/newsfirstlive-kannada/media/post_attachments/wp-content/uploads/2025/04/CABINET-MEETING.jpg)
ಪ್ರವಾಸಿಗರ ಸ್ವರ್ಗ.. ಪ್ರೇಮ ಪಕ್ಷಿಗಳಿಗೆ ಪ್ರೇಮ ಕಾಶ್ಮೀರ.. ಭಾರತದ ಕಿರೀಟದಂತಿದ್ದ ಕಾಶ್ಮೀರ ಸದ್ಯ ರಕ್ತಪಿಪಾಸುಗಳ ಅಟ್ಟಹಾಸಕ್ಕೆ ನಲುಗಿದೆ. ಪಹಲ್ಗಾಮ್ನಲ್ಲಿ ಅಟ್ಟಹಾಸ ಮೆರೆದ ನರರಾಕ್ಷಸರು 26 ಪ್ರವಾಸಿಗರ ಜೀವ ತೆಗೆದಿದ್ದಾರೆ. ಪ್ರವಾಸಿಗರ ರೋಧನ ಕಂಡು ಇಡೀ ದೇಶವೇ ಮರುಕ ಪಡುತ್ತಿದೆ. ಪಾಪಿ ಉಗ್ರರನ್ನ ಛೂ ಬಿಟ್ಟ ಪಾಕಿಸ್ತಾನದ ವಿರುದ್ಧ ಭಾರತ ಕಠಿಣ ನಿರ್ಣಯಗಳನ್ನ ತೆಗೆದುಕೊಂಡಿದೆ.
ಕೇಂದ್ರ ಸರ್ಕಾರದಿಂದ 5 ನಿರ್ಣಯ
ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್ ಮೇರುಪರ್ವತಗಳ ತಪ್ಪಲು ಭೂಮಿ.. ನದಿಗಳು, ಸರೋವರಗಳು, ಸುಂದರ ಪ್ರಕೃತಿಯ ತಾಣ.. ಬರೋಬ್ಬರಿ 35 ವರ್ಷಗಳ ಬಳಿಕ ಪಹಲ್ಗಾಮ್ನಲ್ಲಿ ನೆತ್ತರು ಹರಿದಿದೆ. ಇಡೀ ಮನುಕುಲ ಬೆಚ್ಚುವಂತೆ ಹೇಯ ಕೃತ್ಯ ಎಸಗಿರುವ ಉಗ್ರರು ದೇಶದ ಭದ್ರತೆಗೆ ಬೆದರಿಕೆಯೊಡ್ಡಿದ್ದಾರೆ. ಪಹಲ್ಗಾಮ್ನಲ್ಲಿ 26 ಜನರನ್ನು ಹತ್ಯೆ ಮಾಡಿದ ಕೃತ್ಯ ಸೇನೆಯನ್ನು ಬಡಿದೆಬ್ಬಿಸಿದೆ.. ಉಗ್ರರ ರಣಬೇಟೆಗಾಗಿ ಹಾತೊರೆಯುತ್ತಿದೆ. ಇದೇ ವೇಳೆಯಲ್ಲಿ ಭಾರತ ಪಾಕ್ ವಿರುದ್ಧ ರಾಜತಾಂತ್ರಿಕ ಸಮರ ಸಾರಿದೆ. ನಿನ್ನೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನದ ವಿರುದ್ಧ 5 ಪ್ರಮುಖ ನಿರ್ಣಯಗಳನ್ನ ಕೈಗೊಂಡಿದೆ.
ಇದನ್ನೂ ಓದಿ: BREAKING; ಪಾಕ್ಗೆ ಸಿಂಧೂ ನದಿ ನೀರು ಹಂಚಿಕೆ ರದ್ದು.. PM ಮೋದಿ ನೇತೃತ್ವದ ಸಭೆಯಲ್ಲಿ ಮಹತ್ವದ 5 ನಿರ್ಧಾರ
1
‘ಪಾಪಿಸ್ತಾನ’ಕ್ಕೆ ಭಾರತ ‘ಪಂಚ್’
- ನಿರ್ಣಯ-01: ಸಿಂಧೂ ನದಿ ನೀರು ಒಪ್ಪಂದ ಈ ಕ್ಷಣದಿಂದಲೇ ಅಮಾನತಿನಲ್ಲಿ ಇಡಲಾಗುತ್ತೆ
ನಿರ್ಣಯ-02:
- ಭಾರತ ಪಾಕಿಸ್ತಾನ ಗಡಿಯ ಅಠಾರಿ ಚೆಕ್ಪೋಸ್ಟ್ ಈ ಕ್ಷಣದಿಂದಲೇ ಕ್ಲೋಸ್
- ಪಾಕಿಸ್ತಾನಕ್ಕೆ ಹೋಗಿರುವವರು ಮೇ.1ರ ಒಳಗಾಗಿ ಭಾರತಕ್ಕೆ ಮರಳಬೇಕು
ನಿರ್ಣಯ-3:
- SAARC ವೀಸಾ ಅಡಿ ಪಾಕಿಸ್ತಾನದ ನಾಗರಿಕರಿಗೆ ಭಾರತಕ್ಕೆ ಪ್ರವೇಶವಿಲ್ಲ
- ಈ ಹಿಂದೆ ಪಾಕ್ ನಾಗರಿಕರಿಗೆ ನೀಡಲಾಗಿರುವ ವಿಶೇಷ ವೀಸಾಗಳೂ ರದ್ದು
- ಭಾರತದಲ್ಲಿರೋ ಪಾಕ್ ಪ್ರಜೆಗಳಿಗೆ ಇಲ್ಲಿಂದ ತೆರಳಲು 48 ಗಂಟೆಗಳ ಗಡುವು
ನಿರ್ಣಯ-4:
- ಪಾಕ್ನ ರಾಯಭಾರ ಕಚೇರಿ ಅಧಿಕಾರಿಗಳಿಗೆ ಭಾರತ ಬಿಡಲು ವಾರದ ಗಡುವು
- ಪಾಕ್ನ 3 ಸೇನೆಯ ಅಡ್ವೈಸರ್ಗಳಿಗೆ ಭಾರತ ಬಿಡೋದಕ್ಕೆ ಕಡ್ಡಾಯ ಆದೇಶ
- ಇಸ್ಲಾಮಾಬಾದ್ನ ಭಾರತೀಯ ಹೈಕಮಿಷನ್ನಲ್ಲಿರೋ ಅಧಿಕಾರಿಗಳೂ ವಾಪಸ್
- ಭಾರತದ ಮೂರು ಸೇನೆಯ ಅಡ್ವೈಸರ್ಗಳಿಗೆ ಭಾರತಕ್ಕೆ ಮರಳೋಕೆ ಸೂಚನೆ
ನಿರ್ಣಯ-5
- ಭಾರತದಲ್ಲಿರೋ ಪಾಕ್ ರಾಯಭಾರ ಕಚೇರಿಯ ಸಿಬ್ಬಂದಿ ಸಂಖ್ಯೆ 30ಕ್ಕೆ ಇಳಿಕೆ
- ಭೂ ಸೇನೆ, ವಾಯು, ನೌಕಾ ಸೇನೆಗಳಿಗೆ ಹದ್ದಿನ ಕಣ್ಗಾವಲಿಡೋಕೆ ಸೂಚನೆ
1960ರಲ್ಲಿ ಪಾಕ್-ಭಾರತ ಮಾಡಿಕೊಂಡಿದ್ದ ಸಿಂಧೂ ನದಿ ನೀರು ಒಪ್ಪಂದವನ್ನ ತಕ್ಷಣ ಅಮಾನತು ಮಾಡಲಾಗಿದೆ. ಈ ಮೂಲಕ ಪಾಕಿಸ್ತಾನಕ್ಕೆ ಭಾರತ ಜಲಶಾಕ್ ಕೊಟ್ಟಿದೆ. ಈ ಒಪ್ಪಂದ ಸ್ಥಗಿತದಿಂದ ಪಾಕಿಸ್ತಾನಕ್ಕೆ ದೊಡ್ಡ ಆಘಾತ ಎದುರಾಗಲಿದೆ.
ಇದನ್ನೂ ಓದಿ: ತಾಯ್ನಾಡಿಗೆ ಬಂದ ಮಂಜುನಾಥ್, ಭರತ್ ಮೃತದೇಹ.. ಅಗಲಿದ ಪುತ್ರನ ನೋಡಿ ತಂದೆ-ತಾಯಿ ಕಣ್ಣೀರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ