ಇಂಡಿಯಾ vs ಇಂಡಿಯಾ A ಅಭ್ಯಾಸ​ ಪಂದ್ಯ.. KL ರಾಹುಲ್, ಗಿಲ್ ಭರ್ಜರಿ ಬ್ಯಾಟಿಂಗ್..!

author-image
Ganesh
Updated On
ಇಂಡಿಯಾ vs ಇಂಡಿಯಾ A ಅಭ್ಯಾಸ​ ಪಂದ್ಯ.. KL ರಾಹುಲ್, ಗಿಲ್ ಭರ್ಜರಿ ಬ್ಯಾಟಿಂಗ್..!
Advertisment
  • ಅರ್ಧಶತಕ ಸಿಡಿಸಿ ರಾಹುಲ್​, ಶುಭ್ಮನ್ ಶೈನ್​
  • 3ನೇ ಕ್ರಮಾಂಕದಲ್ಲಿ ಭರವಸೆ ಮೂಡಿಸಿದ ಸಾಯಿ
  • ವಿಕೆಟ್​​ ಕಬಳಿಸಲು ಜಸ್​​ಪ್ರಿತ್​ ಬೂಮ್ರಾ ಪರದಾಟ

ಆಂಗ್ಲರ ವಿರುದ್ಧದ ಅಸಲಿ ಟೆಸ್ಟ್​ ಕದನಕ್ಕೂ ಮುನ್ನ ಟೀಮ್​ ಇಂಡಿಯಾ ಆಟಗಾರರು ವಾರ್ಮ್​ಅಪ್​ ಅಖಾಡಕ್ಕಿಳಿದಿದ್ರು. ಬೆಕೆನ್​ಹ್ಯಾಮ್​ನಲ್ಲಿ ಟೀಮ್​ ಇಂಡಿಯಾ vs ಇಂಡಿಯಾ A ನಡುವೆ ನಡೆದ ವಾರ್ಮ್​ ಅಪ್​ ಪಂದ್ಯದಲ್ಲಿ ಭರ್ಜರಿ ಫೈಟ್​ ನಡೀತು.
ಇಂಗ್ಲೆಂಡ್​ ಎದುರಿನ ಪ್ರತಿಷ್ಟಿತ ಟೆಸ್ಟ್​ ಸರಣಿಗೆ ಟೀಮ್​ ಇಂಡಿಯಾ ಸಿದ್ಧತೆ ಜೋರಾಗಿ ನಡೀತಿದೆ. ಸಿದ್ಧತೆಯ ಭಾಗವಾಗಿ ಬೆಕೆನ್​​ಹ್ಯಾಮ್​ನಲ್ಲಿ ನಡೆದ ಇಂಡಿಯಾ ಎ ತಂಡದ ವಿರುದ್ಧ ಟೀಮ್​ ಇಂಡಿಯಾ ಟೆಸ್ಟ್ ಟೀಮ್​​ ವಾರ್ಮ್​​ಅಪ್​ ಮ್ಯಾಚ್​ ಆಡಿತ್ತು. ನಡೆದ 3 ದಿನಗಳ ಆಟದಲ್ಲಿ ಟೀಮ್​ ಇಂಡಿಯಾಗೆ ಪಾಸಿಟಿವ್​​-ನೆಗೆಟಿವ್​ ಎರಡೂ ರಿಸಲ್ಟ್​ ಸಿಕ್ಕಿದೆ.

ಇದನ್ನೂ ಓದಿ: ಮೊದಲ ಪಂದ್ಯದಲ್ಲಿ ಕರುಣ್​ ನಾಯರ್​​ ಸ್ಥಾನ ಫಿಕ್ಸ್​.. ಕನ್ನಡಿಗನ ಹಠ, ಪರಿಶ್ರಮಕ್ಕೆ ಫಲ ಸಿಗುತ್ತಾ?

ಅರ್ಧಶತಕ ಸಿಡಿಸಿ ರಾಹುಲ್​, ಶುಭ್​​ಮನ್ ಶೈನ್​

ಕನ್ನಡಿಗ ಕೆ.ಎಲ್​ ರಾಹುಲ್​ ಹಾಗೂ ಕ್ಯಾಪ್ಟನ್​ ಶುಭ್​ಮನ್​ ಗಿಲ್​ ಇಂಡಿಯಾ ಎ ವಿರುದ್ಧದ ಕದನದಲ್ಲಿ ಮಿಂಚಿದ್ದಾರೆ. ಕಳೆದ 3 ತಿಂಗಳಿನಿಂದ ಸತತವಾಗಿ ವೈಟ್​ಬಾಲ್​ ಕ್ರಿಕೆಟ್​​​ ಆಡಿದ್ದ ಇವರಿಬ್ರು ರೆಡ್​ ಬಾಲ್​ ರಿಧಮ್​ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್​ ಲಯನ್ಸ್​ ವಿರುದ್ಧದ ಅನ್​ಅಫಿಶಿಯಲ್ ಟೆಸ್ಟ್​ನಲ್ಲಿ 116 ಹಾಗೂ 51 ರನ್​ಗಳಿಸಿ ಮಿಂಚಿದ್ದ ರಾಹುಲ್​, ಇಂಡಿಯಾ ಎ ವಿರುದ್ಧದ ಪಂದ್ಯದಲ್ಲೂ ಅರ್ಧಶತಕ ಸಿಡಿಸಿದ್ದಾರೆ. ಕ್ಯಾಪ್ಟನ್​ ಶುಭ್​ಮನ್​ ಗಿಲ್​ ಕೂಡ ಹಾಫ್​ ಸೆಂಚುರಿ ಸಿಡಿಸಿ ಶೈನ್​ ಆಗಿದ್ದಾರೆ.

3ನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್​ ಡಿಸೆಂಟ್​ ಆಟ

ಇಷ್ಟು ದಿನ 3ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸ್ತಾ ಇದ್ದ ಶುಭ್​ಮನ್​ ಗಿಲ್​, ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಿಂದ 4ನೇ ಕ್ರಮಾಂಕಕ್ಕೆ ಶಿಫ್ಟ್​ ಆಗಲಿದ್ದಾರೆ. ಇದೀಗ 3ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸೋದ್ಯಾರು ಎಂಬ ಪ್ರಶ್ನೆಗೆ ಮ್ಯಾನೇಜ್​ಮೆಂಟ್​ ಉತ್ತರ ಕಂಡುಕೊಂಡತಿದೆ. ಇಂಡಿಯಾ ಎ ವಿರುದ್ಧದ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಬಂದ ಸಾಯಿ ಸುದರ್ಶನ್​ ಡಿಸೆಂಟ್​ ಪರ್ಫಾಮೆನ್ಸ್​ ನೀಡಿದ್ದಾರೆ. ಇಂಗ್ಲೆಂಡ್​​ ನೆಲದಲ್ಲಿ ಕೌಂಟಿ ಕ್ರಿಕೆಟ್​​ ಆಡಿದ ಅನುಭವನ್ನ ಎನ್​ಕ್ಯಾಚ್​ ಮಾಡಿಕೊಂಡ ಸಾಯಿ ಸುದರ್ಶನ್​ ಟಫ್​ ಕಂಡಿಷನ್ಸ್​ನಲ್ಲಿ 38 ರನ್​ಗಳಿಸಿದ್ದಾರೆ.

ಇದನ್ನೂ ಓದಿ: ಯಂಗ್​ ಕ್ರಿಕೆಟರ್​ ಶ್ರೇಯಸ್​ ಅಯ್ಯರ್ 2 ಮಕ್ಕಳ ತಂದೆ..? ನನ್ನ ಗಂಡ ಎಂದ ಬ್ಯೂಟಿ ನಟಿ!

ವಿಕೆಟ್​​ ಕಬಳಿಸಲು ಜಸ್​​ಪ್ರಿತ್​ ಬೂಮ್ರಾ ಪರದಾಟ.!

ಯಾರ್ಕರ್​ ಸ್ಪೆಷಲಿಸ್ಟ್​ ಜಸ್​ಪ್ರಿತ್​ ಬೂಮ್ರಾ ಮೇಲೆ ಟೀಮ್​ ಇಂಡಿಯಾ ಡಿಪೆಂಡ್​ ಆಗಿದೆ. ಸಿಂಗಲ್​ ಹ್ಯಾಂಡೆಡ್ಲಿ ಮ್ಯಾಚ್​ ಗೆಲ್ಲಿಸಿ ಕೊಡೋ ಸಾಮರ್ಥ್ಯ ಹೊಂದಿರೋ ಬೂಮ್ರಾ, ಟೀಮ್​ ಇಂಡಿಯಾದ ಬೌಲಿಂಗ್​ ಬಲ ಎನಿಸಿದ್ದಾರೆ. ಬೂಮ್ರಾ ಮ್ಯಾಜಿಕ್​ ನಡೆದ್ರೆ ಮಾತ್ರ ಇಂಡಿಯಾದ ಗೆಲುವು ಸಾಧ್ಯ ಅನ್ನೋದು ಕ್ರಿಕೆಟ್​ ಜಗತ್ತಿನಲ್ಲಿ ಚರ್ಚೆಯಾಗ್ತಿರೋ ವಿಚಾರ. ಆದ್ರೆ, ಬೂಮ್ರಾ ರಿಧಮ್​ ಕಂಡುಕೊಳ್ಳುವಲ್ಲಿ ಫೇಲ್​ ಆಗಿದ್ದಾರೆ. ವಾರ್ಮ್​ಅಪ್​ ಗೇಮ್​ನಲ್ಲಿ ಬೂಮ್ರಾ ವಿಕೆಟ್​ಲೆಸ್​ ಆಗಿರೋದು ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ ಆತಂಕಕ್ಕೆ ಕಾರಣವಾಗಿದೆ.

ಎಡಗೈ ವೇಗಿ ಆರ್ಷ್​​​ದೀಪ್​ ಸಿಂಗ್​ ವಿಕೆಟ್​​ ಲೆಸ್.!

ಮೊದಲ ಬಾರಿ ಟೆಸ್ಟ್​ ಫಾರ್ಮೆಟ್​ಗೆ ಆಯ್ಕೆಯಾಗಿರೋ ಆರ್ಷ್​​ದೀಪ್​ ಸಿಂಗ್​ ವಾರ್ಮ್​ಅಪ್​ ಗೇಮ್​ನಲ್ಲಿ ಇಂಪ್ರೆಸ್​​ ಮಾಡುವಲ್ಲಿ ಫೇಲ್​ ಆಗಿದ್ದಾರೆ. 12 ಓವರ್ ಬೌಲಿಂಗ್​ ಮಾಡಿದ ಆರ್ಷ್​​ದೀಪ್​​ 52 ರನ್​ ಬಿಟ್ಟುಕೊಟ್ಟಿದ್ದು ಒಂದೂ ವಿಕೆಟ್​ ಬೇಟೆಯಾಡದೆ ನಿರಾಸೆ ಮೂಡಿಸಿದ್ದಾರೆ.

ಇದನ್ನೂ ಓದಿ: 29ನೇ ವಯಸ್ಸಿನಲ್ಲೇ ವಿರಾಟ್​ ಕೊಹ್ಲಿನ ಮದುವೆ ಆಗಿದ್ದು ಏಕೆ.. ಕಾರಣ ಹೇಳಿದ ಪತ್ನಿ ಅನುಷ್ಕಾ ಶರ್ಮಾ!

ಸಿರಾಜ್​-ಪ್ರಸಿದ್ಧ್​​ ಕೃಷ್ಣ ಬೊಂಬಾಟ್​ ಬೌಲಿಂಗ್​.!

ವೇಗಿ ಮೊಹಮ್ಮದ್​ ಸಿರಾಜ್​ ಹಾಗೂ ಕನ್ನಡಿಗ ಪ್ರಸಿದ್ಧ್​ ಕೃಷ್ಣ ವಾರ್ಮ್​ಅಪ್​ ಗೇಮ್​ನಲ್ಲಿಬೊಂಬಾಟ್​ ಬೌಲಿಂಗ್​ ಮಾಡಿದ್ದಾರೆ. ಟೈಟ್​ ಸ್ಪೆಲ್​ಗಳನ್ನ ಹಾಕಿರೋ ಸಿರಾಜ್​, ಪ್ರಸಿದ್ಧ್​ ಕೃಷ್ಣ ತಲಾ 2 ವಿಕೆಟ್​ ಬೇಟೆಯಾಡಿದ್ದಾರೆ. ಸಿರಾಜ್​, ಪ್ರಸಿದ್ಧ್​​ ಕೃಷ್ಣ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ವಾರ್ಮ್​​ಅಪ್​ ಪಂದ್ಯದಲ್ಲಿ ಇವರಿಬ್ಬರು ನೀಡಿರುವ ಪ್ರದರ್ಶನ ಸದ್ಯ ಭರವಸೆ ಹುಟ್ಟುಹಾಕಿದೆ.

ಆಲ್​​ರೌಂಡರ್ ಶಾರ್ದೂಲ್​ ಠಾಕೂರ್​ ಬೌಲಿಂಗ್​ ಜೊತೆಗೆ ಬ್ಯಾಟಿಂಗ್​ನಲ್ಲೂ ಮಿಂಚಿದ್ದಾರೆ. ಭರ್ಜರಿ ಬ್ಯಾಟಿಂಗ್​ ನಡೆಸಿದ ಶಾರ್ದೂಲ್​ ಠಾಕೂರ್​​ ಅಜೇಯ 122 ರನ್​ಗಳಿಸಿ ಪ್ಲೇಯಿಂಗ್​ ಇಲೆವೆನ್​ನಲ್ಲಿ ತಮ್ಮ ಸ್ಥಾನವನ್ನ ಬಹುತೇಕ ಸೀಲ್​ ಮಾಡಿಕೊಂಡಿದ್ದಾರೆ. ಅತ್ತ ನಿತೀಶ್​ ಕುಮಾರ್​ ರೆಡ್ಡಿ ಕೂಡ ವಾರ್ಮ್​ಅಪ್​ ಪಂದ್ಯದ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಆಲ್​​ರೌಂಡರ್​​ ಕೋಟಾದಲ್ಲಿ ಸ್ಥಾನಕ್ಕಾಗಿ ಇಬ್ಬರ ನಡುವೆ ಪೈಪೋಟಿ ನಡೀತಿದ್ದು, ಈ ಪರ್ಫಾಮೆನ್ಸ್​ನಿಂದ ಫೈಟ್​ ಮತ್ತಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಶುಭ್​ಮನ್​​ ಗಿಲ್​​​ಗೆ ಬಿಗ್​ ಶಾಕ್​.. ನೂತನ ನಾಯಕನ​ ಮೇಲೆ ವಿರಾಟ್​ ಕೊಹ್ಲಿ, ಸಚಿನ್​ ಫ್ಯಾನ್ಸ್​​ ಕೆಂಡ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment