/newsfirstlive-kannada/media/post_attachments/wp-content/uploads/2025/04/pm-modi.jpg)
ಏಪ್ರಿಲ್ 22.. ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಇಡೀ ದೇಶವೇ ಖಂಡನೆ ವ್ಯಕ್ತಪಡಿಸುತ್ತಿದೆ. ಪಹಲ್ಗಾಮ್ನಲ್ಲಿ ನಡೆದ ದಾಳಿಯಲ್ಲಿ ಒಂದಲ್ಲಾ ಎರಡಲ್ಲ ಬರೋಬ್ಬರಿ 26 ಅಮಾಯಕರ ಜೀವ ಬಲಿಯಾಗಿದೆ. ಅದರಲ್ಲೂ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸೇನೆ ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಇದನ್ನೂ ಓದಿ:ಪಾಕ್ ಪ್ರಜೆಗಳಿಗೆ ಭಾರತ ತೊರೆಯಲು ನಾಳೆಯೇ ಡೆಡ್ಲೈನ್; ಕರ್ನಾಟಕದಲ್ಲಿ ಎಷ್ಟು ಮಂದಿ ಇದ್ದಾರೆ..?
ಕೇವಲ ಹಿಂದೂಗಳನ್ನೇ ಟಾರ್ಗೆಟ್ ಪ್ರವಾಸಿಗರನ್ನು ಕ್ರೂರವಾಗಿ ಹತ್ಯೆಗೈದ್ದರು ಪಾಕಿಸ್ತಾನಿ ಉಗ್ರರ ದಾಳಿಯ ಬಳಿಕ ಭಾರತ ಸರ್ಕಾರ 10 ಪ್ರಮುಖ ತೀರ್ಮಾನ ಕೈಗೊಂಡಿದೆ. ತನ್ನ 10 ತೀರ್ಮಾನಗಳಿಂದ ಭಾರತ ಸರ್ಕಾರ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದೆ.
ಹಾಗಾದರೇ, ಭಾರತ ಕೈಗೊಂಡ ಆ 10 ತೀರ್ಮಾನಗಳೇನು ಗೊತ್ತಾ?
1- ಇಂಡಸ್ ನದಿ ನೀರು ಹಂಚಿಕೆ ಒಪ್ಪಂದ ಸಸ್ಪೆಂಡ್
2- ಪಾಕ್ ರಾಯಭಾರಿಗಳಿಗೆ ನೀಡಿದ್ದ ಕಾನೂನಿನ ರಕ್ಷಣೆಯ ವಿನಾಯಿತಿ ರದ್ದು, ರಾಯಭಾರ ಕಚೇರಿ ಸಿಬ್ಬಂದಿಯ ಕಡಿತ
3-ಪಾಕ್ ನಾಗರಿಕರಿಗೆ ನೀಡಿದ್ದ ಎಲ್ಲ ವೀಸಾ ರದ್ದು. ಏಪ್ರಿಲ್ 27ರೊಳಗೆ ಪಾಕ್ಗೆ ವಾಪಸ್ ಹೋಗಲು ಸೂಚನೆ, ಮೆಡಿಕಲ್ ವೀಸಾದಲ್ಲಿ ಬಂದವರಿಗೆ ಏಪ್ರಿಲ್ 29ರೊಳಗೆ ವಾಪಸ್ ಹೋಗಲು ಸೂಚನೆ
4-ಅಟ್ಟಾರಿ ಚೆಕ್ ಪೋಸ್ಟ್ ಬಂದ್ ಮಾಡಿ, ಸರಕು ಸಾಗಣೆ ಬಂದ್ ಮಾಡಿದ ಭಾರತ ಸರ್ಕಾರ
5-ಭಾರತದ ನೌಕಾಪಡೆಯಿಂದ ಮಿಸೈಲ್ ಪರೀಕ್ಷೆ, ವಾಯುಪಡೆಯಿಂದ ಆಕ್ರಮಣ್ ಸಮರಾಭ್ಯಾಸ
6-ಸೇನೆಗೆ ಧ್ರುವ ಹೆಲಿಕಾಪ್ಟರ್ ಅನ್ನು ಭಯೋತ್ಪಾದನಾ ವಿರುದ್ಧದ ಕಾರ್ಯಾಚರಣೆಗೆ ಬಳಕೆಗೆ ಅನುಮತಿ
7-ಅಟ್ಟಾರಿ - ವಾಘಾ ಬಾರ್ಡರ್ನಲ್ಲಿ ಬೀಟಿಂಗ್ ರೀಟ್ರೀಟ್ ಕಡಿತ, ಪಾಕ್ ಸೈನಿಕರ ಜೊತೆ ಕೈ ಕುಲುಕದ ಭಾರತದ ಸೈನಿಕರು
8-ಭಾರತ- ಪಾಕ್ ಗಡಿಯಲ್ಲಿ ನಾಗರಿಕರ ಓಡಾಟಕ್ಕೆ ನಿರ್ಬಂಧ
9--ದೆಹಲಿಯಲ್ಲಿ ಸರ್ವಪಕ್ಷ ಸಭೆ ನಡೆಸಿ, ಎಲ್ಲ ಪಕ್ಷಗಳ ಬೆಂಬಲ ಪಡೆದ ಕೇಂದ್ರ ಸರ್ಕಾರ
10--ಎಲ್ಲ ರಾಜ್ಯಗಳ ಸಿಎಂಗಳ ಜೊತೆಗೆ ಮಾತನಾಡಿ ಪಾಕ್ ನಾಗರಿಕರನ್ನು ವಾಪಸ್ ಕಳಿಸಲು ಸೂಚಿಸಿದ ಅಮಿತ್ ಶಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ