/newsfirstlive-kannada/media/post_attachments/wp-content/uploads/2025/02/TEAM-INDIA-2.jpg)
ಬಹುನಿರೀಕ್ಷಿತ ಚಾಂಫಿಯನ್ಸ್ ಟ್ರೋಫಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಇವತ್ತಿನಿಂದ ಟೀಮ್ ಇಂಡಿಯಾದ ಮಿನಿ ವಿಶ್ವಕಪ್ ದಂಗಲ್ ಕಿಕ್ ಸ್ಟಾರ್ಟ್ ಆಗಲಿದ್ದು, ಮೊದಲ ಪಂದ್ಯದಲ್ಲಿ ಬಾಂಗ್ಲಾ ಟೈಗರ್ಸ್ ಎದುರು ಸೆಣಸಾಡಲು ಸನ್ನದ್ಧವಾಗಿದೆ. ಬಾಂಗ್ಲಾ ಟೈಗರ್ಸ್ ಚೊಚ್ಚಲ ಟ್ರೋಫಿ ಕನಸಿನಲ್ಲಿ ಕಣಕ್ಕಿಳಿಯುತ್ತಿದ್ರೆ, ಟಿ20 ಚಾಂಪಿಯನ್ ಟೀಮ್ ಇಂಡಿಯಾ 12 ವರ್ಷದ ಬಳಿಕ ಚಾಂಪಿಯನ್ಸ್ ಟ್ರೋಫಿಯ ಚಾಂಪಿಯನ್ ಆಗೋ ಉತ್ಸಾಹದಲ್ಲಿ ಬ್ಯಾಟಲ್ ಫೀಲ್ಡ್ಗೆ ಇಳಿಯುತ್ತಿದೆ.
ರೋಹಿತ್, ವಿರಾಟ್ ಇಂಪಾರ್ಟೆಂಟ್
ರೋಹಿತ್, ವಿರಾಟ್ ಕೊಹ್ಲಿ ಟ್ರೋಫಿಯ ಸೆಂಟರ್ ಆಫ್ ಅಟ್ರಾಕ್ಷನ್. ಕೊನೆ ಚಾಂಪಿಯನ್ಸ್ ಟ್ರೋಫಿಯನ್ನಾಡ್ತಿರುವ ಇವರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಇಂಗ್ಲೆಂಡ್ ಎದುರು ಫಾರ್ಮ್ಗೆ ಮರಳಿದ್ದ ರೋಹಿತ್, ವಿರಾಟ್ ಕೊಹ್ಲಿ, ಟೂರ್ನಿಯುದ್ದಕ್ಕೂ ಅದೇ ಫಾರ್ಮ್ ಮುಂದುವರಿಸಬೇಕಿದೆ. ಮುಖ್ಯವಾಗಿ ಯುವ ಆಟಗಾರರನ್ನ ಜೊತೆಯಾಗಿ ಕರೆದೊಯ್ದುವ ಜವಾಬ್ದಾರಿಯೂ ಇದೆ.
ಇದನ್ನೂ ಓದಿ: ಸಂಜು ಸ್ಯಾಮ್ಸನ್ಗೆ ಬಿಸಿಸಿಐನಿಂದ ಬುಲಾವ್; ಸ್ಟಾರ್ ಕ್ರಿಕೆಟರ್ಗೆ ಸುವರ್ಣಾವಕಾಶ
5ನೇ ಸ್ಲಾಟ್ನಲ್ಲಿ ಯಾರು?
ಟೀಮ್ ಇಂಡಿಯಾ ಆರಂಭಿಕರಾಗಿ ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಕಣಕ್ಕಿಳಿದ್ರೆ, 3ನೇ ಕ್ರಮಾಂಕದಲ್ಲಿ ವಿರಾಟ್, 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಬ್ಯಾಟ್ ಬೀಸುವುದು ಕನ್ಫರ್ಮ್. ಟೀಮ್ ಇಂಡಿಯಾಗೆ ಈಗ ಕಾಡ್ತಿರುವ ಪ್ರಶ್ನೆ 5ನೇ ಸ್ಲಾಟ್. ಟಾಪ್-5ನಲ್ಲಿ ಲೆಫ್ಟಿ ಬ್ಯಾಟರ್ ಇಲ್ಲ ಎಂಬ ಕಾರಣಕ್ಕೆ ಇಂಗ್ಲೆಂಡ್ ಸರಣಿಯಲ್ಲಿ ಅಕ್ಷರ್ ಪಟೇಲ್ನ ಮ್ಯಾನೇಜ್ಮೆಂಟ್ ಪ್ರಯೋಗಿಸಿದ್ರು. ಅಕ್ಷರ್ ಒಳ್ಳೆ ಪರ್ಫಾಮೆನ್ಸ್ ನೀಡಿರೋದ್ರಿಂದ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೆ.ಎಲ್.ರಾಹುಲ್ನ ಪ್ರಮೋಟ್ ಮಾಡಬೇಕಾ? 6ನೇ ಸ್ಲಾಟ್ನಲ್ಲಿ ಆಡಿಸಬೇಕಾ ಅನ್ನೋ ಪ್ರಶ್ನೆ ಕಾಡ್ತಿದೆ.
ಕುಲ್ದೀಪ್ vs ವರುಣ್?
ಫಾಸ್ಟ್ ಬೌಲಿಂಗ್ ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಫಿಕ್ಸ್. ಸ್ಪಿನ್ ಆಲ್ರೌಂಡರ್ಗಳಾಗಿ ರವೀಂದ್ರ ಜಡೇಜಾ, ಆಕ್ಷರ್ ಪಟೇಲ್ ಆಡೇ ಆಡ್ತಾರೆ. ಸ್ಪೆಷಲಿಸ್ಟ್ ಸ್ಪಿನ್ನರ್ ಕೋಟಾದಲ್ಲಿ ಸ್ಥಾನಕ್ಕೆ ಕುಲ್ದೀಪ್, ವರುಣ್ ಚಕ್ರವರ್ತಿ ನಡುವೆ ಫೈಟ್ ಇದೆ. ಈ ಸ್ಥಾನಕ್ಕೆ ಕುಲ್ದೀಪ್ ಪ್ರಬಲ ಸ್ಪರ್ಧಿಯೇ ಆಗಿದ್ರೂ, ಗುರು ಗಂಭೀರ್ ಕೃಪಾಕಟಾಕ್ಷ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಮೇಲಿದೆ. ಅಂತಿಮ ಕ್ಷಣದಲ್ಲಿ ಯಾರಿಗೆ ಸ್ಥಾನ ನೀಡ್ತಾರೆ ಅನ್ನೋದು ಕಾದು ನೋಡಬೇಕಿದೆ.
ಪೇಸ್ ಬೌಲಿಂಗ್ ಕಾಂಬಿನೇಷನ್!
ಬೂಮ್ರಾ ಇಲ್ಲದ ಬೌಲಿಂಗ್ ಅಟ್ಯಾಕ್ ಬಡವಾಗಿ ಕಾಣ್ತಿದೆ. ಪೇಸ್ ಅಟ್ಯಾಕ್ ಲೀಡ್ ಮಾಡೋ ಜವಾಬ್ದಾರಿ ಅನುಭವಿ ಶಮಿ ಮೇಲಿದೆ. ಶಮಿ ಜೊತೆಗೆ ಅರ್ಷ್ದೀಪ್ ಸಿಂಗ್ ಚೆಂಡು ಹಂಚಿಕೊಳ್ಳೋದು ಕನ್ಫರ್ಮ್. ದುಬೈ ಕಂಡೀಷನ್ಸ್ನಲ್ಲಿ ಆಡಿರೋ ಅನುಭವ ಆರ್ಷ್ದೀಪ್ಗಿದೆ. ಜೊತೆಗೆ ಲೆಫ್ಟ್ ರೈಟ್ ಕಾಂಬಿನೇಷನ್ ತಂಡಕ್ಕೆ ಸಹಕಾರಿಯೂ ಆಗುತ್ತೆ. ಗಂಭಿರ್ ಒಲವು ಪ್ರೀತಿಯ ಶಿಷ್ಯ ಹರ್ಷಿತ್ ರಾಣಾ ಮೇಲಿದೆ. ಈ ಕಾರಣಕ್ಕೆ ಯಾರ್ ಆಡ್ತಾರೆ ಅನ್ನೋ ಕುತೂಹಲ ಫ್ಯಾನ್ಸ್ಗೆ ಇದೆ.
ಇದನ್ನೂ ಓದಿ: ಫೋನ್ ಕಳೆದು ಹೋದರೆ ಯಾವುದೇ ಚಿಂತೆ ಬೇಡ! ಕಳ್ಳನನ್ನು ಹುಡುಕೋದು ಬಹಳ ಸುಲಭ
ಪಿಚ್ ಲಾಭ ಪಡೆಯಬೇಕು
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಅಂಡರ್-19 ವಿಶ್ವಕಪ್, International League T20ಯ 15 ಪಂದ್ಯಗಳು ನಡೆದಿದೆ. ಐಸಿಸಿ ಈವೆಂಟ್ಗಾಗಿಯೇ ಎರಡು ಪಿಚ್ಗಳನ್ನು ಫ್ರೆಷ್ ಆಗಿಯೇ ಉಳಿಸಿದೆ. ಇದೇ ಫ್ರೆಷ್ ಪಿಚ್ಗಳಲ್ಲೇ ಟೀಮ್ ಇಂಡಿಯಾ ಆಡಲಿದೆ ಎನ್ನಲಾಗ್ತಿದೆ. ಬ್ಯಾಟಿಂಗ್ ಜೊತೆಗೆ ಬೌಲಿಂಗ್ಗೂ ಈ ಪಿಚ್ ಸಹಕಾರಿಯಾಗಲಿದ್ದು, ಲಾಭವನ್ನು ಟೀಮ್ ಇಂಡಿಯಾ ಎನ್ಕ್ಯಾಶ್ ಮಾಡಿಕೊಳ್ಳಬೇಕಿದೆ.
ಗಂಭೀರ್-ರೋಹಿತ್ ಸಾಮರ್ಥ್ಯಕ್ಕೆ ಅಗ್ನಿ ಪರೀಕ್ಷೆ
ಹೆಡ್ ಕೋಚ್ ಗಂಭೀರ್, ಕ್ಯಾಪ್ಟನ್ ರೋಹಿತ್ಗೆ ಚಾಂಪಿಯನ್ಸ್ ಟ್ರೋಫಿ ನಿಜಕ್ಕೂ ಅಗ್ನಿಪರೀಕ್ಷೆಯ ಕಣವಾಗಿದೆ. ದ್ರಾವಿಡ್ ನೇತೃತ್ವದಲ್ಲಿ ಏಕದಿನ ವಿಶ್ವಕಪ್ ರನ್ನರ್ಸ್ ಆಗಿದ್ದ ಟೀಮ್ ಇಂಡಿಯಾ, ಟಿ20 ವಿಶ್ವಕಪ್ ಗೆದ್ದು ಬೀಗಿತ್ತು. ಇದೀಗ ಚಾಂಪಿಯನ್ಸ್ ಟ್ರೋಫಿ ಕಣಕ್ಕಿಳಿತಿರೋ ಟೀಮ್ ಇಂಡಿಯಾ ಗೆಲುವಿನ ದಾರಿಯಲ್ಲಿ ಮುನ್ನಡೆಸಬೇಕಾದ ಬಿಗ್ ಚಾಲೆಂಜ್ ಕ್ಯಾಪ್ಟನ್ ರೋಹಿತ್, ಕೋಚ್ ಗಂಭೀರ್ ಮುಂದಿದೆ.
ಟಿ20 ಚಾಂಪಿಯನ್ಸ್ ಆಗಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಟೀಮ್ ಇಂಡಿಯಾ ಕಣಕ್ಕಿಳಿಯಲಿ ಸಜ್ಜಾಗಿದೆ. ಮತ್ತೊಂದು ಐಸಿಸಿ ಟ್ರೋಫಿ ಕಿರೀಟದೊಂದಿಗೆ ರೋಹಿತ್ ಪಡೆ ತಾಯ್ನಾಡಿಗೆ ಮರಳಲಿ ಅನ್ನೋದೇ ಭಾರತೀಯರ ಆಶಯ.
ಇದನ್ನೂ ಓದಿ: ಹುಂಜಾ ವಿರುದ್ಧ ರೊಚ್ಚಿಗೆದ್ದ ವೃದ್ಧ; ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು.. ಮುಂದೆ ಆಗಿದ್ದೇನು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್