/newsfirstlive-kannada/media/post_attachments/wp-content/uploads/2025/03/India-Masters.jpg)
ಇಂದು ರಾಯ್ಪುರ ಶಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಾಸ್ಟರ್ಸ್ ವಿರುದ್ಧ ಇಂಡಿಯಾ ಮಾಸ್ಟರ್ಸ್ ಗೆದ್ದು ಬೀಗಿದೆ. ಬರೋಬ್ಬರಿ 94 ರನ್ಗಳಿಂದ ಗೆಲುವು ಸಾಧಿಸಿದೆ.
ಭಾರತ ನೀಡಿದ 221 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 18.1 ಓವರ್ನಲ್ಲೇ ಕೇವಲ 126 ರನ್ಗಳಿಗೆ ಆಲೌಟ್ ಆಗಿದೆ. ಭಾರತ ತಂಡದ ಪರ ವಿನಯ್ ಕುಮಾರ್ 2, ಶಹಬಾಜ್ ನದೀಮ್ 4, ಇರ್ಫಾನ್ ಪಠಾಣ್ 2, ಸ್ಟುವರ್ಟ್ ಬಿನ್ನಿ ಮತ್ತು ಪವನ್ ನೇಗಿ ತಲಾ 1 ವಿಕೆಟ್ ಪಡೆದರು.
ಟಾಸ್ ಸೋತ್ರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ಸ್ಟಾರ್ ಆಲ್ರೌಂಡರ್ ಯುವರಾಜ್ ಸಿಂಗ್ ಅಬ್ಬರಿಸಿದರು. ಕೇವಲ 30 ಬಾಲ್ನಲ್ಲಿ 7 ಭರ್ಜರಿ ಸಿಕ್ಸರ್ ಸಮೇತ 1 ಫೋರ್ನೊಂದಿಗೆ 59 ರನ್ ಚಚ್ಚಿದ್ರು. ಸಚಿನ್ ತೆಂಡುಲ್ಕರ್ 7 ಫೋರ್ ಸಮೇತ 42 ರನ್ ಬಾರಿಸಿದರು.
ಇಷ್ಟೇ ಅಲ್ಲ ಸ್ಟುವರ್ಟ್ ಬಿನ್ನಿ 36, ಯೂಸಫ್ ಪಠಾಣ್ 23, ಇರ್ಫಾನ್ ಪಠಾಣ್ 19, ನೇಗಿ 14 ರನ್ ಗಳಿಸಿದರು. ಭಾರತ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 220 ರನ್ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತ್ತು.
ಇದನ್ನೂ ಓದಿ:ಕೋಟಿ ಕೋಟಿ ಹಣ ಸುರಿದ್ರೂ ಯಾವುದೇ ಪ್ರಯೋಜನ ಇಲ್ಲ! RCB ತಂಡದಿಂದ ಈ ಮೂವರಿಗೆ ಗೇಟ್ಪಾಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ