ಲಂಕಾ ಪ್ರವಾಸದ T20 ತಂಡಕ್ಕೆ ಸೂರ್ಯ ಸಾರಥಿ..!
ಹಾರ್ದಿಕ್ ಪಾಂಡ್ಯಗೆ ಶಾಕ್, ಸೂರ್ಯನಿಗೆ ಸರ್ಪ್ರೈಸ್
ತ್ರಿಮೂರ್ತಿಗಳ ಬ್ಯಾಟಿಂಗ್, ಸೂರ್ಯನಿಗೆ ಪಟ್ಟ..?
ಕಳೆದ ಕೆಲವು ದಿನಗಳಿಂದ ಕ್ರಿಕೆಟ್ ವಲಯದಲ್ಲಿದ್ದ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಶ್ರೀಲಂಕಾ ಪ್ರವಾಸಕ್ಕೆ ಕೊನೆಗೂ ಟೀಮ್ ಇಂಡಿಯಾ ಪ್ರಕಟಗೊಂಡಿದೆ. ಮಿಸ್ಟರ್ 360 ಡಿಗ್ರಿ ಬ್ಯಾಟರ್ಗೆ ಟಿ20 ನಾಯಕತ್ವ ಒಲಿದಿದ್ದೇಗೆ ಅನ್ನೋ ಮಿಸ್ಟ್ರಿ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ. ಸೂರ್ಯನಿಗೆ ಸರ್ಪ್ರೈಸ್ ರೀತಿಯಲ್ಲಿ ಸಾರಥ್ಯ ಸಿಕ್ಕಿದ್ದೇಗೆ?
ಶ್ರೀಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಕೊನೆಗೂ ಪ್ರಕಟಗೊಂಡಿದೆ. ಹೈವೋಲ್ಟೆಜ್ ಮೀಟಿಂಗ್ನ ಬಳಿಕ ಸಾಕಷ್ಟು ಲೆಕ್ಕಾಚಾರಗಳನ್ನ ಹಾಕಿ ಲಂಕಾ ಪ್ರವಾಸಕ್ಕೆ ಸೆಲೆಕ್ಷನ್ ಕಮಿಟಿ ತಂಡವನ್ನ ಅನೌನ್ಸ್ ಮಾಡಿದೆ. ಏಕದಿನ ಸರಣಿಯ ತಂಡಕ್ಕಿಂತ ಟಿ20 ಸರಣಿಯ ತಂಡದ ಆಯ್ಕೆಯೇ ಸದ್ಯದ ಹಾಟ್ ಟಾಪಿಕ್. ಇದಕ್ಕೆಲ್ಲಾ ಕಾರಣ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್.
ಇದನ್ನೂ ಓದಿ:ಮೀಸಲಾತಿ ರದ್ದತಿಗಾಗಿ ಭಾರೀ ಹಿಂಸಾಚಾರ, 39 ಜನ ಸಾವು.. 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ
ಲಂಕಾ ಪ್ರವಾಸದ T20 ತಂಡಕ್ಕೆ ಸೂರ್ಯ ಸಾರಥಿ..!
ಟೀಮ್ ಅನೌನ್ಸ್ಗೂ ಮುನ್ನ ಇದ್ದ ಅಂತೆ-ಕಂತೆಗಳಿಗೆಲ್ಲಾ ಇದೀಗ ಅಧಿಕೃತ ತೆರೆ ಬಿದ್ದಿದೆ. ಮಿಸ್ಟರ್ 360 ಡಿಗ್ರಿ ಬ್ಯಾಟರ್ ಸೂರ್ಯಕುಮಾರ್ ಯಾದವ್ಗೆ ನಾಯಕತ್ವ ಒಲಿದಿದೆ. ಸೂರ್ಯಕುಮಾರ್ ಸಾರಥ್ಯದ ತಂಡವನ್ನು ಲಂಕಾ ಪ್ರವಾಸದ ಟಿ20 ಸರಣಿಗೆ ಸೆಲೆಕ್ಷನ್ ಕಮಿಟಿ ಪ್ರಕಟಿಸಿದೆ. ಈ ಬೆನ್ನಲ್ಲೇ ನಾಯಕತ್ವದ ರೇಸ್ನಲ್ಲೇ ಇಲ್ಲದ ಮಿಸ್ಟರ್ 360ಗೆ ಸಾರಥ್ಯ ಒಲಿದಿದ್ದು ಹೇಗೆ ಅನ್ನೋ ಮಿಸ್ಟ್ರಿ ಎಲ್ಲರನ್ನ ಕಾಡ್ತಿದೆ.
ಹಾರ್ದಿಕ್ನ ಹಿಂದಿಕ್ಕಿ ಸೂರ್ಯನಿಗೆ ಪಟ್ಟ ಒಲಿದಿದ್ದೇಗೆ?
ಹಾರ್ದಿಕ್ ಪಾಂಡ್ಯ T20 ತಂಡದ ಉಪನಾಯಕನ ಪಟ್ಟದಲ್ಲಿದ್ದಿದ್ದರಿಂದ ಭವಿಷ್ಯದ ಕ್ಯಾಪ್ಟನ್ ಎಂದೇ ಬಿಂಬಿತವಾಗಿದ್ರು. ರೋಹಿತ್ ಶರ್ಮಾ ಚುಟುಕು ಫಾರ್ಮೆಟ್ಗೆ ಗುಡ್ ಬೈ ಹೇಳಿದ ಬಳಿಕ ಪಾಂಡ್ಯಗೆ ಪಟ್ಟಾಭಿಷೇಕ ಬಹುತೇಕ ಕನ್ಫರ್ಮ್ ಎನ್ನಲಾಗಿತ್ತು. ಆದ್ರೀಗ ಸರ್ಪ್ರೈಸ್ ಎನ್ನುವಂತೆ, ಕ್ಯಾಪ್ಟನ್ಸಿ ರೇಸ್ನಲ್ಲೇ ಇರದ ಸೂರ್ಯಕುಮಾರ್ ಯಾದವ್ಗೆ ನಾಯಕತ್ವ ನೀಡಲಾಗಿದೆ. ತ್ರಿಮೂರ್ತಿಗಳ ಬ್ಯಾಕ್ ಅಪ್ನ ಬಲದಿಂದ ಸೂರ್ಯನಿಗೆ ತಂಡದ ಸಾರಥ್ಯ ಸಿಕ್ಕಿದೆ.
ಇದನ್ನೂ ಓದಿ:Breaking ಟ್ರ್ಯಾಕ್ ಮೇಲೆ ಮದ್ಯ ಸೇವನೆ.. ರೈಲು ಹರಿದು ಮೂವರು ಯುವಕರು ದಾರುಣ ಸಾವು
ಮಿಸ್ಟರ್ 360 ಪರ ಗುರು ಗಂಭೀರ್ ಬ್ಯಾಟಿಂಗ್
ವರ್ಕ್ಲೋಡ್ ಮ್ಯಾನೇಜ್ಮೆಂಟ್ ಕಾರಣಕ್ಕೆ ಸರಣಿಯಿಂದ ಸರಣಿಗೆ ವಿಶ್ರಾಂತಿ ಬೇಡುವ ನಾಯಕ ತಂಡಕ್ಕೆ ಬೇಡ. ಮುಂಬರೋ ಟಿ20 ವಿಶ್ವಕಪ್ವರೆಗೆ ತಂಡದೊಂದಿಗೆ ಇರುವ ನಾಯಕ ಬೇಕು ಅನ್ನೋ ಬೇಡಿಕೆಯನ್ನ ಹೆಡ್ ಕೋಚ್ ಗೌತಮ್ ಗಂಭೀರ್ ಸೆಲೆಕ್ಷನ್ ಕಮಿಟಿ ಮುಂದಿಟ್ಟಿದ್ರು. ಈ ಅಜೆಂಡಾ ಇಟ್ಟುಕೊಂಡೇ ಹಾರ್ದಿಕ್ ಬದಲು ನಾಯಕತ್ವಕ್ಕೆ ಸೂರ್ಯಕುಮಾರ್ ಹೆಸರನ್ನ ಪ್ರಸ್ತಾಪಿಸಿದ್ರು. ಆ ಪ್ರಸ್ತಾವಕ್ಕೆ ಇದೀಗ ಅಧಿಕೃತ ಮುದ್ರೆ ಬಿದ್ದಿದೆ.
ಸೂರ್ಯನಿಗೆ ನಿರ್ಗಮಿತ ನಾಯಕ ರೋಹಿತ್ ಬೆಂಬಲ
ಟೀಮ್ ಇಂಡಿಯಾದ ಟಿ20 ಮಾದರಿಯ ನಾಯಕತ್ವ ತ್ಯಜಿಸಿರುವ, ಏಕದಿನ ಹಾಗೂ ಟೆಸ್ಟ್ ತಂಡದ ನಾಯಕನಾಗಿ ಮುಂದುವರೆದಿರೋ ರೋಹಿತ್ ಶರ್ಮಾ ಬೆಂಬಲ ಕೂಡ ಸೂರ್ಯಕುಮಾರ್ಗಿದೆ. ರೋಹಿತ್ – ಸೂರ್ಯ ಒಟ್ಟಾಗಿ ಬೆಳೆದವರು. ಮುಂಬೈ ಹಾಗೂ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದಾರೆ. ರೋಹಿತ್ ಅಲಭ್ಯತೆಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಸೂರ್ಯಕುಮಾರ್ ಮುನ್ನಡೆಸಿದ್ದೂ ಇದೆ. ಈ ಎಲ್ಲಾ ಕಾರಣದಿಂದ ಗಂಭೀರ್ ಸೂರ್ಯನ ಹೆಸರನ್ನು ನಾಯಕನ ಸ್ಥಾನಕ್ಕೆ ಪ್ರಸ್ತಾಪಿಸಿದಾಗ ರೋಹಿತ್ ಕೂಡ ಸಮ್ಮತಿಸಿದ್ದಾರೆ.
ಅಗರ್ಕರ್ಗೂ ಸೂರ್ಯನ ಮೇಲೆ ಒಲವು..!
ಸೆಲೆಕ್ಷನ್ ಕಮಿಟಿ ಚೇರ್ ಪರ್ಸನ್ ಅಜಿತ್ ಅಗರ್ಕರ್ಗೂ ಸೂರ್ಯನ ಮೇಲೆ ಒಲವಿತ್ತು. ಸೂರ್ಯ ತಮ್ಮ ತವರಿನ ಆಟಗಾರ ಅನ್ನೋದು ಒಂದು ಕಾರಣ. ಈ ಹಿಂದೆ ಗಂಭೀರ್ ಕೆಕೆಆರ್ ನಾಯಕನಾಗಿದ್ದಾಗ, ಸೂರ್ಯ ವೈಸ್ ಕ್ಯಾಪ್ಟನ್ ಆಗಿದ್ದರು. ಇಬ್ಬರ ಕೆಮಿಸ್ಟ್ರಿ ಚನ್ನಾಗಿದೆ. ಯಾವುದೇ ವಿವಾದಗಳಾಗಿಲ್ಲ ಅನ್ನೋದು ಇನ್ನೊಂದು ಕಾರಣ. ಈ ಲೆಕ್ಕಾಚಾರ ಹಾಕಿ, ಸೆಲೆಕ್ಟರ್ ಅಗರ್ಕರ್, ಸೂರ್ಯನನ್ನ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಟ್ಯಾಂಕರ್ ಡಿಕ್ಕಿ ಹೊಡೆದು MBBS ವಿದ್ಯಾರ್ಥಿ ಸಾವು.. ಸ್ನೇಹಿತನ ಭೇಟಿಗೆ ಬಂದಾಗ ದುರಂತ
ಒಟ್ಟಿನಲ್ಲಿ ಈ ತ್ರಿಮೂರ್ತಿಗಳ ಕೃಪಾಕಟಾಕ್ಷ ಹಾಗೂ ಭವಿಷ್ಯದ ಲೆಕ್ಕಾಚಾರದ ಬಲದಲ್ಲಿ ಸೂರ್ಯಕುಮಾರ್ ಟೀಮ್ ಇಂಡಿಯಾದ ಟಿ20 ನಾಯಕನ ಪಟ್ಟವೇರಿದ್ದಾರೆ. ಈ ಹಿಂದೆ 2 ಸರಣಿಗಳಲ್ಲಿ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಆದ್ರೂ, ಫುಲ್ ಟೈಮ್ ಕ್ಯಾಪ್ಟನ್ ಆಗಿ ಲಂಕಾ ಟೂರ್ನಲ್ಲಿ ಹೊಸ ಜವಾಬ್ದಾರಿಯನ್ನ ಸೂರ್ಯ ಹೇಗೆ ನಿಭಾಯಿಸ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಲಂಕಾ ಪ್ರವಾಸದ T20 ತಂಡಕ್ಕೆ ಸೂರ್ಯ ಸಾರಥಿ..!
ಹಾರ್ದಿಕ್ ಪಾಂಡ್ಯಗೆ ಶಾಕ್, ಸೂರ್ಯನಿಗೆ ಸರ್ಪ್ರೈಸ್
ತ್ರಿಮೂರ್ತಿಗಳ ಬ್ಯಾಟಿಂಗ್, ಸೂರ್ಯನಿಗೆ ಪಟ್ಟ..?
ಕಳೆದ ಕೆಲವು ದಿನಗಳಿಂದ ಕ್ರಿಕೆಟ್ ವಲಯದಲ್ಲಿದ್ದ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಶ್ರೀಲಂಕಾ ಪ್ರವಾಸಕ್ಕೆ ಕೊನೆಗೂ ಟೀಮ್ ಇಂಡಿಯಾ ಪ್ರಕಟಗೊಂಡಿದೆ. ಮಿಸ್ಟರ್ 360 ಡಿಗ್ರಿ ಬ್ಯಾಟರ್ಗೆ ಟಿ20 ನಾಯಕತ್ವ ಒಲಿದಿದ್ದೇಗೆ ಅನ್ನೋ ಮಿಸ್ಟ್ರಿ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ. ಸೂರ್ಯನಿಗೆ ಸರ್ಪ್ರೈಸ್ ರೀತಿಯಲ್ಲಿ ಸಾರಥ್ಯ ಸಿಕ್ಕಿದ್ದೇಗೆ?
ಶ್ರೀಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಕೊನೆಗೂ ಪ್ರಕಟಗೊಂಡಿದೆ. ಹೈವೋಲ್ಟೆಜ್ ಮೀಟಿಂಗ್ನ ಬಳಿಕ ಸಾಕಷ್ಟು ಲೆಕ್ಕಾಚಾರಗಳನ್ನ ಹಾಕಿ ಲಂಕಾ ಪ್ರವಾಸಕ್ಕೆ ಸೆಲೆಕ್ಷನ್ ಕಮಿಟಿ ತಂಡವನ್ನ ಅನೌನ್ಸ್ ಮಾಡಿದೆ. ಏಕದಿನ ಸರಣಿಯ ತಂಡಕ್ಕಿಂತ ಟಿ20 ಸರಣಿಯ ತಂಡದ ಆಯ್ಕೆಯೇ ಸದ್ಯದ ಹಾಟ್ ಟಾಪಿಕ್. ಇದಕ್ಕೆಲ್ಲಾ ಕಾರಣ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್.
ಇದನ್ನೂ ಓದಿ:ಮೀಸಲಾತಿ ರದ್ದತಿಗಾಗಿ ಭಾರೀ ಹಿಂಸಾಚಾರ, 39 ಜನ ಸಾವು.. 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ
ಲಂಕಾ ಪ್ರವಾಸದ T20 ತಂಡಕ್ಕೆ ಸೂರ್ಯ ಸಾರಥಿ..!
ಟೀಮ್ ಅನೌನ್ಸ್ಗೂ ಮುನ್ನ ಇದ್ದ ಅಂತೆ-ಕಂತೆಗಳಿಗೆಲ್ಲಾ ಇದೀಗ ಅಧಿಕೃತ ತೆರೆ ಬಿದ್ದಿದೆ. ಮಿಸ್ಟರ್ 360 ಡಿಗ್ರಿ ಬ್ಯಾಟರ್ ಸೂರ್ಯಕುಮಾರ್ ಯಾದವ್ಗೆ ನಾಯಕತ್ವ ಒಲಿದಿದೆ. ಸೂರ್ಯಕುಮಾರ್ ಸಾರಥ್ಯದ ತಂಡವನ್ನು ಲಂಕಾ ಪ್ರವಾಸದ ಟಿ20 ಸರಣಿಗೆ ಸೆಲೆಕ್ಷನ್ ಕಮಿಟಿ ಪ್ರಕಟಿಸಿದೆ. ಈ ಬೆನ್ನಲ್ಲೇ ನಾಯಕತ್ವದ ರೇಸ್ನಲ್ಲೇ ಇಲ್ಲದ ಮಿಸ್ಟರ್ 360ಗೆ ಸಾರಥ್ಯ ಒಲಿದಿದ್ದು ಹೇಗೆ ಅನ್ನೋ ಮಿಸ್ಟ್ರಿ ಎಲ್ಲರನ್ನ ಕಾಡ್ತಿದೆ.
ಹಾರ್ದಿಕ್ನ ಹಿಂದಿಕ್ಕಿ ಸೂರ್ಯನಿಗೆ ಪಟ್ಟ ಒಲಿದಿದ್ದೇಗೆ?
ಹಾರ್ದಿಕ್ ಪಾಂಡ್ಯ T20 ತಂಡದ ಉಪನಾಯಕನ ಪಟ್ಟದಲ್ಲಿದ್ದಿದ್ದರಿಂದ ಭವಿಷ್ಯದ ಕ್ಯಾಪ್ಟನ್ ಎಂದೇ ಬಿಂಬಿತವಾಗಿದ್ರು. ರೋಹಿತ್ ಶರ್ಮಾ ಚುಟುಕು ಫಾರ್ಮೆಟ್ಗೆ ಗುಡ್ ಬೈ ಹೇಳಿದ ಬಳಿಕ ಪಾಂಡ್ಯಗೆ ಪಟ್ಟಾಭಿಷೇಕ ಬಹುತೇಕ ಕನ್ಫರ್ಮ್ ಎನ್ನಲಾಗಿತ್ತು. ಆದ್ರೀಗ ಸರ್ಪ್ರೈಸ್ ಎನ್ನುವಂತೆ, ಕ್ಯಾಪ್ಟನ್ಸಿ ರೇಸ್ನಲ್ಲೇ ಇರದ ಸೂರ್ಯಕುಮಾರ್ ಯಾದವ್ಗೆ ನಾಯಕತ್ವ ನೀಡಲಾಗಿದೆ. ತ್ರಿಮೂರ್ತಿಗಳ ಬ್ಯಾಕ್ ಅಪ್ನ ಬಲದಿಂದ ಸೂರ್ಯನಿಗೆ ತಂಡದ ಸಾರಥ್ಯ ಸಿಕ್ಕಿದೆ.
ಇದನ್ನೂ ಓದಿ:Breaking ಟ್ರ್ಯಾಕ್ ಮೇಲೆ ಮದ್ಯ ಸೇವನೆ.. ರೈಲು ಹರಿದು ಮೂವರು ಯುವಕರು ದಾರುಣ ಸಾವು
ಮಿಸ್ಟರ್ 360 ಪರ ಗುರು ಗಂಭೀರ್ ಬ್ಯಾಟಿಂಗ್
ವರ್ಕ್ಲೋಡ್ ಮ್ಯಾನೇಜ್ಮೆಂಟ್ ಕಾರಣಕ್ಕೆ ಸರಣಿಯಿಂದ ಸರಣಿಗೆ ವಿಶ್ರಾಂತಿ ಬೇಡುವ ನಾಯಕ ತಂಡಕ್ಕೆ ಬೇಡ. ಮುಂಬರೋ ಟಿ20 ವಿಶ್ವಕಪ್ವರೆಗೆ ತಂಡದೊಂದಿಗೆ ಇರುವ ನಾಯಕ ಬೇಕು ಅನ್ನೋ ಬೇಡಿಕೆಯನ್ನ ಹೆಡ್ ಕೋಚ್ ಗೌತಮ್ ಗಂಭೀರ್ ಸೆಲೆಕ್ಷನ್ ಕಮಿಟಿ ಮುಂದಿಟ್ಟಿದ್ರು. ಈ ಅಜೆಂಡಾ ಇಟ್ಟುಕೊಂಡೇ ಹಾರ್ದಿಕ್ ಬದಲು ನಾಯಕತ್ವಕ್ಕೆ ಸೂರ್ಯಕುಮಾರ್ ಹೆಸರನ್ನ ಪ್ರಸ್ತಾಪಿಸಿದ್ರು. ಆ ಪ್ರಸ್ತಾವಕ್ಕೆ ಇದೀಗ ಅಧಿಕೃತ ಮುದ್ರೆ ಬಿದ್ದಿದೆ.
ಸೂರ್ಯನಿಗೆ ನಿರ್ಗಮಿತ ನಾಯಕ ರೋಹಿತ್ ಬೆಂಬಲ
ಟೀಮ್ ಇಂಡಿಯಾದ ಟಿ20 ಮಾದರಿಯ ನಾಯಕತ್ವ ತ್ಯಜಿಸಿರುವ, ಏಕದಿನ ಹಾಗೂ ಟೆಸ್ಟ್ ತಂಡದ ನಾಯಕನಾಗಿ ಮುಂದುವರೆದಿರೋ ರೋಹಿತ್ ಶರ್ಮಾ ಬೆಂಬಲ ಕೂಡ ಸೂರ್ಯಕುಮಾರ್ಗಿದೆ. ರೋಹಿತ್ – ಸೂರ್ಯ ಒಟ್ಟಾಗಿ ಬೆಳೆದವರು. ಮುಂಬೈ ಹಾಗೂ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದಾರೆ. ರೋಹಿತ್ ಅಲಭ್ಯತೆಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಸೂರ್ಯಕುಮಾರ್ ಮುನ್ನಡೆಸಿದ್ದೂ ಇದೆ. ಈ ಎಲ್ಲಾ ಕಾರಣದಿಂದ ಗಂಭೀರ್ ಸೂರ್ಯನ ಹೆಸರನ್ನು ನಾಯಕನ ಸ್ಥಾನಕ್ಕೆ ಪ್ರಸ್ತಾಪಿಸಿದಾಗ ರೋಹಿತ್ ಕೂಡ ಸಮ್ಮತಿಸಿದ್ದಾರೆ.
ಅಗರ್ಕರ್ಗೂ ಸೂರ್ಯನ ಮೇಲೆ ಒಲವು..!
ಸೆಲೆಕ್ಷನ್ ಕಮಿಟಿ ಚೇರ್ ಪರ್ಸನ್ ಅಜಿತ್ ಅಗರ್ಕರ್ಗೂ ಸೂರ್ಯನ ಮೇಲೆ ಒಲವಿತ್ತು. ಸೂರ್ಯ ತಮ್ಮ ತವರಿನ ಆಟಗಾರ ಅನ್ನೋದು ಒಂದು ಕಾರಣ. ಈ ಹಿಂದೆ ಗಂಭೀರ್ ಕೆಕೆಆರ್ ನಾಯಕನಾಗಿದ್ದಾಗ, ಸೂರ್ಯ ವೈಸ್ ಕ್ಯಾಪ್ಟನ್ ಆಗಿದ್ದರು. ಇಬ್ಬರ ಕೆಮಿಸ್ಟ್ರಿ ಚನ್ನಾಗಿದೆ. ಯಾವುದೇ ವಿವಾದಗಳಾಗಿಲ್ಲ ಅನ್ನೋದು ಇನ್ನೊಂದು ಕಾರಣ. ಈ ಲೆಕ್ಕಾಚಾರ ಹಾಕಿ, ಸೆಲೆಕ್ಟರ್ ಅಗರ್ಕರ್, ಸೂರ್ಯನನ್ನ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಟ್ಯಾಂಕರ್ ಡಿಕ್ಕಿ ಹೊಡೆದು MBBS ವಿದ್ಯಾರ್ಥಿ ಸಾವು.. ಸ್ನೇಹಿತನ ಭೇಟಿಗೆ ಬಂದಾಗ ದುರಂತ
ಒಟ್ಟಿನಲ್ಲಿ ಈ ತ್ರಿಮೂರ್ತಿಗಳ ಕೃಪಾಕಟಾಕ್ಷ ಹಾಗೂ ಭವಿಷ್ಯದ ಲೆಕ್ಕಾಚಾರದ ಬಲದಲ್ಲಿ ಸೂರ್ಯಕುಮಾರ್ ಟೀಮ್ ಇಂಡಿಯಾದ ಟಿ20 ನಾಯಕನ ಪಟ್ಟವೇರಿದ್ದಾರೆ. ಈ ಹಿಂದೆ 2 ಸರಣಿಗಳಲ್ಲಿ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಆದ್ರೂ, ಫುಲ್ ಟೈಮ್ ಕ್ಯಾಪ್ಟನ್ ಆಗಿ ಲಂಕಾ ಟೂರ್ನಲ್ಲಿ ಹೊಸ ಜವಾಬ್ದಾರಿಯನ್ನ ಸೂರ್ಯ ಹೇಗೆ ನಿಭಾಯಿಸ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್