ಸರ್ಪ್ರೈಸ್ ರೀತಿಯಲ್ಲಿ ಆರ್ಸಿಬಿ ವೇಗಿ ಆಕಾಶ್ ದೀಪ್ಗೆ ಸ್ಥಾನ
ಯುವ ಆಟಗಾರರಿಗೆ ಸ್ಪೂರ್ತಿದಾಯಕ ಆಕಾಶ್ ದೀಪ್ ಜರ್ನಿ
ಹುಟ್ಟೂರಲ್ಲಿ ಕ್ರಿಕೆಟ್ ಆಡೋದೆ ‘ಕ್ರೈಂ’, ಕದ್ದುಮುಚ್ಚಿ ಆಡ್ತಿದ್ದ ಆಕಾಶ್!
ಇಂಡೋ- ಇಂಗ್ಲೆಂಡ್ ಟೆಸ್ಟ್ ಸರಣಿಯ ತಂಡಕ್ಕೆ ಆರ್ಸಿಬಿ ವೇಗಿ ಆಕಾಶ್ ದೀಪ್ ಎಂಟ್ರಿ ಕೊಟ್ಟಿರೋದು ಬಹುತೇಕರಿಗೆ ಸರ್ಪ್ರೈಸ್ ಮೂಡಿಸಿದೆ. ಆದ್ರೆ, ಆಕಾಶ್ ದೀಪ್ ಜರ್ನಿ ನೋಡಿದ್ರೆ HE DESERVED IT ಅನ್ನಿಸದೇ ಇರಲ್ಲ.. ಅಷ್ಟು ರೋಚಕವಾಗಿದೆ ವೇಗಿಯ ಜರ್ನಿ. ಟೆನ್ನಿಸ್ ಬಾಲ್ ಕ್ರಿಕೆಟ್ ಆಡ್ತಿದ್ದ ಆಕಾಶ್ ದೀಪ್ ಲೆದರ್ ಕ್ರಿಕೆಟರ್ ಆಗಿದ್ದೇಗೆ?
ಟೆಸ್ಟ್ ಸರಣಿಯಿಂದ ಹಿಂದೆ ಸರಿದಿರುವ ವಿರಾಟ್ ಕೊಹ್ಲಿ
ಇಂಡೋ- ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಗೆ ತಂಡದ ಆಟಗಾರರ ಪಟ್ಟಿ ಪ್ರಕಟವಾಗಿದೆ. ನಿರೀಕ್ಷೆಯಂತೆ ವಿರಾಟ್ ಕೊಹ್ಲಿ ಸರಣಿಯಿಂದ ಹಿಂದೆ ಸರಿದಿದ್ರೆ, ಶ್ರೇಯಸ್ ಅಯ್ಯರ್ಗೆ ಕೊಕ್ ಕೊಡಲಾಗಿದೆ. ಇದ್ರ ನಡುವೆ ಸರ್ಪ್ರೈಸ್ ರೀತಿಯಲ್ಲಿ ಆರ್ಸಿಬಿ ವೇಗಿ ಆಕಾಶ್ ದೀಪ್ ಟೆಸ್ಟ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಟೆನ್ನಿಸ್ ಬಾಲ್ TO ಲೆದರ್ ಬಾಲ್., ಜರ್ನಿಯೇ ರೋಚಕ.!
ಆಕಾಶ್ ದೀಪ್ ಟೆಸ್ಟ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ ನಿಜ.. ಹಾಗಂತ ಆಕಾಶ್ ದೀಪ್ ಆ ಸ್ಥಾನಕ್ಕಾಗಿ ಹಾರ್ಡ್ವರ್ಕ್ ಮಾಡಿಲ್ಲ ಅಂತಿಲ್ಲ. ನಿಜ ಹೇಳಬೇಕಂದ್ರೆ, ಈ ವೇಗಿಯ ಜರ್ನಿ ಎಂತವರಿಗೂ ಸ್ಪೂರ್ತಿ. ಹಿಂದೆ ಮಾಡಿದ ಹಾರ್ಡ್ವರ್ಕ್, ಡೆಡಿಕೇಷನ್ನ ಫಲವೇ ಇಂದು ಟೆಸ್ಟ್ ತಂಡದಲ್ಲಿ ಸ್ಥಾನ ಸಿಗುವಂತೆ ಮಾಡಿದೆ.
ಸರಕಾರಿ ಕೆಲಸ ಮಾಡುವಂತೆ ತಂದೆಯ ಒತ್ತಡ.!
ನಮ್ಮ ಅಪ್ಪನಿಗೆ ಕ್ರಿಕೆಟ್ ಆಡೋದು ಇಷ್ಟವಿರಲಿಲ್ಲ. ಅವರು ಸ್ಕೂಲ್ಗೆ ಹೋದಾಗ ಕದ್ದು ಮುಚ್ಚಿ ಕ್ರಿಕೆಟ್ ಆಡ್ತಿದ್ದೆ. ಅವರಿಗೆ ಯಾವಾಗ ಗೊತ್ತಾಯ್ತೋ ಆಗ ಈತ ಜೀವನದಲ್ಲಿ ಏನನ್ನೂ ಮಾಡಲ್ಲ ಎಂದು ನಿರ್ಧರಿಸಿದ್ರು.
ಆಕಾಶ್ ದೀಪ್ ಹುಟ್ಟಿದ್ದು ಬಿಹಾರದ ಸಸಾರಾಂನ ಮಧ್ಯಮ ವರ್ಗದ ಕುಟುಂಬದಲ್ಲಿ. ತಂದೆ ರಾಮ್ಜಿ ಸಿಂಗ್ ಸಿಂಗ್ ಟೀಚರ್ ಆಗಿ ಕಾರ್ಯ ನಿರ್ವಹಿಸ್ತಾ ಇದ್ರು. ಕ್ರಿಕೆಟ್ ಆಡೋದೆ ದೊಡ್ಡ ಕ್ರೈಂ ಎನ್ನುವಂತೆ ಸಸಾರಂನ ಜನ ನೋಡ್ತಿದ್ದ ಕಾಲ ಅದು. ಹೀಗಾಗಿ ಕ್ರಿಕೆಟರ್ ಆಗೋ ಕನಸು ಕಾಣ್ತಿದ್ದ ಆಕಾಶ್ ದೀಪ್ಗೆ ಮನೆಯಲ್ಲೇ ಬೆಂಬಲ ಇರಲಿಲ್ಲ.. ಮಗ ಕ್ರಿಕೆಟರ್ ಆಗೋದು ತಂದೆ ರಾಮ್ಜಿ ಸಿಂಗ್ಗೆ ಇಷ್ಟ ಇರಲಿಲ್ಲ. ಪೋಲಿಸ್ ಪರೀಕ್ಷೆ ಬರೆಸಿದ್ದ ತಂದೆ, ಕಡೆಯ ಪಕ್ಷ ಪ್ಯೂವನ್ ಕೆಲಸವನ್ನಾದ್ರೂ ಕೇಳಿಕೊಂಡಿದ್ರಂತೆ. ಆದ್ರೆ, ಕ್ರಿಕೆಟರ್ ಆಗೋ ಕನಸು ಹೊತ್ತಿದ್ದ ಆಕಾಶ್ ದೀಪ್ 2010ರಲ್ಲೇ ಬೆಂಗಾಲ್ಗೆ ವಲಸೆ ಬಂದು ಲೋಕಲ್ ಕ್ರಿಕೆಟ್ ಅಕಾಡೆಮಿಗೆ ಸೇರಿದ್ರಂತೆ.
ತಂದೆಯ ಸಾವು ಸುಧಾರಿಸಿಕೊಳ್ಳುವ ಮುನ್ನ ಅಣ್ಣ ವಿಧಿವಶ.!
ಅಪ್ಪ 2015ರಲ್ಲಿ ತೀರಿ ಹೋದ್ರು. ಅದಾದ ಬಳಿಕ ಆ್ಯಕ್ಸಿಡೆಂಟ್ನಲ್ಲಿ ಅಣ್ಣ ಕೂಡ ತೀರಿ ಹೋದ್ರು.
ಆಕಾಶ್ ದೀಪ್, ಯುವ ಆಟಗಾರ
ಬೆಂಗಾಲ್ಗೆ ವಲಸೆ ಬಂದು ಅಭ್ಯಾಸ ಆರಂಭಿಸಿದ ಆಕಾಶ್ ದೀಪ್ರ ಕ್ರಿಕೆಟರ್ ಆಗೋ ಕನಸಿಗೆ ಇನ್ನೇನು ರೆಕ್ಕೆ ಪುಕ್ಕು ಬಂತು ಅನ್ನೋವಾಗ್ಲೇ ಬದುಕಿಗೆ ಬರಸಿಡಿಲು ಬಡಿದು ಬಿಡ್ತು. ತಂದೆ ಇಹಲೋಕ ತ್ಯಜಿಸಿದ್ರು. ಈ ಸಾವಿನ ಆಘಾತದಿಂದ ಇನ್ನೂ ಹೊರ ಬಂದಿರಲಿಲ್ಲ.. ಅಣ್ಣ ಕೂಡ ತಂದೆಯ ದಾರಿಯನ್ನ ಹಿಡಿದು ಬಿಟ್ರು. ಅಣ್ಣನ 2 ಪುಟ್ಟ ಮಕ್ಕಳ ಸಹಿತ ಇಡೀ ಕುಟುಂಬದ ಜವಾಬ್ದಾರಿ ಆಕಾಶ್ ದೀಪ್ ಮೇಲೆ ಬಿದ್ದು ಬಿಡ್ತು.
ಹೆಗಲೇರಿದ ಜವಾಬ್ದಾರಿ, 3 ವರ್ಷ ಕ್ರಿಕೆಟ್ನಿಂದ ದೂರ
ಕುಟುಂಬದ ಜವಾಬ್ದಾರಿ ಹೊತ್ತ ಆಕಾಶ್ ದೀಪ್ 3 ವರ್ಷಗಳ ಕಾಲ ಕ್ರಿಕೆಟ್ ದೂರ ಇದ್ರು. 2020ರಲ್ಲಿ ಕೊಲ್ಕತ್ತಾಗೆ ಉದ್ಯೋಗ ಅರಸಿ ಬಂದ ಆಕಾಶ್ ದೀಪ್, ಫಸ್ಟ್ ಡಿವಿಷನ್ ಲೀಗ್ನಲ್ಲಿ ಪಂದ್ಯಗಳನ್ನ ಆಡಲು ಆರಂಭಿಸಿದ್ರು. ಆದ್ರೆ, ಆರ್ಥಿಕ ಸಮಸ್ಯೆ ಇಡೀ ಕುಟುಂಬವನ್ನ ಕಾಡಿತು. ಹೀಗಾಗಿ, ಲೋಕಲ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಡಲು ಆರಂಭಿಸಿದ್ರು. ಇದ್ರಿಂದ ಬರ್ತಿದ್ದ ಹಣದಲ್ಲಿ ಆಕಾಶ್ ದೀಪ್ ಜೀವನ ನಿರ್ವಹಣೆ ಮಾಡ್ತಿದ್ರಂತೆ. ಕಷ್ಟದ ನಡುವೆ ಪರ್ಫಾಮ್ ಮಾಡಿ ಕೊನೆಗೂ ಬೆಂಗಾಲ್ ಅಂಡರ್-23 ತಂಡಕ್ಕೆ ಆಯ್ಕೆಯಾದ್ರು. ಆ ಬಳಿಕ ಜೀವನವೇ ಬದಲಾಯ್ತು.
ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಧಮ್ದಾರ್ ಪ್ರದರ್ಶನ.!
ಡೊಮೆಸ್ಟಿಕ್ ಕ್ರಿಕೆಟ್ನ ಸಿಕ್ಕ ಅವಕಾಶಗಳನ್ನ ಆಕಾಶ್ದೀಪ್ ಎರಡೂ ಕೈಗಳಿಂದ ಬಾಚಿಕೊಂಡ್ರು. ಜಬರ್ದಸ್ತ್ ಪರ್ಫಾಮೆನ್ಸ್ನಿಂದ ಎಲ್ಲರ ಗಮನ ಸೆಳೆದ್ರು. 2021ರಲ್ಲಿ ಆರ್ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟ ವೇಗಿ ಐಪಿಎಲ್ನಲ್ಲೂ ಮಿಂಚು ಹರಿಸಿದ್ರು. ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಆಡಿದ 29 ಪಂದ್ಯಗಳಲ್ಲೇ 103 ವಿಕೆಟ್ ಕಬಳಿಸಿರೋ ಆಕಾಶ್ ದೀಪ್, ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಅನ್ಅಫಿಶಿಯಲ್ ಟೆಸ್ಟ್ ಸರಣಿಯಲ್ಲಿ 2 ಪಂದ್ಯ ಆಡಿ 13 ವಿಕೆಟ್ ಬೇಟೆಯಾಡಿದ್ರು.
ಜೀವನದ ಸಂಕಷ್ಟಗಳ ನಡುವೆ ಆಕಾಶ್ ದೀಪ್ರಲ್ಲಿ ಕ್ರಿಕೆಟ್ ಮೇಲಿನ ಪ್ರೀತಿ, ಸಾಧಿಸುವ ಛಲ ಕಡಿಮೆಯಾಗಲಿಲ್ಲ. ಅಂತಿಮವಾಗಿ ಯುವ ವೇಗಿಯ ಹೋರಾಟಕ್ಕೆ ಫಲ ಸಿಕ್ಕಿದೆ. ಟೆಸ್ಟ್ ತಂಡಕ್ಕೆ ಎಂಟ್ರಿ ಕೊಟ್ಟಿರುವ ವೇಗಿ ಟೀಮ್ ಇಂಡಿಯಾ ಪರವೂ ಮಿಂಚು ಹರಿಸಲಿ ಅನ್ನೋದೆ ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಸರ್ಪ್ರೈಸ್ ರೀತಿಯಲ್ಲಿ ಆರ್ಸಿಬಿ ವೇಗಿ ಆಕಾಶ್ ದೀಪ್ಗೆ ಸ್ಥಾನ
ಯುವ ಆಟಗಾರರಿಗೆ ಸ್ಪೂರ್ತಿದಾಯಕ ಆಕಾಶ್ ದೀಪ್ ಜರ್ನಿ
ಹುಟ್ಟೂರಲ್ಲಿ ಕ್ರಿಕೆಟ್ ಆಡೋದೆ ‘ಕ್ರೈಂ’, ಕದ್ದುಮುಚ್ಚಿ ಆಡ್ತಿದ್ದ ಆಕಾಶ್!
ಇಂಡೋ- ಇಂಗ್ಲೆಂಡ್ ಟೆಸ್ಟ್ ಸರಣಿಯ ತಂಡಕ್ಕೆ ಆರ್ಸಿಬಿ ವೇಗಿ ಆಕಾಶ್ ದೀಪ್ ಎಂಟ್ರಿ ಕೊಟ್ಟಿರೋದು ಬಹುತೇಕರಿಗೆ ಸರ್ಪ್ರೈಸ್ ಮೂಡಿಸಿದೆ. ಆದ್ರೆ, ಆಕಾಶ್ ದೀಪ್ ಜರ್ನಿ ನೋಡಿದ್ರೆ HE DESERVED IT ಅನ್ನಿಸದೇ ಇರಲ್ಲ.. ಅಷ್ಟು ರೋಚಕವಾಗಿದೆ ವೇಗಿಯ ಜರ್ನಿ. ಟೆನ್ನಿಸ್ ಬಾಲ್ ಕ್ರಿಕೆಟ್ ಆಡ್ತಿದ್ದ ಆಕಾಶ್ ದೀಪ್ ಲೆದರ್ ಕ್ರಿಕೆಟರ್ ಆಗಿದ್ದೇಗೆ?
ಟೆಸ್ಟ್ ಸರಣಿಯಿಂದ ಹಿಂದೆ ಸರಿದಿರುವ ವಿರಾಟ್ ಕೊಹ್ಲಿ
ಇಂಡೋ- ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಗೆ ತಂಡದ ಆಟಗಾರರ ಪಟ್ಟಿ ಪ್ರಕಟವಾಗಿದೆ. ನಿರೀಕ್ಷೆಯಂತೆ ವಿರಾಟ್ ಕೊಹ್ಲಿ ಸರಣಿಯಿಂದ ಹಿಂದೆ ಸರಿದಿದ್ರೆ, ಶ್ರೇಯಸ್ ಅಯ್ಯರ್ಗೆ ಕೊಕ್ ಕೊಡಲಾಗಿದೆ. ಇದ್ರ ನಡುವೆ ಸರ್ಪ್ರೈಸ್ ರೀತಿಯಲ್ಲಿ ಆರ್ಸಿಬಿ ವೇಗಿ ಆಕಾಶ್ ದೀಪ್ ಟೆಸ್ಟ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಟೆನ್ನಿಸ್ ಬಾಲ್ TO ಲೆದರ್ ಬಾಲ್., ಜರ್ನಿಯೇ ರೋಚಕ.!
ಆಕಾಶ್ ದೀಪ್ ಟೆಸ್ಟ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ ನಿಜ.. ಹಾಗಂತ ಆಕಾಶ್ ದೀಪ್ ಆ ಸ್ಥಾನಕ್ಕಾಗಿ ಹಾರ್ಡ್ವರ್ಕ್ ಮಾಡಿಲ್ಲ ಅಂತಿಲ್ಲ. ನಿಜ ಹೇಳಬೇಕಂದ್ರೆ, ಈ ವೇಗಿಯ ಜರ್ನಿ ಎಂತವರಿಗೂ ಸ್ಪೂರ್ತಿ. ಹಿಂದೆ ಮಾಡಿದ ಹಾರ್ಡ್ವರ್ಕ್, ಡೆಡಿಕೇಷನ್ನ ಫಲವೇ ಇಂದು ಟೆಸ್ಟ್ ತಂಡದಲ್ಲಿ ಸ್ಥಾನ ಸಿಗುವಂತೆ ಮಾಡಿದೆ.
ಸರಕಾರಿ ಕೆಲಸ ಮಾಡುವಂತೆ ತಂದೆಯ ಒತ್ತಡ.!
ನಮ್ಮ ಅಪ್ಪನಿಗೆ ಕ್ರಿಕೆಟ್ ಆಡೋದು ಇಷ್ಟವಿರಲಿಲ್ಲ. ಅವರು ಸ್ಕೂಲ್ಗೆ ಹೋದಾಗ ಕದ್ದು ಮುಚ್ಚಿ ಕ್ರಿಕೆಟ್ ಆಡ್ತಿದ್ದೆ. ಅವರಿಗೆ ಯಾವಾಗ ಗೊತ್ತಾಯ್ತೋ ಆಗ ಈತ ಜೀವನದಲ್ಲಿ ಏನನ್ನೂ ಮಾಡಲ್ಲ ಎಂದು ನಿರ್ಧರಿಸಿದ್ರು.
ಆಕಾಶ್ ದೀಪ್ ಹುಟ್ಟಿದ್ದು ಬಿಹಾರದ ಸಸಾರಾಂನ ಮಧ್ಯಮ ವರ್ಗದ ಕುಟುಂಬದಲ್ಲಿ. ತಂದೆ ರಾಮ್ಜಿ ಸಿಂಗ್ ಸಿಂಗ್ ಟೀಚರ್ ಆಗಿ ಕಾರ್ಯ ನಿರ್ವಹಿಸ್ತಾ ಇದ್ರು. ಕ್ರಿಕೆಟ್ ಆಡೋದೆ ದೊಡ್ಡ ಕ್ರೈಂ ಎನ್ನುವಂತೆ ಸಸಾರಂನ ಜನ ನೋಡ್ತಿದ್ದ ಕಾಲ ಅದು. ಹೀಗಾಗಿ ಕ್ರಿಕೆಟರ್ ಆಗೋ ಕನಸು ಕಾಣ್ತಿದ್ದ ಆಕಾಶ್ ದೀಪ್ಗೆ ಮನೆಯಲ್ಲೇ ಬೆಂಬಲ ಇರಲಿಲ್ಲ.. ಮಗ ಕ್ರಿಕೆಟರ್ ಆಗೋದು ತಂದೆ ರಾಮ್ಜಿ ಸಿಂಗ್ಗೆ ಇಷ್ಟ ಇರಲಿಲ್ಲ. ಪೋಲಿಸ್ ಪರೀಕ್ಷೆ ಬರೆಸಿದ್ದ ತಂದೆ, ಕಡೆಯ ಪಕ್ಷ ಪ್ಯೂವನ್ ಕೆಲಸವನ್ನಾದ್ರೂ ಕೇಳಿಕೊಂಡಿದ್ರಂತೆ. ಆದ್ರೆ, ಕ್ರಿಕೆಟರ್ ಆಗೋ ಕನಸು ಹೊತ್ತಿದ್ದ ಆಕಾಶ್ ದೀಪ್ 2010ರಲ್ಲೇ ಬೆಂಗಾಲ್ಗೆ ವಲಸೆ ಬಂದು ಲೋಕಲ್ ಕ್ರಿಕೆಟ್ ಅಕಾಡೆಮಿಗೆ ಸೇರಿದ್ರಂತೆ.
ತಂದೆಯ ಸಾವು ಸುಧಾರಿಸಿಕೊಳ್ಳುವ ಮುನ್ನ ಅಣ್ಣ ವಿಧಿವಶ.!
ಅಪ್ಪ 2015ರಲ್ಲಿ ತೀರಿ ಹೋದ್ರು. ಅದಾದ ಬಳಿಕ ಆ್ಯಕ್ಸಿಡೆಂಟ್ನಲ್ಲಿ ಅಣ್ಣ ಕೂಡ ತೀರಿ ಹೋದ್ರು.
ಆಕಾಶ್ ದೀಪ್, ಯುವ ಆಟಗಾರ
ಬೆಂಗಾಲ್ಗೆ ವಲಸೆ ಬಂದು ಅಭ್ಯಾಸ ಆರಂಭಿಸಿದ ಆಕಾಶ್ ದೀಪ್ರ ಕ್ರಿಕೆಟರ್ ಆಗೋ ಕನಸಿಗೆ ಇನ್ನೇನು ರೆಕ್ಕೆ ಪುಕ್ಕು ಬಂತು ಅನ್ನೋವಾಗ್ಲೇ ಬದುಕಿಗೆ ಬರಸಿಡಿಲು ಬಡಿದು ಬಿಡ್ತು. ತಂದೆ ಇಹಲೋಕ ತ್ಯಜಿಸಿದ್ರು. ಈ ಸಾವಿನ ಆಘಾತದಿಂದ ಇನ್ನೂ ಹೊರ ಬಂದಿರಲಿಲ್ಲ.. ಅಣ್ಣ ಕೂಡ ತಂದೆಯ ದಾರಿಯನ್ನ ಹಿಡಿದು ಬಿಟ್ರು. ಅಣ್ಣನ 2 ಪುಟ್ಟ ಮಕ್ಕಳ ಸಹಿತ ಇಡೀ ಕುಟುಂಬದ ಜವಾಬ್ದಾರಿ ಆಕಾಶ್ ದೀಪ್ ಮೇಲೆ ಬಿದ್ದು ಬಿಡ್ತು.
ಹೆಗಲೇರಿದ ಜವಾಬ್ದಾರಿ, 3 ವರ್ಷ ಕ್ರಿಕೆಟ್ನಿಂದ ದೂರ
ಕುಟುಂಬದ ಜವಾಬ್ದಾರಿ ಹೊತ್ತ ಆಕಾಶ್ ದೀಪ್ 3 ವರ್ಷಗಳ ಕಾಲ ಕ್ರಿಕೆಟ್ ದೂರ ಇದ್ರು. 2020ರಲ್ಲಿ ಕೊಲ್ಕತ್ತಾಗೆ ಉದ್ಯೋಗ ಅರಸಿ ಬಂದ ಆಕಾಶ್ ದೀಪ್, ಫಸ್ಟ್ ಡಿವಿಷನ್ ಲೀಗ್ನಲ್ಲಿ ಪಂದ್ಯಗಳನ್ನ ಆಡಲು ಆರಂಭಿಸಿದ್ರು. ಆದ್ರೆ, ಆರ್ಥಿಕ ಸಮಸ್ಯೆ ಇಡೀ ಕುಟುಂಬವನ್ನ ಕಾಡಿತು. ಹೀಗಾಗಿ, ಲೋಕಲ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಡಲು ಆರಂಭಿಸಿದ್ರು. ಇದ್ರಿಂದ ಬರ್ತಿದ್ದ ಹಣದಲ್ಲಿ ಆಕಾಶ್ ದೀಪ್ ಜೀವನ ನಿರ್ವಹಣೆ ಮಾಡ್ತಿದ್ರಂತೆ. ಕಷ್ಟದ ನಡುವೆ ಪರ್ಫಾಮ್ ಮಾಡಿ ಕೊನೆಗೂ ಬೆಂಗಾಲ್ ಅಂಡರ್-23 ತಂಡಕ್ಕೆ ಆಯ್ಕೆಯಾದ್ರು. ಆ ಬಳಿಕ ಜೀವನವೇ ಬದಲಾಯ್ತು.
ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಧಮ್ದಾರ್ ಪ್ರದರ್ಶನ.!
ಡೊಮೆಸ್ಟಿಕ್ ಕ್ರಿಕೆಟ್ನ ಸಿಕ್ಕ ಅವಕಾಶಗಳನ್ನ ಆಕಾಶ್ದೀಪ್ ಎರಡೂ ಕೈಗಳಿಂದ ಬಾಚಿಕೊಂಡ್ರು. ಜಬರ್ದಸ್ತ್ ಪರ್ಫಾಮೆನ್ಸ್ನಿಂದ ಎಲ್ಲರ ಗಮನ ಸೆಳೆದ್ರು. 2021ರಲ್ಲಿ ಆರ್ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟ ವೇಗಿ ಐಪಿಎಲ್ನಲ್ಲೂ ಮಿಂಚು ಹರಿಸಿದ್ರು. ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಆಡಿದ 29 ಪಂದ್ಯಗಳಲ್ಲೇ 103 ವಿಕೆಟ್ ಕಬಳಿಸಿರೋ ಆಕಾಶ್ ದೀಪ್, ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಅನ್ಅಫಿಶಿಯಲ್ ಟೆಸ್ಟ್ ಸರಣಿಯಲ್ಲಿ 2 ಪಂದ್ಯ ಆಡಿ 13 ವಿಕೆಟ್ ಬೇಟೆಯಾಡಿದ್ರು.
ಜೀವನದ ಸಂಕಷ್ಟಗಳ ನಡುವೆ ಆಕಾಶ್ ದೀಪ್ರಲ್ಲಿ ಕ್ರಿಕೆಟ್ ಮೇಲಿನ ಪ್ರೀತಿ, ಸಾಧಿಸುವ ಛಲ ಕಡಿಮೆಯಾಗಲಿಲ್ಲ. ಅಂತಿಮವಾಗಿ ಯುವ ವೇಗಿಯ ಹೋರಾಟಕ್ಕೆ ಫಲ ಸಿಕ್ಕಿದೆ. ಟೆಸ್ಟ್ ತಂಡಕ್ಕೆ ಎಂಟ್ರಿ ಕೊಟ್ಟಿರುವ ವೇಗಿ ಟೀಮ್ ಇಂಡಿಯಾ ಪರವೂ ಮಿಂಚು ಹರಿಸಲಿ ಅನ್ನೋದೆ ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ