/newsfirstlive-kannada/media/post_attachments/wp-content/uploads/2024/11/GILL_PANT.jpg)
ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಕೇವಲ 31 ರನ್ಗೆ ಪ್ರಮುಖವಾದ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ ನ್ಯೂಜಿಲೆಂಡ್ ತಂಡ ಸಾಧರಣ ಮೊತ್ತ ದಾಖಲಿಸಿತ್ತು. ಕೇವಲ 174 ರನ್ಗೆ ಆಲೌಟ್ ಆಗಿತ್ತು. ವಿಲ್ ಯಂಗ್ ಅವರ ಹಾಫ್ಸೆಂಚುರಿ ಬಿಟ್ಟರೇ ಉಳಿದವರೆಲ್ಲ ಬಂದಷ್ಟೇ ವೇಗವಾಗಿ ಪೆವಿಲಿಯನ್ಗೆ ಸೇರಿದ್ದರು. ಆರ್ ಅಶ್ವಿನ್, ಜಡೇಜಾ ಅವರ ಆಕ್ರಮಣಕಾರಿ ಸ್ಪೆಲ್ ಸ್ಪಿನ್ ಮುಂದೆ ಕಿವೀಸ್ ಪ್ಲೇಯರ್ಸ್ ಬ್ಯಾಟಿಂಗ್ ಮಾಡಲು ಹರಸಾಹಸ ಪಟ್ಟರು. ಹೀಗಾಗಿ ಆರ್ ಅಶ್ವಿನ್ 3 ವಿಕೆಟ್ ಪಡೆದರೆ, ಜಡೇಜಾ 5 ವಿಕೆಟ್ ಕಿತ್ತು ಸಂಭ್ರಮಿಸಿದರು.
ಆದರೆ 2ನೇ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ 174 ರನ್ಗಳ ಸಾಧರಣ ಮೊತ್ತದ ಟಾರ್ಗೆಟ್ ಬೆನ್ನು ಹತ್ತಿದೆ. ಆದರೆ ಕೇವಲ 31 ರನ್ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಇದೆ. ಜೈಸ್ವಾಲ್ 5, ರೋಹಿತ್ ಶರ್ಮಾ 11, ಶುಭ್ಮನ್ ಗಿಲ್ 1, ವಿರಾಟ್ ಕೊಹ್ಲಿ 1, ಸರ್ಫರಾಜ್ 1 ರನ್ಗೆ ಔಟ್ ಆದರು. ಈ ಮೂಲಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮತ್ತೊಮ್ಮೆ ವಿಫಲ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಪಂದ್ಯದಲ್ಲಿ 150 ರನ್ಗಳನ್ನ ಸಿಡಿಸಿದ್ದ ಸರ್ಫರಾಜ್ ಕೂಡ ಬ್ಯಾಟಿಂಗ್ನಲ್ಲಿ ಯಾವುದೇ ಸುಧಾರಣೆ ಕಾಣಲಿಲ್ಲ. ಶುಭ್ಮನ್ ಗಿಲ್ ಇದೇ ಪಂದ್ಯದಲ್ಲಿ 90 ರನ್ ಸಿಡಿಸಿದ್ದರು. ಆದರೆ 2ನೇ ಇನ್ನಿಂಗ್ಸ್ನಲ್ಲಿ 1 ರನ್ ಅಷ್ಟೇ ಗಳಿಸಿ ಔಟ್ ಆಗಿದ್ದಾರೆ.
ಇದನ್ನೂ ಓದಿ:ಅಂಚೆ ಇಲಾಖೆಯಿಂದ ಶೀಘ್ರವೇ ದೊಡ್ಡ ಮಟ್ಟದಲ್ಲಿ ಉದ್ಯೋಗಗಳ ನೇಮಕಾತಿ..!
ಸದ್ಯ ಟೀಮ್ ಇಂಡಿಯಾ ಟಾರ್ಗೆಟ್ ತಲುಪಿದರೆ ಕಿವೀಸ್ ಎದುರಿನ 3ನೇ ಟೆಸ್ಟ್ ಪಂದ್ಯದಲ್ಲಿ ವಿಜಯ ಸಾಧಿಸುತ್ತದೆ. ಒಂದು ವೇಳೆ ಟಾರ್ಗೆಟ್ ಒಳಗೆ ಆಲೌಟ್ ಆದರೆ ಕಿವೀಸ್ ವಿಜಯ ಪತಾಕೆ ಹಾರಿಸಿದಂತೆ ಅಗುತ್ತದೆ. ಭಾರತ ವೈಟ್ವಾಶ್ನಿಂದ ಪಾರಾಗಲು ಈ ಕೊನೆ ಇನ್ನಿಂಗ್ಸ್ನಲ್ಲಿ ಜಯ ಸಾಧಿಸಬೇಕಿದೆ. ಸದ್ಯ ಭಾರತಕ್ಕೆ ಗೆಲುವು ಸಾಧಿಸಲು 95 ರನ್ಗಳು ಬೇಕಿವೆ .
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ