ಸುಲಭದ ಗುರಿಯನ್ನು ಟೀಮ್ ಇಂಡಿಯಾ ತಲುಪಲು ಆಗಲಿಲ್ಲ
ಸೂಪರ್ ಓವರ್ ಅನ್ನು ಐಸಿಸಿ ಯಾಕೆ ಆಡಿಸಲಿಲ್ಲ ಗೊತ್ತಿದೆಯಾ?
ಕೆಎಲ್ ರಾಹುಲ್, ಅಕ್ಷರ್ ಪಟೇಲ್ ಜವಾಬ್ದಾರಿಯುತ ಬ್ಯಾಟಿಂಗ್
ಭಾರತ ಮತ್ತು ಶ್ರೀಲಂಕಾ ಮಧ್ಯೆ ಏಕದಿನ ಸರಣಿಯ ಮೊದಲ ಪಂದ್ಯ ಡ್ರಾ ಆಗಿದ್ದು ಎಲ್ಲರನ್ನು ಅಚ್ಚರಿಗೊಳಸಿದೆ. ಕೇವಲ ಒಂದೇ ಒಂದು ರನ್ ಅನ್ನು ಭಾರತದ ಆಟಗಾರರು ಕೊನೆಗೆ ಗಳಿಸಲಾಗದೇ ಟೈ ಮಾಡಿಕೊಂಡಿದ್ದಾರೆ. ಮ್ಯಾಚ್ ಡ್ರಾ ಆದರು ಸೂಪರ್ ಓವರ್ ಯಾಕೆ ಆಡಿಸಲಿಲ್ಲ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಸದ್ಯ ಇದಕ್ಕೆ ಉತ್ತರ ಇಲ್ಲಿದೆ.
ಇದನ್ನೂ ಓದಿ: ಕೇರಳದಲ್ಲಿ 100 ಮನೆ ನಿರ್ಮಾಣ.. ಸಿಎಂ ಸಿದ್ದು ಘೋಷಣೆಗೆ ರಾಹುಲ್, ಪ್ರಿಯಾಂಕಾ ಗಾಂಧಿ ಹೇಳಿದ್ದೇನು?
ಟಾಸ್ ಗೆದ್ದುಕೊಂಡು ಶ್ರೀಲಂಕಾ ಬ್ಯಾಟಿಂಗ್ಗೆ ಆಗಮಿಸಿತು. ಶ್ರೀಲಂಕಾ ಪರ ಪಾಥುಮ್ ನಿಸ್ಸಾಂಕ್ 56 ರನ್, ದುನಿತ್ ವಳ್ಳಾಲಾಗೆ 67 ರನ್ ಬಾರಿಸಿ ತಂಡಕ್ಕೆ ನೆರವಾದರು. ಹೀಗಾಗಿ ಶ್ರೀಲಂಕಾ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗೆ 230 ರನ್ಗಳನ್ನು ಗಳಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ್ದ ರೋಹಿತ್ ಶರ್ಮಾ ಪಡೆ ಸುಲಭವಾಗೇ ಗೆಲ್ಲುತ್ತಾರೆ ಎಂದುಕೊಳ್ಳಲಾಗಿತ್ತು. ಓಪನರ್ ರೋಹಿತ್ 58 ರನ್ ಚಚ್ಚಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ಇದನ್ನೂ ಓದಿ: ಬೆಟ್ಟದ ತುತ್ತತುದಿಯಲ್ಲಿದ್ದ ಕುಟುಂಬ.. ದಟ್ಟ ಮಂಜು, ಜಾರುವ ಬಂಡೆಗಳ ಮಧ್ಯೆ ಜೀವ ಉಳಿಸಿಕೊಂಡಿದ್ದೇ ಸಾಹಸ!
ಆದರೆ ಗಿಲ್ 16, ಕೊಹ್ಲಿ 24, ಅಯ್ಯರ್ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದು ತಂಡಕ್ಕೆ ಭಾರೀ ಹಿನ್ನಡೆಯಾಯಿತು. ಇವರ ಬಳಿಕ ಕ್ರೀಸ್ಗೆ ಆಗಮಿಸಿದ ಕನ್ನಡಿಗ ಕೆಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು. ಇವರು ಔಟ್ ಆಗ್ತಿದ್ದಂತೆ ಭಾರತ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿತು. ದುಬೆ ತಂಡ ಗೆಲ್ಲಿಸುವ ಹಂತದಲ್ಲಿದ್ದರು. 48ನೇ ಓವರ್ನಲ್ಲಿ ಭಾರತ ಗೆಲುವಿಗೆ ಕೇವಲ 1 ರನ್ ಬೇಕಿತ್ತು. ಅಸಲಂಕಾ 2 ಎಸೆತದಲ್ಲಿ 2 ವಿಕೆಟ್ ಪಡೆದು ಲಂಕಾಗೆ ತಿರುವು ಕೊಟ್ಟರು. ಇದರಿಂದ ಭಾರತ 230 ರನ್ಗೆ ಆಲ್ ಔಟ್ ಆಗಿ ಡ್ರಾ ಮಾಡಿಕೊಂಡಿತು.
ಸೂಪರ್ ಓವರ್ ಯಾಕೆ ಆಡಿಸಲಿಲ್ಲ?
ಭಾರತ ಮತ್ತು ಶ್ರೀಲಂಕಾ ನಡುವಿನ 3ನೇ ಟಿ20 ಡ್ರಾ ಆಗಿದ್ದಾಗ ಸೂಪರ್ ಓವರ್ ಆಡಿಸಲಾಗಿತ್ತು. ಟಿ20 ಮ್ಯಾಚ್ನಲ್ಲಿ ಅಂತಿಮ ಫಲಿತಾಂಶಕ್ಕಾಗಿ ಸೂಪರ್ ಓವರ್ ನಿಯಮ ಇರುತ್ತದೆ. ಆದರೆ ಏಕದಿನ ಪಂದ್ಯ ಟೈ ಆದರೂ ಯಾಕೆ ಸೂಪರ್ ಓವರ್ ಆಡಿಸಲಿಲ್ಲ ಎಂಬುದು ಈಗಿನ ಪ್ರಶ್ನೆಯಾಗಿದೆ. ಐಸಿಸಿ ನಿಯಮದ ಪ್ರಕಾರ ದ್ವಿಪಕ್ಷೀಯ ಸರಣಿಯಲ್ಲಿ (2 ತಂಡಗಳ ನಡುವಿನ ಪಂದ್ಯಗಳು) ಪಂದ್ಯ ಸಮಬಲ ಸಾಧಿಸಿದರೆ ಸೂಪರ್ ಓವರ್ ಆಡಿಸಲ್ಲ. ಇದು ಐಸಿಸಿ ನಿಯಮದಲ್ಲಿಲ್ಲ. ಐಸಿಸಿ ಟೂರ್ನಿಗಳಾದ ಏಷ್ಯಾಕಪ್, ವರ್ಲ್ಡ್ಕಪ್, ಟಿ20 ವಿಶ್ವಕಪ್ನಲ್ಲಿ ಹಾಗೂ ತ್ರಿಕೋನ ಸರಣಿಗಳಲ್ಲಿ ಸೂಪರ್ ಓವರ್ ಆಡಿಸಿ ಅಂತಿಮ ಫಲಿತಾಂಶ ಪಡೆಯಲಾಗುತ್ತದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಸುಲಭದ ಗುರಿಯನ್ನು ಟೀಮ್ ಇಂಡಿಯಾ ತಲುಪಲು ಆಗಲಿಲ್ಲ
ಸೂಪರ್ ಓವರ್ ಅನ್ನು ಐಸಿಸಿ ಯಾಕೆ ಆಡಿಸಲಿಲ್ಲ ಗೊತ್ತಿದೆಯಾ?
ಕೆಎಲ್ ರಾಹುಲ್, ಅಕ್ಷರ್ ಪಟೇಲ್ ಜವಾಬ್ದಾರಿಯುತ ಬ್ಯಾಟಿಂಗ್
ಭಾರತ ಮತ್ತು ಶ್ರೀಲಂಕಾ ಮಧ್ಯೆ ಏಕದಿನ ಸರಣಿಯ ಮೊದಲ ಪಂದ್ಯ ಡ್ರಾ ಆಗಿದ್ದು ಎಲ್ಲರನ್ನು ಅಚ್ಚರಿಗೊಳಸಿದೆ. ಕೇವಲ ಒಂದೇ ಒಂದು ರನ್ ಅನ್ನು ಭಾರತದ ಆಟಗಾರರು ಕೊನೆಗೆ ಗಳಿಸಲಾಗದೇ ಟೈ ಮಾಡಿಕೊಂಡಿದ್ದಾರೆ. ಮ್ಯಾಚ್ ಡ್ರಾ ಆದರು ಸೂಪರ್ ಓವರ್ ಯಾಕೆ ಆಡಿಸಲಿಲ್ಲ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಸದ್ಯ ಇದಕ್ಕೆ ಉತ್ತರ ಇಲ್ಲಿದೆ.
ಇದನ್ನೂ ಓದಿ: ಕೇರಳದಲ್ಲಿ 100 ಮನೆ ನಿರ್ಮಾಣ.. ಸಿಎಂ ಸಿದ್ದು ಘೋಷಣೆಗೆ ರಾಹುಲ್, ಪ್ರಿಯಾಂಕಾ ಗಾಂಧಿ ಹೇಳಿದ್ದೇನು?
ಟಾಸ್ ಗೆದ್ದುಕೊಂಡು ಶ್ರೀಲಂಕಾ ಬ್ಯಾಟಿಂಗ್ಗೆ ಆಗಮಿಸಿತು. ಶ್ರೀಲಂಕಾ ಪರ ಪಾಥುಮ್ ನಿಸ್ಸಾಂಕ್ 56 ರನ್, ದುನಿತ್ ವಳ್ಳಾಲಾಗೆ 67 ರನ್ ಬಾರಿಸಿ ತಂಡಕ್ಕೆ ನೆರವಾದರು. ಹೀಗಾಗಿ ಶ್ರೀಲಂಕಾ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗೆ 230 ರನ್ಗಳನ್ನು ಗಳಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ್ದ ರೋಹಿತ್ ಶರ್ಮಾ ಪಡೆ ಸುಲಭವಾಗೇ ಗೆಲ್ಲುತ್ತಾರೆ ಎಂದುಕೊಳ್ಳಲಾಗಿತ್ತು. ಓಪನರ್ ರೋಹಿತ್ 58 ರನ್ ಚಚ್ಚಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ಇದನ್ನೂ ಓದಿ: ಬೆಟ್ಟದ ತುತ್ತತುದಿಯಲ್ಲಿದ್ದ ಕುಟುಂಬ.. ದಟ್ಟ ಮಂಜು, ಜಾರುವ ಬಂಡೆಗಳ ಮಧ್ಯೆ ಜೀವ ಉಳಿಸಿಕೊಂಡಿದ್ದೇ ಸಾಹಸ!
ಆದರೆ ಗಿಲ್ 16, ಕೊಹ್ಲಿ 24, ಅಯ್ಯರ್ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದು ತಂಡಕ್ಕೆ ಭಾರೀ ಹಿನ್ನಡೆಯಾಯಿತು. ಇವರ ಬಳಿಕ ಕ್ರೀಸ್ಗೆ ಆಗಮಿಸಿದ ಕನ್ನಡಿಗ ಕೆಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು. ಇವರು ಔಟ್ ಆಗ್ತಿದ್ದಂತೆ ಭಾರತ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿತು. ದುಬೆ ತಂಡ ಗೆಲ್ಲಿಸುವ ಹಂತದಲ್ಲಿದ್ದರು. 48ನೇ ಓವರ್ನಲ್ಲಿ ಭಾರತ ಗೆಲುವಿಗೆ ಕೇವಲ 1 ರನ್ ಬೇಕಿತ್ತು. ಅಸಲಂಕಾ 2 ಎಸೆತದಲ್ಲಿ 2 ವಿಕೆಟ್ ಪಡೆದು ಲಂಕಾಗೆ ತಿರುವು ಕೊಟ್ಟರು. ಇದರಿಂದ ಭಾರತ 230 ರನ್ಗೆ ಆಲ್ ಔಟ್ ಆಗಿ ಡ್ರಾ ಮಾಡಿಕೊಂಡಿತು.
ಸೂಪರ್ ಓವರ್ ಯಾಕೆ ಆಡಿಸಲಿಲ್ಲ?
ಭಾರತ ಮತ್ತು ಶ್ರೀಲಂಕಾ ನಡುವಿನ 3ನೇ ಟಿ20 ಡ್ರಾ ಆಗಿದ್ದಾಗ ಸೂಪರ್ ಓವರ್ ಆಡಿಸಲಾಗಿತ್ತು. ಟಿ20 ಮ್ಯಾಚ್ನಲ್ಲಿ ಅಂತಿಮ ಫಲಿತಾಂಶಕ್ಕಾಗಿ ಸೂಪರ್ ಓವರ್ ನಿಯಮ ಇರುತ್ತದೆ. ಆದರೆ ಏಕದಿನ ಪಂದ್ಯ ಟೈ ಆದರೂ ಯಾಕೆ ಸೂಪರ್ ಓವರ್ ಆಡಿಸಲಿಲ್ಲ ಎಂಬುದು ಈಗಿನ ಪ್ರಶ್ನೆಯಾಗಿದೆ. ಐಸಿಸಿ ನಿಯಮದ ಪ್ರಕಾರ ದ್ವಿಪಕ್ಷೀಯ ಸರಣಿಯಲ್ಲಿ (2 ತಂಡಗಳ ನಡುವಿನ ಪಂದ್ಯಗಳು) ಪಂದ್ಯ ಸಮಬಲ ಸಾಧಿಸಿದರೆ ಸೂಪರ್ ಓವರ್ ಆಡಿಸಲ್ಲ. ಇದು ಐಸಿಸಿ ನಿಯಮದಲ್ಲಿಲ್ಲ. ಐಸಿಸಿ ಟೂರ್ನಿಗಳಾದ ಏಷ್ಯಾಕಪ್, ವರ್ಲ್ಡ್ಕಪ್, ಟಿ20 ವಿಶ್ವಕಪ್ನಲ್ಲಿ ಹಾಗೂ ತ್ರಿಕೋನ ಸರಣಿಗಳಲ್ಲಿ ಸೂಪರ್ ಓವರ್ ಆಡಿಸಿ ಅಂತಿಮ ಫಲಿತಾಂಶ ಪಡೆಯಲಾಗುತ್ತದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ