/newsfirstlive-kannada/media/post_attachments/wp-content/uploads/2025/06/team-india-5.jpg)
ಇಂಡೋ ಇಂಗ್ಲೆಂಡ್ ಟೆಸ್ಟ್ ಬ್ಯಾಟಲ್ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ. ಸರಣಿಯಲ್ಲಿ ಮುನ್ನಡೆಯಲ್ಲಿರುವ ಇಂಗ್ಲೆಂಡ್, ಸರಣಿ ಉಳಿಸಿಕೊಳ್ಳಲು ಹೋರಾಡುವ ಯತ್ನದಲ್ಲಿದ್ರೆ, ಅತ್ತ ಯಂಗ್ ಇಂಡಿಯಾ, ಬಿಗ್ ಫೈಟ್ ನೀಡಿ ಸರಣಿ ಸಮಬಲ ಮಾಡಿಕೊಳ್ಳುವ ಕನಸಿನಲ್ಲಿದೆ. ಹಾಗಾದ್ರೆ, ಡು ಆರ್ ಡೈ ಪರಿಸ್ಥಿತಿಯಲ್ಲಿರುವ ಟೀಮ್ ಇಂಡಿಯಾ, ಫೈನಲ್ ಬ್ಯಾಟಲ್ ಗೆದ್ದು ಸರಣಿ ಉಳಿಸಿಕೊಳ್ಳುತ್ತಾ?
ಇಂಡೋ, ಇಂಗ್ಲೆಂಡ್ ಫೈನಲ್ ಬ್ಯಾಟಲ್ಗೆ ಕೌಂಟ್ಡೌನ್..!
ಇಂಡೋ, ಇಂಗ್ಲೆಂಡ್ ಹೈವೋಲ್ಟೇಜ್ ಟೆಸ್ಟ್ ಕದನಕ್ಕೆ ಕೌಂಟ್ಡೌನ್ ಶುರುವಾಗಿದೆ. ಇಂದಿನಿಂದ ಆರಂಭವಾಗಲಿರುವ ಅಂತಿಮ ಪಂದ್ಯಕ್ಕೆ ಲಂಡನ್ನ ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂ ವೇದಿಕೆಯಾಗ್ತಿದೆ. ಸರಣಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಟೀಮ್ ಇಂಡಿಯಾ ಪಾಲಿಗೆ ಡು ಆರ್ ಡೈ ಮ್ಯಾಚ್ ಆಗಿದ್ರೆ. ಮುನ್ನಡೆ ಕಾಯ್ದುಕೊಂಡಿರುವ ಇಂಗ್ಲೆಂಡ್, ಟೀಮ್ ಇಂಡಿಯಾಗೆ ಸ್ಟ್ರೋಕ್ ನೀಡುವ ಕನಸಿನಲ್ಲಿದೆ. ಹೀಗಾಗಿ ಹೈವೋಲ್ಟೇಜ್ ಮ್ಯಾಚ್ನಲ್ಲಿ ಯಾರ್ ಗೆಲ್ತಾರೆ ಎಂಬ ಕ್ಯೂರಿಯಾಸಿಟಿ ಸಹಜವಾಗೇ ಮನೆ ಮಾಡಿದೆ. ಆದ್ರೆ, ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನದ್ದೇ ಪ್ರಶ್ನೆಯಾಗಿದೆ.
ರಿಷಭ್ ಪಂತ್ ಔಟ್.. ಜುರೇಲ್ ಇನ್..!
ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗದಲ್ಲಿ ಹೆಚ್ಚೇನು ಬದಲಾವಣೆ ಇಲ್ಲ. ರಿಷಭ್ ಪಂತ್ ಇಂಜುರಿ ಕಾರಣಕ್ಕೆ ದ್ರುವ್ ಜುರೇಲ್ ಕಾಣಿಸಿಕೊಳ್ಳುವುದು ಬಹುತೇಕ ಫಿಕ್ಸ್. ಹೀಗಾಗಿ ಕಳೆದ 2 ಪಂದ್ಯಗಳಲ್ಲಿ ಕೇವಲ ವಿಕೆಟ್ ಕೀಪಿಂಗ್ ಮಾಡಿದ್ದ ದ್ರುವ್ ಜುರೇಲ್, ಈಗ ಬ್ಯಾಟಿಂಗ್ ಜವಾಬ್ದಾರಿಯೂ ನಿಭಾಯಿಸುವ ಚಾಲೆಂಜ್ ಎದುರಾಗಲಿದೆ.
ಇದನ್ನೂ ಓದಿ: ಧರ್ಮಸ್ಥಳ ಕೇಸ್ಗೆ ಹೊಸ ತಿರುವು.. ಪ್ಯಾನ್, 1 ಡೆಬಿಟ್ ಕಾರ್ಡ್ ಬಗ್ಗೆಯೂ ತೀವ್ರ ತನಿಖೆ..!
ಓವಲ್ ಟೆಸ್ಟ್ನಲ್ಲಿ ಆಡಲ್ವಾ ಬೂಮ್ರಾ..!?
ಟೀಮ್ ಇಂಡಿಯಾದ ಬಿಗೆಸ್ಟ್ ಕ್ವಷನ್, ಜಸ್ಪ್ರಿತ್ ಬೂಮ್ರಾ ಆಡ್ತಾರಾ ಇಲ್ವಾ..? ಟೆಸ್ಟ್ ಸರಣಿ ಮುನ್ನ ಕೇವಲ 3 ಪಂದ್ಯಗಳನ್ನಷ್ಟೇ ಬೂಮ್ರಾ ಆಡ್ತಾರೆ ಎನ್ನಲಾಗಿತ್ತು. ಅದರಂತೆ ಈಗಾಗಲೇ 3 ಪಂದ್ಯಗಳನ್ನಾಡಿರುವ ಜಸ್ಪ್ರೀತ್ ಬೂಮ್ರಾ, ವರ್ಕ್ಲೋಡ್ದೃಷ್ಟಿಯಿಂದ ನಿರ್ಣಾಯಕ ಪಂದ್ಯದಲ್ಲೇ ರೆಸ್ಟ್ ಮಾಡ್ತಿದ್ದಾರೆ ಎನ್ನಲಾಗಿದೆ. ಬೂಮ್ರಾ ಆಡುವ ಬಗ್ಗೆ ಕ್ಯಾಪ್ಟನ್ ಶುಭ್ಮನ್ ಅಡ್ಡಗೋಡೆ ಮೇಲೆ ದೀಪವಿಟ್ಟಿದ್ದಾರೆ. ಅಕಸ್ಮಾತ್ ಬೂಮ್ರಾ ಆಡದಿದ್ರೆ. ಆಕಾಶ್ ದೀಪ್ ಆಡುವುದು ಬಹುತೇಕ ಫಿಕ್ಸ್.!
ಅನ್ಶುಲ್ ಕಾಂಬೋಜ್ ಆಡ್ತಾರಾ ಇಲ್ವಾ..?
ಮ್ಯಾಂಚೆಸ್ಟರ್ ಟೆಸ್ಟ್ನಲ್ಲಿ ಡೆಬ್ಯೂ ಮಾಡಿದ್ದ ಅಂನ್ಶುಲ್ ಕಂಬೋಜ್, ಮೊದಲ ಪಂದ್ಯದಲ್ಲೇ ಡಿಸಾಸ್ಟರ್ ಪರ್ಫಾಮೆನ್ಸ್ ನೀಡಿದ್ದಾರೆ. ಇದು ಸಹಜವಾಗೇ ಅನ್ಶುಲ್ ಮುಂದುವರಿಕೆ ಅನಿವಾರ್ಯನಾ ಎಂಬ ಪ್ರಶ್ನೆ ಹುಟ್ಟಿಹಾಕಿದೆ. ಹೀಗಾಗಿ ಇಂಜುರಿಯಿಂದ ಫಿಟ್ ಆಗಿರುವ ಅರ್ಷದೀಪ್ ಸಿಂಗ್, ಕಾಂಬೋಜ್ ಜಾಗದಲ್ಲಿ ಡೆಬ್ಯೂ ಮಾಡೋದು ಶತಸಿದ್ಧ.
ಕುಲ್ದೀಪ್ ಕಥೆ ಏನು..?
ಇಂಗ್ಲೆಂಡ್ ಸರಣಿ ಆರಂಭದಿಂದ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಆ ಮ್ಯಾಚ್ ಸಿಗುತ್ತೆ, ಈ ಮ್ಯಾಚ್ ಚಾನ್ಸ್ ಸಿಗುತ್ತೆ ಎಂದು ಬೆಂಚ್ ಕಾದಿದ್ದ ಕುಲ್ದೀಪ್, ಇದುವರೆಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಪಡೆಯಹದಿರುವುದು ನಿಜಕ್ಕೂ ಅಚ್ಚರಿ. ಹೀಗಾಗಿ ಶಾರ್ದೂಲ್ ಠಾಕೂರ್ಗೆ ಬೆಂಚ್ ಕಾಯಿಸಿ ಕುಲ್ದೀಪ್ಗೆ ಒಂದಾದ್ರೂ ಅವಕಾಶ ನೀಡ್ತಾರಾ ಅನ್ನೋದು ಕೌತುಕ.?
ಇದನ್ನೂ ಓದಿ: ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ
ಡು ಆರ್ ಡೈ.. ಸರಣಿ ಸಮಬಲನಾ..? ಮುಖಭಂಗವಾ..?
ಒಂದ್ಕಡೆ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರನ್ನಾಡಿಸುವುದು ಎಂಬ ತಲೆನೋವಿನಲ್ಲಿರುವ ಟೀಮ್ ಇಂಡಿಯಾಗೆ, ಮತ್ತೊಂದ್ಕಡೆ ಓವಲ್ ಟೆಸ್ಟ್ನಲ್ಲಿ ಗೆಲ್ಲಲೇಬೇಕಾದ ಒತ್ತಡ ಇದೆ. 4 ಪಂದ್ಯಗಳ ಪೈಕಿ 2 ಸೋಲು, 1 ಗೆಲುವು, 1 ಡ್ರಾ ಸಾಧಿಸಿರುವ ಟೀಮ್ ಇಂಡಿಯಾ, ಸರಣಿ ಸಮಬಲಕ್ಕಾಗಿ ಹೋರಾಡಲೇಬೇಕಾದ ಅನಿವಾರ್ಯತೆ ಸಿಲುಕಿದೆ. ಹೀಗಾಗಿ ಕೆಚ್ಚೆದೆಯ ಹೋರಾಟ ನೀಡಬೇಕಾಗಿದೆ. ಇಲ್ಲ ಸರಣಿ ಸೋಲಿನ ಮುಖಭಂಗ ಫಿಕ್ಸ್.
ಇಂಗ್ಲೆಂಡ್ಗೆ ಅಘಾತ.. ಬೆನ್ ಸ್ಟೋಕ್ಸ್ ಔಟ್, ಆರ್ಚರ್ಗೆ ರೆಸ್ಟ್..!
5ನೇ ಟೆಸ್ಟ್ ಪಂದ್ಯಕ್ಕೂ ಇಂಗ್ಲೆಂಡ್ ತಂಡಕ್ಕೂ ಅಘಾತ ಎದುರಾಗಿದೆ. ಸರಣಿಯುದ್ದಕ್ಕೂ ಟೀಮ್ ಇಂಡಿಯಾಗೆ ಕಾಡಿದ್ದ ನಾಯಕ ಬೆನ್ ಸ್ಟೋಕ್ಸ್, ಶೋಲ್ಡರ್ ಇಂಜುರಿಯ ಕಾರಣಕ್ಕೆ ಪಂದ್ಯದಿಂದ ಹೊರಬಿದ್ದಿದ್ದಾರೆ. ಮತ್ತೊಂದ್ಕಡೆ ವೇಗಿ ಜೋಫ್ರಾ ಆರ್ಚರ್ಗೂ ರೆಸ್ಟ್ ನೀಡಲಾಗಿದೆ. ಒಲಿ ಪೋಪ್ ಇಂಗ್ಲೆಂಡ್ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸರಣಿ ಉಳಿಸಿಕೊಳ್ಳಬೇಕಾದ್ರೆ, ಕನಿಷ್ಠ ಡ್ರಾ ಮಾಡಿಕೊಳ್ಳಬೇಕಿರುವ ಅನಿವಾರ್ಯತೆಯಲ್ಲಿರುವ ಇಂಗ್ಲೆಂಡ್ಗೆ ಇದು ನಿಜಕ್ಕೂ ಬಿಗ್ ಶಾಕ್.
ಇದನ್ನೂ ಓದಿ: Baba Vanga: ಮತ್ತೆ ನಿಜವಾಯ್ತು ಬಾಬಾ ವಾಂಗಾ ನುಡಿದ ಭವಿಷ್ಯ.. ಎಲ್ಲರಿಗೂ ಅಚ್ಚರಿ.. ಏನದು?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ