/newsfirstlive-kannada/media/post_attachments/wp-content/uploads/2024/07/TEAM-INDIA-1-1.jpg)
ಪಲ್ಲೆಕೆಲೆಯಲ್ಲಿ ನಡೆದ ಶ್ರೀಲಂಕಾ ಎದುರಿನ 2ನೇ T20 ಪಂದ್ಯದಲ್ಲೂ ಟೀಮ್ ಇಂಡಿಯನ್ ಬೌಲರ್ಸ್ಗಳದ್ದೇ ದರ್ಬಾರ್. ಉತ್ತಮ ಆರಂಭವನ್ನೇ ಪಡೆದ ಶ್ರೀಲಂಕಾ ತಂಡ ಅಂತಿಮ ಹಂತದಲ್ಲಿ ದಿಢೀರ್ ಕುಸಿತ ಕಾಣ್ತು. ಜಸ್ಟ್ 31 ರನ್ಗಳಿಗೆ ಲಂಕನ್ನರ 7 ವಿಕೆಟ್ಗಳು ಉಡೀಸ್ ಆದ್ವು.
ಟಾಸ್ ಸೋತರೂ ಬಿಗ್ ಸ್ಕೋರ್ ಕಲೆ ಹಾಕೋ ಲೆಕ್ಕಾಚಾರದಲ್ಲೇ ಶ್ರೀಲಂಕಾ ಪೆಲ್ಲೆಕೆಲೆ ಗ್ರೌಂಡ್ನಲ್ಲಿ ಬ್ಯಾಟಿಂಗ್ಗಿಳಿಯಿತು. ಅತ್ಯದ್ಭುತ ಆರಂಭವನ್ನೂ ಮಾಡ್ತು. ಅಂತ್ಯದಲ್ಲಿ ಭಾರತದ ಬೌಲಿಂಗ್ ಮುಂದೆ ಮಂಡಿಯೂರಿತು. ಇಂಡಿಯನ್ ಟೈಗರ್ಸ್, ಲಂಕನ್ ಲಯನ್ಸ್ ಅವರದ್ದೇ ನೆಲದಲ್ಲಿ ಬೇಟೆಯಾಡಿ ಬಿಟ್ಟರು.
ಇದನ್ನೂ ಓದಿ:Good News.. ಸುನಿತಾ ವಿಲಿಯಮ್ಸ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ NASA
ಮೊದಲು ಬ್ಯಾಟಿಂಗ್ಗಿಳಿದ ಶ್ರೀಲಂಕಾ ಪವರ್ ಪ್ಲೇನಲ್ಲಿ ಸಖತ್ ಆಟವಾಡಿತು. ಆರಂಭಿಕ ಆಟಗಾರ 10 ರನ್ಗಳಿಸಿ ಆರ್ಷ್ದೀಪ್ ಸಿಂಗ್ ಬೌಲಿಂಗ್ನಲ್ಲಿ ಔಟಾದ್ರು. ಬಳಿಕ ಕುಸಾಲ್ ಪೇರೆರಾ, ಫಾತುಮ್ ನಿಸಂಕ ತಂಡಕ್ಕೆ ಚೇತರಿಕೆ ನೀಡಿದ್ರು. ಪವರ್ ಪ್ಲೇನಲ್ಲಿ ಪವರ್ ಫುಲ್ ಆಟವಾಡಿ 54 ರನ್ಗಳಿಸಿದ್ರು. 1 ವಿಕೆಟ್ ಕಳೆದುಕೊಂಡ ಲಂಕಾ 9ರ ರನ್ರೇಟ್ನಲ್ಲಿ ರನ್ಗಳಿಸ್ತು.
ಪವರ್ ಪ್ಲೇನಲ್ಲಿ ಸಾಲಿಡ್ ಆರಂಭ ಪಡೆದ ಲಂಕನ್ನರು ಮಿಡಲ್ ಓವರ್ನಲ್ಲೂ ಡಿಸೆಂಟ್ ರನ್ರೇಟ್ ಮೆಂಟೇನ್ ಮಾಡಿದ್ರು. 32 ರನ್ಗಳಿಸಿ ಫಾತುಮ್ ನಿಸಂಕ ಔಟಾದ್ರು. ಬಳಿಕ ಜೊತೆಯಾದ ಕಮಿಂದು ಮೆಂಡೀಸ್- ಕುಸಾಲ್ ಪರೇರಾ, ಭಾರತೀಯ ಬೌಲರ್ಗಳನ್ನ ಸಮರ್ಥವಾಗಿ ಎದುರಿಸಿದ್ರು. 7ರಿಂದ 15ನೇ ಓವರ್ನಲ್ಲಿ 8.4ರ ರನ್ರೇಟ್ನಲ್ಲಿ ರನ್ಗಳಿಸಿದ ಲಂಕಾ, 76 ರನ್ ಕಲೆ ಹಾಕ್ತು. 15 ಓವರ್ ಅಂತ್ಯಕ್ಕೆ ಕೇವಲ 2 ವಿಕೆಟ್ ಕಳೆದುಕೊಂಡು 130 ರನ್ಗಳಿಸಿತ್ತು.
ಇದನ್ನೂ ಓದಿ:‘ಇನ್ನೆಷ್ಟು ಅವಕಾಶ ಕೊಡಬೇಕು..’ ಗೋಲ್ಡನ್ ಡಕ್ ಆದ ಟೀಂ ಇಂಡಿಯಾ ಆಟಗಾರನ ವಿರುದ್ಧ ಆಕ್ರೋಶ
ಡೆತ್ ಓವರ್
ಪವರ್ ಪ್ಲೇ, ಮಿಡಲ್ ಓವರ್ಗಳಲ್ಲಿ ಉತ್ತಮ ಆಟವಾಡಿದ ಸಿಂಹಳೀಯರನ್ನ ಡೆತ್ ಓವರ್ಗಳಲ್ಲಿ ಭಾರತೀಯ ಬೌಲರ್ಸ್ ಬೇಟೆಯಾಡಿದ್ರು. 16ರಿಂದ 20ನೇ ಓವರ್ನಲ್ಲಿ ಕೇವಲ 31 ರನ್ ಬಿಟ್ಟು ಕೊಟ್ಟು 7 ವಿಕೆಟ್ ಕಬಳಿಸಿದರು.
ರವಿ ಬಿಷ್ನೋಯ್ ಮ್ಯಾಜಿಕ್ಗೆ ಶ್ರೀಲಂಕಾ ಸ್ಟನ್..!
16ನೇ ಓವರ್ ಬೌಲಿಂಗ್ ಮಾಡಿದ ರವಿ ಬಿಷ್ನೋಯ್, ಡಬಲ್ ಶಾಕ್ ಕೊಟ್ರು. ದಶುನ ಶನಕ, ವನಿಂದ ಹಸರಂಗಗೆ ಬ್ಯಾಕ್ ಟು ಬ್ಯಾಕ್ ಗೇಟ್ಪಾಸ್ ನೀಡಿದರು. 4 ಓವರ್ ಬೌಲಿಂಗ್ ಮಾಡಿ ಕೇವಲ 26 ರನ್ ಬಿಟ್ಟುಕೊಟ್ಟ ಬಿಷ್ನೋಯ್, ಒಟ್ಟು 3 ವಿಕೆಟ್ ಕಬಳಿಸಿದರು.
ಇದನ್ನೂ ಓದಿ:RCB ಇಂದ ಈ 3 ಆಟಗಾರರು ಮಾತ್ರ ರಿಟೈನ್; ಉಳಿದವರಿಗೆ ಗೇಟ್ಪಾಸ್..!
ಸಿಂಹಳೀಯರ ಬೇಟೆಯಾಡಿದ ಅಕ್ಷರ್, ಆರ್ಷ್ದೀಪ್
ಬಿಷ್ನೋಯ್ ಜೊತೆಗೆ ಅಕ್ಷರ್ ಪಟೇಲ್, ಆರ್ಷ್ದೀಪ್ ಸಿಂಗ್ ಕೂಡ ಎಕಾನಮಿಕಲ್ ಸ್ಪೆಲ್ ಹಾಕಿದ್ರು. ಸಿಂಹಳೀಯರನ್ನ ಬಿಡದೇ ಕಾಡಿದ್ರು ಇವರಿಬ್ಬರು ತಲಾ 2 ವಿಕೆಟ್ ಬೇಟೆಯಾಡಿದ್ರು. 2 ಓವರ್ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಎಕ್ಸ್ಪೆನ್ಸಿವ್ ಅನ್ನಿಸಿದ್ರೂ 2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಪರಿಣಾಮ 161 ರನ್ಗಳಿಗೆ ಶ್ರೀಲಂಕಾದ ಆಟ ಅಂತ್ಯವಾಯ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಭಾರತ ತಂಡಕ್ಕೆ ಮಳೆ ಅಡ್ಡಿಯಾಯ್ತು. ಕೊನೆಗೆ ಡಿಎಲ್ಎಸ್ ನಿಯಮದ ಪ್ರಕಾರ ಜಾರಿಯಾಗಿ 8 ಓವರ್ ಕಡಿತಗೊಂಡಿತು. ಭಾರತ ಗೆಲ್ಲಲು 78 ರನ್ಗಳಿಸಬೇಕಿತ್ತು. ಅದನ್ನು ಟೀಂ ಇಂಡಿಯಾ ಮೂರು ವಿಕೆಟ್ ಕಳೆದುಕೊಂಡು ನಿಗಧಿತ ಗುರಿಯನ್ನು ಮುಟ್ಟಿತು. ಈ ಮೂಲಕ ಭಾರತ ತಂಡ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ, ಟಿ20 ಸರಣಿಯನ್ನು ವಶಪಡಿಸಿಕೊಂಡಿತು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್