IND vs ENG ಫೈನಲ್ ಟೆಸ್ಟ್​; ಪಿಚ್​ ಹೇಳ್ತಿರುವ ಕಥೆ ಏನು? ಯಾರಿಗೆ ಫೇವರ್?

author-image
Ganesh
Updated On
ಲಾರ್ಡ್ಸ್​ ಟೆಸ್ಟ್​ ಮ್ಯಾಚ್​ ಫುಲ್​ ಥ್ರಿಲ್ಲಿಂಗ್​.. ಪಂದ್ಯಕ್ಕೆ ರೋಚಕ ಟಚ್ ಕೊಟ್ಟ ಈ ಕಿರಿಕ್​​ಗಳು..!
Advertisment
  • ಇಂಡೋ, ಇಂಗ್ಲೆಂಡ್ ಫೈನಲ್​ ಬ್ಯಾಟಲ್​ಗೆ ಕ್ಷಣಗಣನೆ
  • ಟಾಪ್​ ಆರ್ಡರ್ ಮೇಲಿದೆ ಹೆಚ್ಚುವರಿ ಜವಾಬ್ದಾರಿ
  • ಪಂತ್ ಸ್ಥಾನ ತುಂಬುವುದೇ ಬಿಗೆಸ್ಟ್ ಚಾಲೆಂಜ್

ಇಂಡೋ, ಇಂಗ್ಲೆಂಡ್ ಟೆಸ್ಟ್​ ಸರಣಿಯ ಬ್ಯಾಟಲ್​ ಅಂತಿಮ ಘಟ್ಟಕ್ಕೆ ತಲುಪಿದೆ. ಬರೋಬ್ಬರಿ ಒಂದೂವರೆ ತಿಂಗಳಿನಿಂದ ನಡೀತಿದ್ದ ಮದಗಜಗಳ ಹೋರಾಟದಲ್ಲಿ ಯಾರು ಗೆಲ್ತಾರೆ ಎಂಬ ಪ್ರಶ್ನೆಗೆ ಆಗಸ್ಟ್ 4ಕ್ಕೆ ತೆರೆ ಬೀಳಲಿದೆ. ಸರಣಿಯುದ್ಧಕ್ಕೂ ಸಾಲಿಡ್ ಆಟವಾಡಿರುವ ಟೀಮ್ ಇಂಡಿಯಾ, ಸರಣಿ ಸೋಲಿನಿಂದ ತಪ್ಪಿಸಿಕೊಳ್ಳಬೇಕಾದ್ರೆ ಈ ಚಾಲೆಂಜ್​​ಗಳನ್ನು ಮೆಟ್ಟಿ ನಿಲ್ಲಬೇಕಿದೆ.

ಕನ್ನಿಂಗ್ಟನ್​ ಓವಲ್​​​ನ ಫೈನಲ್​​ ಬ್ಯಾಟಲ್​​ಗೆ ಕ್ಷಣಗಣನೆ ಶುರುವಾಗಿದೆ. 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-2ರ ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾ, ಇಂದಿನಿಂದ ಆರಂಭವಾಗುವ ಪಂದ್ಯ​​ ಗೆಲ್ಲೋ ಫ್ರಷರ್​​​​ನಲ್ಲಿದೆ. ಒಂದೇ ಒಂದು ಗೆಲುವಿನೊಂದಿಗೆ ಸರಣಿ ಸಮಬಲ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿರುವ ಶುಭ್​ಮನ್ ಪಡೆ, ಸರಣಿ ಸೋಲಿನ ಮುಖಭಂಗದಿಂದ ಪಾರಾಗಲು ಪಣ ತೊಟ್ಟಿದೆ. ಇಲ್ಲಿ ಟೀಮ್ ಇಂಡಿಯಾ ಗೆಲ್ಲೋದು ಅಷ್ಟು ಸುಲಭದಲ್ಲ. ಹಾಗಾಂತ ಅಸಾಧ್ಯವೂ ಅಲ್ಲ. ಇದು ನಿಜವಾಗಬೇಕಾದ್ರೆ ಈ ಚಾಲೆಂಜ್ ಮೆಟ್ಟಿನಿಲ್ಲಬೇಕಿದೆ.

ಇದನ್ನೂ ಓದಿ: 5 ಸ್ಥಳಗಳಲ್ಲೂ ಸಿಗಲಿಲ್ಲ ಕಳೇಬರ.. SIT ಹೆಲ್ಪ್​ಲೈನ್​​ ರಿಲೀಸ್, ಮುಂದಿನ ತನಿಖೆ ತೀವ್ರ ಕುತೂಹಲ..!

ಟಾಪ್ ಆರ್ಡರ್​ ಬಿಗ್ ಸ್ಕೋರ್​ ಇಂಪಾರ್ಟೆಂಟ್

ಟೀಮ್ ಇಂಡಿಯಾ ಗೆಲುವಿನ ಅಡಿಪಾಯ ಟಾಪ್ ಆರ್ಡರ್​​. ಟಾಪ್ ಆರ್ಡರ್​ ಬ್ಯಾಟರ್​​ಗಳಾದ ಕೆ.ಎಲ್.ರಾಹುಲ್, ಯಶಸ್ವಿ ಜೈಸ್ವಾಲ್ ಸಾಲಿಡ್ ಸ್ಟಾರ್ಟ್​ ಜೊತೆಗೆ ಬಿಗ್ ಸ್ಕೋರ್ ಕಲೆಹಾಕಬೇಕಿದೆ. ಸರಣಿಯುದ್ದಕ್ಕೂ ಕಾಡ್ತಿರುವ 3ನೇ ಕ್ರಮಾಂಕದ ಬ್ಯಾಟರ್​​ನಿಂದ ರನ್ ಹೊಳೆ ಹರಿಯುವುದರ ಜೊತೆಗೆ ನಾಯಕ ಶುಭ್​ಮನ್ ಗಿಲ್, ಮತ್ತೊಂದು ಬಿಗ್ ಇನ್ನಿಂಗ್ಸ್​ ಕಟ್ಟಬೇಕಿದೆ. ಆ ಮೂಲಕ ಬಿಗ್ ಟಾರ್ಗೆಟ್ ಸೆಟ್ ಮಾಡಲು ಉತ್ತಮ ಅಡಿಪಾಯ ಹಾಕಬೇಕಿದೆ.

ಪಂತ್ ಸ್ಥಾನ ತುಂಬುವುದೇ ಬಿಗೆಸ್ಟ್ ಚಾಲೆಂಜ್

ಟೀಮ್ ಇಂಡಿಯಾ ಗೆಲುವು. ಕೇವಲ ಟಾಪ್ ಆರ್ಡರ್ ಮೇಲೆಯೇ ನಿಂತಿಲ್ಲ. ಮಿಡಲ್ ಆರ್ಡರ್ ಬ್ಯಾಟಿಂಗ್ ರೋಲ್, ವೆರಿ ವೆರಿ ಇಂಪಾರ್ಟೆಂಟ್. ಇಂಗ್ಲೆಂಡ್​ಗೆ ಕೌಂಟರ್ ಅಟ್ಯಾಕ್ ನೀಡ್ತಿದ್ದ ರಿಷಭ್ ಪಂತ್​ ತಂಡದಲ್ಲಿ ಇಲ್ಲ. ಹೀಗಾಗಿ ದ್ರುವ್ ಜುರೇಲ್, ವಾಷ್ಟಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಬೇಕಿದೆ. ಟಾಪ್ ಆರ್ಡರ್​ ಕೈಕೊಟ್ಟಲ್ಲಿ ತಂಡಕ್ಕೆ ಆಸರೆಯಾಗುವಂತಹ ಇನ್ನಿಂಗ್ಸ್​ ಕಟ್ಟುವುದು ಅನಿವಾರ್ಯ. ಸೋಲು ಗ್ಯಾರಂಟಿ.

ಬೂಮ್ರಾ ರೆಸ್ಟ್.. ಸಿರಾಜ್, ಆಕಾಶ್​​ಗೆ ‘ರಿಯಲ್ ಟೆಸ್ಟ್’​

ಡು ಆರ್​ ಡೈ ಮ್ಯಾಚ್​​ನಲ್ಲೇ ಜಸ್​ಪ್ರೀತ್ ಬೂಮ್ರಾ ಆಡ್ತಿಲ್ಲ. ಇದು ಸಹಜವಾಗೇ ಟೀಮ್ ಇಂಡಿಯಾಗೆ ಹಿನ್ನಡೆಯಾಗುವಂತೆ ಮಾಡಿದೆ. ಇದೀಗ ಬೂಮ್ರಾ ಅಲಭ್ಯತೆಯಲ್ಲಿ ಎಡ್ಜ್​ಬಾಸ್ಟನ್ ಟೆಸ್ಟ್​ ಗೆಲ್ಲಿಸಿಕೊಟ್ಟಿದ್ದ ಆಕಾಶ್ ದೀಪ್, ಮೊಹಮ್ಮದ್ ಸಿರಾಜ್​.. ಮಗದೊಮ್ಮೆ ಎಡ್ಜ್​ಬಾಸ್ಟನ್ ಟೆಸ್ಟ್​ ಫಲಿತಾಂಶ ಪುನರಾವರ್ತಿಸುವಂತ ಪರ್ಫಾಮೆನ್ಸ್​ ನೀಡಬೇಕಿದೆ. ಆ ಮೂಲಕ ಬೂಮ್ರಾ ಇಲ್ಲದ ಹೊರತಾಗಿಯೂ ನಾವು ಗೆಲ್ಲಬಲ್ಲೆವು ಅನ್ನೋದನ್ನ ಮತ್ತೊಮ್ಮೆ ಫ್ರೂವ್ ಮಾಡಬೇಕಿದೆ.

ಇದನ್ನೂ ಓದಿ: ಕಾಮಾಕ್ಯ ದೇವಿ ಮುಂದೆ ನಿಂತು ವಿಜಯಲಕ್ಷ್ಮೀ ಸಂದೇಶ.. ಪ್ರಥಮ್ ಕೇಸ್​​ನಲ್ಲಿ FIR, ಜಗ್ಗೇಶ್ ಏನಂದ್ರು..?

ಡೆಬ್ಯು ಮ್ಯಾಚ್​​ ಒತ್ತಡ ಗೆಲ್ಲಬೇಕು ಅರ್ಷದೀಪ್​ ಸಿಂಗ್

ಅರ್ಷದೀಪ್ ಸಿಂಗ್​ ಬಹುದಿನಗಳ ಕನಸು ನನಸಾಗ್ತಿದೆ. ಅರ್ಷದೀಪ್ ಡೆಬ್ಯೂ ಕಾರಣಕ್ಕೆ ಟೀಮ್ ಇಂಡಿಯಾ ಬೌಲಿಂಗ್​ನಲ್ಲಿ ರೈಟ್​ ಅಂಡ್ ಲೆಫ್ಟ್ ಕಾಂಬಿನೇಷನ್ ಸಿಗ್ತಿದೆ. ಇದು ಸಹಜವಾಗೇ ಟೀಮ್ ಇಂಡಿಯಾ ಬೌಲಿಂಗ್ ಅಟ್ಯಾಕ್​​ಗೆ ಬಲ ಹೆಚ್ಚಿಸುತ್ತೆ. ಡೆಬ್ಯೂ ಮಾಡುವ ಖುಷಿಯಲ್ಲಿರುವ ಪಂಜಾಬ್ ಪುತ್ತರ್​​​​ಗೆ ಮತ್ತೊಂದ್ಕಡೆ ಒತ್ತಡವೂ ಕಾಡ್ತಿದೆ. ಇದು ಕೇವಲ ಡೆಬ್ಯೂ ಒತ್ತಡವಲ್ಲ. ಡು ಆರ್​ ಡೈ ಮ್ಯಾಚ್​​ನಲ್ಲಾಡ್ತಿರುವ ಆತಂಕ. ಹೀಗಾಗಿ ಫ್ರಷರ್ ಫ್ರೀ ಬೌಲಿಂಗ್ ಮಾಡಿದ್ರೆ, ಆಂಗ್ಲರ ಎಡೆ ಮುರಿಕಟ್ಟೋದ್ರಲ್ಲಿ ಡೌಟೇ ಇಲ್ಲ.

ಮೊದಲ 3 ದಿನ ಟೀಮ್ ಇಂಡಿಯಾಗೆ ನಿರ್ಣಾಯಕ

ಟೀಮ್ ಇಂಡಿಯಾ ಈ ಮ್ಯಾಚ್​ ಗೆಲ್ಲಬೇಕಾದ್ರೆ ಮೊದಲ ಮೂರು ದಿನ ಮೋಸ್ಟ್ ಕ್ರೂಶಿಯಲ್ ಆಗಿದೆ. ಪ್ರಮುಖವಾಗಿ ಪೇಸ್​ ಬೌಲರ್​ಗಳ ಪಾಲಿಗೆ ಇಂಪಾರ್ಟೆಂಟ್​. ಇದು ಓವಲ್​​ನ ಗ್ರೀನ್​​ ಪಿಚ್​​ನ ಟ್ರ್ಯಾಕ್ ರೆಕಾರ್ಡ್​ ಹೇಳ್ತಿರುವ ಸತ್ಯ ಕಥೆ.

ಇದನ್ನೂ ಓದಿ:  ಇಡೀ ವೈದ್ಯ ಲೋಕವೇ ಶಾಕ್​.. ಕೋಲಾರ ಮಹಿಳೆ ದೇಹದಲ್ಲಿ ವಿಭಿನ್ನ ರಕ್ತ ಗುಂಪು ಪತ್ತೆ; ಹೇಗೆ ಸಾಧ್ಯ?

2022ರಿಂದ ಓವಲ್​​ನಲ್ಲಿ ಸ್ಪಿನ್ ಮತ್ತು ಪೇಸ್ ಬೌಲರ್ಸ್​

2022ರಿಂದ ಓವಲ್​​ನಲ್ಲಿ ಆಡಿರುವ 4 ಟೆಸ್ಟ್​ ಪಂದ್ಯಗಳ ಮೊದಲ ದಿನ ವೇಗಿಗಳು 15 ವಿಕೆಟ್ ಉರುಳಿಸಿದ್ರೆ, ಸ್ಪಿನ್ನರ್​​ಗಳು 2 ವಿಕೆಟ್ ಉರುಳಿಸಿದ್ದಾರೆ. 2ನೇ ದಿನದಾಟದಲ್ಲಿ 25 ವಿಕೆಟ್ಸ್​ ವೇಗಿಗಳ ಪಾಲಾಗಿದ್ರೆ. ಸ್ಪಿನ್ನರ್​​ಗಳು 6 ವಿಕೆಟ್ ಬೇಟೆಯಾಡಿದ್ದಾರೆ. 3ನೇ ದಿನದಾಟ ಪಾರಮ್ಯ ಮೆರೆದಿರುವ ವೇಗಿಗಳು ಬರೋಬ್ಬರಿ 45 ವಿಕೆಟ್ ಕಬಳಿಸಿದ್ರೆ, ಸ್ಪಿನ್ನರ್​ಗಳು 6 ವಿಕೆಟ್ ಪಡೆದಿದ್ದಾರೆ. 4 ಹಾಗೂ 5ನೇ ದಿನದಾಟ ವೇಗಿಗಳು ಕ್ರಮವಾಗಿ 19 ಹಾಗೂ 12 ವಿಕೆಟ್ ಪಡೆದ್ರೆ, ಸ್ಪಿನ್ನರ್​​ಗಳು 3 ಹಾಗೂ 6 ವಿಕೆಟ್​ ಪಡೆದಿದ್ದಾರೆ.
ಮೊದಲ 3 ದಿನ ಪೇಸರ್​ಗಳು ಮೆರೆದಾಡಿದ್ದಾರೆ ನಿಜ. 2ನೇ ದಿನದಿಂದಲೂ ಸ್ಪಿನ್ನರ್​ಗಳು ವಿಕೆಟ್ ಬೇಟೆಯಾಡಿದ್ದಾರೆ.

ಪ್ರಮುಖವಾಗಿ ಕೊನೆ ದಿನ ಪೇಸರ್​ಗಳ ಅರ್ಧದಷ್ಟು ವಿಕೆಟ್ಸ್​ ಸ್ಪಿನ್ನರ್​​ಗಳು ಪಡೆದಿದ್ದಾರೆ. 2021ರಿಂದ 5 ಪಂದ್ಯಗಳ ಪೈಕಿ 3 ಮೊದಲು ಬ್ಯಾಟಿಂಗ್ ಮಾಡಿದವ್ರೇ ಗೆದ್ದಿದ್ದಾರೆ. ಟೀಮ್ ಇಂಡಿಯಾ ಟಾಸ್​​ಗಿಂತಲೂ ತಮ್ಮ ಆಟವನ್ನಷ್ಟೇ ನಂಬಿಕೊಂಡು ಹೋರಾಡಿದ್ರೆ, ಗೆಲುವು ಟೀಮ್ ಇಂಡಿಯಾ ಪಾಲಾಗುವುದರಲ್ಲಿ ಡೌಟಿಲ್ಲ.

ಇದನ್ನೂ ಓದಿ: ಹೆತ್ತ ಕಂದಮ್ಮನ ಹುಡುಕುತ್ತ 150 ಕಿಮೀ ಅಲೆದಾಟ.. ಮೃತ ಮುದ್ದು ಮರಿಗಾಗಿ ತಾಯಿ ಮೂಕ ರೋಧನೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment