ವರ್ಲ್ಡ್ಕಪ್ ಫೈನಲ್ಸ್ನಲ್ಲಿ ಆಸಿಸ್ ಎದುರು ಭಾರತ ತಂಡದ್ದೇ ಪಾರುಪತ್ಯ
ಟ್ರೋಫಿ ಗೆಲ್ಲೋ ಹಾಟ್ ಫೇವರಿಟ್ಸ್ ಆಗಿ ಕಣಕ್ಕೆ ಇಳಿಯಲಿದೆ ಭಾರತ!
ಫೈನಲ್ಸ್ನಲ್ಲಿ ಆಸ್ಟ್ರೇಲಿಯನ್ಸ್ ಎದುರು ಭಾರತ ತಂಡ ಸೋತ ಮಾತೇ ಇಲ್ಲ
ಎರಡೂ ಸೋಲಿಲ್ಲದ ಸರದಾರರು, ಈ ಇಬ್ಬರ ಟಾರ್ಗೆಟ್ ಒಂದೇ. ಅದೇ ಚಾಂಪಿಯನ್ ಪಟ್ಟ. ಫೈನಲ್ ತನಕ ಸೋಲನ್ನೇ ಅರಿದ ಇವರಿಬ್ಬರ ಮುಖಾಮುಖಿ, ಕ್ರಿಕೆಟ್ ಅಭಿಮಾನಿಗಳ ತುಡಿತ ಹೆಚ್ಚಾಗುವಂತೆ ಮಾಡಿದೆ. ಇದಕ್ಕೆ ಕಾರಣ 3 ತಿಂಗಳ ಹಿಂದಿನ ನೆನಪು ಮರುಕಳಿಸಿರೋದು. ಅದೇನು?.
ಅದೇ ಹೈವೋಲ್ಟೇಜ್ ಫೀವರ್, ಅದೇ ಮದಗಜಗಳ ಕಾದಾಟ, ಅದೇ ಎನರ್ಜಿ. ಈ ಸಲ ಯಾರಿಗೆ ವಿಶ್ವಕಪ್ ಗರಿ? ಪ್ರತಿ ಕ್ರಿಕೆಟ್ ಪ್ರೇಮಿಯ ಮನದ ಮಾತು. ಇದಕ್ಕೆ ಕಾರಣ ನವೆಂಬರ್ 19ರಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಕಾದಾಟ.
ಈ ಫೈನಲ್ ಫೈಟ್ ಮುಗಿದು 3 ತಿಂಗಳು ಕಳೆದಿವೆ. ಆದ್ರೀಗ ಅಂಥದ್ದೇ ಹೈವೋಲ್ಟೇಜ್ ಕದನಕ್ಕೆ ಇದೇ ಮದಗಜಗಳು ಸಾಕ್ಷಿಯಾಗ್ತಿವೆ. ಆದ್ರೆ, ಈ ಸಲ ಇವರ ಕಾಳಗ ನಡೀತಿರೋದು ಕಿರಿಯರ ವಿಶ್ವ ಕಿರೀಟಕ್ಕಾಗಿ.
ಯಾರಿಗೆ ಅಂಡರ್-19 ವಿಶ್ವಕಪ್ ಕಿರೀಟ..?
ಕಿರಿಯರ ವಿಶ್ವಕಪ್ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗ್ತಿದ್ದು, ಉಭಯ ತಂಡಗಳ ಮುಖಾಮುಖಿಗೆ ವಿಲೋಮೂರ್ ಪಾರ್ಕ್ ವೇದಿಕೆಯಾಗಿದೆ. ಲೀಗ್ನಿಂದ ಫೈನಲ್ ತನಕ ಸೋಲನ್ನೇ ಅರಿಯದ ಉಭಯ ತಂಡಗಳಲ್ಲಿ ಯಾರು ಅಜೇಯ ಓಟ ಮುಂದುವರಿಸ್ತಾರೆ ಎಂಬ ಕುತೂಹಲ ಗರಿಗೆದರಿದೆ.
ಯೆಲ್ಲೋ ಆರ್ಮಿಯನ್ನ ಕಡೆಗಣಿಸುವಂತಿಲ್ಲ ಭಾರತ..!
ಹಿರಿಯರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಪಾರುಪತ್ಯ ಮೆರೆದ್ರೆ. ಕಿರಿಯರ ವಿಶ್ವಕಪ್ ಇತಿಹಾಸದಲ್ಲಿ ಟೀಮ್ ಇಂಡಿಯಾ, 5 ಬಾರಿ ಚಾಂಪಿಯನ್ ಆಗಿ ಮೆರೆದಾಡಿದೆ. 3 ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆ ಮೂಲಕ ಕಿರಿಯರ ವಿಶ್ವಕಪ್ನಲ್ಲಿ ಪಾರುಪತ್ಯ ಮೆರೆಯುತ್ತಾ ಬಂದಿದೆ. ಇದೀಗ 6ನೇ ಬಾರಿಗೆ ಟ್ರೋಫಿ ಗೆಲ್ಲೋ ಉತ್ಸಾಹದಲ್ಲಿರುವ ಉದಯ್ ಸಹರಾನ್ ನಾಯಕತ್ವದ ಭಾರತ ಕೂಡ ಟ್ರೋಫಿ ಗೆಲ್ಲೋ ಹಾಟ್ ಫೇವರೇಟ್ ಆಗಿದೆ. ಆದ್ರೆ, ಎದುರಾಳಿ ಆಸ್ಟ್ರೇಲಿಯನ್ನರನ್ನ ಯಾವುದೇ ಕಾರಣಕ್ಕೆ ಲೈಟ್ ಆಗಿ ತೆಗೆದುಕೊಳ್ಳುವಂತೆಯೇ ಇಲ್ಲ.
ಯಾಕಂದ್ರೆ, ಕಿರಿಯರ ವಿಶ್ವಕಪ್ನಲ್ಲಿ ಭಾರತ ಬಳಿಕ ಮೋಸ್ಟ್ ಸಕ್ಸಸ್ಫುಲ್ ಟೀಮ್ ಆಸ್ಟ್ರೇಲಿಯಾ ಆಗಿದೆ. ಅಷ್ಟೇ ಅಲ್ಲ, ಪ್ರಸಕ್ತ ಟೂರ್ನಿಯಲ್ಲಿ ಭಾರತದಂತೆ ಆಸ್ಟ್ರೇಲಿಯಾ ಸೋಲಿಲ್ಲದ ಸರದಾರ. ಇದಕ್ಕಿಂತ ಮಿಗಿಲಾಗಿ ಸೌತ್ ಆಫ್ರಿಕನ್ ಕಂಡೀಷನ್ಸ್ ಆಸ್ಟ್ರೇಲಿಯನ್ಸ್ಗೆ ಫೇವರ್ ಆಗಿದೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.
3ನೇ ಬಾರಿ ಭಾರತ-ಆಸಿಸ್ ಫೈನಲ್ಸ್ನಲ್ಲಿ ಮುಖಾಮುಖಿ..!
ಸೌತ್ ಆಫ್ರಿಕನ್ ಕಂಡೀಷನ್ಸ್ ಆಸ್ಟ್ರೇಲಿಯನ್ಸ್ಗೆ ವರದಾನವಾಗಿದ್ರು ಫೈನಲ್ಸ್ನಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯನ್ಸ್ ಎದುರು ಸೋತ ಮಾತೇ ಇಲ್ಲ. 2012, 2018ರ ವಿಶ್ವಕಪ್ ಫೈನಲ್ಗಳಲ್ಲಿ ಆಸ್ಟ್ರೇಲಿಯಾವನ್ನ ಬಗ್ಗು ಬಡಿದಿದ್ದ ಭಾರತ, ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದೆ. ಆದ್ರೆ, ಅತ್ತ ಪಾಕ್ ಎದುರು ಫೈನಲ್ಗೇರಿದ ಆಸ್ಟ್ರೇಲಿಯಾ, ಈ ಹಿಂದಿನ ಸೋಲುಗಳ ಸೇಡಿಗೆ ಕಾಯ್ತಿದೆ. ಆ ಮೂಲಕ 14 ವರ್ಷಗಳ ಟ್ರೋಫಿ ಬರ ನೀಗಿಸಿಕೊಳ್ಳುವ ಲೆಕ್ಕಚಾರದಲ್ಲಿದೆ.
ಆಸ್ಟ್ರೇಲಿಯಾ ಎದುರು ತೀರಿಸಿಕೊಳ್ಳುತ್ತಾ ರಿವೆಂಜ್..?
ಕಿರಿಯರ ವಿಶ್ವಕಪ್ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿ, ಪುರುಷರ ಒನ್ಡೆ ವಿಶ್ವಕಪ್ ಫೈನಲ್ ಪಂದ್ಯದ ನೆನಪು ಮರುಕಳಿಸುವಂತೆ ಮಾಡಿದೆ. ಅಜೇಯವಾಗಿ ಫೈನಲ್ಗೇರಿದ್ದ ರೋಹಿತ್ ನಾಯಕತ್ವದ ಟೀಮ್ ಇಂಡಿಯಾ, ಆಸಿಸ್ ಎದುರು ಮುಗ್ಗರಿಸಿತ್ತು. ಇದೀಗ ಕಾತಕಾಳೀಯ ಎಂಬಂತೆ ಅಜೇಯವಾಗಿಯೇ ಕಿರಿಯರ ತಂಡ ಪ್ರವೇಶಿಸಿದೆ. ಹೀಗಾಗಿ 3 ತಿಂಗಳ ಹಿಂದಿನ ಸೇಡು ತೀರಿಸಿಕೊಳ್ಳುವ ಸುವರ್ಣಾವಕಾಶವೀಗ ಯುವ ಭಾರತದ ಮುಂದಿದೆ.
ಈ ಯುವ ಆಟಗಾರರ ಮೇಲೆಯೇ ನಿರೀಕ್ಷೆಯ ಭಾರ!
ಈ ಟೂರ್ನಿಯಲ್ಲಿ ಆಸಿಸ್ ಪ್ರದರ್ಶನಕ್ಕೆ ಹೋಲಿಸಿದ್ರೆ, ಟೀಮ್ ಇಂಡಿಯಾ ಆಟಗಾರರ ಪರ್ಫಾಮೆನ್ಸ್ ನಿಜಕ್ಕೂ ಟಾಪ್ ಕ್ಲಾಸ್. ಅಷ್ಟೇ ಅಲ್ಲ, ವೈಯಕ್ತಿಕವಾಗಿಯೂ ರನ್ ಹೊಳೆಯನ್ನೇ ಭಾರತೀಯ ಆಟಗಾರರು ಹರಿಸಿದ್ದಾರೆ. ಟಾಪ್-3 ರನ್ ಸ್ಕೋರರ್ಗಳಾಗಿ ನಾಯಕ ಉದಯ್ ಸಹರಾನ್, ಮುಶೀರ್ ಖಾನ್, ಸಚಿನ್ ದಾಸ್ ಹೊರಹೊಮ್ಮಿದ್ದಾರೆ. ವಿಕೆಟ್ ಟೇಕರ್ ಲಿಸ್ಟ್ನಲ್ಲೂ ಸೌಮ್ಯ ಕುಮಾರ್ ಪಾಂಡೆ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಇವರಿಂದ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮಿದ್ರೆ, 6ನೇ ಬಾರಿಗೆ ವಿಶ್ವಕಪ್ ಕಿರೀಟಕ್ಕೆ ಮುತ್ತಿಡುವಲ್ಲಿ ಅನುಮಾನವೇ ಇಲ್ಲ.
2023ರ ಪುರುಷರ ಏಕದಿನ ವಿಶ್ವಕಪ್ನ ನೆನಪು ಮತ್ತೆ ಮರುಕಳಿಸಿದ್ದು. ಆ ಸೋಲಿನ ಸೇಡು ತೀರಿಸಿಕೊಳ್ಳಲಿ ಅನ್ನೋದೇ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಶಯ
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ವರ್ಲ್ಡ್ಕಪ್ ಫೈನಲ್ಸ್ನಲ್ಲಿ ಆಸಿಸ್ ಎದುರು ಭಾರತ ತಂಡದ್ದೇ ಪಾರುಪತ್ಯ
ಟ್ರೋಫಿ ಗೆಲ್ಲೋ ಹಾಟ್ ಫೇವರಿಟ್ಸ್ ಆಗಿ ಕಣಕ್ಕೆ ಇಳಿಯಲಿದೆ ಭಾರತ!
ಫೈನಲ್ಸ್ನಲ್ಲಿ ಆಸ್ಟ್ರೇಲಿಯನ್ಸ್ ಎದುರು ಭಾರತ ತಂಡ ಸೋತ ಮಾತೇ ಇಲ್ಲ
ಎರಡೂ ಸೋಲಿಲ್ಲದ ಸರದಾರರು, ಈ ಇಬ್ಬರ ಟಾರ್ಗೆಟ್ ಒಂದೇ. ಅದೇ ಚಾಂಪಿಯನ್ ಪಟ್ಟ. ಫೈನಲ್ ತನಕ ಸೋಲನ್ನೇ ಅರಿದ ಇವರಿಬ್ಬರ ಮುಖಾಮುಖಿ, ಕ್ರಿಕೆಟ್ ಅಭಿಮಾನಿಗಳ ತುಡಿತ ಹೆಚ್ಚಾಗುವಂತೆ ಮಾಡಿದೆ. ಇದಕ್ಕೆ ಕಾರಣ 3 ತಿಂಗಳ ಹಿಂದಿನ ನೆನಪು ಮರುಕಳಿಸಿರೋದು. ಅದೇನು?.
ಅದೇ ಹೈವೋಲ್ಟೇಜ್ ಫೀವರ್, ಅದೇ ಮದಗಜಗಳ ಕಾದಾಟ, ಅದೇ ಎನರ್ಜಿ. ಈ ಸಲ ಯಾರಿಗೆ ವಿಶ್ವಕಪ್ ಗರಿ? ಪ್ರತಿ ಕ್ರಿಕೆಟ್ ಪ್ರೇಮಿಯ ಮನದ ಮಾತು. ಇದಕ್ಕೆ ಕಾರಣ ನವೆಂಬರ್ 19ರಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಕಾದಾಟ.
ಈ ಫೈನಲ್ ಫೈಟ್ ಮುಗಿದು 3 ತಿಂಗಳು ಕಳೆದಿವೆ. ಆದ್ರೀಗ ಅಂಥದ್ದೇ ಹೈವೋಲ್ಟೇಜ್ ಕದನಕ್ಕೆ ಇದೇ ಮದಗಜಗಳು ಸಾಕ್ಷಿಯಾಗ್ತಿವೆ. ಆದ್ರೆ, ಈ ಸಲ ಇವರ ಕಾಳಗ ನಡೀತಿರೋದು ಕಿರಿಯರ ವಿಶ್ವ ಕಿರೀಟಕ್ಕಾಗಿ.
ಯಾರಿಗೆ ಅಂಡರ್-19 ವಿಶ್ವಕಪ್ ಕಿರೀಟ..?
ಕಿರಿಯರ ವಿಶ್ವಕಪ್ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗ್ತಿದ್ದು, ಉಭಯ ತಂಡಗಳ ಮುಖಾಮುಖಿಗೆ ವಿಲೋಮೂರ್ ಪಾರ್ಕ್ ವೇದಿಕೆಯಾಗಿದೆ. ಲೀಗ್ನಿಂದ ಫೈನಲ್ ತನಕ ಸೋಲನ್ನೇ ಅರಿಯದ ಉಭಯ ತಂಡಗಳಲ್ಲಿ ಯಾರು ಅಜೇಯ ಓಟ ಮುಂದುವರಿಸ್ತಾರೆ ಎಂಬ ಕುತೂಹಲ ಗರಿಗೆದರಿದೆ.
ಯೆಲ್ಲೋ ಆರ್ಮಿಯನ್ನ ಕಡೆಗಣಿಸುವಂತಿಲ್ಲ ಭಾರತ..!
ಹಿರಿಯರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಪಾರುಪತ್ಯ ಮೆರೆದ್ರೆ. ಕಿರಿಯರ ವಿಶ್ವಕಪ್ ಇತಿಹಾಸದಲ್ಲಿ ಟೀಮ್ ಇಂಡಿಯಾ, 5 ಬಾರಿ ಚಾಂಪಿಯನ್ ಆಗಿ ಮೆರೆದಾಡಿದೆ. 3 ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆ ಮೂಲಕ ಕಿರಿಯರ ವಿಶ್ವಕಪ್ನಲ್ಲಿ ಪಾರುಪತ್ಯ ಮೆರೆಯುತ್ತಾ ಬಂದಿದೆ. ಇದೀಗ 6ನೇ ಬಾರಿಗೆ ಟ್ರೋಫಿ ಗೆಲ್ಲೋ ಉತ್ಸಾಹದಲ್ಲಿರುವ ಉದಯ್ ಸಹರಾನ್ ನಾಯಕತ್ವದ ಭಾರತ ಕೂಡ ಟ್ರೋಫಿ ಗೆಲ್ಲೋ ಹಾಟ್ ಫೇವರೇಟ್ ಆಗಿದೆ. ಆದ್ರೆ, ಎದುರಾಳಿ ಆಸ್ಟ್ರೇಲಿಯನ್ನರನ್ನ ಯಾವುದೇ ಕಾರಣಕ್ಕೆ ಲೈಟ್ ಆಗಿ ತೆಗೆದುಕೊಳ್ಳುವಂತೆಯೇ ಇಲ್ಲ.
ಯಾಕಂದ್ರೆ, ಕಿರಿಯರ ವಿಶ್ವಕಪ್ನಲ್ಲಿ ಭಾರತ ಬಳಿಕ ಮೋಸ್ಟ್ ಸಕ್ಸಸ್ಫುಲ್ ಟೀಮ್ ಆಸ್ಟ್ರೇಲಿಯಾ ಆಗಿದೆ. ಅಷ್ಟೇ ಅಲ್ಲ, ಪ್ರಸಕ್ತ ಟೂರ್ನಿಯಲ್ಲಿ ಭಾರತದಂತೆ ಆಸ್ಟ್ರೇಲಿಯಾ ಸೋಲಿಲ್ಲದ ಸರದಾರ. ಇದಕ್ಕಿಂತ ಮಿಗಿಲಾಗಿ ಸೌತ್ ಆಫ್ರಿಕನ್ ಕಂಡೀಷನ್ಸ್ ಆಸ್ಟ್ರೇಲಿಯನ್ಸ್ಗೆ ಫೇವರ್ ಆಗಿದೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.
3ನೇ ಬಾರಿ ಭಾರತ-ಆಸಿಸ್ ಫೈನಲ್ಸ್ನಲ್ಲಿ ಮುಖಾಮುಖಿ..!
ಸೌತ್ ಆಫ್ರಿಕನ್ ಕಂಡೀಷನ್ಸ್ ಆಸ್ಟ್ರೇಲಿಯನ್ಸ್ಗೆ ವರದಾನವಾಗಿದ್ರು ಫೈನಲ್ಸ್ನಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯನ್ಸ್ ಎದುರು ಸೋತ ಮಾತೇ ಇಲ್ಲ. 2012, 2018ರ ವಿಶ್ವಕಪ್ ಫೈನಲ್ಗಳಲ್ಲಿ ಆಸ್ಟ್ರೇಲಿಯಾವನ್ನ ಬಗ್ಗು ಬಡಿದಿದ್ದ ಭಾರತ, ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದೆ. ಆದ್ರೆ, ಅತ್ತ ಪಾಕ್ ಎದುರು ಫೈನಲ್ಗೇರಿದ ಆಸ್ಟ್ರೇಲಿಯಾ, ಈ ಹಿಂದಿನ ಸೋಲುಗಳ ಸೇಡಿಗೆ ಕಾಯ್ತಿದೆ. ಆ ಮೂಲಕ 14 ವರ್ಷಗಳ ಟ್ರೋಫಿ ಬರ ನೀಗಿಸಿಕೊಳ್ಳುವ ಲೆಕ್ಕಚಾರದಲ್ಲಿದೆ.
ಆಸ್ಟ್ರೇಲಿಯಾ ಎದುರು ತೀರಿಸಿಕೊಳ್ಳುತ್ತಾ ರಿವೆಂಜ್..?
ಕಿರಿಯರ ವಿಶ್ವಕಪ್ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿ, ಪುರುಷರ ಒನ್ಡೆ ವಿಶ್ವಕಪ್ ಫೈನಲ್ ಪಂದ್ಯದ ನೆನಪು ಮರುಕಳಿಸುವಂತೆ ಮಾಡಿದೆ. ಅಜೇಯವಾಗಿ ಫೈನಲ್ಗೇರಿದ್ದ ರೋಹಿತ್ ನಾಯಕತ್ವದ ಟೀಮ್ ಇಂಡಿಯಾ, ಆಸಿಸ್ ಎದುರು ಮುಗ್ಗರಿಸಿತ್ತು. ಇದೀಗ ಕಾತಕಾಳೀಯ ಎಂಬಂತೆ ಅಜೇಯವಾಗಿಯೇ ಕಿರಿಯರ ತಂಡ ಪ್ರವೇಶಿಸಿದೆ. ಹೀಗಾಗಿ 3 ತಿಂಗಳ ಹಿಂದಿನ ಸೇಡು ತೀರಿಸಿಕೊಳ್ಳುವ ಸುವರ್ಣಾವಕಾಶವೀಗ ಯುವ ಭಾರತದ ಮುಂದಿದೆ.
ಈ ಯುವ ಆಟಗಾರರ ಮೇಲೆಯೇ ನಿರೀಕ್ಷೆಯ ಭಾರ!
ಈ ಟೂರ್ನಿಯಲ್ಲಿ ಆಸಿಸ್ ಪ್ರದರ್ಶನಕ್ಕೆ ಹೋಲಿಸಿದ್ರೆ, ಟೀಮ್ ಇಂಡಿಯಾ ಆಟಗಾರರ ಪರ್ಫಾಮೆನ್ಸ್ ನಿಜಕ್ಕೂ ಟಾಪ್ ಕ್ಲಾಸ್. ಅಷ್ಟೇ ಅಲ್ಲ, ವೈಯಕ್ತಿಕವಾಗಿಯೂ ರನ್ ಹೊಳೆಯನ್ನೇ ಭಾರತೀಯ ಆಟಗಾರರು ಹರಿಸಿದ್ದಾರೆ. ಟಾಪ್-3 ರನ್ ಸ್ಕೋರರ್ಗಳಾಗಿ ನಾಯಕ ಉದಯ್ ಸಹರಾನ್, ಮುಶೀರ್ ಖಾನ್, ಸಚಿನ್ ದಾಸ್ ಹೊರಹೊಮ್ಮಿದ್ದಾರೆ. ವಿಕೆಟ್ ಟೇಕರ್ ಲಿಸ್ಟ್ನಲ್ಲೂ ಸೌಮ್ಯ ಕುಮಾರ್ ಪಾಂಡೆ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಇವರಿಂದ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮಿದ್ರೆ, 6ನೇ ಬಾರಿಗೆ ವಿಶ್ವಕಪ್ ಕಿರೀಟಕ್ಕೆ ಮುತ್ತಿಡುವಲ್ಲಿ ಅನುಮಾನವೇ ಇಲ್ಲ.
2023ರ ಪುರುಷರ ಏಕದಿನ ವಿಶ್ವಕಪ್ನ ನೆನಪು ಮತ್ತೆ ಮರುಕಳಿಸಿದ್ದು. ಆ ಸೋಲಿನ ಸೇಡು ತೀರಿಸಿಕೊಳ್ಳಲಿ ಅನ್ನೋದೇ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಶಯ
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ