ಬೌಲರ್ಗಳೇ ನಾಚುವಂತೆ ವಿಕೆಟ್ ಕಿತ್ತುಕೊಟ್ಟ ಸೂರ್ಯ, ರಿಂಕು ಸಿಂಗ್
ಇನ್ಮುಂದೆ ಟೀಂ ಇಂಡಿಯಾಗೆ ಕಾಡಲ್ಲ ಬೌಲಿಂಗ್ ವಿಭಾಗದಲ್ಲಿ ಹಿನ್ನಡೆ
ಪರಾಗ್, ಸೂರ್ಯ, ರಿಂಕುನಲ್ಲಿರುವ ಮತ್ತೊಂದು ಕೌಶಲ್ಯ ಕೆದಕಿದ ಗಂಭೀರ್
ಶ್ರೀಲಂಕಾ ವಿರುದ್ಧ ಟಿ-20 ಸರಣಿಯನ್ನು ಟೀಂ ಇಂಡಿಯಾ ಕ್ಲೀನ್ಸ್ವೀಪ್ ಮಾಡಿದೆ. ನಿನ್ನೆ ನಡೆದ ಕೊನೆಯ ಹಾಗೂ ಮೂರನೇ ಪಂದ್ಯವನ್ನು ಭಾರತ ತಂಡ ಸೋತು ಗೆದ್ದಿದೆ. ಸಮ ಬಲದ ಹೋರಾಟ ಹಾಗೂ ಕೊನೆಯಲ್ಲಿ ನಡೆದ ಸೂಪರ್ ಓವರ್ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕವಾಗಿ ಗೆಲುವು ಸಾಧಿಸಿದೆ.
ಗಂಭೀರ್ ಯಶಸ್ವಿ..!
ಗೌತಮ್ ಗಂಭೀರ್, ಟೀಂ ಇಂಡಿಯಾದ ಮುಖ್ಯ ಕೊಚ್ ಆದಮೇಲೆ ಮೊದಲ ಟಿ-20 ಸರಣಿ ಇದಾಗಿತ್ತು. ಟೀಂ ಇಂಡಿಯಾದಲ್ಲಿ ಒಂದಷ್ಟು ಕಂಡೀಷನ್ಗಳ ಜೊತೆಗೆ ಬಿಗಿ ಹಿಡಿತದೊಂದಿಗೆ ತಂಡಕ್ಕೆ ಎಂಟ್ರಿಯಾಗಿದ್ದ ಗಂಭೀರ್ ಅದರಲ್ಲಿ ಯಶಸ್ವಿ ಆದಂತೆ ಕಾಣ್ತಿದೆ. ಮೊದಲ ಸರಣಿಯಲ್ಲೇ ಒಂದಷ್ಟು ಪ್ರಯೋಗಕ್ಕೆ ಮುಂದಾಗಿದ್ದರು.
ಇದನ್ನೂ ಓದಿ:ಕೇರಳ ಭೂಕುಸಿತಕ್ಕೆ 3 ಕಾರಣಗಳು; ಬೆಟ್ಟ, ಗುಡ್ಡ ಕುಸಿಯುವ ಹಿಂದಿನ ಸತ್ಯ ಬಿಚ್ಚಿಟ್ಟ ವಿಜ್ಞಾನಿ..!
ಕೆಲವು ಆಟಗಾರರು ಅದನ್ನು ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಜು ಸ್ಯಾಮ್ಸನ್ ಅವರಂಥ ಆಟಗಾರರು ಮತ್ತೆ ಫೇಲ್ ಆಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭಾರತ ತಂಡ ಮೊದಲಿನಿಂದಲೂ ಹಿನ್ನಡೆ ಅನುಭವಿಸುತ್ತಿತ್ತು. ಇನ್ಮುಂದೆ ಆ ಕೊರತೆ ಭಾರತ ತಂಡಕ್ಕೆ ಇರಲ್ಲ ಎಂದೆನಿಸುತ್ತದೆ. ಯಾಕೆಂದರೆ ಗಂಭೀರ್ ಅವರು, ರಿಯಾನ್ ಪರಾಗ್ ಅವರಲ್ಲಿರುವ ಬೌಲಿಂಗ್ ಕಲೆಯನ್ನು ಹುಡುಕಿ ಮೇಲೆತ್ತಿದ್ದಾರೆ.
ಬಲಿಷ್ಠ ಬೌಲರ್ಗಳಿಗೆ ಸೇಫ್ ಔಟ್..!
ಅದರಂತೆ ನಿನ್ನೆಯ ಪಂದ್ಯದಲ್ಲಿ ಯಾರೂ ನಿರೀಕ್ಷೆ ಮಾಡಿರದ ಅಚ್ಚರಿಗಳು ನಡೆದವು. ರಿಂಕು ಸಿಂಗ್ ಗಾಗೂ ಸರ್ಯಕುಮಾರ್ ಯಾದವ್ ಕೂಡ ಬೌಲಿಂಗ್ ಮಾಡಿ ಸೈ ಎನಿಸಿಕೊಂಡರು. ವಿಶೇಷ ಅಂದರೆ ಯಾವ ಬೌಲರ್ಸ್ಗೂ ಕಮ್ಮಿ ಇಲ್ಲದ ರೀತಿಯಲ್ಲಿ ಬೌಲಿಂಗ್ ಮಾಡಿದ ಅವರು ಇಬ್ಬರು ಸೇರಿ 4 ವಿಕೆಟ್ ಪಡೆದುಕೊಂಡರು.
ಇದನ್ನೂ ಓದಿ:ಕೇರಳ ಗುಡ್ಡ ಕುಸಿತದಲ್ಲಿ ಕರ್ನಾಟಕದ ಅಜ್ಜಿ, ಮೊಮ್ಮಗ ನಾಪತ್ತೆ.. ಇದೇ ಕುಟುಂಬದ ಮೂವರ ರೋಚಕ ರಕ್ಷಣೆ
ಕ್ಯಾಪ್ಟನ್ ಸೂರ್ಯ ಒಂದು ಓವರ್ ಮಾಡಿ ಕೇವಲ ಐದು ರನ್ ನೀಡಿ 2 ವಿಕೆಟ್ ಪಡೆದರು. ಇನ್ನು ಬೆಂಕಿ ಬೌಲಿಂಗ್ ಮಾಡಿದ ರಿಂಕು ಸಿಂಗ್ 6 ಬಾಲ್ ಹಾಕಿ ಕೇವಲ ಮೂರು ರನ್ ನೀಡಿ ಎರಡು ವಿಕೆಟ್ ಪಡೆದರು. ಈ ಮೂಲಕ ಬೌಲರ್ಗಳ ಬಳಿ ಆಗದಿದ್ದನ್ನು ಸ್ಫೋಟಕ ಬ್ಯಾಟ್ಸ್ಮನ್ಗಳಿಬ್ಬರು ಮಾಡಿ ತೋರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೌಲರ್ಗಳೇ ನಾಚುವಂತೆ ವಿಕೆಟ್ ಕಿತ್ತುಕೊಟ್ಟ ಸೂರ್ಯ, ರಿಂಕು ಸಿಂಗ್
ಇನ್ಮುಂದೆ ಟೀಂ ಇಂಡಿಯಾಗೆ ಕಾಡಲ್ಲ ಬೌಲಿಂಗ್ ವಿಭಾಗದಲ್ಲಿ ಹಿನ್ನಡೆ
ಪರಾಗ್, ಸೂರ್ಯ, ರಿಂಕುನಲ್ಲಿರುವ ಮತ್ತೊಂದು ಕೌಶಲ್ಯ ಕೆದಕಿದ ಗಂಭೀರ್
ಶ್ರೀಲಂಕಾ ವಿರುದ್ಧ ಟಿ-20 ಸರಣಿಯನ್ನು ಟೀಂ ಇಂಡಿಯಾ ಕ್ಲೀನ್ಸ್ವೀಪ್ ಮಾಡಿದೆ. ನಿನ್ನೆ ನಡೆದ ಕೊನೆಯ ಹಾಗೂ ಮೂರನೇ ಪಂದ್ಯವನ್ನು ಭಾರತ ತಂಡ ಸೋತು ಗೆದ್ದಿದೆ. ಸಮ ಬಲದ ಹೋರಾಟ ಹಾಗೂ ಕೊನೆಯಲ್ಲಿ ನಡೆದ ಸೂಪರ್ ಓವರ್ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕವಾಗಿ ಗೆಲುವು ಸಾಧಿಸಿದೆ.
ಗಂಭೀರ್ ಯಶಸ್ವಿ..!
ಗೌತಮ್ ಗಂಭೀರ್, ಟೀಂ ಇಂಡಿಯಾದ ಮುಖ್ಯ ಕೊಚ್ ಆದಮೇಲೆ ಮೊದಲ ಟಿ-20 ಸರಣಿ ಇದಾಗಿತ್ತು. ಟೀಂ ಇಂಡಿಯಾದಲ್ಲಿ ಒಂದಷ್ಟು ಕಂಡೀಷನ್ಗಳ ಜೊತೆಗೆ ಬಿಗಿ ಹಿಡಿತದೊಂದಿಗೆ ತಂಡಕ್ಕೆ ಎಂಟ್ರಿಯಾಗಿದ್ದ ಗಂಭೀರ್ ಅದರಲ್ಲಿ ಯಶಸ್ವಿ ಆದಂತೆ ಕಾಣ್ತಿದೆ. ಮೊದಲ ಸರಣಿಯಲ್ಲೇ ಒಂದಷ್ಟು ಪ್ರಯೋಗಕ್ಕೆ ಮುಂದಾಗಿದ್ದರು.
ಇದನ್ನೂ ಓದಿ:ಕೇರಳ ಭೂಕುಸಿತಕ್ಕೆ 3 ಕಾರಣಗಳು; ಬೆಟ್ಟ, ಗುಡ್ಡ ಕುಸಿಯುವ ಹಿಂದಿನ ಸತ್ಯ ಬಿಚ್ಚಿಟ್ಟ ವಿಜ್ಞಾನಿ..!
ಕೆಲವು ಆಟಗಾರರು ಅದನ್ನು ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಜು ಸ್ಯಾಮ್ಸನ್ ಅವರಂಥ ಆಟಗಾರರು ಮತ್ತೆ ಫೇಲ್ ಆಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭಾರತ ತಂಡ ಮೊದಲಿನಿಂದಲೂ ಹಿನ್ನಡೆ ಅನುಭವಿಸುತ್ತಿತ್ತು. ಇನ್ಮುಂದೆ ಆ ಕೊರತೆ ಭಾರತ ತಂಡಕ್ಕೆ ಇರಲ್ಲ ಎಂದೆನಿಸುತ್ತದೆ. ಯಾಕೆಂದರೆ ಗಂಭೀರ್ ಅವರು, ರಿಯಾನ್ ಪರಾಗ್ ಅವರಲ್ಲಿರುವ ಬೌಲಿಂಗ್ ಕಲೆಯನ್ನು ಹುಡುಕಿ ಮೇಲೆತ್ತಿದ್ದಾರೆ.
ಬಲಿಷ್ಠ ಬೌಲರ್ಗಳಿಗೆ ಸೇಫ್ ಔಟ್..!
ಅದರಂತೆ ನಿನ್ನೆಯ ಪಂದ್ಯದಲ್ಲಿ ಯಾರೂ ನಿರೀಕ್ಷೆ ಮಾಡಿರದ ಅಚ್ಚರಿಗಳು ನಡೆದವು. ರಿಂಕು ಸಿಂಗ್ ಗಾಗೂ ಸರ್ಯಕುಮಾರ್ ಯಾದವ್ ಕೂಡ ಬೌಲಿಂಗ್ ಮಾಡಿ ಸೈ ಎನಿಸಿಕೊಂಡರು. ವಿಶೇಷ ಅಂದರೆ ಯಾವ ಬೌಲರ್ಸ್ಗೂ ಕಮ್ಮಿ ಇಲ್ಲದ ರೀತಿಯಲ್ಲಿ ಬೌಲಿಂಗ್ ಮಾಡಿದ ಅವರು ಇಬ್ಬರು ಸೇರಿ 4 ವಿಕೆಟ್ ಪಡೆದುಕೊಂಡರು.
ಇದನ್ನೂ ಓದಿ:ಕೇರಳ ಗುಡ್ಡ ಕುಸಿತದಲ್ಲಿ ಕರ್ನಾಟಕದ ಅಜ್ಜಿ, ಮೊಮ್ಮಗ ನಾಪತ್ತೆ.. ಇದೇ ಕುಟುಂಬದ ಮೂವರ ರೋಚಕ ರಕ್ಷಣೆ
ಕ್ಯಾಪ್ಟನ್ ಸೂರ್ಯ ಒಂದು ಓವರ್ ಮಾಡಿ ಕೇವಲ ಐದು ರನ್ ನೀಡಿ 2 ವಿಕೆಟ್ ಪಡೆದರು. ಇನ್ನು ಬೆಂಕಿ ಬೌಲಿಂಗ್ ಮಾಡಿದ ರಿಂಕು ಸಿಂಗ್ 6 ಬಾಲ್ ಹಾಕಿ ಕೇವಲ ಮೂರು ರನ್ ನೀಡಿ ಎರಡು ವಿಕೆಟ್ ಪಡೆದರು. ಈ ಮೂಲಕ ಬೌಲರ್ಗಳ ಬಳಿ ಆಗದಿದ್ದನ್ನು ಸ್ಫೋಟಕ ಬ್ಯಾಟ್ಸ್ಮನ್ಗಳಿಬ್ಬರು ಮಾಡಿ ತೋರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ