/newsfirstlive-kannada/media/post_attachments/wp-content/uploads/2025/01/IND-VS-ENG.jpg)
ಚೆನ್ನೈನಲ್ಲಿ ಇಂದು ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಆಗಿದ್ದು. ಟಾಸ್ ಗೆದ್ದ ಭಾರತೀಯ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್​ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟಾಸ್ ಸೋತ ಇಂಗ್ಲೆಂಡ್ ಬ್ಯಾಟಿಂಗ್​ ಕಣಕ್ಕೆ ಇಳಿಯಲಿದೆ
ಇನ್ನು ಭಾರತ ತಂಡದಲ್ಲಿ ಪ್ರಮುಖವಾಗಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ನಿತೀಶ್ ಕುಮಾರ್ ರೆಡ್ಡಿ ಹಾಗೂ ರಿಂಕು ಸಿಂಗ್ ಬದಲು ವಾಷಿಂಗ್ಟನ್​ ಸುಂದರ್ ಹಾಗೂ ದ್ರುವ ಜುರೇಲ್​ಗೆ ಅವಕಾಶ ನೀಡಲಾಗಿದೆ. ಇಬ್ಬರು ಆಟಗಾರರು ಗಾಯಾಳುಗಳಾದ ಕಾರಣ ಅವರನ್ನು ಪ್ಲೇಯಿಂಗ್ 11 ನಿಂದ ಕೈಬಿಡಲಾಗಿದೆ. ಈ ಪಂದ್ಯದಲ್ಲಿಯೂ ಕೂಡ ಮಾರಕ ಬೌಲರ್ ಮೊಹಮ್ಮದ ಶಮಿ ಬೆಂಚ್​ ಕಾಯುವ ಪ್ರಸಂಗ ಬಂದಿದೆ.
ಇದನ್ನೂ ಓದಿ:ರೋಹಿತ್ ಶರ್ಮಾಗೆ ನಾಯಕನ ಪಟ್ಟ.. ICC T20 ತಂಡ ಪ್ರಕಟ; ಯಾರಿಗೆಲ್ಲಾ ಸ್ಥಾನ?
ಈಗಾಗಲೇ ಮೊದಲ ಪಂದ್ಯವನ್ನು ಗೆದ್ದುಕೊಂಡಿರುವ ಟೀಂ ಇಂಡಿಯಾ 1-0 ಅಂತರದಲ್ಲಿ ಮುನ್ನಡೆಯನ್ನು ಸಾಧಿಸಿದೆ. ಇಂದು ಕೂಡ ಸಮಬಲದ ಹೋರಾಟ ಚೆನ್ನೈ ಅಂಗಳದಲ್ಲಿ ನಡೆಯಲಿದ್ದು ಯಾವ ತಂಡ ಗೆದ್ದು ಬೀಗಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us