/newsfirstlive-kannada/media/post_attachments/wp-content/uploads/2025/02/IND-VS-PAK-4.jpg)
ಒಂದು ಪಂದ್ಯ, ಎರಡೆರಡು ಸೇಡು. ವರ್ಷಗಳೇ ಉರುಳಿದ್ರೂ ಸೋಲಿನ ನೋವು ಮಾಸಿಲ್ಲ. ಅಸಂಖ್ಯ ಭಾರತೀಯ ಅಭಿಮಾನಿಗಳ ಮನದಲ್ಲಿ ಇಂದು ಸೇಡಿನ ಜ್ವಾಲೆ ಹೊತ್ತು ಉರಿಯುತ್ತದೆ. ದುಬೈ ಮೈದಾನದಲ್ಲಿ ಪಾಕ್ನ ಚಿಂದಿ ಉಡಾಯಿಸಿ ಭಾರತ ಗೆದ್ದು ವಿಜಯ ಪತಾಕೆ ಹಾರಿಸಲಿ ಅನ್ನೋದು ಪ್ರತಿಯೊಬ್ಬ ಭಾರತೀಯನ ಪ್ರಾರ್ಥನೆಯಾಗಿದೆ. ಅಷ್ಟಕ್ಕೂ ಫ್ಯಾನ್ಸ್ ಮನದ ಆ ಸೇಡು ಏನು?
ಬಹು ನಿರೀಕ್ಷಿತ ಇಂಡೋ-ಪಾಕ್ ಫೈಟ್ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ. ಈ ಒಂದು ಪಂದ್ಯವನ್ನ ಕಣ್ತುಂಬಿಕೊಳ್ಳಲು ವಿಶ್ವ ಕ್ರಿಕೆಟ್ ಲೋಕ ಜಾತಕ ಪಕ್ಷಿಯಂತೆ ಕಾಯ್ತಿದೆ. ಆನ್ಫೀಲ್ಡ್ನಲ್ಲಿ ಆಡೋದು ಜಸ್ಟ್ 22 ಮಂದಿ ಆಟಗಾರರು ಮಾತ್ರ. ಆದ್ರೆ, ಈ ಪಂದ್ಯ ಬಿಲಿಯನ್ಗಟ್ಟಲೇ ಅಭಿಮಾನಿಗಳ ಎಮೋಷನ್, ಪ್ರೈಡ್ & ಪ್ಯಾಶನ್.
ಒಂದೊಂದು ಎಸೆತಕ್ಕೂ ಟ್ವಿಸ್ಟ್ & ಟರ್ನ್, ಹಂತ ಹಂತಕ್ಕೂ ರೋಚಕತೆ, ಕ್ಷಣ ಕ್ಷಣಕ್ಕೂ ಜೋರಾಗೋ ಹಾರ್ಟ್ ಬೀಟ್. ಇಂಡೋ-ಪಾಕ್ ಫೈಟ್ ನೋಡೋ ಮಜಾನೇ ಬೇರೆ. ಇಲ್ಲಿ ಸ್ಟೇಡಿಯಂ ಅಕ್ಷರಶಃ ರಣರಂಗದ ಅವತಾರ ಎತ್ತಿದ್ರೆ, ಆಟಗಾರರ ವೀರ ಸೇನಾನಿಗಳು. ಈ ಬ್ಯಾಟ್ & ಬಾಲ್ ಅನ್ನೋದು ವೆಪನ್ಗಳಾಗಿ ಬದಲಾಗ್ತವೆ.
ಇದನ್ನೂ ಓದಿ: INDvsPAK: ಭಾರತದ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯ; ಪಾಕಿಸ್ತಾನಕ್ಕೆ ಡಬಲ್ ಟೆನ್ಷನ್!
ಬದ್ಧವೈರಿಗಳ ನಡುವಿನ ಕದನದ ಫೀವರ್ ಸದ್ಯ ಕ್ರಿಕೆಟ್ ಜಗತ್ತನ್ನ ಆವರಿಸಿದೆ. ಟೀಮ್ ಇಂಡಿಯಾದ ಗೆಲುವಿಗೆ ಪ್ರಾರ್ಥನೆಗಳೂ ಜೋರಾಗಿವೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗುತ್ತೋ. ಇಲ್ವೋ? ಅನ್ನೋದು ಸೆಕೆಂಡರಿ, ಪಾಕ್ ವಿರುದ್ಧ ಸೋಲಬಾರದು ಅನ್ನೋದಷ್ಟೇ ಅಭಿಮಾನಿಗಳ ಪ್ರಾರ್ಥನೆಯಾಗಿದೆ. ಯಾಕಂದ್ರೆ ಇದು ಸೇಡಿನ ಸಮರ.!
7 ವರ್ಷಗಳಿಂದ ಕಾಡ್ತಿದೆ ಆ ಒಂದು ನೋವು!
ಜೂನ್, 18, 2017. ಅಸಂಖ್ಯ ಭಾರತೀಯ ಅಭಿಮಾನಿಗಳ ಹೃದಯ ಛಿದ್ರವಾದ ದಿನವದು. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಫೈನಲ್ ಕದನದಲ್ಲಿ ಬದ್ಧವೈರಿ ಪಾಕ್ ಎದುರು ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ ಕಣಕ್ಕಿಳಿದಿತ್ತು. ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ 4 ವಿಕೆಟ್ ನಷ್ಟಕ್ಕೇ ಬರೋಬ್ಬರಿ 338 ರನ್ಗಳ ಬಿಗ್ ಸ್ಕೋರ್ ಕಲೆ ಹಾಕಿತ್ತು.
ಈ ಬಿಗ್ ಟಾರ್ಗೆಟ್ ಚೇಸ್ ಮಾಡಿದ ಟೀಮ್ ಇಂಡಿಯಾ ಪಾಕ್ ಬೌಲರ್ಗಳ ಮುಂದೆ ಮಂಕಾಗಿ ಹೋಯ್ತು. ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳೆಲ್ಲಾ ಪೆವಿಲಿಯನ್ ಪರೇಡ್ ನಡೆಸಿದ್ರು. ಹಾರ್ದಿಕ್ ಪಾಂಡ್ಯ ಬಿಟ್ರೆ ಉಳಿದ್ಯಾವ ಆಟಗಾರ ಕೂಡ ಕ್ರಿಸ್ ಕೆಚ್ಚೆದೆಯ ಹೋರಾಟ ನಡೆಸಲಿಲ್ಲ. ಪರಿಣಾಮ ಟೀಮ್ ಇಂಡಿಯಾ 180 ರನ್ಗಳ ಹೀನಾಯ ಸೋಲಿಗೆ ಶರಣಾಯ್ತು.
ಇದೇ ದುಬೈ ಅಂಗಳದಲ್ಲಿ ಸೋತಿದ್ದ ಟೀಮ್ ಇಂಡಿಯಾ.!
ಇದೊಂದೆ ಅಲ್ಲ, 2021ರ ಟಿ20 ವಿಶ್ವಕಪ್ನಲ್ಲಿ ಇದೇ ದುಬೈ ಸ್ಟೇಡಿಯಂನಲ್ಲೇ ವಿರಾಟ್ ನಾಯಕತ್ವದ ಟೀಮ್ ಇಂಡಿಯಾ, ಪಾಕ್ ಎದುರು ತೀವ್ರ ಮುಖಭಂಗ ಅನುಭವಿಸಿತ್ತು. ಆ ಒಂದು ಸೋಲು ಟೀಮ್ ಇಂಡಿಯಾವನ್ನು ಲೀಗ್ ಹಂತದಿಂದಲೇ ಹೊರ ಬೀಳುವಂತೆ ಮಾಡಿತ್ತು. ಇದೀಗ ಈ ಎರಡೂ ಸೋಲುಗಳ ಪ್ರತೀಕಾರಕ್ಕೆ ವೇದಿಕೆ ಸಜ್ಜಾಗಿದೆ.
ಈ ಎರಡು ಪಂದ್ಯಗಳಲ್ಲಿ ಬದ್ಧವೈರಿಗಳ ಎದುರು ಸೋತಿದ್ದು ಅಭಿಮಾನಿಗಳಿಗೆ ಸಾಕಷ್ಟು ನೋವು ಕೊಟ್ಟಿದೆ. ಇಂದಿಗೂ ಆ ಬೇಸರ, ಹತಾಶೆ ಅಭಿಮಾನಿಗಳನ್ನ ಕಾಡ್ತಿದೆ. ಆ ಸೋಲಿನ ಸೇಡನ್ನ ತೀರಿಸಿಕೊಳ್ಳೋಕೆ ಇಂದಿನ ಪಂದ್ಯಕ್ಕಿಂದ ಬೆಸ್ಟ್ ಅವಕಾಶ ಬೇರೆ ಇಲ್ಲ ಅನ್ನೋದು ಅಭಿಮಾನಿಗಳ ಮನದ ಮಾತಾಗಿದೆ.
ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸೋತಿರುವ ಪಾಕಿಸ್ತಾನ ತಂಡಕ್ಕೆ ಇಂದಿನ ಕದನ ಡು ಆರ್ ಡೈ. ಇಂದು ಗೆದ್ದರಷ್ಟೇ ಟೂರ್ನಿಯಲ್ಲಿ ಮುಂದಿನ ಹಾದಿ ಓಪನ್ ಇರಲಿದೆ. ಸೋತ್ರೆ, ಟೂರ್ನಿಯಿಂದ ಹೊರಬೀಳೋದು ಕನ್ಫರ್ಮ್. ಹೋಸ್ಟ್ ಆಗಿ ಲೀಗ್ ಹಂತದಿಂದಲೇ ನಿರ್ಗಮಿಸಿದ್ರೆ ಹೇಗಿರುತ್ತೆ ಹೇಳಿ.? ಹೀಗಾಗಿಯೇ ಟೀಮ್ ಇಂಡಿಯಾ ಇಂದು ಗೆಲ್ಲಬೇಕು. ಪಾಕ್ ಹೊರಬೀಳಬೇಕು ಅನ್ನೋದು ಅಭಿಮಾನಿಗಳ ಪ್ರಾರ್ಥನೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ