ಗೌತಮ್ ಗಂಭೀರ್ ಡಿಮ್ಯಾಂಡ್ ಹಿಂದಿನ ಸೀಕ್ರೆಟ್ ಇದೇನಾ?
ಕ್ಯಾಪ್ಟನ್ಗೆ ಕೈ ಕೊಟ್ಟಿದ್ದು ಟಾಪ್ ಆರ್ಡರ್ನ ಈ 6 ಪ್ಲೇಯರ್ಸ್
ಟೀಮ್ ಇಂಡಿಯಾದ ವೀಕ್ನೆಸ್ ಏನು ಅಂತ ಗೊತ್ತಾಯಿತಾ?
ಗೆಲ್ಲೋ ಹಾಟ್ ಫೇವರಿಟ್ ಅನಿಸಿಕೊಂಡಿದ್ದ ಟೀಮ್ ಇಂಡಿಯಾಗೆ ಸಿಂಹಳೀಯರ ನಾಡಲ್ಲಿ ಸೋಲಿನ ದರ್ಶನವಾಗಿದೆ. ಮೊದಲ ಏಕದಿನದಲ್ಲಿ ತಿಣುಕಾಡಿ ಡ್ರಾ ಸಾಧಿಸಿದ್ದ ಟೀಮ್ ಇಂಡಿಯಾ, 2ನೇ ಏಕದಿನದಲ್ಲಿ ಹೀನಾಯವಾಗಿ ಸೋತಿದೆ. ಇದರ ಜೊತೆಗೆ ಟೀಮ್ ಇಂಡಿಯಾದ ವೀಕ್ನೆಸ್ ಕೂಡ ವಿಶ್ವದ ಎದುರು ಬಟಾ ಬಯಲಾಗಿದೆ. ಸೋಲಿಗಿಂತ ಭಾರತದ ಬ್ಯಾಟರ್ಗಳ ಈ ದೌರ್ಬಲ್ಯ ಟೆನ್ಶನ್ ಹೆಚ್ಚಿಸಿದೆ.
ಟೀಮ್ ಇಂಡಿಯಾಗೆ ಸ್ಪಿನ್ ಬಲೆ ಹೆಣೆದ ಲಂಕಾ.!
ಕೊಲಂಬೋದ ಸ್ಲೋ & ಲೋ ಪಿಚ್ನಲ್ಲಿ ಇಂಡಿಯನ್ ಟೈಗರ್ಸ್, ಸಿಂಹಳೀಯರ ಸ್ಪಿನ್ ಬಲೆಗೆ ಒಬ್ಬರ ಹಿಂದೊಬ್ಬರಂತೆ ಬಿದ್ದರು. ಚೇಸಿಂಗ್ಗಿಳಿದಾಗ ಟೀಮ್ ಇಂಡಿಯಾ ಅದ್ಧೂರಿ ಆರಂಭ ಪಡೆದುಕೊಳ್ಳಿತ್ತು. ಮೊದಲು 10 ಓವರ್ ಎಲ್ಲಾ ಚೆನ್ನಾಗಿತ್ತು. ಆದ್ರೆ, ಆ ಬಳಿಕ ಟೀಮ್ ಇಂಡಿಯಾ ಬ್ಯಾಟರ್ಗಳ ಪೆವಿಲಿಯನ್ ಪರೇಡ್ ನಡೀತು.
ಇದನ್ನೂ ಓದಿ: ವಯನಾಡು ದುರಂತದ ಬಗ್ಗೆ ಗಿಣಿ ಎಚ್ಚರಿಕೆ.. ಮಾಲೀಕನ ಕುಟುಂಬ, ಅವರ ಸ್ನೇಹಿತರ ಬಚಾವ್ ಮಾಡಿದ ಕಿಂಗಿಣಿ
ಕೊಲಂಬೋದಲ್ಲಿ ವಂಡರ್ ಸೃಷ್ಟಿಸಿದ ವಂಡರ್ಸೆ.!
ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ ಶ್ರೀಲಂಕಾದ ಯುವ ಸ್ಪಿನ್ನರ್ ವಂಡರ್ಸೆ ವಂಡರ್ ಸೃಷ್ಟಿಸಿದ್ದರು. ವಂಡರ್ಸೆಯ ಸ್ಪಿನ್ ದಾಳಕ್ಕೆ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ಸ್ಗಳು ಸುಲಭಕ್ಕೆ ಉರುಳಿದ್ದರು. ನಾಯಕ ರೋಹಿತ್ ವಿಕೆಟ್ ಕಬಳಿಸಿ ಅಕೌಂಟ್ ಓಪನ್ ಮಾಡಿದ ಜೆಫ್ರಿ ವಂಡರ್ಸೆ, ಶಾಕ್ ಮೇಲೆ ಶಾಕ್ ಕೊಟ್ಟರು.
ಟೀಮ್ ಇಂಡಿಯಾ ಟಾಪ್ ಆರ್ಡರ್ನ ಟಾಪ್ 6 ಬ್ಯಾಟರ್ಗಳ ಕಥೆಯಿದು. ರೋಹಿತ್ ಶರ್ಮಾ-ಶುಭ್ಮನ್ ಗಿಲ್ ಉತ್ತಮ ಸ್ಟಾರ್ಟ್ ನೀಡಿ ಔಟ್ ಆದ್ರು. ಆದ್ರೆ, ಉಳಿದವರು ತಂಡವನ್ನ ಸಂಕಷ್ಟಕ್ಕೆ ದೂಡಿದ್ರು. ಶಿವಂ ದುಬೆ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ ಅಷ್ಟು ಹೀನಾಯವಾದ ರೀತಿಯಲ್ಲಿ ವಿಕೆಟ್ ಒಪ್ಪಿಸಿದ್ರು.
ಬಟಾಬಯಲಾಯ್ತು ಟೀಮ್ ಇಂಡಿಯಾ ವೀಕ್ನೆಸ್.!
2ನೇ ಏಕದಿನ ಪಂದ್ಯದ ಅಂತ್ಯದೊಂದಿಗೆ ಟೀಮ್ ಇಂಡಿಯಾದ ಸ್ಪಿನ್ ವೀಕ್ನೆಸ್ ಇಡೀ ವಿಶ್ವದ ಎದುರು ಬಟಾಬಯಲಾಗಿದ್ದು ಸುಳ್ಳಲ್ಲ. ಹತ್ತಕ್ಕೇ 10 ವಿಕೆಟ್ಗಳನ್ನ ಸ್ಪಿನ್ನರ್ಗಳಿಗೆ ಒಪ್ಪಿಸಿರೋದೆ ಇದಕ್ಕೆ ಸಾಕ್ಷಿಯಾಗಿದೆ. ನಿನ್ನೆ ನಡೆದ ಪಂದ್ಯದಲ್ಲಿ ಸ್ಪಿನ್ನರ್ಗಳ ಎದುರು ಟೀಮ್ ಇಂಡಿಯಾದ ಎಲ್ಲಾ ಬ್ಯಾಟರ್ಸ್ ಅಕ್ಷರಶಃ ತಡಕಾಡಿದ್ರು.
ಮೊದಲ ಏಕದಿನದಲ್ಲೂ ಸ್ಪಿನ್ಗೆ ಶರಣು.!
ನಿನ್ನೆ ಅಂತ್ಯ ಕಂಡ 2ನೇ ಏಕದಿನ ಪಂದ್ಯ ಮಾತ್ರವಲ್ಲ, ಡ್ರಾನಲ್ಲಿ ಅಂತ್ಯವಾದ ಮೊದಲ ಏಕದಿನದಲ್ಲೂ ಸ್ಪಿನ್ ಮುಂದೆ ಟೀಮ್ ಇಂಡಿಯಾ ಮಂಡಿಯೂರಿತು. ಅವತ್ತೂ ಕೂಡ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಸ್ಪಿನ್ನರ್ಗಳಿಗೆ ಸುಲಭಕ್ಕೆ ಶರಣಾದ್ರು. ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಸೇರಿದಂತೆ ಒಟ್ಟು 9 ಮಂದಿ ಬ್ಯಾಟರ್ಸ್ ಸ್ಪಿನ್ನರ್ಗಳಿಗೆ ತಲೆಬಾಗಿದ್ರು.
ಇದನ್ನೂ ಓದಿ: ರಾಹುಲ್ ದ್ರಾವಿಡ್ಗೆ ವಿದೇಶದಿಂದ ಬಿಗ್ ಆಫರ್.. ಕನ್ನಡಿಗನಿಗಾಗಿ ಈ ದೇಶದಲ್ಲಿ ಭಾರೀ ಫೈಟ್!
ಬಿಗ್ಬಾಸ್ಗಳ ಮುಂದೆ ಹೆಡ್ ಕೋಚ್ ಸ್ಪೆಷಲ್ ಬೇಡಿಕೆ.!
ಕೆಲ ದಿನಗಳ ಹಿಂದಷ್ಟೇ ಹೆಡ್ ಕೋಚ್ ಗೌತಮ್ ಗಂಭೀರ್, ಬಿಸಿಸಿಐ ಬಿಗ್ಬಾಸ್ಗಳ ಮುಂದೆ ಒಂದು ಬೇಡಿಕೆ ಇಟ್ಟಿದ್ರು. ಬೌಲಿಂಗ್ ಕೋಚ್ ಜೊತೆಗೆ ಒಬ್ಬರು ಸ್ಪೆಷಲಿಸ್ಟ್ ಸ್ಪಿನ್ ಕೋಚ್ ಬೇಕು ಅನ್ನೋದು ಗಂಭೀರ್ ಬೇಡಿಕೆಯಾಗಿತ್ತು. ಆಗ ಹಿಂದೆದೂ ಇರದಂತಹ ಹುದ್ದೆ ಸೃಷ್ಟಿ ಈಗ್ಯಾಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಇದೀಗ ಮೊದಲ 2 ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್ಸ್ ತಡಬಡಾಯಿಸಿದ ಮೇಲೆ ಗಂಭೀರ್, ಬೇಡಿಕೆಯ ಹಿಂದಿನ ಮರ್ಮ ಅರ್ಥವಾದಂತಿದೆ.
ಇದನ್ನೂ ಓದಿ: BJP ಅವಧಿಯ ಭ್ರಷ್ಟಾಚಾರ, ಹಗರಣಗಳ ಟಾರ್ಗೆಟ್ ಮಾಡಿದ ‘ಕೈ’ ಹೈಕಮಾಂಡ್; ಮಾಜಿ ಸಿಎಂಗೆ ಸಂಕಷ್ಟ?
ಈ ಹಿಂದೆ ಸ್ಪಿನ್ ಎದುರು ಅದ್ಭುತವಾಗಿ ಆಡೋದು ಟೀಮ್ ಇಂಡಿಯಾ ಬ್ಯಾಟರ್ಸ್ ಸ್ಟ್ರೆಂಥ್ ಎಂಬ ಮಾತಿತ್ತು. ಆದ್ರೀಗ, ಆ ಮಾತು ಬದಲಾಗ್ತಿದೆ. ಕಳೆದ ಕೆಲ ವರ್ಷಗಳಿಂದ ಭಾರತೀಯ ಬ್ಯಾಟರ್ಸ್ಗಳನ್ನ ಸ್ಪಿನ್ನರ್ಗಳು ಬಿಡದೇ ಕಾಡಿದ್ದಾರೆ. ಮುಂದಾದ್ರೂ ಈ ವೀಕ್ನೆಸ್ನ ಇಂಡಿಯನ್ ಬ್ಯಾಟರ್ಸ್ ಮೆಟ್ಟಿ ನಿಲ್ತಾರಾ.?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಗೌತಮ್ ಗಂಭೀರ್ ಡಿಮ್ಯಾಂಡ್ ಹಿಂದಿನ ಸೀಕ್ರೆಟ್ ಇದೇನಾ?
ಕ್ಯಾಪ್ಟನ್ಗೆ ಕೈ ಕೊಟ್ಟಿದ್ದು ಟಾಪ್ ಆರ್ಡರ್ನ ಈ 6 ಪ್ಲೇಯರ್ಸ್
ಟೀಮ್ ಇಂಡಿಯಾದ ವೀಕ್ನೆಸ್ ಏನು ಅಂತ ಗೊತ್ತಾಯಿತಾ?
ಗೆಲ್ಲೋ ಹಾಟ್ ಫೇವರಿಟ್ ಅನಿಸಿಕೊಂಡಿದ್ದ ಟೀಮ್ ಇಂಡಿಯಾಗೆ ಸಿಂಹಳೀಯರ ನಾಡಲ್ಲಿ ಸೋಲಿನ ದರ್ಶನವಾಗಿದೆ. ಮೊದಲ ಏಕದಿನದಲ್ಲಿ ತಿಣುಕಾಡಿ ಡ್ರಾ ಸಾಧಿಸಿದ್ದ ಟೀಮ್ ಇಂಡಿಯಾ, 2ನೇ ಏಕದಿನದಲ್ಲಿ ಹೀನಾಯವಾಗಿ ಸೋತಿದೆ. ಇದರ ಜೊತೆಗೆ ಟೀಮ್ ಇಂಡಿಯಾದ ವೀಕ್ನೆಸ್ ಕೂಡ ವಿಶ್ವದ ಎದುರು ಬಟಾ ಬಯಲಾಗಿದೆ. ಸೋಲಿಗಿಂತ ಭಾರತದ ಬ್ಯಾಟರ್ಗಳ ಈ ದೌರ್ಬಲ್ಯ ಟೆನ್ಶನ್ ಹೆಚ್ಚಿಸಿದೆ.
ಟೀಮ್ ಇಂಡಿಯಾಗೆ ಸ್ಪಿನ್ ಬಲೆ ಹೆಣೆದ ಲಂಕಾ.!
ಕೊಲಂಬೋದ ಸ್ಲೋ & ಲೋ ಪಿಚ್ನಲ್ಲಿ ಇಂಡಿಯನ್ ಟೈಗರ್ಸ್, ಸಿಂಹಳೀಯರ ಸ್ಪಿನ್ ಬಲೆಗೆ ಒಬ್ಬರ ಹಿಂದೊಬ್ಬರಂತೆ ಬಿದ್ದರು. ಚೇಸಿಂಗ್ಗಿಳಿದಾಗ ಟೀಮ್ ಇಂಡಿಯಾ ಅದ್ಧೂರಿ ಆರಂಭ ಪಡೆದುಕೊಳ್ಳಿತ್ತು. ಮೊದಲು 10 ಓವರ್ ಎಲ್ಲಾ ಚೆನ್ನಾಗಿತ್ತು. ಆದ್ರೆ, ಆ ಬಳಿಕ ಟೀಮ್ ಇಂಡಿಯಾ ಬ್ಯಾಟರ್ಗಳ ಪೆವಿಲಿಯನ್ ಪರೇಡ್ ನಡೀತು.
ಇದನ್ನೂ ಓದಿ: ವಯನಾಡು ದುರಂತದ ಬಗ್ಗೆ ಗಿಣಿ ಎಚ್ಚರಿಕೆ.. ಮಾಲೀಕನ ಕುಟುಂಬ, ಅವರ ಸ್ನೇಹಿತರ ಬಚಾವ್ ಮಾಡಿದ ಕಿಂಗಿಣಿ
ಕೊಲಂಬೋದಲ್ಲಿ ವಂಡರ್ ಸೃಷ್ಟಿಸಿದ ವಂಡರ್ಸೆ.!
ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ ಶ್ರೀಲಂಕಾದ ಯುವ ಸ್ಪಿನ್ನರ್ ವಂಡರ್ಸೆ ವಂಡರ್ ಸೃಷ್ಟಿಸಿದ್ದರು. ವಂಡರ್ಸೆಯ ಸ್ಪಿನ್ ದಾಳಕ್ಕೆ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ಸ್ಗಳು ಸುಲಭಕ್ಕೆ ಉರುಳಿದ್ದರು. ನಾಯಕ ರೋಹಿತ್ ವಿಕೆಟ್ ಕಬಳಿಸಿ ಅಕೌಂಟ್ ಓಪನ್ ಮಾಡಿದ ಜೆಫ್ರಿ ವಂಡರ್ಸೆ, ಶಾಕ್ ಮೇಲೆ ಶಾಕ್ ಕೊಟ್ಟರು.
ಟೀಮ್ ಇಂಡಿಯಾ ಟಾಪ್ ಆರ್ಡರ್ನ ಟಾಪ್ 6 ಬ್ಯಾಟರ್ಗಳ ಕಥೆಯಿದು. ರೋಹಿತ್ ಶರ್ಮಾ-ಶುಭ್ಮನ್ ಗಿಲ್ ಉತ್ತಮ ಸ್ಟಾರ್ಟ್ ನೀಡಿ ಔಟ್ ಆದ್ರು. ಆದ್ರೆ, ಉಳಿದವರು ತಂಡವನ್ನ ಸಂಕಷ್ಟಕ್ಕೆ ದೂಡಿದ್ರು. ಶಿವಂ ದುಬೆ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ ಅಷ್ಟು ಹೀನಾಯವಾದ ರೀತಿಯಲ್ಲಿ ವಿಕೆಟ್ ಒಪ್ಪಿಸಿದ್ರು.
ಬಟಾಬಯಲಾಯ್ತು ಟೀಮ್ ಇಂಡಿಯಾ ವೀಕ್ನೆಸ್.!
2ನೇ ಏಕದಿನ ಪಂದ್ಯದ ಅಂತ್ಯದೊಂದಿಗೆ ಟೀಮ್ ಇಂಡಿಯಾದ ಸ್ಪಿನ್ ವೀಕ್ನೆಸ್ ಇಡೀ ವಿಶ್ವದ ಎದುರು ಬಟಾಬಯಲಾಗಿದ್ದು ಸುಳ್ಳಲ್ಲ. ಹತ್ತಕ್ಕೇ 10 ವಿಕೆಟ್ಗಳನ್ನ ಸ್ಪಿನ್ನರ್ಗಳಿಗೆ ಒಪ್ಪಿಸಿರೋದೆ ಇದಕ್ಕೆ ಸಾಕ್ಷಿಯಾಗಿದೆ. ನಿನ್ನೆ ನಡೆದ ಪಂದ್ಯದಲ್ಲಿ ಸ್ಪಿನ್ನರ್ಗಳ ಎದುರು ಟೀಮ್ ಇಂಡಿಯಾದ ಎಲ್ಲಾ ಬ್ಯಾಟರ್ಸ್ ಅಕ್ಷರಶಃ ತಡಕಾಡಿದ್ರು.
ಮೊದಲ ಏಕದಿನದಲ್ಲೂ ಸ್ಪಿನ್ಗೆ ಶರಣು.!
ನಿನ್ನೆ ಅಂತ್ಯ ಕಂಡ 2ನೇ ಏಕದಿನ ಪಂದ್ಯ ಮಾತ್ರವಲ್ಲ, ಡ್ರಾನಲ್ಲಿ ಅಂತ್ಯವಾದ ಮೊದಲ ಏಕದಿನದಲ್ಲೂ ಸ್ಪಿನ್ ಮುಂದೆ ಟೀಮ್ ಇಂಡಿಯಾ ಮಂಡಿಯೂರಿತು. ಅವತ್ತೂ ಕೂಡ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಸ್ಪಿನ್ನರ್ಗಳಿಗೆ ಸುಲಭಕ್ಕೆ ಶರಣಾದ್ರು. ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಸೇರಿದಂತೆ ಒಟ್ಟು 9 ಮಂದಿ ಬ್ಯಾಟರ್ಸ್ ಸ್ಪಿನ್ನರ್ಗಳಿಗೆ ತಲೆಬಾಗಿದ್ರು.
ಇದನ್ನೂ ಓದಿ: ರಾಹುಲ್ ದ್ರಾವಿಡ್ಗೆ ವಿದೇಶದಿಂದ ಬಿಗ್ ಆಫರ್.. ಕನ್ನಡಿಗನಿಗಾಗಿ ಈ ದೇಶದಲ್ಲಿ ಭಾರೀ ಫೈಟ್!
ಬಿಗ್ಬಾಸ್ಗಳ ಮುಂದೆ ಹೆಡ್ ಕೋಚ್ ಸ್ಪೆಷಲ್ ಬೇಡಿಕೆ.!
ಕೆಲ ದಿನಗಳ ಹಿಂದಷ್ಟೇ ಹೆಡ್ ಕೋಚ್ ಗೌತಮ್ ಗಂಭೀರ್, ಬಿಸಿಸಿಐ ಬಿಗ್ಬಾಸ್ಗಳ ಮುಂದೆ ಒಂದು ಬೇಡಿಕೆ ಇಟ್ಟಿದ್ರು. ಬೌಲಿಂಗ್ ಕೋಚ್ ಜೊತೆಗೆ ಒಬ್ಬರು ಸ್ಪೆಷಲಿಸ್ಟ್ ಸ್ಪಿನ್ ಕೋಚ್ ಬೇಕು ಅನ್ನೋದು ಗಂಭೀರ್ ಬೇಡಿಕೆಯಾಗಿತ್ತು. ಆಗ ಹಿಂದೆದೂ ಇರದಂತಹ ಹುದ್ದೆ ಸೃಷ್ಟಿ ಈಗ್ಯಾಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಇದೀಗ ಮೊದಲ 2 ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್ಸ್ ತಡಬಡಾಯಿಸಿದ ಮೇಲೆ ಗಂಭೀರ್, ಬೇಡಿಕೆಯ ಹಿಂದಿನ ಮರ್ಮ ಅರ್ಥವಾದಂತಿದೆ.
ಇದನ್ನೂ ಓದಿ: BJP ಅವಧಿಯ ಭ್ರಷ್ಟಾಚಾರ, ಹಗರಣಗಳ ಟಾರ್ಗೆಟ್ ಮಾಡಿದ ‘ಕೈ’ ಹೈಕಮಾಂಡ್; ಮಾಜಿ ಸಿಎಂಗೆ ಸಂಕಷ್ಟ?
ಈ ಹಿಂದೆ ಸ್ಪಿನ್ ಎದುರು ಅದ್ಭುತವಾಗಿ ಆಡೋದು ಟೀಮ್ ಇಂಡಿಯಾ ಬ್ಯಾಟರ್ಸ್ ಸ್ಟ್ರೆಂಥ್ ಎಂಬ ಮಾತಿತ್ತು. ಆದ್ರೀಗ, ಆ ಮಾತು ಬದಲಾಗ್ತಿದೆ. ಕಳೆದ ಕೆಲ ವರ್ಷಗಳಿಂದ ಭಾರತೀಯ ಬ್ಯಾಟರ್ಸ್ಗಳನ್ನ ಸ್ಪಿನ್ನರ್ಗಳು ಬಿಡದೇ ಕಾಡಿದ್ದಾರೆ. ಮುಂದಾದ್ರೂ ಈ ವೀಕ್ನೆಸ್ನ ಇಂಡಿಯನ್ ಬ್ಯಾಟರ್ಸ್ ಮೆಟ್ಟಿ ನಿಲ್ತಾರಾ.?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ