/newsfirstlive-kannada/media/post_attachments/wp-content/uploads/2025/05/INDIA-IAF-1.jpg)
ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಯುದ್ಧ ಭೀತಿಯ ಚಟುವಟಿಕೆಗಳು ಗರಿಗೆದರಿವೆ. ಇಂದು ಬೆಳಗ್ಗೆಯಿಂದ ನಿರಂತರವಾಗಿ ಒಂದೆಲ್ಲ ಒಂದು ಬೆಳವಣಿಗೆಗಳು ನಡೆಯುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ಯುದ್ಧ ನಡೆಯುವ ಭೀತಿ ಎದುರಾಗಿದೆ.
ಈ ಮಧ್ಯೆ ಭಾರತೀಯ ಸೇನೆ, ಪಾಕಿಸ್ತಾನಕ್ಕೆ ಬಿಗ್ ಶಾಕ್ ನೀಡಿದೆ. ಭಾರತದಿಂದ ಪಶ್ಚಿಮ ಗಡಿಯಲ್ಲಿ ಜಾಮರ್ ಅಳವಡಿಕೆ ಮಾಡಿದೆ. ಇದರಿಂದ ಪಾಕಿಸ್ತಾನ ಯುದ್ಧ ವಿಮಾನಗಳ ಹಾರಾಟಕ್ಕೆ ಅಡಚಣೆ ಆಗಲಿದೆ. ಪಾಕಿಸ್ತಾನದ ಯುದ್ಧ ವಿಮಾನಗಳಿಗೆ ನಾವಿಗೇಷನ್ ಸಿಗದಂತೆ ಜಾಮರ್ ಅಳವಡಿಕೆ ಮಾಡಲಾಗಿದೆ.
ಇದನ್ನೂ ಓದಿ: ಮುಯ್ಯಿಗೆ ಮುಯ್ಯಿ.. ಪಾಕಿಸ್ತಾನಕ್ಕೆ ಈಗ ಏರ್ಸ್ಟ್ರೈಕ್ ಆಘಾತ; ನಿನ್ನೆ ಭಾರತ ಏನ್ಮಾಡಿದೆ ಗೊತ್ತಾ..?
ಪಾಕ್ ಮಿಲಿಟರಿ ಪಡೆಯುವ ಗ್ಲೋಬಲ್ ನಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಅನ್ನು ಬಳಸುತ್ತಿದೆ. ರಷ್ಯಾ, ಅಮೆರಿಕಾದ ಸ್ಯಾಟಲೈಟ್ ಮೂಲಕ ನಾವಿಗೇಷನ್ ಸಿಸ್ಟಮ್ ಬಳಕೆ ಮಾಡುತ್ತಿದೆ. ಇದೀಗ ಗಡಿಯಲ್ಲಿ ಭಾರತ ಜಾಮರ್ ಅಳವಡಿಸಿರೋದ್ರಿಂದ ಪಾಕ್ನಿಂದ ನಿಖರ ದಾಳಿ ಸಾಧ್ಯವಾಗುವುದಿಲ್ಲ.
ಅಷ್ಟೇ ಅಲ್ಲ, ಪಂಜಾಬ್ ಗಡಿಗೆ ಯುದ್ಧ ಟ್ಯಾಂಕ್ಗಳನ್ನು ಭಾರತದ ಸೇನೆ ರವಾನಿಸಿದೆ. ಗಡಿಯಲ್ಲಿ ಯುದ್ಧ ಟ್ಯಾಂಕ್ಗಳು, ಬೋಪೋರ್ಸ್ ಫಿರಂಗಿಗಳನ್ನು ನಿಯೋಜಿಸಿದೆ. ಅತ್ತ ಪಾಕಿಸ್ತಾನದ ಕಡೆಯಿಂದಲೂ ಗಡಿಯಲ್ಲಿ ಯುದ್ಧ ಟ್ಯಾಂಕ್, ಶಸ್ತ್ರಾಸ್ತ್ರ ನಿಯೋಜನೆ ಮಾಡಿದೆ. ಹೀಗಾಗಿ ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ. ಆ ಮೂಲಕ ಗಡಿಯಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿದೆ.
ಇದನ್ನೂ ಓದಿ: ‘ಅಯ್ಯಯ್ಯೋ, ನಮ್ಮನ್ನು ಕಾಪಾಡಿ..’ ಅಮೆರಿಕ ಮುಂದೆ ಕಣ್ಣೀರಿಟ್ಟು ಬೇಡಿದ ಪಾಕ್ ಪ್ರಧಾನಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ