/newsfirstlive-kannada/media/post_attachments/wp-content/uploads/2025/03/IND-vs-AUS-2.jpg)
ಒಂದೇ ಹೆಜ್ಜೆ.. ಒಂದೇ ಗುರಿ.. ಅದೇ ಚಾಂಪಿಯನ್ಸ್ ಟ್ರೋಫಿಯ ಫೈನಲ್.. ಇಡೀ ಜಗತ್ತಿಗೆ ಇಂದು ನಡೆಯೋ ಪಂದ್ಯ ಸೇಮಿಸ್​ ಸಮರ. ಆದ್ರೆ ಟೀಮ್ ಇಂಡಿಯಾ ಹಾಗೂ ಭಾರತೀಯ ಕ್ರಿಕೆಟ್​ ಅಭಿಮಾನಿಗಳ ಪಾಲಿಗಿದು ಸೇಡಿನ ಸಮರ. ಅವತ್ತಿನ ಕರಾಳ ದಿನದ ನೋವನ್ನ ಬಡ್ಡಿ ಸಮೇತ ಲೆಕ್ಕ ಚುಕ್ತಾ ಮಾಡೋ ಪಂದ್ಯ!
19, ನವೆಂಬರ್ 2023
ಈ ಕಹಿ ದಿನ ಯಾರ್​ ತಾನೇ ಮರೀತಾರೆ. ಇಡೀ ಭಾರತೀಯ ಕ್ರಿಕೆಟ್​ ಲೋಕ ಅಂದು ಮರುಗಿತ್ತು. ಏಕದಿನ ವಿಶ್ವಕಪ್​​ ಫೈನಲ್​​ನಲ್ಲಿ ಸೋಲಿನ ಹತಾಶೆ ಭಾರತವನ್ನು ಆವರಿಸಿತ್ತು. ಅದು ದುಖಃದ ಭಾವದಲ್ಲಿ ಅಭಿಮಾನಿಗಳ ಹೃದಯ ಭಾರವಾಗಿದ್ದ ದಿನ. 140 ಕೋಟಿ ಕೊಟ್ಯಂತರ ಜನರ ಕನಸು ಛಿದ್ರವಾಗಿದ್ದ ದಿನ.. ಟೂರ್ನಿಯಲ್ಲಿ ಅಜೇಯ ಓಟ ನಡೆಸಿ ಫೈನಲ್​​ನಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಎದುರು ಮುಗ್ಗರಿಸಿದ್ದ ದಿನ.
ಇದನ್ನೂ ಓದಿ:ಅಭಿಮಾನಿಗಳಿಗೆ ಒಳ್ಳೆ ಸಿಹಿ ಸುದ್ದಿ.. ಸೆಮೀಸ್ ಗೆಲ್ಲೋ ಫೇವರಿಟ್ ತಂಡ ಯಾವುದು?
/newsfirstlive-kannada/media/post_attachments/wp-content/uploads/2025/03/IND-vs-AUS-1.jpg)
ಭಾರತದ ಅಭಿಮಾನಿಗಳ ಮುಂದೆ ಆಸ್ಟ್ರೇಲಿಯನ್ನರು ಸಂಭ್ರಮದಲ್ಲಿ ತೇಲಾಡುತ್ತಿದ್ದರೆ. ಟೀಮ್ ಇಂಡಿಯಾ ಆಟಗಾರರು ಕಣ್ಣೀರಾಕಿದ್ರು. 140 ಕೋಟಿ ಭಾರತೀಯರ ಮನಸ್ಸು ಗೆಲ್ಲಲಾಗಲಿಲ್ಲವೆಂಬ ಕೊರಗಿನಲ್ಲಿ ತಲೆ ತಗ್ಗಿಸಿ ಡ್ರೆಸ್ಸಿಂಗ್ ರೂಮ್​ ಸೇರಿದ್ರು. ಅಂದು ಟೀಮ್ ಇಂಡಿಯಾ ಆಟಗಾರರ ಮುಖದಲ್ಲಿದ್ದ ಹತಾಶೆ, ನೋವು ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ.
ಈ ಕರಾಳ ಅಧ್ಯಾಯ ಇತಿಹಾಸದ ಪುಟ ಸೇರಿದೆ. ಈ ಕರಾಳ ಇತಿಹಾಸಕ್ಕೆ 1 ವರ್ಷ, 3 ತಿಂಗಳು 13 ದಿನಗಳು ಕಳೆದಿವೆ. ಇದೀಗ ಸೋಲಿನ ಸೇಡು ತೀರಿಸಿಕೊಳ್ಳುವ ಟೈಮ್​​​​​​​​​​​​ ಟೀಮ್ ಇಂಡಿಯಾಗೆ ಬಂದಿದೆ.
ಇವತ್ತು ಸೇಡಿನ ಸಮರ..!
ಚಾಂಪಿಯನ್ಸ್​ ಟ್ರೋಫಿಯ ಸೆಮಿಫೈನಲ್​ನಲ್ಲಿ ಟೀಮ್ ಇಂಡಿಯಾ-ಆಸ್ಟ್ರೇಲಿಯಾ ಮುಖಾಮುಖಿಯಾಗ್ತಿವೆ. ಒಂದೂವರೆ ವರ್ಷಗಳ ನಂತರ 2023ರ ODI ವಿಶ್ವಕಪ್ ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳುವ ಸುವರ್ಣಾವಕಾಶ ಟೀಮ್ ಇಂಡಿಯಾಗೆ ಸಿಕ್ಕಿದೆ. ಪ್ರತೀಕಾರ ತೀರಿಸಿಕೊಳ್ಳಲು ಸನ್ನದ್ಧರಾಗಿರುವ ಆಟಗಾರರು, ದುಬೈನಲ್ಲಿ ಕಾಂಗರೂಗಳನ್ನು ಖಲ್ಲಾಸ್ ಮಾಡೋಕೆ ರೆಡಿಯಾಗಿದ್ದಾರೆ. ಈ ಮೂಲಕ 140 ಕೋಟಿ ಭಾರತೀಯರ ಕನಸು ನನಸಾಗಿಸಲು ಪಣತೊಟ್ಟಿದ್ದಾರೆ. ಈ ನಿಟ್ಟಿನಲ್ಲೇ ಟೀಮ್ ಇಂಡಿಯಾ ರಣತಂತ್ರ ರೂಪಿಸಿದೆ.
ಕಮಿನ್ಸ್ ಮಾತು ಇವತ್ತು ನೆನಪಿಸಬೇಕಿದೆ..
130 ಕೋಟಿ ಮಂದಿ ಟೀಮ್ ಇಂಡಿಯಾನ ಬೆಂಬಲಿಸುತ್ತಾರೆ. ಟೂರ್ನಿಯಲ್ಲಿ ಉತ್ತಮ ಆಟವಾಡಿರುವ ಟೀಮ್ ಇಂಡಿಯಾ, ಅಜೇಯವಾಗಿ ಫೈನಲ್ ತಲುಪಿದೆ. ಕ್ರೀಡೆಯಲ್ಲಿ ಎದುರಾಳಿ ತಂಡದ ಅಭಿಮಾನಿಗಳ ಬಾಯಿ ಮುಚ್ಚಿಸುವುದಕ್ಕಿಂತಲೂ ತೃಪ್ತಿಕರ ವಿಚಾರ ಮತ್ತೊಂದು ಇಲ್ಲ. ಅದು ನಮ್ಮ ಗುರಿ-ಪ್ಯಾಟ್ ಕಮಿನ್ಸ್
ಆಸ್ಟ್ರೇಲಿಯನ್ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್​, ಏಕದಿನ ವಿಶ್ವಕಪ್​ನ ಫೈನಲ್ ಪಂದ್ಯಕ್ಕೂ ಮುನ್ನ ಪ್ರೆಸ್​ ಕಾನ್ಪರೆನ್ಸ್​ನಲ್ಲಿ ಹೇಳಿದ ಮಾತಿದು. ಪ್ರೆಸ್​ಮೀಟ್​ನಲ್ಲಿ ಆಡಿದ್ದ ಇದೇ ಮಾತನ್ನು ಆಸ್ಟ್ರೇಲಿಯನ್ಸ್​ ಆನ್​​ಫೀಲ್ಡ್​ನಲ್ಲಿ ಮಾಡಿ ತೋರಿಸಿದರು. ಇದೀಗ ಈ ಮಾತನ್ನ ಆಸ್ಟ್ರೇಲಿಯನ್ಸ್​ಗೆ ಟೀಮ್​ ಇಂಡಿಯನ್ಸ್​ ನೆನಪಿಸಬೇಕಿದೆ. 140 ಕೋಟಿ ಮಂದಿಯ ಮೌನಕ್ಕೆ ತೃಪ್ತಿಯ ಪ್ರತೀಕಾರ ಹೇಗಿರುತ್ತೆ ಅನ್ನೋದನ್ನ ತೋರಿಸಬೇಕಿದೆ.
ಇದನ್ನೂ ಓದಿ: Semifinals: ದುಬೈ ಪಿಚ್​ನಲ್ಲಿ ಭಾರೀ ಬದಲಾವಣೆ.. ಟೀಂ ಇಂಡಿಯಾಗೆ ಸಮಸ್ಯೆ ಹೆಚ್ಚಾಗಲಿದೆ..!
/newsfirstlive-kannada/media/post_attachments/wp-content/uploads/2025/03/India-Travis-Head.jpg)
ಕಾಂಗರೂ ಕನಸು ಭಗ್ನಗೊಳಿಸುವುದೇ ಗುರಿ
ಅಂದು ಭಾರತೀಯ ಅಭಿಮಾನಿಗಳನ್ನು ಸೈಲೆಂಟ್ ಮಾಡೋದೇ ಗುರಿ ಎಂದಿದ್ದ ಆಸ್ಟ್ರೇಲಿಯನ್ ಕ್ಯಾಪ್ಟನ್​​​​​​​, ನಂತರ ಮೆರೆದಾಡಿದ್ದರು. ಇದೀಗ ಆ ಆಸ್ಟ್ರೇಲಿಯಾ ಪಡೆ​ 17 ವರ್ಷದ ಬಳಿಕ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಫೈನಲ್​ಗೇರೋ ಕನಸು ಕಾಣ್ತಿದೆ. ಈ ಕನಸು ಭಗ್ನಗೊಳಿಸುವುದೇ ಟೀಮ್ ಇಂಡಿಯಾದ ಗುರಿಯಾಗಿದೆ.
ಇಂಡಿಯಾನೇ ಗೆಲ್ಲೋ ಫೇವರಿಟ್
ಇವತ್ತು 143 ಕೋಟಿ ಭಾರತೀಯರ ಕನಸು ಈಡೇರಲಿದೆ. ಲೀಗ್​ ಸ್ಟೇಜ್​ನಲ್ಲಿ ಅನ್​ಸ್ಟಾಪಬಲ್ ಆಗಿ ಮುನ್ನುಗ್ಗಿರೋ​ ಟೀಮ್ ಇಂಡಿಯಾನೇ, ಗೆಲ್ಲೋ ಹಾಟ್ ಫೇವರಿಟ್ಸ್​. ದುಬೈ ಸ್ಟೇಡಿಯಂನ ಅಡ್ವಾಂಟೇಜ್ ಹಾಗೂ ಟೀಮ್ ಇಂಡಿಯಾಗಿರೋ ಸ್ಪಿನ್ ಬಲ. ಈ ಎರಡು ಸಾಕು ಆಸಿಸ್​ನ ಉಡೀಸ್​ ಮಾಡೋಕೆ. ದುಬೈ ಪ್ಲೇಯಿಂಗ್​ ಕಂಡಿಷನ್ಸ್​ಗೆ ಒಗ್ಗಿಕೊಂಡಿರೋದು ಟೀಮ್​ ಇಂಡಿಯಾಗೆ ಬಿಗ್​ ಅಡ್ವಾಂಟೇಜ್​. ಜೊತೆಗೆ ಆಸ್ಟ್ರೇಲಿಯಾಗೆ ಸ್ಪಿನ್ ವಿಕ್ನೇಸ್ ಇದೆ. ಹೀಗಾಗಿ ರೋಹಿತ್​ ಪಡೆ ಗೆಲ್ಲೋ ಹಾಟ್​ ಫೇವರಿಟ್​ ಎನಿಸಿಕೊಂಡಿದೆ. ಸೇಮಿಸ್​ ಸಮರದಲ್ಲಿ ಏಕದಿನ ವಿಶ್ವಕಪ್​ನ ಫೈನಲ್​​ ಸೋಲಿಗೆ ಪ್ರತೀಕಾರದೊಂದಿಗೆ 143 ಕೋಟಿ ಭಾರತೀಯರ ಕನಸು ಈಡೇರಿಸೋಕೆ ಇದಕ್ಕಿಂದ ಬೆಸ್ಟ್​ ಟೈಮ್​ ಇಲ್ಲ.
ಇದನ್ನೂ ಓದಿ: IND vs AUS ಸೆಮಿ ಫೈನಲ್; ಪಿಚ್ ರಿಪೋರ್ಟ್​ ಹೇಗಿದೆ..? ಯಾರಿಗೆ ಹೆಚ್ಚು ಲಾಭ..?
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us