ಟೀಂ ಇಂಡಿಯಾದಲ್ಲಿ ಕಠಿಣ ನಿರ್ಧಾರ.. ಕೊಹ್ಲಿಯನ್ನೇ ಆಟದಿಂದ ಹೊರಗಿಟ್ಟ ರೋಹಿತ್..!

author-image
Bheemappa
Updated On
ಟೀಂ ಇಂಡಿಯಾದಲ್ಲಿ ಕಠಿಣ ನಿರ್ಧಾರ.. ಕೊಹ್ಲಿಯನ್ನೇ ಆಟದಿಂದ ಹೊರಗಿಟ್ಟ ರೋಹಿತ್..!
Advertisment
  • ಹರ್ಷಿತ್, ಜೈಸ್ವಾಲ್ ಏಕದಿನ ಪಂದ್ಯಕ್ಕೆ ಪದಾರ್ಪಣೆ
  • ಕುಲ್ದೀಪ್ ಯಾದವ್, ತಂಡಕ್ಕೆ ಶಮಿ ಕಂಬ್ಯಾಕ್
  • ಅರ್ಷದೀಪ್​ಗೆ ಇಲ್ಲ ಸ್ಥಾನ, ಯಾರೆಲ್ಲ ಇದ್ದಾರೆ?

ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋಶ್ ಬಟ್ಲರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟೀಮ್ ಇಂಡಿಯಾ ಫೀಲ್ಡಿಂಗ್​ಗೆ ಆಗಮಿಸಲಿದೆ.

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಂಗ್ಲೆಂಡ್ ಟೀಮ್ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಫೀಲ್ಡಿಂಗ್​ ಮಾಡಲು ಮೈದಾನಕ್ಕೆ ಬರಲಿದೆ. ಇನ್ನು ತಂಡದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆಗಳನ್ನು ಮಾಡಲಾಗಿದ್ದು ಸ್ಟಾರ್ ಕ್ರಿಕೆಟರ್​ ಕೊಹ್ಲಿಗೆ ಮೊದಲ ಪಂದ್ಯದಿಂದ ಕೊಕ್ ಕೊಡಲಾಗಿದೆ.

publive-image

ಇದನ್ನೂ ಓದಿ:ದಿಢೀರ್​ ಡಿಕೆಶಿ ಭೇಟಿಯಾಗಿ ಕಾರಲ್ಲಿ ಸುದೀಪ್ ಜೊತೆ ತೆರಳಿದ ನಲಪಾಡ್; ಭಾರೀ ಕುತೂಹಲ​

ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಹಾಗೂ ಹರ್ಷಿತ್ ರಾಣಾ ಇದೇ ಮೊದಲ ಬಾರಿಗೆ ಏಕದಿನ ಪಂದ್ಯಕ್ಕೆ ಡೆಬ್ಯು ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧವೇ ತಮ್ಮ ಮೊದಲ ಅಂತರರಾಷ್ಟ್ರೀಯ ಏಕದಿನ ಪಂದ್ಯವನ್ನು ಯಶಸ್ವಿ ಜೈಸ್ವಾಲ್ ಹಾಗೂ ಹರ್ಷಿತ್ ರಾಣಾ ಆಡುತ್ತಿದ್ದಾರೆ. ಭಾರತದ ಪರ ಓಪನರ್ ಆಗಿ ನಾಯಕ ರೋಹಿತ್ ಶರ್ಮಾ ಹಾಗೂ ಜೈಸ್ವಾಲ್ ಕ್ರೀಸ್​ಗೆ ಆಗಮಿಸುವರು. ಇನ್ನು ಭಾರತದ 11ರ ಬಳಗದಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನ ನೀಡಿಲ್ಲ. ಕೊಹ್ಲಿ ಅವರ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಅಥವಾ ಶುಭ್​ಮನ್ ಗಿಲ್​ ಬ್ಯಾಟಿಂಗ್​ಗೆ ಆಗಮಿಸಲಿದ್ದಾರೆ. ಅದರಂತೆ ವಿಕೆಟ್​ ಕೀಪರ್ ಆಗಿ ರಿಷಬ್ ಪಂತ್ ಬದಲಿಗೆ ಕನ್ನಡಿಗ ಕೆ.ಎಲ್ ರಾಹುಲ್ ಅವರು ಸ್ಥಾನ ಪಡೆದುಕೊಂಡಿದ್ದಾರೆ.

ಆಲ್​ರೌಂಡರ್ ಪಡೆಯು ಕೂಡ ಭಾರತ ಬಲಿಷ್ಠವಾಗಿದ್ದು ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಮೂವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈಗಾಗಲೇ ಹಾರ್ದಿಕ್ ಪಾಂಡ್ಯ ಟಿ20ಯಲ್ಲಿ ಹಾಫ್ ಸೆಂಚುರಿ ಬಾರಿಸಿ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಅದರಂತೆ ಅಕ್ಷರ್ ಹಾಗೂ ಜಡೇಜಾ ಬೌಲಿಂಗ್, ಬ್ಯಾಟಿಂಗ್​ನಲ್ಲಿ ಕಮ್ ಬ್ಯಾಕ್ ಮಾಡಬೇಕಿದೆ. ಆರ್ಶ್​ದೀಪ್ ಸಿಂಗ್ ಬದಲಿಗೆ ಮೊಹಮ್ಮದ್ ಶಮಿ ಅವರಿಗೆ ಅವಕಾಶ ಕೊಡಲಾಗಿದೆ.

ಟೀಮ್ ಇಂಡಿಯಾದ ಪ್ಲೇಯಿಂಗ್-11

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಶುಭಮನ್ ಗಿಲ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment