸ್ಟ್ರೇಲಿಯಾ ಡಿಕ್ಲೇರ್ ಮಾಡಿಕೊಂಡಿತು.
ಇದನ್ನೂ ಓದಿ:ಪುಷ್ಪಾ 2 ಸಿನಿಮಾ ವೇಳೆ ನಡೆದ ಕಾಲ್ತುಳಿತ; ಮೃತ ರೇವತಿ ಮಗನ ಆರೋಗ್ಯ ಸ್ಥಿತಿ ಚಿಂತಾಜನಕ !
ಮೊದಲ ಇನ್ನಿಂಗ್ಸ್ನಲ್ಲಿ 185 ರನ್ಗಳ ಹಿನ್ನಡೆ ಅನುಭವಿಸಿರುವ ಟೀಂ ಇಂಡಿಯಾಗೆ 274 ರನ್ಗಳ ಗುರಿಯನ್ನ ನೀಡಿದೆ. ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ ವಿಕೆಟ್ನಷ್ಟವಿಲ್ಲದೇ 8 ರನ್ಗಳಿಸಿದೆ. ಇದೀಗ ಗೆಲ್ಲಬೇಕು ಎಂದರೆ ಭಾರತ 267 ರನ್ಗಳನ್ನು ಬಾರಿಸಬೇಕಿದೆ. ಅದು ಸಾಧ್ಯವಾಗದಿದ್ದರೆ ಸುಲಭವಾಗಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಅವಕಾಶ ಕೂಡ ಭಾರತಕ್ಕೆ ಇದೆ.
ಇದನ್ನೂ ಓದಿ:ಯಾರ ಪ್ರಭಾವಕ್ಕೂ ಒಳಗಾಗಿಲ್ಲ, ಗಾಡ್ಫಾದರ್ ಇಲ್ಲ; ಐಐಟಿ ಪದವೀಧರ ಕೋಟ್ಯಾಧಿಪತಿ ಆಗಿದ್ದು ಹೇಗೆ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್