ಹೀನಾಯ ಸೋಲಿಗೆ ಭಾರತ ತಕ್ಕ ಪ್ರತೀಕಾರ..!
100 ರನ್ಗಳಿಂದ ಭಾರತ ಭರ್ಜರಿ ಜಯಭೇರಿ
ಅಭಿಷೇಕ್ ಶರ್ಮಾ ಬ್ಯಾಟಿಂಗ್ ರೌದ್ರನರ್ತನ..!
ಮೊದಲ ಟಿ20ಯಲ್ಲಿ ಭಾರತ ತಂಡ ತಲೆತಗ್ಗಿಸಿತ್ತು. 2ನೇ ಪಂದ್ಯದಲ್ಲಿ ತಲೆ ಎತ್ತಿ ಮೆರೆದಾಡಿದೆ. ಸಿಡಿಗುಂಡಿನ ಬ್ಯಾಟಿಂಗ್ ಹಾಗೂ ಬೆಂಕಿ ಬೌಲಿಂಗ್ಗೆ ಜಿಂಬಾಬ್ವೆ ಥಂಡಾ ಹೊಡೆಯಿತು.
ಅಭಿಷೇಕ್ ಶರ್ಮಾ. 17ನೇ ಐಪಿಎಲ್ನಲ್ಲಿ ಈ ಆ್ಯಂಗ್ರಿ ಯಂಗ್ಮ್ಯಾನ್ ಹೆಸರು ಕೇಳದವರಿಲ್ಲ. ಡಿಸ್ಟ್ರಕ್ಟಿವ್ ಆಟವಾಡಿ ಕ್ರಿಕೆಟ್ ಲೋಕವನ್ನ ಬೆರಗಾಗಿಸಿದ್ರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಂತಹದೇ ಸಿಡಿಲಬ್ಬರದ ಆಟವಾಡಿ ಸೆನ್ಷೆಷನಲ್ ಸೃಷ್ಟಿಸಿದ್ದಾರೆ.
ಇದನ್ನೂ ಓದಿ:180 ಸಾಕ್ಷ್ಯಗಳ ಸಂಗ್ರಹಿಸಿದ ಪೊಲೀಸರಿಗೆ ಆ ಎರಡು ವಸ್ತುಗಳದ್ದೇ ಟೆನ್ಷನ್..!
ಅಭಿಷೇಕ್ ಶರ್ಮಾ ಅನ್ನೋ ಯಂಗ್ಬ್ಯಾಟರ್ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಬ್ಯಾಟಿಂಗ್ ರೌದ್ರನರ್ತನ ನಡೆಸಿದರು. ಡೆಬ್ಯು ಪಂದ್ಯದಲ್ಲಿ ಡಕೌಟ್ ಆಗಿದ್ದ ಅಭಿಷೇಕ್ ನಿನ್ನೆ ಜಿಂಬಾಬ್ವೆ ತಂಡಕ್ಕೆ ಮುಟ್ಟಿನೋಡಿಕೊಳ್ಳುವಂತ ಉತ್ತರ ಕೊಟ್ಟರು. ಟಾಸ್ ಗೆದ್ದ ಭಾರತ ಕ್ಯಾಪ್ಟನ್ ಗಿಲ್ರನ್ನ ಬೇಗನೆ ಕಳೆದುಕೊಳ್ತು. ಬಳಿಕ ನಡೆದಿದ್ದು ಅಭಿಷೇಕ್ ದರ್ಬಾರ್.
ಜಿಂಬಾಬ್ವೆ ಬೌಲರ್ಗಳನ್ನ ಹಣ್ಣುಗಾಯಿ ನೀರುಗಾಯಿ ಮಾಡಿದ ಪಂಜಾಬ್ ಪುತ್ತರ್ ಹರಾರೆಯಲ್ಲಿ ಸಿಕ್ಸರ್-ಬೌಂಡ್ರಿಗಳ ಮಳೆಗರೆದ್ರು. ಎದುರಾಳಿ ಪಡೆಯ ಬೌಲಿಂಗ್ ಕಂಪ್ಲೀಟ್ ಪುಡಿಗಟ್ಟಿದ ಅಭಿಷೇಕ್ 212.76 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿ, 46 ಎಸೆತಗಳಲ್ಲಿ ಸಿಡಿಲಬ್ಬರದ ಪೂರೈಸಿದ್ರು. ಸಿಡಿದ 8 ಸಿಕ್ಸರ್ಗೆ ಫ್ಯಾನ್ಸ್ ಹುಚ್ಚೆದ್ದು ಕುಣಿದ್ರು.
ಇದನ್ನೂ ಓದಿ:ರೋಹಿತ್, ಪಾಂಡ್ಯ, ಪಂತ್..! ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಕ್ಯಾಪ್ಟನ್ ಹೆಸರು ಕನ್ಫರ್ಮ್ ಮಾಡಿದ ಜಯ್ ಶಾ
ಋತುರಾಜ್ ಜೊತೆ ಸೆಂಚುರಿ ಜುಗಲ್ಬಂದಿ
ಸಿಕ್ಸರ್ನಿಂದ ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ್ ಜಿಂಬಾಬ್ವೆ ಬೌಲರ್ಗಳನ್ನು ನಿರ್ದಯವಾಗಿ ದಂಡಿಸಿದ್ರು. ಇವರ ಸ್ಫೋಟಕ ಆಟಕ್ಕೆ ಋತುರಾಜ್ ಕೂಡ ಸಾಥ್ ನೀಡಿದರು. 2ನೇ ವಿಕೆಟ್ಗೆ ಈ ಜೋಡಿ ಸಿಡಿಲಬ್ಬರದ 137 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು.
ಘರ್ಜಿಸಿದ ಗಾಯಕ್ವಾಡ್..!
ಭಾರತ ಪರ 2ನೇ ವೇಗದ ಸೆಂಚುರಿ ಬಾರಿಸಿದ ಅಭಿಷೇಕ್ ಶರ್ಮಾ ಸೆಂಚುರಿ ಆಗ್ತಿದ್ದಂತೆ ಔಟಾದ್ರು. ಇವರ ನಿರ್ಗಮನದ ಬಳಿಕ ರುತುರಾಜ್ ಅಸಲಿ ಆಟ ಶುರುವಿಟ್ಟುಕೊಂಡ್ರು. 47 ಎಸೆತಗಳಲ್ಲಿ ಅಜೇಯ 77 ರನ್ ಗಳಿಸಿ ಬ್ಯಾಕ್ ವಿತ್ ಬ್ಯಾಂಗ್ ಮಾಡಿದರು. ಸ್ಲಾಗ್ ಓವರ್ಗಳಲ್ಲಿ ರಿಂಕು ಸಿಂಗ್ ಸಾಲಿಡ್ ಆಟವಾಡಿದ್ರು. ಎದುರಿಸಿದ 22 ಎಸೆತಗಳಲ್ಲಿ ಸ್ಫೋಟಕ 48 ರನ್ ಚಚ್ಚಿದ್ರು. ಪರಿಣಾಮ ಭಾರತ ತಂಡ 20 ಓವರ್ಗಳಲ್ಲಿ ಬೃಹತ್ 234 ರನ್ ಕಲೆಹಾಕ್ತು.
ಭಾರತ ಬಿರುಗಾಳಿ ದಾಳಿಗೆ ಚದುರಿದ ಜಿಂಬಾಬ್ವೆ
ಬಿಗ್ ಟಾರ್ಗೆಟ್ ಬೆನ್ನಟ್ಟಿದ ಜಿಂಬಾಬ್ವೆ ತಂಡ ಭಾರತದ ಬೆಂಕಿ ಬೌಲಿಂಗ್ಗೆ ತತ್ತರಿಸಿತು. ಯಾವೊಬ್ಬ ಬ್ಯಾಟರ್ ಕೂಡ ಪ್ರತಿರೋಧ ತೋರಲಿಲ್ಲ. ಟಾಪ್ ಆರ್ಡರ್ನಿಂದ ಹಿಡಿದು ಲೋವರ್ ಆರ್ಡರ್ ನೆಲಕಚ್ಚಿತ್ತು. ಮುಖೇಶ್ ಕುಮಾರ್ 3 ಹಾಗೂ ಆವೇಶ್ ಖಾನ್ 3 ವಿಕೆಟ್ ಬೇಟೆಯ ಪರಿಣಾಮ 134 ರನ್ಗೆ ಆಲೌಟಾಗಿ 100 ಗಳಿಂದ ಹೀನಾಯ ಸೋಲೊಪ್ಪಿಕೊಳ್ತು. ಈ ಗೆಲುವಿನೊಂದಿಗೆ ಪುಟಿದೆದ್ದ ಭಾರತ ಸರಣಿಯಲ್ಲಿ 1-1 ಸಮಬಲ ಸಾಧಿಸಿದ್ದು, ಮೊದಲ ಹೀನಾಯ ಸೋಲಿಗೆ ತಕ್ಕ ಪ್ರತ್ಯುತ್ತರ ನೀಡಿದೆ.
ಇದನ್ನೂ ಓದಿ:47 ಬಾಲ್ನಲ್ಲಿ 100 ರನ್; ಶತಕದ ಹಿಂದಿನ ಅಸಲಿ ಕತೆ ಬಿಚ್ಚಿಟ್ಟ ಅಭಿಶೇಕ್ ಶರ್ಮಾ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಹೀನಾಯ ಸೋಲಿಗೆ ಭಾರತ ತಕ್ಕ ಪ್ರತೀಕಾರ..!
100 ರನ್ಗಳಿಂದ ಭಾರತ ಭರ್ಜರಿ ಜಯಭೇರಿ
ಅಭಿಷೇಕ್ ಶರ್ಮಾ ಬ್ಯಾಟಿಂಗ್ ರೌದ್ರನರ್ತನ..!
ಮೊದಲ ಟಿ20ಯಲ್ಲಿ ಭಾರತ ತಂಡ ತಲೆತಗ್ಗಿಸಿತ್ತು. 2ನೇ ಪಂದ್ಯದಲ್ಲಿ ತಲೆ ಎತ್ತಿ ಮೆರೆದಾಡಿದೆ. ಸಿಡಿಗುಂಡಿನ ಬ್ಯಾಟಿಂಗ್ ಹಾಗೂ ಬೆಂಕಿ ಬೌಲಿಂಗ್ಗೆ ಜಿಂಬಾಬ್ವೆ ಥಂಡಾ ಹೊಡೆಯಿತು.
ಅಭಿಷೇಕ್ ಶರ್ಮಾ. 17ನೇ ಐಪಿಎಲ್ನಲ್ಲಿ ಈ ಆ್ಯಂಗ್ರಿ ಯಂಗ್ಮ್ಯಾನ್ ಹೆಸರು ಕೇಳದವರಿಲ್ಲ. ಡಿಸ್ಟ್ರಕ್ಟಿವ್ ಆಟವಾಡಿ ಕ್ರಿಕೆಟ್ ಲೋಕವನ್ನ ಬೆರಗಾಗಿಸಿದ್ರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಂತಹದೇ ಸಿಡಿಲಬ್ಬರದ ಆಟವಾಡಿ ಸೆನ್ಷೆಷನಲ್ ಸೃಷ್ಟಿಸಿದ್ದಾರೆ.
ಇದನ್ನೂ ಓದಿ:180 ಸಾಕ್ಷ್ಯಗಳ ಸಂಗ್ರಹಿಸಿದ ಪೊಲೀಸರಿಗೆ ಆ ಎರಡು ವಸ್ತುಗಳದ್ದೇ ಟೆನ್ಷನ್..!
ಅಭಿಷೇಕ್ ಶರ್ಮಾ ಅನ್ನೋ ಯಂಗ್ಬ್ಯಾಟರ್ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಬ್ಯಾಟಿಂಗ್ ರೌದ್ರನರ್ತನ ನಡೆಸಿದರು. ಡೆಬ್ಯು ಪಂದ್ಯದಲ್ಲಿ ಡಕೌಟ್ ಆಗಿದ್ದ ಅಭಿಷೇಕ್ ನಿನ್ನೆ ಜಿಂಬಾಬ್ವೆ ತಂಡಕ್ಕೆ ಮುಟ್ಟಿನೋಡಿಕೊಳ್ಳುವಂತ ಉತ್ತರ ಕೊಟ್ಟರು. ಟಾಸ್ ಗೆದ್ದ ಭಾರತ ಕ್ಯಾಪ್ಟನ್ ಗಿಲ್ರನ್ನ ಬೇಗನೆ ಕಳೆದುಕೊಳ್ತು. ಬಳಿಕ ನಡೆದಿದ್ದು ಅಭಿಷೇಕ್ ದರ್ಬಾರ್.
ಜಿಂಬಾಬ್ವೆ ಬೌಲರ್ಗಳನ್ನ ಹಣ್ಣುಗಾಯಿ ನೀರುಗಾಯಿ ಮಾಡಿದ ಪಂಜಾಬ್ ಪುತ್ತರ್ ಹರಾರೆಯಲ್ಲಿ ಸಿಕ್ಸರ್-ಬೌಂಡ್ರಿಗಳ ಮಳೆಗರೆದ್ರು. ಎದುರಾಳಿ ಪಡೆಯ ಬೌಲಿಂಗ್ ಕಂಪ್ಲೀಟ್ ಪುಡಿಗಟ್ಟಿದ ಅಭಿಷೇಕ್ 212.76 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿ, 46 ಎಸೆತಗಳಲ್ಲಿ ಸಿಡಿಲಬ್ಬರದ ಪೂರೈಸಿದ್ರು. ಸಿಡಿದ 8 ಸಿಕ್ಸರ್ಗೆ ಫ್ಯಾನ್ಸ್ ಹುಚ್ಚೆದ್ದು ಕುಣಿದ್ರು.
ಇದನ್ನೂ ಓದಿ:ರೋಹಿತ್, ಪಾಂಡ್ಯ, ಪಂತ್..! ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಕ್ಯಾಪ್ಟನ್ ಹೆಸರು ಕನ್ಫರ್ಮ್ ಮಾಡಿದ ಜಯ್ ಶಾ
ಋತುರಾಜ್ ಜೊತೆ ಸೆಂಚುರಿ ಜುಗಲ್ಬಂದಿ
ಸಿಕ್ಸರ್ನಿಂದ ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ್ ಜಿಂಬಾಬ್ವೆ ಬೌಲರ್ಗಳನ್ನು ನಿರ್ದಯವಾಗಿ ದಂಡಿಸಿದ್ರು. ಇವರ ಸ್ಫೋಟಕ ಆಟಕ್ಕೆ ಋತುರಾಜ್ ಕೂಡ ಸಾಥ್ ನೀಡಿದರು. 2ನೇ ವಿಕೆಟ್ಗೆ ಈ ಜೋಡಿ ಸಿಡಿಲಬ್ಬರದ 137 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು.
ಘರ್ಜಿಸಿದ ಗಾಯಕ್ವಾಡ್..!
ಭಾರತ ಪರ 2ನೇ ವೇಗದ ಸೆಂಚುರಿ ಬಾರಿಸಿದ ಅಭಿಷೇಕ್ ಶರ್ಮಾ ಸೆಂಚುರಿ ಆಗ್ತಿದ್ದಂತೆ ಔಟಾದ್ರು. ಇವರ ನಿರ್ಗಮನದ ಬಳಿಕ ರುತುರಾಜ್ ಅಸಲಿ ಆಟ ಶುರುವಿಟ್ಟುಕೊಂಡ್ರು. 47 ಎಸೆತಗಳಲ್ಲಿ ಅಜೇಯ 77 ರನ್ ಗಳಿಸಿ ಬ್ಯಾಕ್ ವಿತ್ ಬ್ಯಾಂಗ್ ಮಾಡಿದರು. ಸ್ಲಾಗ್ ಓವರ್ಗಳಲ್ಲಿ ರಿಂಕು ಸಿಂಗ್ ಸಾಲಿಡ್ ಆಟವಾಡಿದ್ರು. ಎದುರಿಸಿದ 22 ಎಸೆತಗಳಲ್ಲಿ ಸ್ಫೋಟಕ 48 ರನ್ ಚಚ್ಚಿದ್ರು. ಪರಿಣಾಮ ಭಾರತ ತಂಡ 20 ಓವರ್ಗಳಲ್ಲಿ ಬೃಹತ್ 234 ರನ್ ಕಲೆಹಾಕ್ತು.
ಭಾರತ ಬಿರುಗಾಳಿ ದಾಳಿಗೆ ಚದುರಿದ ಜಿಂಬಾಬ್ವೆ
ಬಿಗ್ ಟಾರ್ಗೆಟ್ ಬೆನ್ನಟ್ಟಿದ ಜಿಂಬಾಬ್ವೆ ತಂಡ ಭಾರತದ ಬೆಂಕಿ ಬೌಲಿಂಗ್ಗೆ ತತ್ತರಿಸಿತು. ಯಾವೊಬ್ಬ ಬ್ಯಾಟರ್ ಕೂಡ ಪ್ರತಿರೋಧ ತೋರಲಿಲ್ಲ. ಟಾಪ್ ಆರ್ಡರ್ನಿಂದ ಹಿಡಿದು ಲೋವರ್ ಆರ್ಡರ್ ನೆಲಕಚ್ಚಿತ್ತು. ಮುಖೇಶ್ ಕುಮಾರ್ 3 ಹಾಗೂ ಆವೇಶ್ ಖಾನ್ 3 ವಿಕೆಟ್ ಬೇಟೆಯ ಪರಿಣಾಮ 134 ರನ್ಗೆ ಆಲೌಟಾಗಿ 100 ಗಳಿಂದ ಹೀನಾಯ ಸೋಲೊಪ್ಪಿಕೊಳ್ತು. ಈ ಗೆಲುವಿನೊಂದಿಗೆ ಪುಟಿದೆದ್ದ ಭಾರತ ಸರಣಿಯಲ್ಲಿ 1-1 ಸಮಬಲ ಸಾಧಿಸಿದ್ದು, ಮೊದಲ ಹೀನಾಯ ಸೋಲಿಗೆ ತಕ್ಕ ಪ್ರತ್ಯುತ್ತರ ನೀಡಿದೆ.
ಇದನ್ನೂ ಓದಿ:47 ಬಾಲ್ನಲ್ಲಿ 100 ರನ್; ಶತಕದ ಹಿಂದಿನ ಅಸಲಿ ಕತೆ ಬಿಚ್ಚಿಟ್ಟ ಅಭಿಶೇಕ್ ಶರ್ಮಾ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್