ಸುಳ್ಳು ಕೇಸ್ ದಾಖಲಿಸಿ ವಿರೋಧ ಪಕ್ಷದವರನ್ನ ಬಂಧಿಸ್ತಿದ್ದಾರೆ
ಸದ್ಯ ಪ್ರಜಾಪ್ರಭುತ್ವ ಮತ್ತು ದೇಶ ಈ ಎರಡು ಅಪಾಯದಲ್ಲಿವೆ
ಮೋದಿಯಿಂದ ಸರ್ಕಾರಿ ಇಲಾಖೆಗಳ ದುರುಪಯೋಗ ಆಗುತ್ತಿದೆ
ನವದೆಹಲಿ: ಅಬಕಾರಿ ನೀತಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಸಿಎಂ ಅರವಿಂದ್ ಕೇಜ್ರಿವಾಲ್ರನ್ನ ಇಡಿ ವಶಕ್ಕೆ ಪಡೆದುಕೊಂಡಿದೆ. ಈ ಸಂಬಂಧ ಮಾರ್ಚ್ 31ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಱಲಿ ಮಾಡಲಾಗುವುದು ಎಂದು ಎಎಪಿ ಹಾಗೂ ಕಾಂಗ್ರೆಸ್ ಘೋಷಣೆ ಮಾಡಿವೆ.
I.N.D.I.A ಒಕ್ಕೂಟದ ಎಎಪಿ ಹಾಗೂ ಕಾಂಗ್ರೆಸ್ ಇಂದು ದೆಹಲಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದವು. ಈ ವೇಳೆ ಮಾತನಾಡಿದ ಎಎಪಿಯ ನಾಯಕ ಗೋಪಾಲ್ ರೈ, ಸದ್ಯ ಪ್ರಜಾಪ್ರಭುತ್ವ ಮತ್ತು ದೇಶ ಎರಡು ಅಪಾಯದಲ್ಲಿವೆ. ಹೀಗಾಗಿ ದೇಶದ ಹಿತಾಸಕ್ತಿ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಲು ಇಂಡಿಯಾ ಒಕ್ಕೂಟದ ಎಲ್ಲ ಪಕ್ಷಗಳು ಈ ಮಹಾ ಱಲಿಯನ್ನ ಹಮ್ಮಿಕೊಂಡಿವೆ. ದೇಶದಲ್ಲಿ ಸರ್ವಾಧಿಕಾರ ಸರ್ಕಾರವಿದ್ದು ಪ್ರಜಾಪ್ರಭುತ್ವವನ್ನು ಬದಿಗೊತ್ತಿ ಸಿಎಂ ಕೇಜ್ರಿವಾಲ್ರನ್ನ ಬಂಧಿಸಲಾಗಿದೆ. ಸುಳ್ಳು ಕೇಸ್ಗಳನ್ನ ದಾಖಲಿಸಿ ವಿರೋಧ ಪಕ್ಷದವರನ್ನ ಬಂಧಿಸಲಾಗುತ್ತಿದೆ. ಪ್ರಧಾನಿ ಮೋದಿ ಸರ್ಕಾರಿ ಇಲಾಖೆಗಳನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿಯ ಕಾಂಗ್ರೆಸ್ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ ಮಾತನಾಡಿ, ಈ ಪ್ರತಿಭಟನೆ ರಾಜಕೀಯಕ್ಕಾಗಿ ಅಥವಾ ಯಾವುದೇ ಪಕ್ಷಕ್ಕಾಗಿ ಮಾಡುತ್ತಿಲ್ಲ. ದೇಶ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕಾಗಿ ಮಾಡಲಾಗುತ್ತಿದೆ. ಈ ಮಹಾರ್ಯಾಲಿ ಕೇಂದ್ರ ಸರ್ಕಾರದ ವಿರುದ್ಧ ಎಂದು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸುಳ್ಳು ಕೇಸ್ ದಾಖಲಿಸಿ ವಿರೋಧ ಪಕ್ಷದವರನ್ನ ಬಂಧಿಸ್ತಿದ್ದಾರೆ
ಸದ್ಯ ಪ್ರಜಾಪ್ರಭುತ್ವ ಮತ್ತು ದೇಶ ಈ ಎರಡು ಅಪಾಯದಲ್ಲಿವೆ
ಮೋದಿಯಿಂದ ಸರ್ಕಾರಿ ಇಲಾಖೆಗಳ ದುರುಪಯೋಗ ಆಗುತ್ತಿದೆ
ನವದೆಹಲಿ: ಅಬಕಾರಿ ನೀತಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಸಿಎಂ ಅರವಿಂದ್ ಕೇಜ್ರಿವಾಲ್ರನ್ನ ಇಡಿ ವಶಕ್ಕೆ ಪಡೆದುಕೊಂಡಿದೆ. ಈ ಸಂಬಂಧ ಮಾರ್ಚ್ 31ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಱಲಿ ಮಾಡಲಾಗುವುದು ಎಂದು ಎಎಪಿ ಹಾಗೂ ಕಾಂಗ್ರೆಸ್ ಘೋಷಣೆ ಮಾಡಿವೆ.
I.N.D.I.A ಒಕ್ಕೂಟದ ಎಎಪಿ ಹಾಗೂ ಕಾಂಗ್ರೆಸ್ ಇಂದು ದೆಹಲಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದವು. ಈ ವೇಳೆ ಮಾತನಾಡಿದ ಎಎಪಿಯ ನಾಯಕ ಗೋಪಾಲ್ ರೈ, ಸದ್ಯ ಪ್ರಜಾಪ್ರಭುತ್ವ ಮತ್ತು ದೇಶ ಎರಡು ಅಪಾಯದಲ್ಲಿವೆ. ಹೀಗಾಗಿ ದೇಶದ ಹಿತಾಸಕ್ತಿ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಲು ಇಂಡಿಯಾ ಒಕ್ಕೂಟದ ಎಲ್ಲ ಪಕ್ಷಗಳು ಈ ಮಹಾ ಱಲಿಯನ್ನ ಹಮ್ಮಿಕೊಂಡಿವೆ. ದೇಶದಲ್ಲಿ ಸರ್ವಾಧಿಕಾರ ಸರ್ಕಾರವಿದ್ದು ಪ್ರಜಾಪ್ರಭುತ್ವವನ್ನು ಬದಿಗೊತ್ತಿ ಸಿಎಂ ಕೇಜ್ರಿವಾಲ್ರನ್ನ ಬಂಧಿಸಲಾಗಿದೆ. ಸುಳ್ಳು ಕೇಸ್ಗಳನ್ನ ದಾಖಲಿಸಿ ವಿರೋಧ ಪಕ್ಷದವರನ್ನ ಬಂಧಿಸಲಾಗುತ್ತಿದೆ. ಪ್ರಧಾನಿ ಮೋದಿ ಸರ್ಕಾರಿ ಇಲಾಖೆಗಳನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿಯ ಕಾಂಗ್ರೆಸ್ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ ಮಾತನಾಡಿ, ಈ ಪ್ರತಿಭಟನೆ ರಾಜಕೀಯಕ್ಕಾಗಿ ಅಥವಾ ಯಾವುದೇ ಪಕ್ಷಕ್ಕಾಗಿ ಮಾಡುತ್ತಿಲ್ಲ. ದೇಶ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕಾಗಿ ಮಾಡಲಾಗುತ್ತಿದೆ. ಈ ಮಹಾರ್ಯಾಲಿ ಕೇಂದ್ರ ಸರ್ಕಾರದ ವಿರುದ್ಧ ಎಂದು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ