/newsfirstlive-kannada/media/post_attachments/wp-content/uploads/2025/02/ROHIT_GILL.jpg)
ಬೌಲಿಂಗ್​ನಲ್ಲಿ ಜಡೇಜಾ, ಹರ್ಷಿತ್ ರಾಣಾ ಜಬರ್ದಸ್ತ್ ಪರ್ಫಾಮೆನ್ಸ್​ ನೀಡಿದರೆ, ಬ್ಯಾಟಿಂಗ್​ನಲ್ಲಿ ಶುಭ್​ಮನ್ ಗಿಲ್, ಶ್ರೇಯಸ್​ ಅಯ್ಯರ್​, ಅಕ್ಷರ್ ಪಟೇಲ್ ಅಬ್ಬರಕ್ಕೆ ಆಂಗ್ಲರು ಥಂಡಾ ಹೊಡೆದರು. ಅದರಲ್ಲೂ ಮುಂಬೈಕರ್ ಶ್ರೇಯಸ್​ ಕೌಂಟರ್ ಅಟ್ಯಾಕ್​​​ಗೆ ಇಂಗ್ಲೆಂಡ್ ಕಕ್ಕಾಬಿಕ್ಕಿ ಆಯಿತು.
249 ರನ್​ಗಳ ಟಾರ್ಗೆಟ್​.. ಶ್ರೇಯಸ್​ ಅಯ್ಯರ್​ ಅದ್ಭುತ ಆಟ. ಶುಭ್​ಮನ್ ಗಿಲ್​​ ಕ್ಲಾಸಿಕ್ ಬ್ಯಾಟಿಂಗ್. ಆಕ್ಷರ್ ಪಟೇಲ್ ಫಿಫ್ಟಿ. 38.4 ಓವರ್​​​ಗಳಿಗೆ ಇಂಗ್ಲೆಂಡ್​ನ ಖೇಲ್ ಖತಂ ಆಯಿತು. ನಾಗ್ಪುರ ಪಂದ್ಯದ ಸೆಕೆಂಡ್​ ಇನ್ನಿಂಗ್ಸ್​ನ ಹೈಲೆಟ್ಸ್​ ಹೇಗಿದೆ?.
ಮುಂಬೈಕರ್ ಓಪನರ್ಸ್​ ಫ್ಲಾಫ್​.. ರೋಹಿತ್ ಠುಸ್..!
249 ರನ್​​ಗಳ ಟಾರ್ಗೆಟ್​ ಬೆನ್ನಟ್ಟಿದ ಟೀಮ್ ಇಂಡಿಯಾಗೆ ಉತ್ತರ ಆರಂಭ ಸಿಗಲಿಲ್ಲ. ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸಿದ ಮುಂಬೈಕರ್ ಯಶಸ್ವಿ ಜೈಸ್ವಾಲ್, 15 ರನ್​​ ಗಳಿಸಿದ್ದಾಗ ಜೋಫ್ರಾ ಆರ್ಚರ್​ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಜೈಸ್ವಾಲ್​ ಬೆನ್ನಲ್ಲೇ, ಕ್ಯಾಪ್ಟನ್ ರೋಹಿತ್ ಬೌನ್ಸರ್ ಎಸೆತವನ್ನು ಫ್ಲಿಕ್​ ಮಾಡಲು ಹೋಗಿ 2 ರನ್​ಗೆ ವಿಕೆಟ್ ಕೈಚೆಲ್ಲಿದರು.
ಗಿಲ್​​-ಶ್ರೇಯಸ್​ ಆಸರೆ.. ಅಯ್ಯರ್​​​ ಪವರ್ ಫಿಫ್ಟಿ..!
19 ರನ್​​ಗೆ 2 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾಗೆ ಆಸರೆಯಾಗಿದ್ದೆ ಶುಭ್​ಮನ್ ಗಿಲ್ ಹಾಗೂ ಶ್ರೇಯಸ್​ ಅಯ್ಯರ್. 3ನೇ ವಿಕೆಟ್​ಗೆ ಜೊತೆಯಾದ ಈ ಜೋಡಿ 64 ಎಸೆತಗಳಲ್ಲೇ 94 ರನ್​ಗಳ ಜೊತೆಯಾಟ ಆಡಿದರು.
ಒಂದು ಕಡೆ ಉಪನಾಯಕ ಶುಭ್​ಮನ್ ಗಿಲ್ ನಿಧನವಾಗಿ ಉತ್ತಮ ಇನ್ನಿಂಗ್ಸ್​ ಕಟ್ಟುತ್ತಿದ್ದರೇ, ಅತ್ತ ಇಂಗ್ಲೆಂಡ್ ಬೌಲರ್​ಗಳನ್ನ ಮನ ಬಂದಂತೆ ದಂಡಿಸಿದ ಶ್ರೇಯಸ್, 30 ಎಸೆತಗಳಲ್ಲೇ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಆದ್ರೆ, 9 ಬೌಂಡರಿ, 2 ಸಿಕ್ಸರ್ ಒಳಗೊಂಡ 59 ರನ್ ಗಳಿಸಿ ಮುನ್ನುಗ್ಗುತ್ತಿದ್ದ ಶ್ರೇಯಸ್, ಜೇಕಬ್​ ಬೆಥಲ್ ಓವರ್​ನಲ್ಲಿ ಎಲ್​ಬಿ ಟ್ರ್ಯಾಪ್​ಗೆ ಅಯ್ಯರ್ ಬಲಿಯಾದರು.
ವೈಸ್ ಕ್ಯಾಪ್ಟನ್ ಗಿಲ್, ಅಕ್ಷರ್ ಪಟೇಲ್​ ಶತಕದಾಟ.!
ಶ್ರೇಯಸ್​ ವಿಕೆಟ್ ಪತನದ ಬಳಿಕ ಶುಭ್​ಮನ್ ಗಿಲ್ ಜೊತೆಯಾದ ಅಕ್ಷರ್ ಪಟೇಲ್, ಅದ್ಭುತ ಬ್ಯಾಟಿಂಗ್ ನಡೆಸಿದರು. 4ನೇ ವಿಕೆಟ್​ಗೆ 108 ರನ್​ಗಳ ಅಮೋಘ ಜೊತೆಯಾಟ ಅಡಿದ ಈ ಜೋಡಿ, ಟೀಮ್ ಇಂಡಿಯಾ ಗೆಲುವನ್ನು ಸುಲಭವಾಗಿಸಿದರು. 60 ಎಸೆತಗಳಲ್ಲಿ ಗಿಲ್, 50 ರನ್ ಪೂರೈಸಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಭಾರತ- ಶ್ರೀಲಂಕಾ T20 ಪಂದ್ಯ; ಗವಾಸ್ಕರ್, ಪಠಾಣ್ ಸೇರಿ ದಿಗ್ಗಜ ಪ್ಲೇಯರ್ಸ್ ಕಣಕ್ಕೆ
ಬ್ಯಾಟಿಂಗ್​ನಲ್ಲಿ ಬಡ್ತಿ ಪಡೆದುಕೊಂಡು ಕಣಕ್ಕಿಳಿದ ಅಕ್ಷರ್​ ಪಟೇಲ್​ 46 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಅಕ್ಷರ್ ಅರ್ಧಶತಕ ಸಿಡಿಸಿದ ಮರು ಎಸೆತದಲ್ಲೇ ಕ್ಲೀನ್ ಬೋಲ್ಡ್​ ಆಗಿ ಪೆವಿಲಿಯನ್ ಸೇರಿದರು. ಆ ಬಳಿಕ ಬಂದ ಕೆ.ಎಲ್.ರಾಹುಲ್, 2 ರನ್​ಗೆ ವಿಕೆಟ್ ಒಪ್ಪಿಸಿದ್ರೆ. 87 ರನ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಶುಭ್​ಮನ್ ಗಿಲ್, ಮಹ್ಮೂದ್​​ ಓವರ್​ನಲ್ಲಿ ಬಟ್ಲರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಆ ಬಳಿಕ ಹಾರ್ದಿಕ್ ಅಜೇಯ 09 ರನ್, ಜಡೇಜಾ ಅಜೇಯ 12 ರನ್​​​ ಗಳಿಸುವುದರೊಂದಿಗೆ ಟೀಮ್ ಇಂಡಿಯಾ 38.4 ಓವರ್​ಗಳಲ್ಲೇ 6 ವಿಕೆಟ್ ಕಳೆದುಕೊಂಡು 251 ರನ್​ ಗಳಿಸಿ ಗೆಲುವಿನ ದಡ ಸೇರಿತು. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಪಡೆ ಶುಭಾರಂಭ ಮಾಡಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ