ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದ ಭಾರತ ತಂಡ
ಕೈಕೊಟ್ಟ ಟಾಪ್ ಆರ್ಡರ್ಸ್.. ಕೈಹಿಡಿದ ಸ್ಯಾಮ್ಸನ್..!
4 ವಿಕೆಟ್ ಪಡೆದು ಮುಖೇಶ್ ಕುಮಾರ್ ಶೈನಿಂಗ್
ಜಿಂಬಾಬ್ವೆ ನಾಡಲ್ಲಿ ಯಂಗ್ ಇಂಡಿಯಾ ಕಮಾಲ್ ಮಾಡಿದೆ. ಅನಾನುಭವಿ ತಂಡ ಮುನ್ನಡೆಸಿದ ಶುಭ್ಮನ್ ಗಿಲ್ ಸರಣಿ ಗೆಲ್ಲಿಸಿಕೊಟ್ಟು ಸೈ ಅನ್ನಿಸಿಕೊಂಡಿದ್ದಾರೆ. ಭಾರತದ ಅದ್ಭುತ ಆಟಕ್ಕೆ ಜಿಂಬಾಬ್ವೆ ಅಂತಿಮ ಟಿ20 ಪಂದ್ಯದಲ್ಲೂ ತಲೆಬಾಗ್ತು.
ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸ್ತಿದ್ರು. ಬ್ಯಾಟಿಂಗ್ ಸುನಾಮಿ ಸೃಷ್ಟಿಸುವ ಯಂಗ್ ಬ್ಯಾಟರ್ಸ್ ಜಿಂಬಾಬ್ವೆಯ ಎಫೆಕ್ಟಿವ್ ಸ್ಪೆಲ್ ಮುಂದೆ ಸಂಪೂರ್ಣ ಮಂಡಿಯೂರಿದ್ರು.
ಅಂತಿಮ ಹಾಗೂ ಕೊನೆ ಟಿ20 ಪಂದ್ಯದಲ್ಲಿ ಮೊದಲು ಇನ್ನಿಂಗ್ಸ್ ಆರಂಭಿಸಿದ ಇಂಡಿಯನ್ ಬ್ಯಾಟರ್ಸ್ ಫ್ಲಾಪ್ ಶೋನಿಂದ ಹೆಚ್ಚು ಸುದ್ದಿಯಾದ್ರು. ಟೂರ್ನಿಯುದ್ಧಕ್ಕೂ ರನ್ ಕೊಳ್ಳೆ ಹೊಡೆದಿದ್ದ ಬಲಿಷ್ಠ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ನಿನ್ನೆ ಮಾತ್ರ ತಂಡವನ್ನ ನಡುನೀರಲ್ಲಿ ಕೈಬಿಟ್ರು.
ಇದನ್ನೂ ಓದಿ:ಅನಂತ್ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಇಬ್ಬರು ವ್ಯಕ್ತಿಗಳು ಅರೆಸ್ಟ್.. ಕೆಲವರು ಹೀಗೂ ಇದ್ದಾರಾ..?
ಮೊದಲ ನಾಲ್ಕು ಪಂದ್ಯಗಳಲ್ಲಿ ಭಾರತಕ್ಕೆ ಕೈಹಿಡಿದಿದ್ದೇ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು. ನಿನ್ನೆ ಮಾತ್ರ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಟಾಪ್ ಪರ್ಫಾಮೆನ್ಸ್ ನೀಡೋದನ್ನ ಮರೆತು ಬಿಟ್ರು. ಜೈಸ್ವಾಲ್ 12, ಕ್ಯಾಪ್ಟನ್ ಶುಭ್ಮನ್ ಗಿಲ್ 13 ಹಾಗೂ ಡಿಸ್ಟ್ರಕ್ಟಿವ್ ಅಭಿಷೇಕ್ ಶರ್ಮಾ ಆಟ ಜಸ್ಟ್ 14 ರನ್ಗೆ ಸ್ಟಾಪ್ ಆಯ್ತು.
ಜಿಂಬಾಬ್ವೆ ಹರೋಹರ..!
40 ರನ್ಗೆ 3 ವಿಕೆಟ್ ಕಳೆದುಕೊಂಡ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಾದಾಗ ಸಂಜು ಸ್ಯಾಮ್ಸನ್ ತಮ್ಮ ಪವರ್ ತೋರಿಸಿದ್ರು. ಜಿಂಬಾಬ್ವೆ ಬೌಲರ್ಗಳನ್ನ ಹೆಡೆಮುರಿ ಕಟ್ಟಿದ ಸ್ಯಾಮ್ಸನ್ ಸ್ಫೋಟಕ ಅರ್ಧಶತಕ ಗಳಿಸಿ ಶೈನ್ ಆದರು. 4ನೇ ವಿಕೆಟ್ಗೆ ಸ್ಯಾಮ್ಸನ್ ಹಾಗೂ ರಿಯಾಗ್ ಪರಾಗ್ ಕೂಡಿಕೊಂಡು ಬಿರುಸಿನ 65 ರನ್ಗಳ ಜೊತೆಯಾಟವಾಡಿ ತಂಡವನ್ನ ಮೇಲಕ್ಕೆತ್ತಿದ್ರು. ಈ ಭಲೇ ಜೋಡಿಯನ್ನ ಮೌತ ಬೇರ್ಪಡಿಸಿದ್ರು. ಉತ್ತಮವಾಗಿ ಆಡ್ತಿದ್ದ ಪರಾಗ್ 22 ರನ್ ಗಳಿಸಿದ್ರೆ, ವೆಲ್ ಸೆಟಲ್ಡ್ ಸ್ಯಾಮ್ಸನ್ ಇವರ ಹಿಂದೇನೆ ನಿರ್ಗಮಿಸಿದ್ರು. ನಂತರದ ಬಂದ ಸ್ಪಿನ್ ಬೀಸ್ಟ್ ಶಿವಂ ದುಬೆ 26 ಹಾಗೂ ರಿಂಕು ಸಿಂಗ್ 11 ರನ್ ಗಳಿಸಿ ಅಬ್ಬರಿಸಿದ್ರು. ಪರಿಣಾಮ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಕಲೆ ಹಾಕ್ತು.
ಇದನ್ನೂ ಓದಿ:ಸೊಸೆಯ ವಿದಾಯಿ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ಶ್ರೀಮಂತ ಮುಕೇಶ್ ಅಂಬಾನಿ.. ವಿಡಿಯೋ
ಮುಖೇಶ್ ಕುಮಾರ್ ಬೆಂಕಿ ದಾಳಿಗೆ ಜಿಂಬಾಬ್ವೆ ತತ್ತರ
ಕಾಂಪಿಟೇಟಿವ್ ಸ್ಕೋರ್ ಬೆನ್ನಟ್ಟಿದ ಜಿಂಬಾಬ್ವೆ ತಂಡ ಮತ್ತೆ ಬ್ಯಾಟಿಂಗ್ ಫೇಲ್ಯೂರ್ ಕಾಣ್ತು. ಮುಖೇಶ್ ಕುಮಾರ್ ಬೆಂಕಿ ಎಸೆತಗಳಿಗೆ ಜಿಂಬಾಬ್ವೆ ಬ್ಯಾಟರ್ಸ್ ಹೆಸರಿಲ್ಲದೇ ಪೆವಿಲಿಯನ್ ಸೇರಿಕೊಂಡ್ರು. ಡಿಯೋನ್ ಮೈಯರ್ಸ್ 34 ರನ್ ಗಳಿಸಿದ್ದು ಬಿಟ್ರೆ ಯಾವೊಬ್ಬ ಬ್ಯಾಟರ್ ಕೂಡ ಕಮಾಲ್ ಮಾಡ್ಲಿಲ್ಲ. ಅಂತಿಮವಾಗಿ ಜಿಂಬಾಬ್ವೆ ತಂಡ 125 ರನ್ಗಳಿಗೆ ಸರ್ವಪತನ ಕಾಣ್ತು. ಮುಖೇಶ್ ಕುಮಾರ್ 4 ವಿಕೆಟ್ ಪಡೆದು ಮಿಂಚಿದ್ರು. ಭರ್ಜರಿ 42 ರನ್ಗಳಿಂದ ಗೆದ್ದ ಭಾರತ ತಂಡ 4-1 ಸರಣಿ ಗೆದ್ದು ಬೀಗಿತು. ಕ್ಯಾಪ್ಟನ್ ಗಿಲ್ ಮೊದಲ ಟಾಸ್ಕ್ನಲ್ಲಿ ಮೆರಿಟ್ನಲ್ಲಿ ಪಾಸಾಗಿ ಸೈ ಅನ್ನಿಸಿಕೊಂಡ್ರು.
ಇದನ್ನೂ ಓದಿ:‘ತಪ್ಪಾಗಿದ್ದರೆ ಕ್ಷಮಿಸಿ ಬಿಡಿ..’ ಕೈಮುಗಿದ ನೀತಾ ಅಂಬಾನಿ.. ಮದುವೆಯಲ್ಲಿ ಆಗಿದ್ದೇನು..?
https://twitter.com/rythmdivine14/status/1812503280112599117
ಸರಣಿಯನ್ನು ಗೆದ್ದು ಕಪ್ ಸ್ವೀಕರಿಸಿದ ನಂತರ ಗಿಲ್, ತಮ್ಮ ನಡೆಯಿಂದ ಸುದ್ದಿಯಾದರು. ಕಪ್ ಹಿಡಿದು ತಂಡದ ಬಳಿ ಬಂದ ಗಿಲ್, ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಅಭಿಷೇಕ್ ಶರ್ಮಾ, ರಿಯಾನ್ ಪರಾಗ್ ಹಾಗೂ ಖಲೀಲ್ ಅಹ್ಮದ್ಗೆ ಕಪ್ ನೀಡಿ ಸಂಭ್ರಮಿಸಲು ನೀಡಿದರು. ಯಂಗ್ಸ್ಟರ್ಗಳು ಹೆಚ್ಚು ಸಂಭ್ರಮಿಸಲು, ಇನ್ನಷ್ಟು ಆಡುವ ಹುಮ್ಮಸ್ಸು ಬರಲಿ ಎಂದು ಧೋನಿ, ರೋಹಿತ್ ಈ ಕೆಲಸವನ್ನು ಮಾಡುತ್ತಿದ್ದರು. ಈ ಸಂಪ್ರದಾಯವನ್ನು ಗಿಲ್ ಕೂಡ ಮುಂದುವರಿಸಿದ್ದಾರೆ.
ಇದನ್ನೂ ಓದಿ:ಹೆಚ್ಚಿದ ಗೌರವ.. ಸ್ಥಳೀಯ ಆರ್ಥಿಕತೆಗೆ ಬಲ.. ಮುಖೇಶ್ ಅಂಬಾನಿ ಪುತ್ರನ ಮದ್ವೆಯಿಂದ ಯಾರಿಗೆ, ಹೇಗೆ ಲಾಭ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದ ಭಾರತ ತಂಡ
ಕೈಕೊಟ್ಟ ಟಾಪ್ ಆರ್ಡರ್ಸ್.. ಕೈಹಿಡಿದ ಸ್ಯಾಮ್ಸನ್..!
4 ವಿಕೆಟ್ ಪಡೆದು ಮುಖೇಶ್ ಕುಮಾರ್ ಶೈನಿಂಗ್
ಜಿಂಬಾಬ್ವೆ ನಾಡಲ್ಲಿ ಯಂಗ್ ಇಂಡಿಯಾ ಕಮಾಲ್ ಮಾಡಿದೆ. ಅನಾನುಭವಿ ತಂಡ ಮುನ್ನಡೆಸಿದ ಶುಭ್ಮನ್ ಗಿಲ್ ಸರಣಿ ಗೆಲ್ಲಿಸಿಕೊಟ್ಟು ಸೈ ಅನ್ನಿಸಿಕೊಂಡಿದ್ದಾರೆ. ಭಾರತದ ಅದ್ಭುತ ಆಟಕ್ಕೆ ಜಿಂಬಾಬ್ವೆ ಅಂತಿಮ ಟಿ20 ಪಂದ್ಯದಲ್ಲೂ ತಲೆಬಾಗ್ತು.
ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸ್ತಿದ್ರು. ಬ್ಯಾಟಿಂಗ್ ಸುನಾಮಿ ಸೃಷ್ಟಿಸುವ ಯಂಗ್ ಬ್ಯಾಟರ್ಸ್ ಜಿಂಬಾಬ್ವೆಯ ಎಫೆಕ್ಟಿವ್ ಸ್ಪೆಲ್ ಮುಂದೆ ಸಂಪೂರ್ಣ ಮಂಡಿಯೂರಿದ್ರು.
ಅಂತಿಮ ಹಾಗೂ ಕೊನೆ ಟಿ20 ಪಂದ್ಯದಲ್ಲಿ ಮೊದಲು ಇನ್ನಿಂಗ್ಸ್ ಆರಂಭಿಸಿದ ಇಂಡಿಯನ್ ಬ್ಯಾಟರ್ಸ್ ಫ್ಲಾಪ್ ಶೋನಿಂದ ಹೆಚ್ಚು ಸುದ್ದಿಯಾದ್ರು. ಟೂರ್ನಿಯುದ್ಧಕ್ಕೂ ರನ್ ಕೊಳ್ಳೆ ಹೊಡೆದಿದ್ದ ಬಲಿಷ್ಠ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ನಿನ್ನೆ ಮಾತ್ರ ತಂಡವನ್ನ ನಡುನೀರಲ್ಲಿ ಕೈಬಿಟ್ರು.
ಇದನ್ನೂ ಓದಿ:ಅನಂತ್ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಇಬ್ಬರು ವ್ಯಕ್ತಿಗಳು ಅರೆಸ್ಟ್.. ಕೆಲವರು ಹೀಗೂ ಇದ್ದಾರಾ..?
ಮೊದಲ ನಾಲ್ಕು ಪಂದ್ಯಗಳಲ್ಲಿ ಭಾರತಕ್ಕೆ ಕೈಹಿಡಿದಿದ್ದೇ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು. ನಿನ್ನೆ ಮಾತ್ರ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಟಾಪ್ ಪರ್ಫಾಮೆನ್ಸ್ ನೀಡೋದನ್ನ ಮರೆತು ಬಿಟ್ರು. ಜೈಸ್ವಾಲ್ 12, ಕ್ಯಾಪ್ಟನ್ ಶುಭ್ಮನ್ ಗಿಲ್ 13 ಹಾಗೂ ಡಿಸ್ಟ್ರಕ್ಟಿವ್ ಅಭಿಷೇಕ್ ಶರ್ಮಾ ಆಟ ಜಸ್ಟ್ 14 ರನ್ಗೆ ಸ್ಟಾಪ್ ಆಯ್ತು.
ಜಿಂಬಾಬ್ವೆ ಹರೋಹರ..!
40 ರನ್ಗೆ 3 ವಿಕೆಟ್ ಕಳೆದುಕೊಂಡ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಾದಾಗ ಸಂಜು ಸ್ಯಾಮ್ಸನ್ ತಮ್ಮ ಪವರ್ ತೋರಿಸಿದ್ರು. ಜಿಂಬಾಬ್ವೆ ಬೌಲರ್ಗಳನ್ನ ಹೆಡೆಮುರಿ ಕಟ್ಟಿದ ಸ್ಯಾಮ್ಸನ್ ಸ್ಫೋಟಕ ಅರ್ಧಶತಕ ಗಳಿಸಿ ಶೈನ್ ಆದರು. 4ನೇ ವಿಕೆಟ್ಗೆ ಸ್ಯಾಮ್ಸನ್ ಹಾಗೂ ರಿಯಾಗ್ ಪರಾಗ್ ಕೂಡಿಕೊಂಡು ಬಿರುಸಿನ 65 ರನ್ಗಳ ಜೊತೆಯಾಟವಾಡಿ ತಂಡವನ್ನ ಮೇಲಕ್ಕೆತ್ತಿದ್ರು. ಈ ಭಲೇ ಜೋಡಿಯನ್ನ ಮೌತ ಬೇರ್ಪಡಿಸಿದ್ರು. ಉತ್ತಮವಾಗಿ ಆಡ್ತಿದ್ದ ಪರಾಗ್ 22 ರನ್ ಗಳಿಸಿದ್ರೆ, ವೆಲ್ ಸೆಟಲ್ಡ್ ಸ್ಯಾಮ್ಸನ್ ಇವರ ಹಿಂದೇನೆ ನಿರ್ಗಮಿಸಿದ್ರು. ನಂತರದ ಬಂದ ಸ್ಪಿನ್ ಬೀಸ್ಟ್ ಶಿವಂ ದುಬೆ 26 ಹಾಗೂ ರಿಂಕು ಸಿಂಗ್ 11 ರನ್ ಗಳಿಸಿ ಅಬ್ಬರಿಸಿದ್ರು. ಪರಿಣಾಮ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಕಲೆ ಹಾಕ್ತು.
ಇದನ್ನೂ ಓದಿ:ಸೊಸೆಯ ವಿದಾಯಿ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ಶ್ರೀಮಂತ ಮುಕೇಶ್ ಅಂಬಾನಿ.. ವಿಡಿಯೋ
ಮುಖೇಶ್ ಕುಮಾರ್ ಬೆಂಕಿ ದಾಳಿಗೆ ಜಿಂಬಾಬ್ವೆ ತತ್ತರ
ಕಾಂಪಿಟೇಟಿವ್ ಸ್ಕೋರ್ ಬೆನ್ನಟ್ಟಿದ ಜಿಂಬಾಬ್ವೆ ತಂಡ ಮತ್ತೆ ಬ್ಯಾಟಿಂಗ್ ಫೇಲ್ಯೂರ್ ಕಾಣ್ತು. ಮುಖೇಶ್ ಕುಮಾರ್ ಬೆಂಕಿ ಎಸೆತಗಳಿಗೆ ಜಿಂಬಾಬ್ವೆ ಬ್ಯಾಟರ್ಸ್ ಹೆಸರಿಲ್ಲದೇ ಪೆವಿಲಿಯನ್ ಸೇರಿಕೊಂಡ್ರು. ಡಿಯೋನ್ ಮೈಯರ್ಸ್ 34 ರನ್ ಗಳಿಸಿದ್ದು ಬಿಟ್ರೆ ಯಾವೊಬ್ಬ ಬ್ಯಾಟರ್ ಕೂಡ ಕಮಾಲ್ ಮಾಡ್ಲಿಲ್ಲ. ಅಂತಿಮವಾಗಿ ಜಿಂಬಾಬ್ವೆ ತಂಡ 125 ರನ್ಗಳಿಗೆ ಸರ್ವಪತನ ಕಾಣ್ತು. ಮುಖೇಶ್ ಕುಮಾರ್ 4 ವಿಕೆಟ್ ಪಡೆದು ಮಿಂಚಿದ್ರು. ಭರ್ಜರಿ 42 ರನ್ಗಳಿಂದ ಗೆದ್ದ ಭಾರತ ತಂಡ 4-1 ಸರಣಿ ಗೆದ್ದು ಬೀಗಿತು. ಕ್ಯಾಪ್ಟನ್ ಗಿಲ್ ಮೊದಲ ಟಾಸ್ಕ್ನಲ್ಲಿ ಮೆರಿಟ್ನಲ್ಲಿ ಪಾಸಾಗಿ ಸೈ ಅನ್ನಿಸಿಕೊಂಡ್ರು.
ಇದನ್ನೂ ಓದಿ:‘ತಪ್ಪಾಗಿದ್ದರೆ ಕ್ಷಮಿಸಿ ಬಿಡಿ..’ ಕೈಮುಗಿದ ನೀತಾ ಅಂಬಾನಿ.. ಮದುವೆಯಲ್ಲಿ ಆಗಿದ್ದೇನು..?
https://twitter.com/rythmdivine14/status/1812503280112599117
ಸರಣಿಯನ್ನು ಗೆದ್ದು ಕಪ್ ಸ್ವೀಕರಿಸಿದ ನಂತರ ಗಿಲ್, ತಮ್ಮ ನಡೆಯಿಂದ ಸುದ್ದಿಯಾದರು. ಕಪ್ ಹಿಡಿದು ತಂಡದ ಬಳಿ ಬಂದ ಗಿಲ್, ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಅಭಿಷೇಕ್ ಶರ್ಮಾ, ರಿಯಾನ್ ಪರಾಗ್ ಹಾಗೂ ಖಲೀಲ್ ಅಹ್ಮದ್ಗೆ ಕಪ್ ನೀಡಿ ಸಂಭ್ರಮಿಸಲು ನೀಡಿದರು. ಯಂಗ್ಸ್ಟರ್ಗಳು ಹೆಚ್ಚು ಸಂಭ್ರಮಿಸಲು, ಇನ್ನಷ್ಟು ಆಡುವ ಹುಮ್ಮಸ್ಸು ಬರಲಿ ಎಂದು ಧೋನಿ, ರೋಹಿತ್ ಈ ಕೆಲಸವನ್ನು ಮಾಡುತ್ತಿದ್ದರು. ಈ ಸಂಪ್ರದಾಯವನ್ನು ಗಿಲ್ ಕೂಡ ಮುಂದುವರಿಸಿದ್ದಾರೆ.
ಇದನ್ನೂ ಓದಿ:ಹೆಚ್ಚಿದ ಗೌರವ.. ಸ್ಥಳೀಯ ಆರ್ಥಿಕತೆಗೆ ಬಲ.. ಮುಖೇಶ್ ಅಂಬಾನಿ ಪುತ್ರನ ಮದ್ವೆಯಿಂದ ಯಾರಿಗೆ, ಹೇಗೆ ಲಾಭ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್