/newsfirstlive-kannada/media/post_attachments/wp-content/uploads/2025/06/ROHIT-KOHLI-1.jpg)
ಇಂಡೋ-ಇಂಗ್ಲೆಂಡ್ ಟೆಸ್ಟ್ ಕದನ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಇಂದಿನಿಂದ ಲೀಡ್ಸ್ನಲ್ಲಿ ಮೊದಲ ಟೆಸ್ಟ್ ಫೈಟ್ ಆರಂಭವಾಗಲಿದ್ದು, ಅಖಾಡಕ್ಕಿಳಿಯಲು ಟೀಮ್ ಇಂಡಿಯಾ ತುದಿಗಾಲಲ್ಲಿ ನಿಂತಿದೆ.
ಶುಭಾರಂಭದ ನಿರೀಕ್ಷೆಯಲ್ಲಿ ಹೊಸ ಕ್ಯಾಪ್ಟನ್
ನೂತನ ಕ್ಯಾಪ್ಟನ್ ಶುಭ್ಮನ್ ಗಿಲ್ ಲೀಡ್ಸ್ ಟೆಸ್ಟ್ನೊಂದಿಗೆ ಮೊದಲ ಬಾರಿ ಟೀಮ್ ಇಂಡಿಯಾವನ್ನ ಲೀಡ್ ಮಾಡಲು ಸಜ್ಜಾಗಿದ್ದಾರೆ. ಗೇಮ್ಪ್ಲಾನ್, ಸ್ಟ್ರಾಟರ್ಜಿಗಳೊಂದಿಗೆ ಫಸ್ಟ್ ಟೆಸ್ಟ್ಗೆ ಸಜ್ಜಾಗಿರೋ ಶುಭ್ಮನ್ ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ. ತವರಿನಲ್ಲಿ ನ್ಯೂಜಿಲೆಂಡ್ ಎದುರು ವೈಟ್ವಾಷ್ ಮುಖಭಂಗ, ಆಸ್ಟ್ರೇಲಿಯಾದಲ್ಲಿ ಹೀನಾಯ ಸೋಲು ಕಂಡ ಬಳಿಕ ನಾಯಕನ ಪಟ್ಟವೇರಿರುವ ಶುಭ್ಮನ್ ಮುಂದೆ ಕಹಿ ನೆನಪನ್ನ ಅಳಿಸಿಹಾಕೋ ಸವಾಲಿದೆ.
ಇದನ್ನೂ ಓದಿ: ಟೀಮ್ ಇಂಡಿಯಾದ ಓಪನರ್ ಯಾರಾಗ್ತಾರೆ, ಕನ್ನಡಿಗನಿಗೆ ಸಿಗುತ್ತಾ ಚಾನ್ಸ್..? ರೇಸ್ನಲ್ಲಿ ಯಂಗ್ ಬ್ಯಾಟರ್ಸ್!
ಯಾರ ಹೆಗಲಿಗೆ ಜವಾಬ್ದಾರಿ..?
ಟೀಮ್ ಇಂಡಿಯಾದ ಬ್ಯಾಟಿಂಗ್ ಸೂಪರ್ ಸ್ಟಾರ್ಸ್ ಆಗಿದ್ದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟೆಸ್ಟ್ಗೆ ಗುಡ್ ಬೈ ಹೇಳಿದ್ದಾರೆ. ಈ ಅನುಭವಿಗಳ ಅಲಭ್ಯತೆಯಲ್ಲಿ ಟೀಮ್ ಇಂಡಿಯಾದ ಮೊದಲ ಪ್ರವಾಸ ಇದು. ಯುವ ಆಟಗಾರರೇ ತುಂಬಿರುವ ತಂಡದಲ್ಲಿ ಕೆಲ ಸೀನಿಯರ್ಗಳಿದ್ದು, ತಂಡವನ್ನ ಲೀಡ್ ಮಾಡೋ ಜವಾಬ್ಧಾರಿಯನ್ನ ತೆಗೆದುಕೊಳ್ಳಬೇಕಿದೆ. ಕೆ.ಎಲ್ ರಾಹುಲ್, ಜಸ್ಪ್ರಿತ್ ಬೂಮ್ರಾ, ರವೀಂದ್ರ ಜಡೇಜಾ ಯುವ ನಾಯಕನಿಗೆ ಹೆಗಲಾಗೋದ್ರ ಜೊತೆಗೆ ಯುವ ಆಟಗಾರರನ್ನ ಗೈಡ್ ಮಾಡಬೇಕಿದೆ.
ಆರಂಭಿಕರಾಗಿ ಜೈಸ್ವಾಲ್-ರಾಹುಲ್ ಕಣಕ್ಕೆ..
ಡೈನಾಮಿಕ್ ಓಪನರ್ ಯಶಸ್ವಿ ಜೈಸ್ವಾಲ್ ಓಪನರ್ ಆಗಿ ಕಣಕ್ಕಿಳಿಯೋದು ಕನ್ಫರ್ಮ್.! ಜೈಸ್ವಾಲ್ ಜೊತೆಗಾರನಾಗಿ ಅನುಭವಿ ಕೆ.ಎಲ್ ರಾಹುಲ್ ಇನ್ನಿಂಗ್ಸ್ ಓಪನ್ ಮಾಡಲಿದ್ದಾರೆ. ಅಭ್ಯಾಸ ಪಂದ್ಯಗಳಲ್ಲಿ ಈಗಾಗಲೇ ಓಪನರ್ ಆಗಿ ರಾಹುಲ್ ಶೈನ್ ಆಗಿದ್ದು, ಆತ್ಮವಿಶ್ವಾಸ ಮೂಡಿಸಿದೆ. ಇಷ್ಟು ದಿನ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸ್ತಾ ಇದ್ದ ಕ್ಯಾಪ್ಟನ್ ಶುಭ್ಮನ್ ಗಿಲ್, 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಸಾಯಿ ಸುದರ್ಶನ್ ಡೆಬ್ಯೂ ಮಾಡೋ ಸಾಧ್ಯತೆ ದಟ್ಟವಾಗಿದ್ದು, ತಮಿಳುನಾಡು ಬ್ಯಾಟರ್ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ.
ಇದನ್ನೂ ಓದಿ: ಲೀಡ್ಸ್ಗೆ ಹೋದ್ರೆ ಕೊಹ್ಲಿ ದಂಪತಿ ಈ ರೆಸ್ಟೋರೆಂಟ್ಗೆ ವಿಸಿಟ್ ಮಾಡೇ ಮಾಡ್ತಾರೆ.. ಕಾರಣವೇನು?
ಕನ್ನಡಿಗ ಕರುಣ್ ನಾಯರ್ ಕಮ್ಬ್ಯಾಕ್
ಗಿಲ್ ನಂತರದ ಸ್ಲಾಟ್ ಅಂದ್ರೆ 5ನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಆಡೋದು ಈಗಾಗಲೇ ಕನ್ಫರ್ಮ್ ಆಗಿದೆ. ಸ್ವತಃ ಪಂತ್ ಈ ಸುದ್ದಿಯನ್ನ ಅಧಿಕೃತಗೊಳಿದಿದ್ದಾರೆ. ಕನ್ನಡಿಗ ಕರುಣ್ ನಾಯರ್ ಕನಸು ನನಸಾಗೋ ಕ್ಷಣ ಬಂದಿದೆ. ಸುದೀರ್ಘ ಅಂತರದ ಬಳಿಕ ಕರುಣ್ ನಾಯರ್ ವೈಟ್ ಜೆರ್ಸಿ ತೊಟ್ಟು ಮಿಂಚಲಿದ್ದಾರೆ. ರೆಡ್ ಹಾಟ್ ಫಾರ್ಮ್ನಲ್ಲಿರೋ ಕನ್ನಡಿಗ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.
ಆಲ್ರೌಂಡರ್ ಕೋಟಾದಲ್ಲಿ ಯಾರಿಗೆ ಚಾನ್ಸ್.?
ಆಲ್ರೌಂಡರ್ ಕೋಟಾದಲ್ಲಿ ಟೀಮ್ ಸೆಲೆಕ್ಷನ್ ಸದ್ಯ ಮ್ಯಾನೇಜ್ಮೆಂಟ್ಗೆ ಗೊಂದಲ ಮೂಡಿಸಿದೆ. ಸ್ಪಿನ್ ಆಲ್ರೌಂಡರ್ ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಇಬ್ಬರಲ್ಲಿ ಯಾರನ್ನ ಆಡಿದಬೇಕು ಅನ್ನೋ ಪ್ರಶ್ನೆಯಿದೆ. ಇನ್ನು ಪೇಸ್ ಆಲ್ರೌಂಡರ್ಗಳಾದ ಶಾರ್ದೂಲ್ ಠಾಕೂರ್, ನಿತೀಶ್ ರೆಡ್ಡಿ ನಡುವೆಯೂ ಸ್ಥಾನಕ್ಕಾಗಿ ಫೈಟ್ ಏರ್ಪಟ್ಟಿದೆ. ಆಲ್ರೌಂಡರ್ಗಳ ಆಯ್ಕೆಯಲ್ಲಿ ಈಗಲೂ ಗೊಂದಲವಿದೆ.
ಇದನ್ನೂ ಓದಿ: Israel-Iran War: ಯುದ್ಧಭೂಮಿಗೆ ಟ್ರಂಪ್ ಎಂಟ್ರಿ ಗೊಂದಲ.. ಅಮೆರಿಕಗೆ ರಷ್ಯಾ, ಕೋರಿಯಾ ಎಚ್ಚರಿಕೆ..
ವೇಗದ ವಿಭಾಗ ಫುಲ್ ಪವರ್ಫುಲ್..!
ಜಸ್ಪ್ರಿತ್ ಬೂಮ್ರಾ ಸಾರಥ್ಯದ ವೇಗದ ವಿಭಾಗ ಸಖತ್ ಪವರ್ಫುಲ್ ಆಗಿದೆ. ಬೂಮ್ರಾ ಜೊತೆಗೆ ಸಿಡಿಗುಂಡು ಸಿರಾಜ್ ಚೆಂಡು ಹಂಚಿಕೊಳ್ಳಲಿದ್ದಾರೆ. 3ನೇ ವೇಗಿಯ ಸ್ಥಾನಕ್ಕೆ ಪೈಪೋಟಿಯಿದೆ. ಕನ್ನಡಿಗ ಪ್ರಸಿದ್ಧ್ ಕೃಷ್ಣ, ಎಡಗೈ ವೇಗಿ ಆರ್ಷ್ದೀಪ್ ಸಿಂಗ್ ಇಬ್ಬರಲ್ಲಿ ಯಾರನ್ನ ಆಡಿಸೋದು ಅನ್ನೋ ಪ್ರಶ್ನೆಗೆ ಕ್ಲೀಯರ್ ಉತ್ತರ ಸಿಕ್ಕಿಲ್ಲ.
ಆಂಗ್ಲರನ್ನ ಮಣಿಸಲು ಟೀಮ್ ಇಂಡಿಯಾ ಪರ್ಫೆಕ್ಟ್ ಪ್ಲೇಯಿಂಗ್ ಇಲೆವೆನ್ ನೊಂದಿಗೆ ರೆಡಿಯಾಗಿದೆ. ಎದುರಾಳಿ ಇಂಗ್ಲೆಂಡ್ ಟೀಮ್ ಕೂಡ ಸಖತ್ ಬಲಿಷ್ಠವಾಗಿದೆ. ಹೋಮ್ಕಂಡಿಷನ್ಸ್ನ ಅಡ್ವಾಂಟೇಜ್ ಕೂಡ ತಂಡಕ್ಕಿದೆ. ಹೀಗಾಗಿ ಯಂಗ್ ಇಂಡಿಯಾಗೆ ಇಂಗ್ಲೆಂಡ್ ತಂಡದಿಂದ ಟಫ್ ಫೈಟ್ ಎದುರಾಗಲಿದೆ. ಇದನ್ನ ಗಿಲ್ ಪಡೆ ಹೇಗೆ ಹ್ಯಾಂಡಲ್ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ: ನಿಗೂಢವಾಗಿದ್ದ ನಿತ್ಯಾನಂದನ ಕೈಲಾಸ ರಾಷ್ಟ್ರದ ಜಾಗ ಬಹಿರಂಗ.. ಕೋರ್ಟ್ನಲ್ಲಿ ಶಿಷ್ಯರಿಂದ ಅಸಲಿ ಸತ್ಯ..!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ