/newsfirstlive-kannada/media/post_attachments/wp-content/uploads/2024/10/Hardik-Pandya_Surya.jpg)
ಇಂದು ಜೊಹಾನ್ಸ್ಬರ್ಗ್ನಲ್ಲಿ T20 ಸರಣಿಯ ಫೈನಲ್ ಫೈಟ್ ನಡೆಯಲಿದೆ. 2-1 ಅಂತರದಿಂದ ಮುನ್ನಡೆ ಸಾಧಿಸಿರುವ ಯಂಗ್ ಇಂಡಿಯಾ, ಕಪ್ ಗೆಲ್ಲೋ ತವಕದಲ್ಲಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾಕ್ಕೆ, ಪ್ರತಿಷ್ಠೆಯ ಸವಾಲ್. ಸರಣಿಯನ್ನ ಸಮಬಲ ಮಾಡಿಕೊಂಡು, ತವರಿನಲ್ಲಿ ಮಾನ ಉಳಿಸಿಕೊಳ್ಳಲು ದಕ್ಷಿಣ ಆಫ್ರಿಕಾ ಹೋರಾಟಕ್ಕೆ ಸಜ್ಜಾಗಿದೆ.
ಈ ಫೈಟ್ನಲ್ಲಿ ಸರಣಿ ಗೆಲುವಾ, ಸಮಬಲನಾ..?
ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧದ T20 ಸರಣಿ, ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಈಗಾಗಲೇ ನಾಲ್ಕು ಪಂದ್ಯಗಳ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿರುವ ಸೂರ್ಯಕುಮಾರ್ ಪಡೆ, ಜೋಬರ್ಗ್ನಲ್ಲಿ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.
ಫಾರ್ಮ್ಗೆ ಮರಳಿದ ಅಭಿಷೇಕ್.. ಶಾಕ್ ಕೊಟ್ಟ ಸಂಜು..!
ಡೇರಿಂಗ್ ಌಂಡ್ ಡ್ಯಾಶಿಂಗ್ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ, ಸತತ ವೈಫಲ್ಯದಿಂದ ಹೊರಬಂದಿದ್ದಾರೆ. ಸೆಂಚೂರಿಯನ್ನಲ್ಲಿ ಸಾಲಿಡ್ ಬ್ಯಾಟಿಂಗ್ ಮಾಡಿದ ಪಂಜಾಬ್ ಬಾಯ್, ಫಾರ್ಮ್ಗೆ ಮರಳಿದ್ದಾರೆ. ಮತ್ತೊಂದೆಡೆ ಸಂಜು ಸ್ಯಾಮ್ಸನ್ರ ಸತತ 2 ಗೋಲ್ಡನ್ ಡಕ್, ಟೀಮ್ ಮ್ಯಾನೇಜ್ಮೆಂಟ್ ನಿದ್ದೆಗೆಡಿಸಿದೆ.
ಬಲಿಷ್ಠ ಮಿಡಲ್ ಆರ್ಡರ್ ಟೀಮ್ ಇಂಡಿಯಾ ಬಲ..!
ತಿಲಕ್ ವರ್ಮಾ, ಕ್ಯಾಪ್ಟನ್ ಸೂರ್ಯಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ, ಮಿಡಲ್ ಆರ್ಡರ್ ಬಲ ಹೆಚ್ಚಿಸಿದ್ದಾರೆ. ತಿಲಕ್, ಸೂರ್ಯ ಬ್ಯಾಟ್ನಿಂದ ಕಾಂಟ್ರಿಬ್ಯೂಟ್ ಮಾಡಿದ್ದಾರೆ. ಈ ತ್ರಿಮೂರ್ತಿಗಳು ಕೊನೆಯ ಪಂದ್ಯದ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದೆ ಆದ್ರೆ, T20 ಸರಣಿ ಭಾರತದ ಪಾಲಾಗುತ್ತದೆ.
ಫೈನಲ್ ಫೈಟ್ನಲ್ಲಿ ರಿಂಕು, ಹಾರ್ದಿಕ್ ಅಬ್ಬರ ನಿರೀಕ್ಷೆ..!
ಅಗ್ರೆಸಿವ್ ಆಗಿ ಬ್ಯಾಟ್ ಬೀಸುತ್ತಿರುವ ಹಾರ್ದಿಕ್ ಪಾಂಡ್ಯ, 3 ಪಂದ್ಯಗಳಿಂದ ಕಲೆಹಾಕಿರೋದು 59 ರನ್. 88ರ ಸ್ಟ್ರೈಕ್ರೇಟ್ನಲ್ಲಿ ರನ್ ಕಲೆ ಹಾಕಿರುವ ಪಾಂಡ್ಯರಿಂದ ಜೋಹಾನ್ಸ್ಬರ್ಗ್ನಲ್ಲಿ ರನ್ ನಿರೀಕ್ಷಿಸಲಾಗುತ್ತಿದೆ. ಇನ್ನು ಸಿಕ್ಸರ್ ಕಿಂಗ್ ರಿಂಕು ಸಿಂಗ್, ಫುಲ್ ಸೈಲೆಂಟ್ ಆಗಿ ಬಿಟ್ಟಿದ್ದಾರೆ. ಫೈನಲ್ ಫೈಟ್ನಲ್ಲಿ ರಿಂಕು, ಬ್ಯಾಟಿಂಗ್ನಲ್ಲಿ ತನ್ನ ಪರಾಕ್ರಮ ತೋರಿಸಬೇಕಿದೆ.
ಕನ್ನಡಿಗ ವೈಶಾಕ್ ವಿಜಯ್ಕುಮಾರ್ಗೆ ಸಿಗುತ್ತಾ ಡೆಬ್ಯು ಭಾಗ್ಯ..?
ಪಂಜಾಬ್ನ ಡೈನಾಮಿಕ್ ಆಲ್ರೌಂಡರ್ ರಮಣ್ದೀಪ್ ಸಿಂಗ್, ಸೆಂಚೂರಿಯನ್ನಲ್ಲಿ ಡೆಬ್ಯು ಮಾಡಿದ್ದಾರೆ. ಆದ್ರೆ ಬೆಂಚ್ನಲ್ಲಿ ಕಾಯುತ್ತಿರುವ ಕನ್ನಡಿಗ ವೇಗಿ ವೈಶಾಖ್ ವಿಜಯ್ಕುಮಾರ್, ಕೊನೆ ಪಂದ್ಯದಲ್ಲಿ ಡೆಬ್ಯು ಕನಸು ಕಾಣುತ್ತಿದ್ದಾರೆ. ಮಹತ್ವದ ಪಂದ್ಯದಲ್ಲಿ ಕ್ಯಾಪ್ಟನ್ ಸೂರ್ಯ, ಕನ್ನಡಿಗನಿಗೆ ಡೆಬ್ಯು ಕ್ಯಾಪ್ ಕೊಡಿಸುತ್ತಾರಾ, ಇಲ್ವಾ ಅನ್ನೋದೇ, ಸಸ್ಪೆನ್ಸ್ ಆಗಿದೆ.
ಎದುರಾಳಿಗಳನ್ನ ಕಟ್ಟಿ ಹಾಕುವುದೇ ಬೌಲರ್ಗಳಿಗೆ ಸವಾಲ್..!
ತವರಿನಲ್ಲಿ ಸರಣಿ ಸಮಬಲಕ್ಕಾಗಿ ಹೋರಾಟ ನಡೆಸಲಿರುವ ಆತಿಥೇಯ ದಕ್ಷಿಣ ಆಫ್ರಿಕಾ, ಇಂದು ಟೀಮ್ ಇಂಡಿಯಾಕ್ಕೆ ತಿರುಗೇಟು ನೀಡುವ ತವಕದಲ್ಲಿದೆ. ಈ ಪಿಚ್, ಬ್ಯಾಟರ್ಸ್ಗೆ ಹೆಚ್ಚು ನೆರವಾಗೋದ್ರಿಂದ, ಆಫ್ರಿಕನ್ನರು ಟೀಮ್ ಇಂಡಿಯಾ ಬೌಲರ್ಗಳ ಮೇಲೆ ಸವಾರಿ ನಡೆಸೋಕೆ ರೆಡಿಯಾಗಿದ್ದಾರೆ.
ಜೋಹಾನ್ಸ್ಬರ್ಗ್ ಮೈದಾನ, ಇಂದು ಅಕ್ಷರಶಃ ರಣಾಂಗಣವಾಗಲಿದೆ. ರನ್ಭೂಮಿಯಲ್ಲಿ ಈ ಎರಡು ಬಲಿಷ್ಠ ತಂಡಗಳ ಜಿದ್ದಾಜಿದ್ದಿ ಫೈಟ್ ನೋಡಲು, ಕ್ರಿಕೆಟ್ ಅಭಿಮಾನಿಗಳು ಕಾಯ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ