/newsfirstlive-kannada/media/post_attachments/wp-content/uploads/2025/06/KARUN-NAIR-3.jpg)
8 ವರ್ಷಗಳ ಬಳಿಕ ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡಿದ ಕರುಣ್​ ನಾಯರ್​​ ಸಿಕ್ಕ ಅವಕಾಶವನ್ನ ಕೈ ಚೆಲ್ಲಿದ್ರು. ಲೀಡ್ಸ್​ನಲ್ಲಿ ನಡೆಯುತ್ತಿರೋ ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್​​ನಲ್ಲಿ ಖಾತೆ ತೆರೆಯುವಲ್ಲಿ ಕರುಣ್​ ನಾಯರ್​ ವಿಫಲರಾದರು. 4 ಎಸೆತ ಎದುರಿಸಿದ ಕರುಣ್​ ನಾಯರ್​, ಬೆನ್​ ಸ್ಟೋಕ್ಸ್​ ಬೌಲಿಂಗ್​ನಲ್ಲಿ ಒಲಿಪೋಪ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು.
ಮೊದಲ ಇನ್ನಿಂಗ್ಸ್​ನಲ್ಲಿ ಹಿನ್ನಡೆ ಅನುಭವಿಸಿರುವ ನಾಯರ್​ ಎರಡನೇ ಇನ್ನಿಂಗ್ಸ್​ನಲ್ಲಿ ಮಿಂಚಬೇಕಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ಆಡಲೇಬೇಕಾದ ಅನಿವಾರ್ಯತೆ ಇದೆ. 8 ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಕರುಣ್ ನಾಯರ್​​ಗೆ, ಮತ್ತೆ ಗೋಲ್ಡನ್ ಅವಕಾಶ ಸಿಕ್ಕಿದೆ. ಇದನ್ನು ಕರುಣ್ ಸರಿಯಾಗಿ ಬಳಸಿಕೊಂಡರೆ ಅಷ್ಟೇ ತಂಡದಲ್ಲಿ ಸ್ಥಾನ ಸಿಗಲಿದೆ. ಇಲ್ಲದಿದ್ದರೆ ಅವಕಾಶಕ್ಕಾಗಿ ಯಂಗ್​ಸ್ಟರ್​ಗಳು ಕ್ಯೂನಲ್ಲಿದ್ದಾರೆ.
ಇನ್ನು ಟೆಸ್ಟ್​ ಕತೆ ಏನಾಗಿದೆ ಅಂತಾ ನೋಡೋದಾದರೆ, ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 471 ರನ್​ ಗಳಿಸಿದೆ. ಟೀಂ ಇಂಡಿಯಾ ಈ ಬೃಹತ್ ಸ್ಕೋರ್​ಗೆ ಎದುರಾಳಿ ಖಡಕ್ ಉತ್ತರ ನೀಡಿದೆ. ನಿನ್ನೆಯ ದಿನದ ಅಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡು 209 ರನ್​ಗಳಿಸಿದೆ. ಟೀಂ ಇಂಡಿಯಾ ಪರ, ಬೂಮ್ರಾ ಸ್ಟ್ರೈಕ್ ಮಾಡಿದ್ದು, ಮೂರು ವಿಕೆಟ್​ ಒಬ್ಬರೇ ಕಿತ್ತಿದ್ದಾರೆ. ಬೂಮ್ರಾಗೆ ಉಳಿದ ಬೌಲರ್ಸ್​ ಸಹಾಯ ಮಾಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ